ಹಾಸನ: 2018ರ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯ 13,682 ವಿದ್ಯಾರ್ಥಿಗಳಲ್ಲಿ 10,107 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಜಿಲ್ಲೆಯ ಶೇಕಡಾವಾರು ಫಲಿತಾಂಶವು ಪ್ರತಿಶತ ಶೇ.73.87 ರೊಂದಿಗೆ ರಾಜ್ಯ ದಲ್ಲಿ ಜಿಲ್ಲೆಯು 8ನೇ ಸ್ಥಾನದಲ್ಲಿದೆ. 2017ನೇ ಸಾಲಿನಲ್ಲಿ ಶೇ.59.88 ಫಲಿತಾಂಶದೊಂದಿಗೆ ರಾಜ್ಯದಲ್ಲಿ 11ನೇ ಸ್ಥಾನದಲ್ಲಿತ್ತು. ಈ ಬಾರಿ ಶೇ.73.87 ಫಲಿ ತಾಂಶದೊಂದಿಗೆ 8ನೇ ಸ್ಥಾನಕ್ಕೇರಿದೆ. ಸಂಯೋಜನೆವಾರು ಫಲಿತಾಂಶದಲ್ಲಿ ಕಲಾ ವಿಭಾಗ 3,406 ವಿದ್ಯಾರ್ಥಿಗಳಲ್ಲಿ 2,263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.66.44 ಫಲಿತಾಂಶ ಬಂದಿದೆ. ವಾಣ ಜ್ಯ ವಿಭಾಗದಲ್ಲಿ 5,650…
ರೈತನ ಮಗ ಮೋಹನ್ ರಾಜ್ಯಕ್ಕೇ ದ್ವಿತೀಯ
May 1, 2018ಹಾಸನ: ತಾಲೂಕಿನ ಶಾಂತಿ ಗ್ರಾಮದ ರೈತನ ಮಗ ಮಾಸ್ಟರ್ ಪಿಯು ಕಾಲೇಜಿನ ವಿದ್ಯಾರ್ಥಿ ಮೋಹನ್ ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ 600 ಅಂಕಗಳಿಗೆ 595 ಅಂಕ ಪಡೆಯವ ಮೂಲಕ ರಾಜ್ಯದಲ್ಲಿ 2ನೇ ಪಡೆದಿದ್ದಾನೆ. ರಾಜ್ಯಕ್ಕೆ 2ನೇ ರ್ಯಾಂಕ್ ಗಳಿಸಿರುವ ಮೋಹನ್ ಶಾಂತಿಗ್ರಾಮದ ರೈತ ಲಕ್ಷ್ಮೇಗೌಡ, ಲಕ್ಷ್ಮಿ ದಂಪತಿ ಪುತ್ರ. ಕುಟುಂಬ ಶಾಂತಿಗ್ರಾಮದಲ್ಲಿ ಇದ್ದರೂ ಮೋಹನ್ ಹಾಸನದ ತನ್ನ ಅಜ್ಜಿ ಮನೆ ಯಲ್ಲಿ ಇದ್ದುಕೊಂಡು ಶಿಕ್ಷಣಕ್ಕೆ ಗಮನ ನೀಡಿ ಇಂದು ಶಿಕ್ಷಣ ಸಂಸ್ಥೆ, ಕುಟುಂಬ ಕ್ಕಷ್ಟೆಯಲ್ಲದೆ, ಜಿಲ್ಲೆಗೆ ಕೀರ್ತಿ…
ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರಿಗೆ ಕೃಷಿ ನೀತಿ ಜಾರಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಭರವಸೆ
May 1, 2018ಬೇಲೂರು: ಮುಂಬರುವ ವಿಧಾನಸಭಾ ಚುನಾವಣೆ ಯಲ್ಲಿ ಜೆಡಿಎಸ್ ಅಧಿಕಾರಕ್ಕೆ ತಂದರೆ ರೈತರಿಗೆ ಅತೀ ಪ್ರಮುಖವಾದ ಕೃಷಿ ನೀತಿ ಜಾರಿಗೆ ತರುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು. ಪಟ್ಟಣದಲ್ಲಿ ಜೆಡಿಎಸ್ನಿಂದ ಏರ್ಪಡಿಸಿದ್ದ ಕುಮಾರ ಪರ್ವ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಕಾಂಗ್ರೆಸ್ ನಾಯಕರಂತೆ ಟೀಕೆ ಮಾಡು ವುದಕ್ಕೆ ನಾನು ಹೋಗುವುದಿಲ್ಲ. ಏನು ಹೇಳುತ್ತೇನೊ ಅದನ್ನು ಮಾಡಿಯೇ ತೋರಿಸುತ್ತೇನೆ. ತಾಲೂಕಿಗೆ ಶಾಶ್ವತ ನೀರಿನ ಯೋಜನೆಗೆ ಕಾಯಕಲ್ಪ ನೀಡುತ್ತೇನೆ. ರಾಜ್ಯದಲ್ಲಿ 65 ವರ್ಷ ತುಂಬಿದ ಹಿರಿಯರಿಗೆ ಪ್ರತಿ…
ಜೆಡಿಎಸ್-ಕಾಂಗ್ರೆಸ್ ಗಲಾಟೆ; ಕಲ್ಲು ತೂರಾಟ
May 1, 2018ಹೊಳೆನರಸೀಪುರ: ತಾಲೂಕಿ ನಲ್ಲಿ ಚುನಾವಣೆ ರಣರಂಗ ದಿನ ದಿನಕ್ಕೂ ಕಾವು ಪಡೆಯುತ್ತಿದ್ದು, ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ ಸಂಭ ವಿಸಿ ಜಿಪಂ ಸದಸ್ಯನ ಕಾರಿನ ಮೇಲೆ ಕಲ್ಲು ತೂರಾಟ ಘಟನೆ ನಡೆದಿದೆ. ಹೊಳೆನರಸೀಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಚನ್ನರಾಯಪಟ್ಟಣ ತಾಲೂಕಿನ ಎ.ಕಾಳೇನಹಳ್ಳಿಯಲ್ಲಿ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾ ಮಾರಿ ನಡೆದಿದ್ದು, ಕಾಂಗ್ರೆಸ್ ನಾಯಕಿ ಅನುಪಮಾ ಅವರ ಪುತ್ರ. ಜಿಪಂ ಸದಸ್ಯ ಶ್ರೇಯಸ್ ಪಟೇಲ್ ಕಾರಿನ ಮೇಲೆ ಕಲ್ಲು ತೂರಲಾಗಿದೆ. ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ. ವಿವರ:…
ಮೋಹ, ಲೋಭ ಪಾಪಗಳ ತಾಯಿ-ತಂದೆ
May 1, 2018ಹಾಸನ: ಮೋಹ ಮತ್ತು ಲೋಭವೇ ಎಲ್ಲಾ ಪಾಪಗಳ ತಾಯಿತಂದೆ ಎಂದು ಚಿತ್ರದುರ್ಗದ ಚಿಕ್ಕಕಬ್ಬಿಗೆರೆಯ ಶ್ರೀ ಗುರುಕುಲ ವೇದವಿದ್ಯಾಪೀಠದ ಶ್ರೀ ಲೋಕೇಶ್ವರ ಶಿವಯೋಗಿ ಸ್ವಾಮೀಜಿ ಹೇಳಿದರು. ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಶಾಖಾ ಮಠದ ವತಿಯಿಂದ ಭಾನುವಾರ ಸಂಜೆ ನಗರದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಡೆದ ‘ಗುರು ತೋರಿದ ದಾರಿ ತಿಂಗಳ ಮಾಮನ ತೇರು’ 57ನೇ ಹುಣ ್ಣಮೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಮೋಹ ಮತ್ತು ಲೋಭದಿಂದ ದೂರವಿರಲು ಧಾರ್ಮಿಕ ಭಾವನೆ ಅಗತ್ಯ ಎಂದರು. ಉದಾರತ್ವವೇ ಮನುಷ್ಯನ ಶ್ರೇಷ್ಠ…
ಹೆಚ್ಡಿಕೆ ಕನಸು ನನಸಾಗಲ್ಲ, ಬಿಜೆಪಿ ಅಧಿಕಾರಕ್ಕೆ ಬರಲ್ಲ ಇಂಧನ ಸಚಿವ ಡಿ.ಕೆ. ಶಿವಕುಮಾರ್
April 30, 2018ಹಾಸನ: ಈ ಬಾರಿಯ ವಿಧಾನಸಭಾ ಚುನಾವಣೆ ಯಲ್ಲಿ 132 ಸ್ಥಾನದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗುವ ಕನಸು ನನಸಾಗು ವುದಿಲ್ಲ, ಬಿಜೆಪಿಯಂತೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಭವಿಷ್ಯ ನುಡಿದರು. ನಗರದ ಅರಳೇಪೇಟೆ ರಸ್ತೆಯಲ್ಲಿರುವ ಶ್ರೀ ಬಸವೇಶ್ವರ ದೇವಾಲಯದ ಆವರಣದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 132 ಸ್ಥಾನ ಗೆಲ್ಲುವುದು ಖಚಿತವಾಗಿದ್ದು, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗುವ ಕನಸು ಕಾಣುವುದು ತಪ್ಪುವುದಿಲ್ಲ. ಹಾಗೇ…
ಅರಸೀಕೆರೆ: ಮತಯಾಚಿಸಿದ ಶಾಸಕ ಕೆಎಂಶಿ
April 30, 2018ಅರಸೀಕೆರೆ: ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ತಮ್ಮ ಅಪಾರ ಬೆಂಬಲಿಗರೊಂದಿಗೆ ನಗರದ 21 ವಾರ್ಡ್ಗಳಲ್ಲಿ ರೋಡ್ ಶೋ ಮೂಲಕ ಮನೆ ಮನೆಗೆ ತೆರಳಿ ಪಕ್ಷದ ಪರ ಮತ ಯಾಚನೆ ಮಾಡಿದರು. ನಗರದ ಮಾರುತಿ ನಗರದಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪ್ರಚಾರ ಪ್ರಾರಂಭಿಸಿದ ಅವರು, ಕ್ಷೇತ್ರದ ಜನತೆ ಎರಡು ಬಾರಿ ಆಶೀರ್ವಾದ ಮಾಡಿ ಗೆಲ್ಲಿಸಿದ್ದಾರೆ. ಇದರ ಪರಿಣಾಮ ನನಗೆ ತುಂಬಿದ ರಾಜಕೀಯ ಶಕ್ತಿಯಿಂದ ಸದನದ ಒಳಗೂ ಮತ್ತು ಹೊರಗೂ ಹೋರಾಟ ನಡೆಸಿದ ಫಲ 121 ಕೋಟಿ…
ಹಳ್ಳಿಮೈಸೂರು ಹೋಬಳಿಯಲ್ಲಿ ಸಚಿವ ಎ.ಮಂಜು ಮತಬೇಟೆ
April 30, 2018ಹೊಳೆನರಸೀಪುರ: ಅರಕಲ ಗೂಡು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಚಿವ ಎ.ಮಂಜು ಹಳ್ಳಿ ಮೈಸೂರು ಹೋಬಳಿಯ ವಿವಿಧ ಗ್ರಾಪಂ ಹಳ್ಳಿಗಳಲ್ಲಿ ಭರ್ಜರಿ ಪ್ರಚಾರ ನಡೆಸಿದರು. ತಾಲೂಕಿನ ಹಳ್ಳಿ ಮೈಸೂರು ಗ್ರಾಮದಲ್ಲಿ ಮಾತನಾಡಿದ ಅವರು, ಜನ ಮೆಚ್ಚಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ದಿಟ್ಟ, ದೂರ ದೃಷ್ಟಿ ನಿರ್ಧಾರ ಗಳಿಂದ ನೂರಾರು ಜನಪರ ಯೋಜನೆ ಗಳನ್ನು ಜಾರಿಗೊಳಿಸಿ ಗ್ರಾಮೀಣ ಭಾಗದ ಸ್ತ್ರೀ ಸಾಮಾನ್ಯರಿಗೆ ಸೌಲಭ್ಯ ತಲುಪುವಂತೆ ಕ್ರಮ ಕೈಗೊಂಡ ಪರಿಣಾಮ ಇಂದು ಜನಾಭಿ ಪ್ರಾಯ ನಮ್ಮ ಪಕ್ಷದ…
ಬೇಲೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೀರ್ತನ ಮತಯಾಚನೆ
April 30, 2018ಬೇಲೂರು: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೀರ್ತನ ರುದ್ರೇಶ ಗೌಡ ಅವರಿಂದು ಮತಯಾಚನೆಗೆ ತೆರಳಿದ ಸಂದರ್ಭ ಪುರಸಭಾ ನಾಮಿನಿ ಸದಸ್ಯರೊಬ್ಬರು ತರಾಟೆ ತೆಗೆದು ಕೊಂಡ ಘಟನೆ ಜರುಗಿತು. ಪಟ್ಟಣದ ಹೆಚ್.ಕೆ.ಕುಮಾರಸ್ವಾಮಿ ಬಡಾವಣೆಯಲ್ಲಿ ಕೀರ್ತನ ಅವರು ಮತಯಾಚಿಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್ ಪುರಸಭಾ ನಾಮಿನಿ ಸದಸ್ಯ ವೆಂಕಟೇಶ್ ಅವರನ್ನು ಪ್ರಚಾರಕ್ಕೆ ಬರುವಂತೆ ಕಾಂಗ್ರೆಸ್ ಮುಖಂಡರು ಕೋರಿದರು. ಈ ಸಂದರ್ಭ ಬೇಸರಗೊಂಡ ಸದಸ್ಯ ವೆಂಕಟೇಶ್, ಕಳೆದ ಚುನಾವಣೆ ವೇಳೆ ಈ ವಾರ್ಡಿಗೆ ಪ್ರಚಾರಕ್ಕೆ ಆಗಮಿಸಿದ ವೈ.ಎನ್….
ಗೋದಾಮಿಗೆ ಆಕಸ್ಮಿಕ ಬೆಂಕಿ: 2 ಲಕ್ಷ ರೂ.ನಷ್ಟ
April 30, 2018ಬೇಲೂರು: ಮನೆಯ ಗೋದಾಮಿಗೆ ಆಕಸ್ಮಿಕವಾಗಿ ಬೆಂಕಿ ತಗಲಿ 2 ಲಕ್ಷದ ರೂ.ನ ಕೃಷಿ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿದೆ.