ಬೇಗೂರು ಬಳಿ ಗದ್ದೆಗೆ ಉರುಳಿದ ‘ಐರಾವತ’
ಕೊಡಗು

ಬೇಗೂರು ಬಳಿ ಗದ್ದೆಗೆ ಉರುಳಿದ ‘ಐರಾವತ’

January 11, 2020

ಗೋಣಿಕೊಪ್ಪ, ಜ.10- ಕೇರಳಕ್ಕೆ ತೆರಳುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಐರಾವತ ಬಸ್ ಗದ್ದೆಗೆ ಉರುಳಿ ಬಿದ್ದ ಘಟನೆ ಬೇಗೂರು ಗ್ರಾಮದಲ್ಲಿ ನಡೆದಿದೆ. ಅಪಘಾತದಿಂದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ ವಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿ ದ್ದಾರೆ. ಗುರುವಾರ ತಡರಾತ್ರಿ ಮೈಸೂರು ಕಡೆಯಿಂದ ಕೇರಳದ ಕೋಯಿಕೋಡ್‍ಗೆ ತೆರಳುತ್ತಿದ್ದ ಬಸ್ ಬೇಗೂರು ಎಂಬಲ್ಲಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ರಸ್ತೆ ಬದಿಗೆ ಉರುಳಿ ಅವಘಡವಾಯಿತು. ಬಸ್ ನಲ್ಲಿದ್ದ ಸುಮಾರು 30 ಪ್ರಯಾಣಿಕರು ಅಪಾಯದಿಂದ ಪಾರಾದರು. ಈ ಬಗ್ಗೆ ಪೆÇನ್ನಂಪೇಟೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »