ಸಕಲೇಶಪುರ: ವಸತಿ ನಿಲಯದಲ್ಲಿ ಆಹಾರ ಸೇವಿಸಿ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾದ ಘಟನೆ ತಾಲೂಕಿನ ಬ್ಯಾಕರವಳ್ಳಿ ಮೊರಾರ್ಜಿ ವಸತಿ ಶಾಲೆ ನಡೆದಿದೆ. ಸೋಮವಾರ ರಾತ್ರಿ ಊಟ ಸೇವಿಸಿದ ಬಳಿಕ ಮಕ್ಕಳಿಗೆ ವಾಂತಿ ಹಾಗೂ ಭೇದಿ ಕಾಣಿಸಿಕೊಂಡಿತ್ತು. ತಕ್ಷಣ ಎಚ್ಚೆತ್ತ ಅಲ್ಲಿನ ಶಿಕ್ಷಕರು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ವಿಷಯ ತಿಳಿದ ಸ್ಥಳೀಯ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಆಸ್ಪತ್ರೆಗೆ ಭೇಟಿ ನೀಡಿ, ಮಕ್ಕಳ ಆರೋಗ್ಯ ವಿಚಾರಿಸಿ ದರು. ಅಲ್ಲದೆ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು. ಮಕ್ಕಳ ಬಗ್ಗೆ…
ಅರಸೀಕೆರೆ: ಅಧಿಕಾರದ ಚುಕ್ಕಾಣಿ ಹಿಡಿಯಲಿದೆಯೇ ಕಾಂಗ್ರೆಸ್-ಬಿಜೆಪಿ ಮೈತ್ರಿ?
September 3, 2018ಅರಸೀಕೆರೆ: ಜೆಡಿಎಸ್ ಅತೃಪ್ತ ಟಿಕೆಟ್ ಆಕಾಂಕ್ಷಿಗಳು ಪಕ್ಷದ ವಿರುದ್ಧವೇ ಒಳಗೊಳಗೆ ಬಂಡಾಯ ಎದ್ದಿರುವ ಶಂಕೆ ಇದ್ದು, ಈ ಬಾರಿ ನಗರಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿ ಕಾಂಗ್ರೆಸ್, ಬಿಜೆಪಿ ಜೊತೆಯಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿವೆ ಎಂಬ ಊಹಾ ಪೋಹಗಳು ಚುನಾವಣೆ ನಂತರ ನಗರದಲ್ಲಿ ಹರಿದಾಡುತ್ತಿವೆ. ಜೆಡಿಎಸ್ಗೆ ಹಿನ್ನಡೆ: ಒಂದು ವೇಳೆ ಊಹಾಪೋಹಗಳು ನಿಜವೇ ಆದಲ್ಲಿ ಬಹು ತೇಕ ಆಣೆ ಪ್ರಮಾಣ ಮಾಡಿ ಈ ಬಾರಿಯ ನಗರಸಭೆ ಚುನಾವಣೆಗೆ ನಿಮಗೆ ಟಿಕೆಟ್ ನೀಡುತ್ತೇವೆಂದು ಆಕಾಂಕ್ಷಿಗಳಿಗೆ ಆಸೆ ತೋರಿಸಿದ್ದ ಜೆಡಿಎಸ್ಗೆ ಹಿನ್ನಡೆಯಾಗು…
ಹಾಸನದ 5 ಸ್ಥಳೀಯ ಸಂಸ್ಥೆಗಳ ಚುನಾವಣೆ: ಇಂದು ಮತ ಎಣಿಕೆ
September 3, 2018ಹಾಸನ: ಜಿಲ್ಲೆಯ 5 ಸ್ಥಳೀಯ ಸಂಸ್ಥೆಗಳ ಮತ ಎಣಿಕೆ ಕಾರ್ಯ ಇಂದು ಆಯಾಯ ತಾಲೂಕು ಕೇಂದ್ರಗಳಲ್ಲಿ ನಡೆ ಯಲಿದ್ದು, ಮಧ್ಯಾಹ್ನದ ವೇಳೆಗೆ 486 ಅಭ್ಯರ್ಥಿ ಗಳ ಹಣೆಬರಹ ಹೊರ ಬೀಳಲಿದೆ. ಮತ ಎಣಿಕೆಗೆ ಜಿಲ್ಲಾಡಳಿತ ಈಗಾಗಲೇ ಸಿದ್ಧತೆ ಪೂರ್ಣಗೊಳಿಸಿದ್ದು, ಪೊಲೀಸ್ ಬಿಗಿ ಬಂದೋ ಬಸ್ತ್ನಲ್ಲಿ ಮತ ಎಣಿಕೆಗೆ ವ್ಯವಸ್ಥೆ ಮಾಡಿದೆ. ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ಜಿಲ್ಲೆಯ 5 ನಗರ ಸ್ಥಳೀಯ ಸಂಸ್ಥೆ ಗಳ ಚುನಾವಣೆ ಮತ ಎಣಿಕೆ 36 ಟೆಬಲ್ ಗಳಲ್ಲಿ…
ಕಾವೇರಿ ನೀರು ವಿಚಾರ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕಣ್ಣೀರು
September 3, 2018ಹೊಳೆನರಸೀಪುರ: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಮಾಜಿ ಪ್ರಧಾನಿ ನಿತ್ಯ ಕಣ್ಣೀರು ಹಾಕುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಬೇಸರ ವ್ಯಕ್ತಪಡಿಸಿದರು. ಅರಕಲಗೂಡು ವಿಧಾನಸಭಾ ಕ್ಷೇತ್ರದ ತಾಲೂಕಿನ ಅರೇಹಳ್ಳಿಯಲ್ಲಿ ಹಳ್ಳಿಮೈಸೂರು ಹೋಬಳಿಯ ಗುಲಗಂಜಹಳ್ಳಿ, ಕಡವಿನ ಬಾಚನಹಳ್ಳಿ, ದೇವರಮುದ್ದನಹಳ್ಳಿ, ನಗರ್ತಿ, ಶ್ರವಣೂರು, ಕೋಡಿಹಳ್ಳಿ ಸೇರಿದಂತೆ 8 ಗ್ರಾಮಗಳಿಗೆ 820.32 ಲಕ್ಷ ರೂ. ವೆಚ್ಚದಲ್ಲಿ ಹೇಮಾವತಿ ನದಿಯಿಂದ ನೀರು ಪೂರೈಸುವ ಬಹು ಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಕಾವೇರಿ ನಿರ್ವಹಣಾ…
ನಾಳೆ ಮತ ಎಣಿಕೆ: ಜಿಲ್ಲಾಡಳಿತದಿಂದ ಸಿದ್ಧತೆ
September 2, 2018ಹಾಸನ: ಜಿಲ್ಲೆಯ 5 ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆಯ ಮತದಾನ ಶಾಂತಿಯುತವಾಗಿ ಮುಕ್ತಾಯ ಗೊಂಡಿದೆ. ಸೆ.3ರಂದು ನಡೆಯುವ ಆಯಾಯ ತಾಲೂಕು ಕೇಂದ್ರಗಳಲ್ಲಿ ಎಣಿಕೆ ಕಾರ್ಯ ನಡೆಯಲಿದ್ದು, ಜಿಲ್ಲಾ ಡಳಿತ ಸಿದ್ಧತೆ ಪೂರ್ಣಗೊಳಿಸಿದೆ. ಎಣೀಕೆ ಎಲ್ಲೆಲ್ಲಿ: ಹಾಸನ ನಗರ ಸಭೆ ಚುನಾ ವಣೆಯ ಮತ ಎಣಿಕೆ ಮಹಿಳಾ ಪದವಿ ಕಾಲೇಜಿನಲ್ಲಿ ನಡೆಯಲಿದ್ದು, ಇದಕ್ಕಾಗಿ 5 ಕೊಠಡಿಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಅರಸೀಕೆರೆ ನಗರ ಸಭೆ ಚುನಾವಣೆಯ ಮತ ಎಣಿಕೆಯು ವಿವೇಕಾನಂದ ಶಿಕ್ಷಣ ಕಾಲೇಜಿನಲ್ಲಿ, ಚನ್ನರಾಯಪಟ್ಟಣ ಪುರ ಸಭೆಯ ಚುನಾವಣೆಯ ಮತ ಎಣಿಕೆಯು…
ಶೀಘ್ರದಲ್ಲೇ ದರೋಡೆಕೋರರ ವಿರುದ್ಧ ಕ್ರಮ: ಹೆಚ್.ಡಿ.ರೇವಣ್ಣ
September 2, 2018ಹಾಸನ: ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿನ ದೊಡ್ಡ ದೊಡ್ಡ ಕಂಪನಿಗಳು ಕೋಟ್ಯಾಂತರ ರೂ. ವಂಚಿಸಿದ್ದು, ಶೀಘ್ರದಲ್ಲೇ ದರೋಡೆಕೋರರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಲೋಕೋಪಯೋಗಿ, ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಎಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣವಂತರು ಕಂಪನಿ ಸ್ಥಾಪನೆ ಹೆಸರಿನಲ್ಲಿ ನೂರಾರು ಎಕರೆ ಜಾಗ ಕಬಳಿಸು ತ್ತಿದ್ದಾರೆ. ಈ ಕುರಿತು ಸ್ಥಳೀಯರಿಂದ ದೂರುಗಳು ಬಂದಿದ್ದು, ಈ ಬಗ್ಗೆ ಶೀಘ್ರದಲ್ಲೇ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ವಂಚಿಸಿರುವ ಕಂಪನಿಗಳ ವಿರುದ್ಧ ವರದಿ ಪಡೆದು ಸಮಗ್ರ ತನಿಖೆ ಕೈಗೊಳ್ಳಲಾಗುವುದು ಎಂದರು. ಈಗಾಗಲೇ…
ಮದುವೆ ಮಂಟಪದಲ್ಲಿ ನಗದು, ಚಿನ್ನಾಭರಣ ಕಳವು
September 2, 2018ಹೊಳೆನರಸೀಪುರ: ಮದುವೆ ಮಂಟಪದಲ್ಲಿ ವರನ ಸಂಬಂಧಿಕರ ಕೊಠಡಿ ಯಲ್ಲಿರಿಸಿದ್ದ ನಗದು ಸೇರಿ ಚಿನ್ನಾಭರಣ ಕಳವಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಚನ್ನಾಂಬಿಕಾ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಪಟ್ಟಣದ ನಿವಾಸಿ ಮೋಹನ್ ಪುತ್ರಿ ಪೂಜಾ ವಿವಾಹವು ಕಾರ್ತಿಕ್ ಜೊತೆ ಏರ್ಪಡಿಸಲಾಗಿತ್ತು. ಆರತಕ್ಷತೆ ಮುಗಿದು ವಧು-ವರ ಸೇರಿದಂತೆ ಸಂಬಂಧಿಕರು ಊಟಕ್ಕೆ ತೆರಳಿದ್ದರು. ಈ ಸಮಾಯಕ್ಕಾಗಿ ಹೊಂಚು ಹಾಕಿದ್ದ ಖದೀಮರು ವರನ ಸಂಬಂಧಿಕರು ತಂಗಿದ್ದ ಕೊಠಡಿಯ ಬೀಗ ಮುರಿದು ಒಳನುಗ್ಗಿ ಕೈಗೆ ಸಿಕ್ಕ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ವರನ ಸಹೋದರಿ…
ನದಿಗೆ ಹಾರಿ ವೃದ್ಧೆ ಆತ್ಮಹತ್ಯೆ
September 2, 2018ಹೊಳೆನರಸೀಪುರ: ಇಲ್ಲಿನ ಹೇಮಾವತಿ ನದಿಗೆ ಹಾರಿ ವೃದ್ಧೆಯೋರ್ವೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿ ಜಯಮ್ಮ (65) ಮೃತರು. ಈ ಹಿಂದೆ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಕರ್ತವ್ಯದಿಂದ ನಿವೃತ್ತಿಯಾದ ನಂತರ ಜೀವನ ನಿರ್ವಹಣೆಗೆ ಬೇರೆ ಕೆಲಸವಿಲ್ಲದೆ ಹಲವರಿಂದ ಕೈಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಸಾಲ ಗಾರರ ಕಿರುಕುಳ ತಾಳಲಾರದೆ ಮನನೊಂದು ನದಿಗೆ ಹಾರಿ ಸಾವನ್ನಪ್ಪಿದ್ದಾರೆ ಎನ್ನ ಲಾಗಿದೆ. ಈ ಸಂಬಂಧ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹಿಣಿ ಅನುಮಾನಾಸ್ಪದ ಸಾವು ಪ್ರಕರಣ: ಸೂಕ್ತ ತನಿಖೆಗೆ ಪೋಷಕರ ಆಗ್ರಹ
September 2, 2018ಹಾಸನ: ಗೃಹಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಹೊರವಲಯದ ಚಿಕ್ಕಹೊನ್ನೇನಹಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದ್ದು, ಕೊಲೆ ಶಂಕೆ ವ್ಯಕ್ತಪಡಿಸಿರುವ ಪೋಷಕರು ಮೃತಳ ಪತಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಎಂ.ಡಿ. ಶ್ವೇತಾ (38) ಮೃತಪಟ್ಟ ಮಹಿಳೆ. ಸದ್ಯ ದೂರಿನ ಮೇರೆಗೆ ಮೃತಳ ಪತಿ ರವಿಶಂಕರ್ರನ್ನು ಪೋಲಿಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆ.24ರಂದು ಶ್ವೇತಾಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪತಿ ರವಿಶಂಕರ್, ಆತ ಸಂಬಂಧ ಹೊಂದಿದ್ದ ಹೊಸಕೊಪ್ಪಲಿನ ಓರ್ವ ಮಹಿಳೆಯೊಂದಿಗೆ ಸೇರಿ ಶ್ವೇತಾಳನ್ನು ಕೊಲೆ ಮಾಡಿದ್ದಾರೆಂದು…
`ಮಕ್ಕಳ ಮನೆ’ ಸ್ಥಳಾಂತರ, ದೈಹಿಕ ಶಿಕ್ಷಕರ ವರ್ಗಾವಣೆ ಖಂಡಿಸಿ ಪ್ರತಿಭಟನೆ
September 1, 2018ಬೇಲೂರು: ನಾಗೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ತೆರದಿರುವ `ಮಕ್ಕಳ ಮನೆ’ ಸ್ಥಳಾಂತರಿಸಿ, ದೈಹಿಕ ಶಿಕ್ಷಕರನ್ನು ವರ್ಗಾ ಯಿಸಿದರೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳ ಲಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದರು. ತಾಲೂಕಿನ ನಾಗೇನಹಳ್ಳಿ ಸರ್ಕಾರಿ ಶಾಲೆ ಯಲ್ಲಿ ಪ್ರಾರಂಭ ಮಾಡಿರುವ `ಮಕ್ಕಳ ಮನೆ’ಯನ್ನು ಬೇರೆಡೆಗೆ ಸ್ಥಳಾಂತರಿಸಲು ಮುಂದಾಗಿರುವುದು ಹಾಗೂ ದೈಹಿಕ ಶಿಕ್ಷಕರ ವರ್ಗಾವಣೆ ಖಂಡಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಗಳ ಕಚೇರಿ ಎದುರು ಜಮಾಯಿಸಿದ ನಾಗೇನಹಳ್ಳಿ ಗ್ರಾಮಸ್ಥರಿಂದು ಪ್ರತಿಭಟಿಸಿ, ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಎನ್.ಆರ್.ಹರೀಶ್, ತಾಲೂಕಿನ…