ಕಾಡಾನೆ ಹಾವಳಿಯಿಂದ ಅಡಿಕೆ ಬೆಳೆ ನಾಶ
ಕೊಡಗು

ಕಾಡಾನೆ ಹಾವಳಿಯಿಂದ ಅಡಿಕೆ ಬೆಳೆ ನಾಶ

January 11, 2020

ಕುಶಾಲನಗರ, ಜ.10- ಕಾಡಾನೆಗಳ ಹಿಂಡು ದಾಳಿ ನಡೆಸಿದ ಪರಿಣಾಮ ಹೆಬ್ಬಾಲೆ ಬಳಿಯ ಮರೂರು ಗ್ರಾಮದ ಪ್ರಗತಿಪರ ರೈತ ಎಚ್.ಎಸ್. ಮಹೇಶ್ ಎಂಬು ವರಿಗೆ ಸೇರಿದ ನಾಲ್ಕು ಎಕರೆ ವಿಸ್ತೀರ್ಣದಲ್ಲಿ ಬೆಳೆದಿದ್ದ ಅಡಿಕೆ ಬೆಳೆ ನಾಶವಾಗಿದೆ.

ಗುರುವಾರ ರಾತ್ರಿ ಗ್ರಾಮಕ್ಕೆ ನುಗ್ಗಿದ ಕಾಡಾನೆಗಳು ಹಸಿವು ನೀಗಿಸಿ ಕೊಳ್ಳಲು ಅಡಿಕೆ ತೋಟಕ್ಕೆ ದಾಳಿ ಯಿಟ್ಟು ಎಳೆಯ ಅಡಿಕೆ ಗಿಡಗಳನ್ನು ತಿಂದು, ತುಳಿದು ನೆಲಸಮ ಮಾಡಿವೆ. ಇದರಿಂದ ಲಕ್ಷಾಂತರ ರೂಗಳ ನಷ್ಟ ಸಂಭವಿಸಿದೆ ಎಂದು ರೈತ ಮಹೇಶ್ ದೂರಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕಾಡಂಚಿನಲ್ಲಿ ಸೋಲಾರ ಬೇಲಿ ಅಳವಡಿಸಿ ಅರಣ್ಯದೊಳಗೆ ಕಾಡಾನೆಗಳಿಗೆ ಲಭ್ಯವಾಗುವ ಸೊಪ್ಪು ಗಿಡ ಮರಗಳನ್ನು ಬೆಳೆದರೆ ಕಾಡಾನೆ ಗಳು ಗ್ರಾಮಕ್ಕೆ ದಾಳಿ ಇಡುವುದು ತಪ್ಪುತ್ತದೆ. ನಮಗೆ ಕಾಡಾನೆಗಳಿಂದ ಉಂಟಾಗಿರುವ ನಷ್ಟವನ್ನು ಇಲಾಖೆಯ ಅಧಿಕಾರಿಗಳು ಭರಿಸಬೇಕು ಎಂದು ಮಹೇಶ್ ಒತ್ತಾಯಿಸಿದ್ದಾರೆ.

Translate »