ಚಾಮರಾಜನಗರ: ‘ರಾಜ್ಯದಲ್ಲಿ ಬಹುಜನ ಸಮಾಜ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಲು ಶ್ರಮಿಸಲಾಗುವುದು’ ಎಂದು ಪಕ್ಷದ ನೂತನ ರಾಜ್ಯ ಘಟಕದ ಅಧ್ಯಕ್ಷ ಪ್ರೊ.ಹರಿರಾಮ್ ಹೇಳಿದರು. ನಗರದ ಕೆ.ಸಿ.ರಂಗಯ್ಯ ಹಾಸ್ಟೆಲ್ನ ಪಕ್ಕದಲ್ಲಿರುವ ಸಭಾಂಗಣ ದಲ್ಲಿ ಸೋಮವಾರ ನಡೆದ ಬಹುಜನ ಸಮಾಜ ಪಕ್ಷದ ಜಿಲ್ಲಾ ಸಮಿತಿ ಸಭೆಯಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು. 2017ರ ವಿಧಾನಸಭಾ ಚುನಾವಣೆಯ ನಂತರ ಪಕ್ಷಕ್ಕೆ ಹೊಸ ಉತ್ಸಾಹ, ಹುಮ್ಮಸ್ಸು ಬಂದಿದ್ದು, ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗಿದೆ. ಇದಕ್ಕೆ ಜೆಡಿಎಸ್, ಬಿಎಸ್ಪಿ ಮೈತ್ರಿಕಾರಣ ಎಂದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ…
ಮಲೆಮಹದೇಶ್ವರ ಬೆಟ್ಟದಲ್ಲಿ ಉಚಿತ ಸಾಮೂಹಿಕ ವಿವಾಹ ದಾಂಪತ್ಯಕ್ಕೆ ಕಾಲಿಟ್ಟ 60 ನವ ಜೋಡಿಗಳು
July 2, 2018ಹನೂರು: ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಸಲಾಗುವ ಉಚಿತ ಸಾಮೂಹಿಕ ವಿವಾಹ ಕಾರ್ಯ ಗಳನ್ನು ಮೂರು ತಿಂಗಳಿಗೆ ಒಮ್ಮೆ ನಡೆಸಿದರೆ ಇನ್ನೂ ಅನೇಕ ಜನರಿಗೆ ಅನುಕೂಲ ವಾಗುತ್ತದೆ ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅಭಿಪ್ರಾಯಪಟ್ಟರು. ಮಲೆಮಹದೇಶ್ವರ ಬೆಟ್ಟದಲ್ಲಿ ಮಹ ದೇಶ್ವರ ಬೆಟ್ಟ ಪ್ರಾಧಿಕಾರದ ವತಿಯಿಂದ ಏರ್ಪಡಿಸಲಾಗಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಅವರು ಮಾತನಾಡಿದರು. ವಿವಾಹ ಮಾಡಲು ಬಡವರು ಕಲ್ಯಾಣ ಮಂಟಪಗಳಿಗೆ ಹಾಗೂ ಊಟೋಪಚಾ ರಕ್ಕೆ ಸಾಕಷ್ಟು ಹಣ ವ್ಯಯಿಸಬೇಕಾಗುತ್ತದೆ. ಈ ರೀತಿಯ ದುಂದು ವೆಚ್ಚದಿಂದ…
ಯುವಕನಿಂದ ಪ್ರೀತಿಸುವಂತೆ ಕಿರುಕುಳಕ್ಕೊಳಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಸಾವು
July 2, 2018ಚಾಮರಾಜನಗರ: ತನ್ನನ್ನು ಪ್ರೀತಿಸು ವಂತೆ ಯುವಕನೊಬ್ಬ ನೀಡುತ್ತಿದ್ದ ಕಿರುಕುಳ ತಾಳಲಾರದೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಒಂದು ವಾರದ ಬಳಿಕ ಮೃತಪಟ್ಟಿದ್ದಾಳೆ. ಚಾಮರಾಜನಗರ ತಾಲೂಕಿನ ಅಮ್ಮನಪುರ ಗ್ರಾಮದ ನಿವಾಸಿ ಕಾಗಲವಾಡಿ ಗ್ರಾಮದ ಟಿ.ಎಸ್.ಸುಬ್ಬಣ್ಣ ಪ್ರೌಢಶಾಲೆ ಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರೀತಿ (16) ಮೃತಪಟ್ಟವಳು. ಅಮ್ಮನಪುರ ಗ್ರಾಮದ ದೊರೆಸ್ವಾಮಿ ಎಂಬು ವರ ಮಗಳು ಪ್ರೀತಿ ಶಾಲೆಗೆ ಬರುವಾಗ ರೇಚಂಬಳ್ಳಿ ಗ್ರಾಮದ ಮನು ಉ. ಗುಂಡಾಪುರಿ ಎಂಬಾತನ ಪರಿಚಯವಾಗಿತ್ತು ಎನ್ನ ಲಾಗಿದೆ. ಮನು…
ಗುಂಡ್ಲುಪೇಟೆ ಸಮಗ್ರ ಅಭಿವೃದ್ಧಿಗೆ ಯೋಜನೆ
July 2, 2018ಗುಂಡ್ಲುಪೇಟೆ: ಪಟ್ಟಣದ ಸಮಗ್ರ ಅಭಿವೃದ್ಧಿಗೆ ಯೋಜ ನೆಗಳನ್ನು ರೂಪಿಸಲಾಗುತ್ತಿದ್ದು, ಸ್ಪಲ್ಪ ಸಮಯ ಕೊಟ್ಟು ನೋಡಿ ಪಟ್ಟಣವನ್ನು ಮಾದರಿ ಯನ್ನಾಗಿಸುತ್ತೇನೆ ಎಂದು ಶಾಸಕ ಸಿ.ಎಸ್. ನಿರಂಜನಕುಮಾರ್ ಹೇಳಿದರು. ಪಟ್ಟಣದ ದ.ರಾ.ಬೇಂದ್ರೆ ನಗರದಲ್ಲಿ ನಿವಾಸಿಗಳಿಂದ ಏರ್ಪಡಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತ ನಾಡಿ, ನಾನು ಸಹ ದ.ರಾ.ಬೇಂದ್ರೆ ಬಡಾ ವಣೆಯ ನಿವಾಸಿಯಾಗಿ ಬಡಾವಣೆಯ ಮೂಲ ಸೌಕರ್ಯದ ಕೊರತೆಯನ್ನು ಅರಿತಿದ್ದೇನೆ. ಆದ್ದರಿಂದ ಮೊದಲ ಹಂತವಾಗಿ ಬಡಾವಣೆಯ ಪ್ರಮುಖ ಎರಡು ರಸ್ತೆ ಗಳನ್ನು ಸುಮಾರು 40 ಲಕ್ಷ ರೂಪಾಯಿ ಗಳ ಅಂದಾಜು…
ಸಮ್ಮಿಶ್ರ ಸರ್ಕಾರದಿಂದ 5 ವರ್ಷ ಪೂರೈಕೆ: ಸತೀಶ್ ಜಾರಕಿಹೊಳಿ
July 2, 2018ಕೊಳ್ಳೇಗಾಲ: ರಾಜ್ಯದಲ್ಲಿ ಅಧಿಕಾರದ ಚುಕ್ಕಾಣ ನಡೆಸು ತ್ತಿರುವ ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರೈಸುವುದರಲ್ಲಿ ಯಾವುದೇ ಸಂಶಯ ವಿಲ್ಲ. ಈ ಕುರಿತು ಯಾವುದೇ ಡೌಟೇ ಬೇಡ. ಖಂಡಿತವಾಗಿ ಅವಧಿ ಪೂರೈಸ ಲಿದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಅವರು ಪಟ್ಟಣದ ಪ್ರವಾಸಿ ಮಂದಿರ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಆಕಾಂಕ್ಷಿ ನಾನಲ್ಲ. ನಾನು ಆಕಾಂಕ್ಷಿ ಅಲ್ಲದಿದ್ದರೂ ನನಗೆ ಸ್ಥಾನ ಒದಗಿ ಬಂದಿತ್ತು. ಆದರೆ ನನಗಿಂತ ಅಧ್ಯಕ್ಷ ಸ್ಥಾನಕ್ಕೆ ಹಿರಿಯರಿದ್ದಾರೆ. ಹಾಗಾಗಿ ಸದ್ಯದ ಪರಿಸ್ಥಿತಿಯಲ್ಲಿ…
ಬಂಡಿಗೆರೆಯಲ್ಲಿ 15ಕ್ಕೂ ಹೆಚ್ಚು ಮೇಕೆಗಳ ಸಾವು
July 2, 2018ಚಾಮರಾಜನಗರ: ತಾಲೂಕಿನ ಬಂಡಿಗೆರೆ ಗ್ರಾಮದಲ್ಲಿ ಕರುಳು ಬೇನೆಯಿಂದ 15ಕ್ಕೂ ಹೆಚ್ಚು ಮೇಕೆಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಗ್ರಾಮದ ಬ್ಯಾಡಮೂಡ್ಲು ರಸ್ತೆಯಲ್ಲಿರುವ ದುಂಡಶೆಟ್ಟಿ ಎಂಬುವರಿಗೆ ಸೇರಿದ ಸುಮಾರು 15 ಮೇಕೆಗಳು ಸಾವನ್ನಪ್ಪಿದ್ದು, ಗ್ರಾಮಸ್ಥರಲ್ಲಿ ಆತಂಕವುಂಟಾಗಿದೆ. ದುಂಡಶೆಟ್ಟಿ ಎಂಬುವರು ಹಲವಾರು ವರ್ಷಗಳಿಂದಲೂ ಕುರಿ, ದನ, ಮೇಕೆ ಹಾಗೂ ಎಮ್ಮೆಗಳನ್ನು ಸಾಕುತ್ತಿದ್ದು, ಇದ್ದ 70 ಮೇಕೆಗಳಲ್ಲಿ ಶನಿವಾರ 10 ಹಾಗೂ ಇಂದು 5ಕ್ಕೂ ಹೆಚ್ಚು ಮೇಕೆಗಳು ಸತ್ತಿರುವುದರಿಂದ ತೀವ್ರ ಆತಂಕಕ್ಕೊಳಗಾಗಿದ್ದಾರೆ. ಭಾನುವಾರ ಸುದ್ದಿ ತಿಳಿದ ಪಶು ವೈದ್ಯಾಧಿಕಾರಿ ನಾಗೇಂದ್ರ ಪ್ರಸಾದ್ ಸ್ಥಳಕ್ಕೆ…
ಸ್ವಾತಂತ್ರ್ಯ ಚಳುವಳಿಗೆ ಪ್ರೇರಣೆ ನೀಡಿದ ವಂದೇ ಮಾತರಂ: ಕನಕಗಿರಿ ಕ್ಷೇತ್ರದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಅಭಿಮತ
July 2, 2018ಚಾಮರಾಜನಗರ: ಬಂಕಿಮ ಚಂದ್ರ ಚಟರ್ಜಿಯವರು ರಚಿಸಿದ ವಂದೇ ಮಾತರಂ ಗೀತೆಯು ಅನೇಕ ಸಾಹಸ ಗಳಿಗೆ ಹಾಗೂ ಸ್ವಾತಂತ್ರ್ಯ ಚಳುವಳಿಯ ಬಲಿದಾನಗಳಿಗೆ ಪ್ರೇರಣೆ ನೀಡಿದೆ ಎಂದು ಕನಕಗಿರಿ ಶ್ರೀಕ್ಷೇತ್ರದ ಭುವನಕೀರ್ತಿ ಭಟ್ಟಾ ರಕ ಸ್ವಾಮೀಜಿಯವರು ತಿಳಿಸಿದರು. ಅವರು ಕನಕಗಿರಿಯಲ್ಲಿ ತಾಲೂಕು ಭಾರತ ಸೇವಾದಳ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿ ಕೊಂಡಿದ್ದ ಶಿಕ್ಷಕರ ಪುನಶ್ಚೇತನ ಶಿಬಿರ ಹಾಗೂ ಬಂಕಿಮಚಂದ್ರ ಚಟರ್ಜಿಯವರ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ವಂದೇ ಮಾತರಂ ರಚಿಸಿದ ಬಂಕಿಮ ಚಂದ್ರ ಚಟರ್ಜಿಯವರು ವಂದೇ ಮಾತರಂ ಗೀತೆಯ…
ಜುಲೈ 14 ರಂದು ಲೋಕ್ ಅದಾಲತ್ ರಾಜೀ, ಸಂಧಾನದಿಂದ ಪ್ರಕರಣ ಇತ್ಯರ್ಥಕ್ಕೆ ಸಲಹೆ
July 1, 2018ಜಿಲ್ಲೆಯಲ್ಲಿ 8,909 ಸಿವಿಲ್, 8,365 ಕ್ರಿಮಿನಲ್ ಪ್ರಕರಣ ಬಾಕಿ: ನ್ಯಾ.ಜಿ.ಬಸವರಾಜ ಚಾಮರಾಜನಗರ: ‘ಜಿಲ್ಲೆ ಯಲ್ಲಿ ರಾಜೀ ಸಂಧಾನದ ಮೂಲಕ ಒಮ್ಮತವಾಗಿ ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಸಲುವಾಗಿ ಜು. 14ರಂದು ರಾಷ್ಟ್ರೀಯ ಲೋಕ್ ಅದಾಲತನ್ನು ಹಮ್ಮಿ ಕೊಳ್ಳಲಾಗಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಿ. ಬಸವರಾಜ ಹೇಳಿದರು. ನಗರದ ಜಿಲ್ಲಾ ವ್ಯಾಜ್ಯಪೂರ್ವ ಪರಿ ಹಾರ ಕೇಂದ್ರದಲ್ಲಿ ಶನಿವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಿಲ್ಲಾ ನ್ಯಾಯಾಧೀಶರು ಚಾಮರಾಜ ನಗರ, ಗುಂಡ್ಲುಪೇಟೆ, ಯಳಂದೂರು ಮತ್ತು ಕೊಳ್ಳೇಗಾಲದ…
ಗಿರಿಜನರೊಂದಿಗೆ ಗಲಾಟೆ ಬೇಡ, ಕಾನೂನು ಹೋರಾಟ ಮಾಡಿ
July 1, 2018ಸುತ್ತೂರು ಇರಸವಾಡಿ ಗ್ರಾಮಸ್ಥರಿಗೆ ಸಿಪಿಐ ರಾಜೇಶ್ ಸಲಹೆ ಯಳಂದೂರು: ಬಿಳಿಗಿರಿರಂಗನಾಥ ಸ್ವಾಮಿ ಬೆಟ್ಟದ ಅರಣ್ಯದಂಚಿನಲ್ಲಿರುವ ಕೆ.ದೇವ ರಹಳ್ಳಿ ಗ್ರಾಮದಲ್ಲಿ ಸುಮಾರು 57ಕ್ಕೂ ಹೆಚ್ಚು ಗಿರಿಜನ ಕುಟುಂಬಗಳು ವಾಸ ವಾಗಿದ್ದು, ಅವರ ಮೇಲೆ ಕೃಷಿ ಜಮೀನಿನ ವಿಚಾರವಾಗಿ ಇರಸವಾಡಿ ಹಾಗೂ ಸುತ್ತೂರು ಗ್ರಾಮಸ್ಥರು 2017ರ ಅಕ್ಟೋಬರ್ನಲ್ಲಿ ಗಲಾಟೆ ಮಾಡಿದ್ದರು. ಈ ಸಂಬಂಧ ಗಿರಿ ಜನರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದ ಹಿನ್ನೆಲೆ ಸಿಪಿಐ ರಾಜೇಶ್ ನೇತೃ ತ್ವದಲ್ಲಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ಗ್ರಾಮಸ್ಥರ ಸಭೆ ನಡೆಸಲಾಯಿತು. ಸಿಪಿಐ ರಾಜೇಶ್…
ಕನ್ನಡದ ಸ್ಥಾನ ಕಬಳಿಸಲು ಯಾವ ಭಾಷೆಗೂ ಸಾಧ್ಯವಿಲ್ಲ
July 1, 2018ಚಾಮರಾಜನಗರ: – ‘ಇಂಗ್ಲಿಷ್ ಪ್ರಭಾವದಿಂದ ಕನ್ನಡದ ವ್ಯವ ಹಾರಿಕ ಸ್ಥಾನಮಾನಗಳು ಕಡಿಮೆಯಾಗಿರ ಬಹುದೇ ಹೊರತು, ಅದರ ಮನೆ ಮಾತಿನ ಸ್ಥಾನವನ್ನು ಮತ್ಯಾವ ಭಾಷೆಯೂ ಕಬಳಿಸಲು ಸಾಧ್ಯವಿಲ್ಲ’ ಎಂದು ಚಾಮ ರಾಜನಗರ ತಾಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಎಂ.ಎನ್. ಮಹೇಶ್ ಹೇಳಿದರು. ತಾಲೂಕಿನ ಅರಕಲವಾಡಿ ಗ್ರಾಮದ ಶ್ರೀಮಹದೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಕಸಾಪದಿಂದ ಆಯೋಜಿಸಿದ್ದ ಚಾಮರಾಜನಗರ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಸಮ್ಮೇ ಳನಾಧ್ಯಕ್ಷ ಭಾಷಣ ಮಾಡಿದರು. ಇಂಗ್ಲಿಷ್ ಪ್ರಭಾವದಿಂದ ಅತಿವೇಗ ವಾಗಿ ನಾಶವಾಗುತ್ತಿರುವ…