ಮಾಲೀಕನ ಅಂಗಡಿಯಲ್ಲಿ ಮೆಣಸಿನಕಾಯಿ ಕದ್ದಿದ್ದವ ಸೆರೆ
ಮೈಸೂರು

ಮಾಲೀಕನ ಅಂಗಡಿಯಲ್ಲಿ ಮೆಣಸಿನಕಾಯಿ ಕದ್ದಿದ್ದವ ಸೆರೆ

May 4, 2019

ಮೈಸೂರು:-ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ ಮೆಣಸಿನಕಾಯಿ ಚೀಲಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂ ರಿನ ನಾಚನಹಳ್ಳಿ ಪಾಳ್ಯ, 8ನೇ ಕ್ರಾಸ್ ನಿವಾಸಿ ಸೈಯ್ಯದ್ ಇಕ್ಬಾಲ್ ಅವರ ಮಗ ಅಮ್ಮದ್ ಪಾಷಾ (31) ಬಂಧಿತ ಆರೋಪಿಯಾಗಿದ್ದು, ಆತನಿಂದ 1,60,000 ರೂ. ನಗದು ಹಾಗೂ 10 ಸಾವಿರ ರೂ. ಮೌಲ್ಯದ 5 ಮೆಣಸಿನಕಾಯಿ ಚೀಲವನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಬಂಡಿಪಾಳ್ಯದ ಎಪಿಎಂಸಿ ಮಾರುಕಟ್ಟೆಯ ರಂಗ ನಾಥ ಟ್ರೇಡರ್ಸ್ ಎಂಬ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಮ್ಮದ್ ಪಾಷ, ಏಪ್ರಿಲ್ 26ರಂದು 5 ಚೀಲ ಮೆಣಸಿನಕಾಯಿ ಮೂಟೆ ಕಳವು ಮಾಡಿದ್ದ.

ಈ ಸಂಬಂಧ ಅಂಗಡಿ ಮಾಲೀಕರಾದ ಸಿದ್ಧಾರ್ಥನಗರ ನಿವಾಸಿ ಎಸ್.ಗೋಪಿನಾಥ ಅವರು ಮೇ 1ರಂದು ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಮೈಸೂರು ಗ್ರಾಮಾಂತರ ಠಾಣೆ ಸರ್ಕಲ್ ಇನ್ಸ್‍ಪೆಕ್ಟರ್ ಮಹೇಶ್ ಪ್ರಸಾದ್ ಅವರು ಆರೋಪಿಯನ್ನು ಮೇ 3ರಂದು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ಮೆಣಸಿನ ಕಾಯಿ ಮೂಟೆಗಳನ್ನು ಕಳವು ಮಾಡಿರುವುದಾಗಿ ಅಮ್ಮದ್ ಪಾಷ ಒಪ್ಪಿಕೊಂಡನು. ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಅಪರಾಧ ಪತ್ತೆ ದಳದ ಜಹೂರ್ ಅಹಮದ್, ಅಶೋಕ್, ಭಾಸ್ಕರ್, ನಿಂಗರಾಜ್ ಅವರು ಪತ್ತೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Translate »