ಮೈಸೂರು, ಜು.17(ಆರ್ಕೆಬಿ)- ರಾಜ್ಯ ಸರ್ಕಾರಿ ನೌಕರರಿಗೆ ನೀಡುತ್ತಿರುವ ಜ್ಯೋತಿ ಸಂಜೀವಿನಿ ಆರೋಗ್ಯ ಭಾಗ್ಯವನ್ನು ನಿವೃತ್ತ ನೌಕರರು ಮತ್ತು ಅವರ ಕುಟುಂಬ ದವರಿಗೂ ವಿಸ್ತರಿಸಬೇಕು ಎಂದು ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಾ.ಎಲ್.ಭೈರಪ್ಪ ಇಂದಿಲ್ಲಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು. ಮೈಸೂರಿನ ಕಲಾಮಂದಿರದಲ್ಲಿ ಕರ್ನಾ ಟಕ ರಾಜ್ಯ ಸರ್ಕಾರಿ ವಿಶ್ರಾಂತ ಉದ್ಯೋಗಿ ಗಳ ಸಂಘದ ಸರ್ವ ಸದಸ್ಯರ ಮಹಾಸಭೆ ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿವೃತ್ತ ನೌಕರರಿಗೂ ಹಣರಹಿತ ಚಿಕಿತ್ಸೆ ನೀಡಬೇಕು ಎಂಬುದು ನಮ್ಮ ಪ್ರಮುಖ ಹೋರಾಟವಾಗಿದೆ….
ಹನಿ ನೀರು ಉಳಿಸಿ ಜೀವಜಲ ಸಂರಕ್ಷಿಸಿ: ಡಿಸಿ
July 18, 2019ಅರಸೀಕೆರೆಯಲ್ಲಿ ಜಲಸಂರಕ್ಷಣೆ ಯೋಜನೆ ಅರಿವು ಜಾಥಾಕ್ಕೆ ಚಾಲನೆ ನೀಡಿದ ಅಕ್ರಂ ಪಾಷ ಅರಸೀಕೆರೆ, ಜು.17- `ಜಲ ಸಂರಕ್ಷಣೆ’ ಅಂದೋ ಲನ ಕೇಂದ್ರ ಸರ್ಕಾರದ ಮಹತ್ವದ ಯೋಜನೆ. ಇದರ ಅನುಷ್ಠಾನಕ್ಕೆ ತಾಲೂಕಿನ ಎಲ್ಲಾ ಇಲಾಖೆ ಗಳ ಅಧಿಕಾರಿಗಳು, ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಕೈ ಜೋಡಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಅರಿವು ಮೂಡಿ ಸುವ ಮೂಲಕ ಅಂತರ್ಜಲ ವೃದ್ಧಿಗೆ ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ಕರೆ ನೀಡಿದರು. ನಗರದ ಹಳೇ ಸರ್ಕಾರಿ ಮಾಧ್ಯಮಿಕ ಪಾಠ ಶಾಲೆ ಆವರಣದಿಂದ…
ಗ್ರಾಮ ಲೆಕ್ಕಾಧಿಕಾರಿಗಳಿಂದ ಲೇಖನಿ ಸ್ಥಗಿತ; ಬೇಡಿಕೆ ಈಡೇರಿಕೆಗೆ ಆಗ್ರಹ
July 18, 2019ಹಾಸನ, ಜು.17- ನಮ್ಮದು ನ್ಯಾಯ ಸಮ್ಮತ ಬೇಡಿಕೆಗಳು. ಅವನ್ನು ತಕ್ಷಣ ಈಡೇರಿಸಿ ಎಂದು ಒತ್ತಾಯಿಸಿ ಗ್ರಾಮ ಲೆಕ್ಕಾಧಿಕಾರಿಗಳು ಬುಧವಾರ ಲೇಖನಿ ಸ್ಥಗಿತಗೊಳಿಸಿ 1 ದಿನದ ಸಾಂಕೇತಿಕ ಮುಷ್ಕರ ನಡೆಸಿದರು. ಬಳಿಕ ಅಪರ ಜಿಲ್ಲಾಧಿಕಾರಿ ವೈಶಾಲಿ ಅವರಿಗೆ ಮನವಿಪತ್ರ ಸಲ್ಲಿಸಿದರು. ಗ್ರಾಮ ಸಹಾಯಕರ ಹುದ್ದೆ ಖಾಯಂ ಗೊಳಿಸುವ ಭರವಸೆಯನ್ನು ಈವರೆಗೂ ಈಡೇರಿಸಿಲ್ಲ. ಬೇರೆ ಇಲಾಖೆಗಳ ಕೆಲಸ ಗಳನ್ನು ವಹಿಸುವುದನ್ನು ನಿಷೇಧಿಸಿ ಸರ ಕಾರ ಆದೇಶ ಹೊರಡಿಸಿದ್ದರೂ ಹಲವು ಜಿಲ್ಲೆಗಳಲ್ಲಿ ರಜಾ ದಿನಗಳಲ್ಲಿಯೂ ಕೆಲಸ ಮಾಡಿಸಲಾಗುತ್ತಿದೆ. ಇದರಿಂದ ರಜೆ ದಿನ…
100 ದಿನ ಪೂರೈಸಿದ ಅನ್ನ ದಾಸೋಹ
July 18, 2019ಕಾವೇರಿ ದಂಡೆಯ ಮಲ್ಲಿರಾಜಪಟ್ಟಣದ ಶ್ರೀ ಲಕ್ಷಣೇಶ್ವರಸ್ವಾಮಿ ದೇಗುಲದಲ್ಲಿ ನಿತ್ಯ ದಾಸೋಹ ರಾಮನಾಥಪುರ,ಜು.17- ಇಲ್ಲಿಗೆ ಸಮೀ ಪದ ಮಲ್ಲಿರಾಜಪಟ್ಟಣದಲ್ಲಿನ ಶ್ರೀ ಲಕ್ಷ್ಮಣೇ ಶ್ವರಸ್ವಾಮಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಹಾಗೂ ಹಸಿದವರಿಗೆ ಅನ್ನ ನೀಡುವ ಪುಣ್ಯದ ಕಾಯಕ ದೇವರ ಸೇವೆಗೆ ಸಮ. ಹಾಗಾಗಿ ದಾಸೋಹ ಒದಗಿಸುವ ಕಾರ್ಯಗಳಿಗೆ ದಾನಿಗಳು ಹೆಚ್ಚಿನ ಸಹಕಾರ ನೀಡಬೇಕು ಎಂದು ದೇವಸ್ಥಾನದ ಮುಖ್ಯ ಅರ್ಚಕ ರುದ್ರಪಟ್ಟಣ ವೇ.ಜಗನಾಥ್ ಹೇಳಿದರು. ಕಾವೇರಿ ನದಿ ದಂಡೆಯಲ್ಲಿರುವ ಮಲ್ಲಿರಾಜ ಪಟ್ಟಣದ ಶ್ರೀ ಲಕ್ಷ್ಮಣೇಶ್ವರಸ್ವಾಮಿ ದೇವಾ ಲಯದಲ್ಲಿ ಕಳೆದ 3 ತಿಂಗಳಿಗೂ…
ಪರಿಣಾಮಕಾರಿ ಲಾರ್ವಾ ಪರೀಕ್ಷೆಗೆ ಎಡಿಸಿ ಸೂಚನೆ
July 18, 2019ಹಾಸನ, ಜು.17- ಕುಡಿಯುವ ನೀರಿನ ಲ್ಲಿಯೂ ಸೊಳ್ಳೆಯ ಲಾರ್ವಾಗಳು ಇರು ತ್ತವೆ. ಹಾಗಾಗಿ ಕುಡಿಯುವ ನೀರಿನ ಸಂಗ್ರಹದಲ್ಲಿಯೂ ಪರೀಕ್ಷೆ ಇನ್ನಷ್ಟು ಪರಿ ಣಾಮಕಾರಿಯಾಗಿ ಆಗಬೇಕು. ಡೆಂಗ್ಯೂ ನಿಯಂತ್ರಣ ಜಾಗೃತಿ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಪ್ರಭಾರಿ ಸಿಇಒ ಎಂ.ಎಲ್. ವೈಶಾಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಪಂ ಕಚೇರಿಯಲ್ಲಿ ಬುಧವಾರ ನಡೆದ ರಾಷ್ಟ್ರೀಯ ಡೆಂಗ್ಯೂ ವಿರೋಧಿ ಮಾಸಾ ಚರಣೆ ಹಾಗೂ ಅಂತರ್ ಇಲಾಖಾ ಸಮ ನ್ವಯ ಸಭೆಯಲ್ಲಿ ಮಾತನಾಡಿ, ಅರಸೀಕೆರೆ, ಹಾಸನ, ಬೇಲೂರು ತಾಲೂಕುಗಳಲ್ಲಿ ಹೆಚ್ಚು…
ಸರ್ಕಾರಿ ಸೌಲಭ್ಯ ಫಲಾನುಭವಿಗೆ ತಲುಪಿಸದಿದ್ದರೆ ಕಠಿಣ ಕ್ರಮ
July 17, 2019ಸಹಕಾರ ಸಂಘಗಳ ಅಧಿಕಾರಿ-ಸಿಬ್ಬಂದಿಗೆ ಒಕ್ಕೂಟದ ಎಂಡಿ ಅರುಣ್ಕುಮಾರ್ ಎಚ್ಚರಿಕೆ ಹಾಸನ,ಜು.16- ಸಹಕಾರ ಸಂಘಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ತಪ್ಪದೇ ಸೇವಾ ಮನೋಭಾವ ರೂಢಿಸಿಕೊಳ್ಳ ಬೇಕು. ಸರ್ಕಾರದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಜವಾ ಬ್ದಾರಿಯನ್ನು ಅಧಿಕಾರಿಗಳು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಇದರಲ್ಲಿ ಲೋಪವಾ ದರೆ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗು ವುದು ಎಂದು ರಾಜ್ಯ ಸಹಕಾರ ಮಹಾ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕುಮಾರ್ ಎಚ್ಚರಿಕೆ ನೀಡಿದರು. ಕರ್ನಾಟಕ ರಾಜ್ಯ ಸಹಕಾರ ಮಹಾ…
ಹಡಪದ ಅಪ್ಪಣ್ಣ ಜಯಂತಿ ಅರ್ಥಪೂರ್ಣ ಆಚರಣೆ
July 17, 2019ಹಾಸನ,ಜು.16- ಹಡಪದ ಅಪ್ಪಣ್ಣ ಜಯಂತಿಯನ್ನು ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಮಂಗಳ ವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿ ಕಾರಿ ಅಕ್ರಂ ಪಾಷ, ಮಹನೀಯರ ಆದರ್ಶ ಗಳು ಸದಾ ಅನುಕರಣೀಯ ಎಂದರು. ವಿಶೇಷ ಉಪನ್ಯಾಸ ನೀಡಿದ ಜಯಶಂಕರ್ ಬೆಳಗುಂಬ ಅವರು, 12ನೇ ಶತಮಾನದ ವಿಚಾರಕ್ರಾಂತಿಯಲ್ಲಿ ಹಡಪದ ಅಪ್ಪಣ್ಣ ಅವರು ವಹಿಸಿದ ಮಹತ್ವದ ಪಾತ್ರದ ಬಗ್ಗೆ ವಿವರಿಸಿದರು. ಅನುಭವ ಮಂಟಪ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಹಡಪದ ಅಪ್ಪಣ್ಣ ಅವರು ವಚನಗಳ…
ಅರಸೀಕೆರೆಯಲ್ಲಿ ಇನ್ನಷ್ಟು ಆಧಾರ್ ಕೇಂದ್ರ ಆರಂಭಿಸಿರೈತ ಸಂಘ ನೇತೃತ್ವದಲ್ಲಿ ಸಾರ್ವಜನಿಕರ ಪ್ರತಿಭಟನೆ
July 17, 2019ಅರಸೀಕೆರೆ, ಜು.16- ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒದಗಿಸುವ ಸಾಮಾ ಜಿಕ ಭದ್ರತಾ ಯೋಜನೆಗಳು ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಾರ್ಡ್ ಅನಿ ವಾರ್ಯವಾಗಿದೆ. ಹಾಗಾಗಿ, ತಾಲೂಕಿನ ಜನರು ಹೊಸದಾಗಿ ಆಧಾರ್ ಕಾರ್ಡ್ ಮಾಡಿಸಲು, ತಿದ್ದುಪಡಿ ಮಾಡಿಸಲು ಆಧಾರ್ ಸೇವಾ ಕೇಂದ್ರಗಳೆದುರು ಈಗಲೂ ಸಾಲುಗಟ್ಟಿ ನಿಲ್ಲುವುದು ಮುಂದುವರಿದಿದೆ. ತಾಲೂಕು ಆಡಳಿತವು ಪಡಸಾಲೆಯಲ್ಲಿ ಒಂದೇ ಕೌಂಟರ್ ಇರುವುದರಿಂದ ನಿತ್ಯವೂ ನೂರಾರು ಜನರು ಪರದಾಡುವಂತಾ ಗಿದೆ. ಹೆಚ್ಚುವರಿ ಕೌಂಟರ್ ತೆರೆಯ ಬೇಕೆಂದು ತಾಲೂಕು ರೈತ ಸಂಘ ಆಗ್ರಹಿಸಿದೆ….
ಮಕ್ಕಳಿಗೆ ಕರಾಟೆ ಕಲಿಸಿ: ಪೋಷಕರಿಗೆ ಸಲಹೆ
July 17, 2019ಬೇಲೂರು, ಜು.16- ಕರಾಟೆ ಉತ್ತಮ ಸಮರ ಕಲೆ. ಎಲ್ಲ ಪೋಷಕರೂ ತಮ್ಮ ಮಕ್ಕಳಿಗೆ ಸ್ವರಕ್ಷಣೆಯ ಕಲೆ ಕಲಿಸಲು ಆಸಕ್ತಿ ತೋರಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿಧಿ ಹೇಳಿದರು. ಬೇಲೂರಿನ ಹೊಳೆಬೀದಿ ಪಾಂಡುರಂಗ ದೇವಸ್ಥಾನದಲ್ಲಿ ನ್ಯಾಷನಲ್ ಶೋಟೋಕಾನ್ ಕರಾಟೆ ಶಾಲೆಯ ವಜ್ರಕಾಯ ಶಾಖೆ ಆಯೋಜಿಸಿದ್ದ ಕರಾಟೆ ಕಲರ್ ಬೆಲ್ಟ್ ಪ್ರಧಾನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು. ಸಾಲುಮರದ ತಿಮ್ಮಕ್ಕ ಇಂಟರ್ ನ್ಯಾಷನಲ್ ಫೌಂಡೇಷನ್ ಅಧ್ಯಕ್ಷ ಉಮೇಶ್, ಮಕ್ಕಳಿಗೆ ಕರಾಟೆ ಜೊತೆಗೇ ಪರಿಸರ ಸಂರಕ್ಷಣೆ ಮತ್ತು…
ಕೆಎಂಎಫ್, ಹೆಚ್ಡಿಸಿಸಿ ಬ್ಯಾಂಕ್ ಹೆಚ್ಡಿಡಿ ಕುಟುಂಬದ ಆಸ್ತಿಮಾಜಿ ಸಚಿವ ಎ.ಮಂಜು ಆರೋಪ
July 16, 2019ಹಾಸನ, ಜು.15- ಜಿಲ್ಲೆಯ ಹಾಸನ ಹಾಲು ಒಕ್ಕೂಟ ಮತ್ತು ಜಿಲ್ಲಾ ಸಹಕಾರಿ ಬ್ಯಾಂಕ್ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕುಟುಂಬದ ಆಸ್ತಿಯಾಗಿದೆ ಎಂದು ಮಾಜಿ ಸಚಿವ ಎ.ಮಂಜು ಆರೋಪಿಸಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಹಾಸನ ಹಾಲು ಒಕ್ಕೂಟ ಮತ್ತು ಜಿಲ್ಲಾ ಸಹಕಾರಿ ಬ್ಯಾಂಕ್ನಲ್ಲಿ ಸಾಕಷ್ಟು ಭ್ರಷ್ಟಾ ಚಾರ ನಡೆಯುತ್ತಿದ್ದು, ಇದರಿಂದ ಬಡ ರೈತರಿಗೆ ಅನ್ಯಾಯವಾಗುತ್ತಿದೆ. ಹೆಚ್ಡಿಸಿಸಿ ಬ್ಯಾಂಕಿನಲ್ಲಿ ದೇವೇಗೌಡರ ಕುಟುಂಬಸ್ಥರು, ಸಂಬಂಧಿಕರಿಗೆ ಮಾತ್ರ ಸಾಕಷ್ಟು ಸಾಲ ನೀಡಲಾಗುತ್ತಿದೆ. ಆದರೆ…