ಹಾಸನ: ಜಾತಿ ಬೀಜ ಬಿತ್ತುವ ಭ್ರಷ್ಟ ಮುಖ್ಯಮಂತ್ರಿಯನ್ನು ಹಿಂದೆಂದು ನಾನು ಕಂಡಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದರು. ತಾಲೂಕಿನ ಸಾಲಗಾಮೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಸಭೆ ಉದ್ಘಾಟಿಸಿ ಮಾತ ನಾಡಿದ ಅವರು, ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರು ಸ್ವಾರ್ಥದಿಂದ ಹಗಲು ದರೋಡೆ ಮಾಡಿರುವುದಲ್ಲದೆ, ವೀರಶೈವ ಸಮಾಜಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡಿ ದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯನಂತಹ ಜಾತಿ ಬೀಜ ಬಿತ್ತುವ ಭ್ರಷ್ಟನನ್ನು ನಾನು ಎಲ್ಲೂ ಕಂಡಿಲ್ಲ ಎಂದು ಆಕ್ರೋಶವ್ಯಕ್ತ ಪಡಿಸಿದರು. ಸಿದ್ದರಾಮಯ್ಯರ…
ಹಾಲಿನ ಲಾರಿಗಳಲ್ಲಿ ಹಣ, ಮದ್ಯ ಸಾಗಿಸಿದ್ದರೆ ದೂರು ನೀಡಲಿ ಬಾಗೂರು ಮಂಜೇಗೌಡ ವಿರುದ್ಧ ಹೆಚ್.ಡಿ.ರೇವಣ್ಣ ಆಕ್ರೋಶ
April 28, 2018ಹಾಸನ: ನಾನು ಹಾಲಿನ ಲಾರಿಗಳಲ್ಲಿ ಹಣ, ಮದ್ಯ ಸಾಗಿಸುತ್ತಿದ್ದರೆ ಚುನಾವಣಾಧಿಕಾರಿಗಳಿಗೆ ದೂರು ನೀಡಲಿ ಎಂದು ಹೊಳೆನರಸೀ ಪುರ ಕಾಂಗ್ರೆಸ್ ಅಭ್ಯರ್ಥಿ ಬಾಗೂರು ಮಂಜೇಗೌಡ ವಿರುದ್ಧ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು. ನಗರದ ಖಾಸಗಿ ಹೋಟೆಲೊಂದರಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಗುರುವಾರ ತಮ್ಮ ಕಾಂಗ್ರೆಸ್ ಅಭ್ಯರ್ಥಿ ಬಾಗೂರು ಮಂಜೇಗೌಡರು ಆರೋಪಗಳನ್ನು ಅಲ್ಲಗೆಳೆದ ರಲ್ಲದೆ, ಬಾಗೂರು ಮಂಜೇಗೌಡ ವಿರುದ್ಧ ಆರೋಪಗಳ ಸುರಿಮಳೆಗೈದರು. ನಾನು ಹಾಲಿನ ಲಾರಿಗಳಲ್ಲಿ ಹಣ, ಮದ್ಯ ಸಾಗಿಸುತ್ತಿದ್ದರೆ. ಚುನಾವಣಾಧಿಕಾರಿಗಳಿಗೆ ದೂರು ನೀಡಲಿ. ಎಲ್ಲಾ ಹಾಲಿನ ವಾಹನಗಳನ್ನೂ ತಪಾಸಣೆ…
ಕಣದಲ್ಲಿ 53 ಅಭ್ಯರ್ಥಿಗಳು ಚುನಾವಣೆ: ಹಿಂದೆ ಸರಿದ 19 ಮಂದಿ
April 28, 2018ಹಾಸನ: ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಿಂದ ನಾಮಪತ್ರ ಸಲ್ಲಿಸಿ ಊರ್ಜಿತಗೊಂಡಿದ್ದ 72 ಉಮೇದುವಾರರ ಪೈಕಿ 19 ಮಂದಿ ನಾಮಪತ್ರ ಹಿಂಪಡೆದ್ದು, ಅಂತಿಮವಾಗಿ 53 ಮಂದಿ ಕಣದಲ್ಲಿದ್ದಾರೆ. ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಲ್ಲಿ 86 ಮಂದಿಯಿಂದ ಒಟ್ಟು 129 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಇವುಗಳಲ್ಲಿ 16 ನಾಮಪತ್ರ ತಿರಸ್ಕøತ ಗೊಂಡಿದ್ದು, 72 ಮಂದಿಯ ನಾಮಪತ್ರವು ಪುರಸ್ಕøತಗೊಂಡಿವೆ. ಕ್ಷೇತ್ರವಾರು ವಿವರ: ಹಾಸನ ವಿಧಾನಸಭಾ ಕ್ಷೇತ್ರದಿಂದ 13 ನಾಮಪತ್ರಗಳೂ ಕ್ರಮಬದ್ಧವಾಗಿದ್ದು, 13 ಮಂದಿ ಯೂ ಕಣದಲ್ಲಿದ್ದಾರೆ. ಶ್ರವಣಬೆಳಗೊಳ ವಿಧಾನ ಸಭಾ ಕ್ಷೇತ್ರದಲ್ಲಿ 5…
ಹೆಚ್.ಡಿ.ರೇವಣ್ಣ ಏನೇ ಪಿತೂರಿ ಮಾಡಿದ್ರೂ ನನ್ನ ಸೋಲಿಸಲು ಆಗಲ್ಲ ಬ್ಲಾಕ್ಮೇಲ್ ತಂತ್ರಕ್ಕೆ ನಾ ಹೆದರಲ್ಲ, ನೇರ ಸ್ಪರ್ಧೆಗೆ ಸಿದ್ಧರಾಗಿ: ಬಿ.ಪಿ. ಮಂಜೇಗೌಡ ಸವಾಲು
April 27, 2018ಹಾಸನ: ಮಾಜಿ ಸಚಿವ ಹೆಚ್.ಡಿ. ರೇವಣ್ಣ ಏನೇ ಪಿತೂರಿ ಮಾಡಿದರೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ, ಇಂತಹ ಬ್ಲಾಕ್ಮೇಲ್ ತಂತ್ರಕ್ಕೆ ನಾನು ಹೆದರುವುದಿಲ್ಲ, ನೇರ ಸ್ಪರ್ಧೆಗೆ ಸಿದ್ಧರಾಗಿ ಎಂದು ಹೊಳೆನರಸೀಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾಗೂರು ಮಂಜೇ ಗೌಡ ಸವಾಲು ಹಾಕಿದರು. ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಆರ್ಟಿಓ ಇಲಾಖೆಯಿಂದ 700 ಕೋಟಿ ರೂ. ಆಸ್ತಿ ಮಾಡಿದ್ದಾರೆ ಎಂದು ರೇವಣ್ಣ ಅವರು ನನ್ನ ಮೇಲೆ ಇಲ್ಲ ಸಲ್ಲದ ಆರೋಪವನ್ನು ಮಾಡುತ್ತಿದ್ದಾರೆ. ನನ್ನ ಮೇಲೆ ಸುಳ್ಳು ಹೇಳುವ ಇವರ ಆಸ್ತಿ ಕಾಣುತ್ತಿಲ್ಲವೇ?…
ವ್ಯಕ್ತಿಯ ಅನುಮಾನಾಸ್ಪದ ಸಾವು
April 27, 2018ಹಾಸನ: ಖಾಸಗಿ ಕಂಪನಿಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಂಜಿನಿಯರ್ ವಿಜಯಕುಮಾರ್ (54) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ನಗರದ ಹೌಸಿಂಗ್ಬೋರ್ಡ್ನಲ್ಲಿ ವಾಸವಾಗಿರುವ ವಿಜಯಕುಮಾರ್ ಅವರು ವಿದ್ಯಾನಗರದ ಗೌರಿಕೊಪ್ಪಲಿನ ಸರಕಾರಿ ಪ್ರೌಢಶಾಲೆಯ ಬಳಿ ಮುಖ್ಯರಸ್ತೆಯ ಬದಿ ಚರಂಡಿಯೊಂದರಲ್ಲಿ ಮೃತ ದೇಹ ದೊರೆತಿದೆ. ಚರಂಡಿ ಒಳಗೆ ಗಲೀಜು ಇದ್ದು, ಮುಖ ಒಳಗೆ ಮಾಡಿಕೊಂಡು ಬಿದ್ದಂತೆ ಕಾಣ ಸಿದೆ. ರಾತ್ರಿ ಕಂಠಪೂರ್ತಿ ಕುಡಿದು ಹೋಗುವಾಗ ಬಿದ್ದಿರಬಹುದೇ, ಇಲ್ಲವೇ ಇತರರೊಂದಿಗೆ ಜಗಳ ನಡೆದು ಯಾರಾದರೂ ತಳ್ಳಿರಬಹುದೇ, ಯಾವ ರೀತಿ ಸಾವನ್ನಪ್ಪಿರಬಹುದು ಎಂಬುದು ಪೊಲೀಸ್ ತನಿಖೆಯಿಂದ ಸತ್ಯಾಂಶ ಹೊರಬರಬೇಕಾಗಿದೆ….
ತಾಯಿ, ಮಗಳ ಕೊಂದವನಿಗೆ ಜೀವಾವಧಿ ಶಿಕ್ಷೆ
April 27, 2018ಹಾಸನ: ತಾಯಿ ಮತ್ತು ಮಗಳನ್ನು ಕೊಲೆ ಮಾಡಿದ ಆರೋಪಿಗೆ ಹಾಸನದ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಬಿ.ಡಿ.ಸಂದೀಪ ಶಿಕ್ಷೆಗೊಳಗಾದ ಅಪರಾಧಿ. 2014ರ ಡಿ.17ರಂದು ಕೊಡಗು ಜಿಲ್ಲೆ, ಸೋಮವಾರಪೇಟೆ ತಾಲೂಕು, ಬೇಸೂರು ಗ್ರಾಮದ ಹೆಚ್.ಕೆ.ಶಿವಕುಮಾರ್ ಪತ್ನಿ ಲೋಕೇಶ್ವರಿ ಮತ್ತು ಅವರ ಮಗಳು ಶುಭಾಳನ್ನು ಕೊಲೆ ಮಾಡಿ ಗುರುತು ಸಿಗ ದಂತೆ ಸೀಮೆಎಣ್ಣೆ ಸುರಿದು ಸುಟ್ಟು ಹಾಕಿದ್ದ. ಅಂದು ಶಿವಕುಮಾರ್ ಮನೆಗೆ ಬಂದು ಕಳವು ಮಾಡಿದ್ದ ಚಿನ್ನದ ಉಂಗುರ ಗಳನ್ನು…
ಪರಿಹಾರ ನೀಡುವಂತೆ ಬ್ಯಾಂಕ್ ಆಫ್ ಬರೋಡ ವ್ಯವಸ್ಥಾಪಕರಿಗೆ ಆದೇಶ
April 27, 2018ಹಾಸನ: ಹಾಸನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷ ಎ.ಲೋಕೇಶ್ಕುಮಾರ್ ಹಾಗೂ ಮಹಿಳಾ ಸದಸ್ಯೆ ಬಿ.ಕೆ.ಶಾಂತಲಾ ಅವರನ್ನೊಳ ಗೊಂಡ ಪೀಠವು, ಮೈಸೂರು ನಗರದ ಕೆ.ಸಿ.ಶ್ರೀನಿವಾಸ ಮೂರ್ತಿ ಇವರು ವ್ಯವಸ್ಥಾಪಕರು, ಬ್ಯಾಂಕ್ ಆಫ್ ಬರೋಡ, ಹಾಸನ ಇವರ ವಿರುದ್ಧ ಸಲ್ಲಿಸಿದ್ದ ಪಿರ್ಯಾಧಿಗೆ ಸಂಬಂಧಿಸಿದಂತೆ ಎದುರುದಾರರು ಉಂಟುಮಾಡಿದ ಸೇವಾನ್ಯೂನತೆಗಾಗಿ 25,000 ರೂ. ಹಾಗೂ ಪಿರ್ಯಾದಿನ ಖರ್ಚು 5,000 ರೂ.ಗಳನ್ನು ಒಂದು ತಿಂಗಳೊಳಗಾಗಿ ಕೊಡುವಂತೆ ಆದೇಶಿಸಿದ್ದಾರೆ. ಫಿರ್ಯಾದು ವಿವರ: ಕೆ.ಸಿ.ಶ್ರೀನಿವಾಸ ಮೂರ್ತಿ ಬ್ಯಾಂಕ್ ಆಫ್ ಬರೋಡದಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದು,…
ಲೋಕ ಕಲ್ಯಾಣಾರ್ಥಕ್ಕೆ ಮಹಾಯಜ್ಞ
April 27, 2018ಅರಸೀಕೆರೆ: ಪಟ್ಟಣದ ಮಾರುತಿ ಸಚ್ಚಿದಾನಂದ ಆಶ್ರಮದಲ್ಲಿ ಲೋಕ ಕಲ್ಯಾಣಾರ್ಥವಾಗಿ ದಶ ದಿನಗಳ ಕಾಲ ನಡೆಯುತ್ತಿರುವ ಒಂದು ಕೋಟಿ ಆಂಜನೇಯ ಮಹಾಮಂತ್ರದ ಜಪ ಹಾಗೂ ಒಂದು ಲಕ್ಷ ಕದಳೀ ಮಧು ಮಿಶ್ರಿತ ಹನುಮಾನ್ ಮಹಾ ಯಜ್ಞ ನಿರ್ವಿಜ್ಞವಾಗಿ ಸಾಗುತ್ತಿದೆ. ಈ ಮಹಾಯಜ್ಞದಲ್ಲಿ ತಾಲೂಕಿ ನಿಂದಲ್ಲದೇ ರಾಜ್ಯದ ನಾನಾ ಭಾಗಗ ಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತ ಸಮೂಹ ಪಾಲ್ಗೊಳ್ಳುವ ಮೂಲಕ ಕೃತಾರ್ಥರಾಗುತ್ತಿದ್ದಾರೆ. ಆಶ್ರಮದ ಅವ ಧೂತರಾದ ಸತೀಶ್ ಶರ್ಮ ಗುರೂಜಿ ಅವರ ಸಂಕಲ್ಪದಂತೆ ಲೋಕ ಕಲ್ಯಾಣಾ ರ್ಥವಾಗಿ ಕೋಟ್ಯಂತರ ರೂ….
ಸಾರಿಗೆ ಅಧಿಕಾರಿಗಳ ಮೂಲಕ ಹಣ ಹಂಚಿಕೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಆರೋಪ
April 26, 2018ಹಾಸನ: ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ 7 ಮಂದಿ ಸಾರಿಗೆ ಇಲಾಖೆ ಅಧಿಕಾರಿಗಳಿಂದ ವ್ಯಾಪಕ ಹಣ ಹಂಚಿಕೆಯಾಗುತ್ತಿದೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆರೋಪಿಸಿದರು. ಹಾಸನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಬಿ.ಪಿ.ಮಂಜೇಗೌಡ ಅವರ ಸಹೋದರ ಕೊಪ್ಪಳದಲ್ಲಿ ಸಾರಿಗೆ ಇಲಾಖೆ ಅಧಿಕಾರಿ ಆಗಿರುವ ಕೃಷ್ಣೇಗೌಡ ನೇತೃತ್ವದಲ್ಲಿ ಹಣವನ್ನು ಹಂಚಿಕೆ ಮಾಡು ತ್ತಿದ್ದಾರೆ ಎಂದು ಆರೋಪಿಸಿದರು. ಹವಾಲಾ ಮೂಲಕ ಕ್ಷೇತ್ರದಲ್ಲಿ ಹಂಚಲು 10 ಕೋಟಿ ಹಣ ಕಳುಹಿಸಲಾಗುತ್ತಿದೆ. 7 ಮಂದಿ ಸಾರಿಗೆ ಇಲಾಖೆ ಅಧಿಕಾರಿ ಗಳು…
ರೋಹಿಣ ಸಿಂಧೂರಿ ವರ್ಗಾವಣೆ ಪ್ರಕರಣ: ವಿಚಾರಣೆ ನಾಳೆಗೆ ಮುಂದೂಡಿಕೆ
April 26, 2018ಹಾಸನ: ಡಿಸಿ ರೋಹಿಣ ಸಿಂಧೂರಿ ವರ್ಗಾವಣೆ ಪ್ರಕರಣದ ಪ್ರಾಥಮಿಕ ವಿಚಾರಣೆ ಆಲಿಸಿದ ಹೈಕೋರ್ಟ್ ನ್ಯಾಯ ಮೂರ್ತಿಗಳು ವಿಚಾರಣೆಯನ್ನು ಏ. 27ಕ್ಕೆ ಮುಂದೂಡಿದ್ದಾರೆ. ನ್ಯಾಯಮೂರ್ತಿಗಳಾದ ಹೆಚ್.ಜಿ.ರಮೇಶ್ ಮತ್ತು ಬಿ.ಶ್ರೀನಿ ವಾಸೇಗೌಡ ಅವರಿದ್ದ ಪೀಠವು ಪ್ರಕರಣದ ಪ್ರಾಥಮಿಕ ವಾದ ಆಲಿಸಿದ ಬಳಿಕ ವಿಚಾರಣೆಯನ್ನು ಮುಂದೂಡಿದ್ದಾರೆ. ವರ್ಗಾವಣೆ ಸಂಬಂಧ ಸಿಎಟಿ ತೀರ್ಪು ಪ್ರಶ್ನಿಸಿ ರೋಹಿಣ ಸಿಂಧೂರಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.