ಸಕಲೇಶಪುರ: ತಾಲೂಕಿನ ಬನವಾಸೆ ಗ್ರಾಮದಲ್ಲಿ ಅನುಮಾನಾಸ್ಪದ ವಾಗಿ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಮಕ್ಕಳ ಕಳ್ಳನೆಂದು ಭಾವಿಸಿ ಗ್ರಾಮಸ್ಥರು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಬುಧವಾರ ನಡೆದಿದೆ. ಮಕ್ಕಳ ಕಳ್ಳರು ಇದ್ದಾರೆಂಬ ಸಾಮಾಜಿಕ ಜಾಲ ತಾಣದಲ್ಲಿ ಇತ್ತೀಚೆಗೆ ವ್ಯಾಪಕ ವದಂತಿ ಹರಡಿದ್ದು, ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಗ್ರಾಮದಲ್ಲಿ ಬಿಹಾರ ಮೂಲದ ಯುವಕ ನೊಬ್ಬ ಅನುಮಾನಾಸ್ಪದವಾಗಿ ತಿರುಗಾಡುತ್ತ ಮನೆಗಳ ಬಾಗಿಲು ಬಡಿಯುತ್ತಿದ್ದ ಎಂದು ಅವನನ್ನು ಗ್ರಾಮಸ್ಥರು ಹಿಡಿದು ಪೊಲೀಸ ರಿಗೆ ಒಪ್ಪಿಸಿದ್ದಾರೆ. ಈ ಯುವಕನ ಜೊತೆಗೆ ಇನ್ನು…
ನಿಫಾ: ಮುಂಜಾಗ್ರತೆ ವಹಿಸಲು ಡಿಸಿ ಸೂಚನೆ
May 25, 2018ಹಾಸನ: ದಕ್ಷಿಣ ರಾಜ್ಯಗಳಲ್ಲಿ ಆತಂಕ ಮೂಡಿಸಿ ರುವ ಮಾರಣಾಂತಿಕ ನಿಫಾ ವೈರಸ್ ಸೋಂಕು ಹರಡದಂತೆ ಎಲ್ಲರೂ ಮುಂಜಾಗ್ರತೆ ವಹಿಸುವುದು ಅಗತ್ಯ ಎಂದು ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಿಫಾ ಸೋಂಕು ನಿಯಂತ್ರಣ ಕುರಿತು ನಡೆದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ನಿಫಾ ವೈರಾಣು ಅತ್ಯಂತ ಅಪಾಯಕಾರಿ ಎಂದು ಈಗಾಗಲೇ ದೃಢಪಟ್ಟಿದೆ. ಕೇರಳ ರಾಜ್ಯದಿಂದ ಇದು ಪ್ರಾರಂಭವಾಗಿದ್ದು ಈಗಾಗಲೇ…
ಶೋಷಿತರ ಪರವಾದ ಧ್ವನಿ ದಲಿತ ಸಾಹಿತ್ಯ 81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ ಅಭಿಮತ
May 25, 2018ಶ್ರವಣಬೆಳಗೊಳ: ‘ದಲಿತ ಸಾಹಿತ್ಯ ಎನ್ನುವುದು ಮೇಲ್ವರ್ಗದವರನ್ನು ದೂಷಣೆ ಮಾಡುವುದಲ್ಲ. ದಲಿತರನ್ನು ದೂಷಣೆ ಮಾಡುವ ಮನಸ್ಸುಗಳನ್ನು ಬದಲಾ ಯಿಸುವ ಮಾರ್ಗ’ ಎಂದು 81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಸಿದ್ದಲಿಂಗಯ್ಯ ಹೇಳಿದರು. ಜೈನಕಾಶಿ ಶ್ರವಣಬೆಳಗೊಳದ ಕಾನಜಿ ಯಾತ್ರಿಕಾಶ್ರಮದಲ್ಲಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್ನಿಂದ 81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ನೆನಪಿನ ಡಾ.ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದಲಿತರ ಮನಸ್ಸಿನಲ್ಲಿ ರುವ ನೋವನ್ನು ಸಮಾಜಕ್ಕೆ ತಿಳಿಸುವ ಮಾರ್ಗವೇ ದಲಿತ ಸಾಹಿತ್ಯವಾಗಿದ್ದು, ಇದು…
ಆಟೋ ಪಲ್ಟಿ: ಪ್ರಯಾಣಿಕ ಸಾವು
May 25, 2018ಹಾಸನ: ಆಟೋ ಪಲ್ಟಿಯಾಗಿ ಪ್ರಯಾಣಿಕನೊಬ್ಬ ಸಾವಿಗೀಡಾಗಿರುವ ಘಟನೆ ಹಾಸನ-ಅರಕಲಗೂಡು ರಸ್ತೆಯ ಫಾರಂ ಹೌಸ್ ಸಮೀಪದ ಕಬ್ಬಿನಹಳ್ಳಿ ಬಾರೆ ಹತ್ತಿರ ಮಂಗಳವಾರ ನಡೆದಿದೆ. ತಾಲೂಕಿನ ಕಸಬಾ ಹೋಬಳಿಯ ಅಗಿಲೆ ಗ್ರಾಮದ ನಿವಾಸಿ ಕರಿಗೌಡ(45) ಮೃತಪಟ್ಟ ವ್ಯಕ್ತಿ. ಹಾಸನದಿಂದ ಅಗಿಲೆ ಗ್ರಾಮಕ್ಕೆ ಆಟೋದಲ್ಲಿ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿದೆ. ಪರಿಣಾಮ ಆಟೋದಲ್ಲಿ ಪ್ರಯಾಣ ಸುತ್ತಿದ್ದ ಕರಿಗೌಡ ಅವರಿಗೆ ತೀವ್ರವಾದ ಪೆಟ್ಟಾಗಿದೆ. ಅವರನ್ನು ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಘಟನೆ…
ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್ ಮತದಾನ ಜಾಗೃತಿ: ಡಿಸಿಯಿಂದ ಜಾಗೃತಿ ಓಟ, ಮಾನವ ಸರಪಳಿ ರಚನೆ, ಮಾನವ ನಿರ್ಮಿತ ಕರ್ನಾಟಕ ನಕ್ಷೆ ಪ್ರದರ್ಶನ
May 9, 2018ಹಾಸನ: ಜಿಲ್ಲಾಡಳಿತ, ಜಿಪಂ ಸೇರಿದಂತೆ ಇತರೆ ಇಲಾಖೆ, ಸಂಘಸಂಸ್ಥೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಬೃಹತ್ ಮತದಾನ ಜಾಗೃತಿ ಕಾರ್ಯಕ್ರಮ ದಲ್ಲಿ ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್ ಸೇರಿ ದಂತೆ ವಿವಿಧ ಅಧಿಕಾರಿಗಳು ಪಾಲ್ಗೊಂಡು ಗಮನ ಸೆಳೆದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಜಿಪಂ ಪದವಿ ಪೂರ್ವ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು, ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಇಂದು ವಿಶಿಷ್ಟ ರೀತಿಯಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಜಾಫರ್ ಅವರು, ಜಿಪಂ ಸಿಇಓ…
ಜಿಲ್ಲೆಯ 7 ಕ್ಷೇತ್ರದಲ್ಲೂ ಕಾಂಗ್ರೆಸ್ಗೆ ಗೆಲುವು ಶಾಸಕ ಹೆಚ್.ಎಂ. ವಿಶ್ವನಾಥ್ ವಿಶ್ವಾಸ
May 9, 2018ಹಾಸನ: ಈ ಬಾರಿಯೂ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಚನೆಯಾಗಲಿದ್ದು, ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳು 7 ಕ್ಷೇತ್ರದಲ್ಲೂ ಜಯ ಗಳಿಸುವರು ಎಂದು ಮಾಜಿ ಶಾಸಕ ಹೆಚ್. ಎಂ.ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದರು. ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಗೆ ಜನ ಸ್ಪಂದನೆ ಇದ್ದು, ವಿರೋಧ ಪಕ್ಷದವರೂ ಎಷ್ಟೇ ಹಣ ಖರ್ಚು ಮಾಡಿದರೂ ಕಾಂಗ್ರೆಸ್ ಗೆಲುವು ತಪ್ಪಿಸಲು ಸಾಧ್ಯವಿಲ್ಲ. ಬಿಜೆಪಿ-ಜೆಡಿಎಸ್ ಒಳ ಒಪ್ಪಂದವನ್ನು ಜನ ಒಪ್ಪುವುದಿಲ್ಲ. ರಾಜ್ಯ ದಲ್ಲಿ 130 ಸ್ಥಾನ ಗೆದ್ದು ಸಿಎಂ ಸಿದ್ದರಾಮಯ್ಯ ನಾಯಕತ್ವದಲ್ಲಿ…
ಜನರ ದಾರಿ ತಪ್ಪಿಸುತ್ತಿರುವ ಕಾಂಗ್ರೆಸ್, ಬಿಜೆಪಿ
May 8, 2018ಹೊಳೆನರಸೀಪುರ: ಕಾಂಗ್ರೆಸ್, ಬಿಜೆಪಿ ಸರ್ಕಾರಗಳು ಜನ ಸಾಮಾನ್ಯರ ಸಮಸ್ಯೆಗಳನ್ನು ಮರೆತು ಹಗರಣದಲ್ಲಿ ಭಾಗಿಯಾಗಿದ್ದರೂ ಸಹ ದಾರಿ ತಪ್ಪಿಸಲು ಸುಳ್ಳು ಭರವಸೆಗಳನ್ನು ನೀಡು ತ್ತಿವೆ ಎಂದು ಜೆಡಿಎಸ್ ಅಭ್ಯರ್ಥಿ, ಮಾಜಿ ಸಚಿವÀ ಹೆಚ್.ಡಿ.ರೇವಣ್ಣ ಆರೋಪಿಸಿದರು. ಪಟ್ಟಣದಲ್ಲಿನ ಅವರ ನಿವಾಸದಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಈ ಕ್ಷೇತ್ರದ ಶಾಸಕನಾದ ಮೇಲೆ ಹತ್ತು ವರ್ಷ ನಮ್ಮ ಸರ್ಕಾರ ಇಲ್ಲದಿದ್ದರೂ ಸಹ ವಿರೋಧ ಪಕ್ಷದವರು ಒಪ್ಪುವ ರೀತಿಯಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ನಾನು ಮತ್ತು ನಮ್ಮ ತಂದೆ…
ಹಾಸನದ ಇಬ್ಬರು ವಿದ್ಯಾರ್ಥಿಗಳು ರಾಜ್ಯಕ್ಕೆ 3ನೇ ಸ್ಥಾನ
May 8, 2018ಹಾಸನ: ಟ್ಯೂಷನ್ಗೆ ಹೋಗದೇ ನಗರದ ವಿಜಯ ಆಂಗ್ಲ ಮಾಧ್ಯಮ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಇಂದು ರಾಜ್ಯಕ್ಕೆ 3ನೇ ಸ್ಥಾನ ಪಡೆ ಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ನಗರದ ವಿಜಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಣ ಪಡೆದು ಅತ್ಯುನ್ನತ ಶ್ರೇಣ ಪಡೆದಿರುವ ಆದರ್ಶನಗರ ವಾಸಿ ಕಾಫಿ ಬೋರ್ಡ್ನಲ್ಲಿ ನೌಕರ ಬಸವರಾಜು ನಳಿನಿ ದಂಪತಿ ಬಿ.ಹಿಮಾ ಹಾಗೂ ಶಂಕರೀಪುರಂನಲ್ಲಿ ವಾಸಿ ಲಕ್ಷ್ಮಿ ಕಾಫಿ ಕ್ಯೂರಿಂಗ್ ಮಾರ್ಕೇಟಿಂಗ್ ಮ್ಯಾನೇಜರ್ ಎಂ.ಬಿ.ಕಾಳಪ್ಪ ಪವಿತ್ರ ದಂಪತಿ ಪುತ್ರ ಕಾವೇರಿಯಪ್ಪ 625 ಅಂಕ ಗಳಿಗೆ…
ಚುನಾವಣೆ ಬಹಿಷ್ಕರಿಸಲು ಮುಸಲ್ಮಾನ ಬಾಂಧವರ ನಿರ್ಧಾರ
May 8, 2018ರಾಮನಾಥಪುರ: ವಿಧಾನಸಭೆ ಚುನಾವಣೆ ಬಹಿಷ್ಕರಿಸುವುದಾಗಿ ಮುಸ್ಲಿಂ ಬಾಂಧವರು ಎಚ್ಚರಿದ್ದಾರೆ. ಸುಮಾರು 85 ಒಕ್ಕಲು ಮುಸಲ್ಮಾನ ಜನಾಂಗದವರು ಮುಸ್ಲಿಂ ಜಾಮಿಯಾ ಮಸೀದಿ ಪ್ರಧಾನ ಕಾರ್ಯದರ್ಶಿ ಸಾಧಿಕ್ಸಾಬ್ ನೇತೃತ್ವದಲ್ಲಿ ಮುಂತಾದವರು ಸಭೆ ಸೇರಿ ಚರ್ಚಿಸಿದರಲ್ಲದೆ, ಕಪ್ಪು ಬಾವುಟ ಪ್ರದರ್ಶಿಸಿ, ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಧಿಕ್ಕಾರ ಕೂಗಿ ಪ್ರತಿಭಟಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಜಾಮಿಯಾ ಮಸೀದಿ ಪ್ರಧಾನ ಕಾರ್ಯದರ್ಶಿ ಸಾಧಿಕ್ಸಾಬ್ ಮಾತನಾಡಿ, ಪಟ್ಟಣದಲ್ಲಿ ಮುಸಲ್ಮಾನ ಜನಾಂಗದ ಸುಮಾರು 85 ವಕ್ಕಲು ಅನಾಧಿಕಾಲದಿಂದಲೂ ವಾಸವಾಗಿದ್ದು, ಹತ್ತಾರು ವರ್ಷ ಗಳಿಂದ ಶವ ಸಂಸ್ಕಾರ ಮಾಡಲು…
ಎಲ್ಲಾ ಪಕ್ಷಕ್ಕೂ ಪ್ರಚಾರ ಮಾಡುವ ಚಿತ್ರ ನಟರಿಗೆ ಬದ್ಧತೆ ಇದೆಯೇ…?
May 7, 2018ಹಾಸನ: ಎಲ್ಲಾ ಪಕ್ಷಗಳಲ್ಲೂ ಗುರುತಿಸಿಕೊಂಡು ಪ್ರಚಾರ ಮಾಡುತ್ತಿರುವ ಚಲನಚಿತ್ರ ನಟರಿಗೆ ಯಾವ ಬದ್ಧತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ತಾಲೂಕಿನ ಗೊರೂರು ಸಂತೇಮಾಳ ದಲ್ಲಿ ನಡೆದ ಜೆಡಿಎಸ್, ಬಿಎಸ್ಪಿ ಕಾರ್ಯ ಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಎರಡು ದಿನಗಳ ಹಿಂದೆ ಚಲನಚಿತ್ರ ನಟನೋರ್ವ ಹಾಸನದಲ್ಲಿ ಬೆಳಿಗ್ಗೆ ಜೆಡಿಎಸ್ ಪರ ಮತ ಯಾಚನೆ ಮಾಡಿ, ಮಧ್ಯಾಹ್ನ ಸಕಲೇಶಪುರ ದಲ್ಲಿ ಬಿಜೆಪಿ ಪರ ಮತ ನೀಡಿ ಎನ್ನುವ ಇವರಿಗೆ ಯಾವ ಬದ್ಧತೆ ಇದೆ…