ಹೊಳೆನರಸೀಪುರ: ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಹಾವು ಮುಂಗುಸಿಯಂತಿರುವ ಕಾಂಗ್ರೆಸ್, ಬಿಜೆಪಿ ಹೊಳೆರನಸೀಪುರ ಪುರಸಭಾ ಚುನಾವಣೆಯಲ್ಲಿ ಜೆಡಿಎಸ್ ಮಣಿಸಲು ಒಳ ಒಪ್ಪಂದ ಮಾಡಿಕೊಂಡಿರುವ ಎಲ್ಲಾ ಲಕ್ಷಣಗಳಿದ್ದು, ಇದರಿಂದ ಅಸಮಾಧಾನಗೊಂಡಿರುವ ಕಾಂಗ್ರೆಸ್ ಮುಖಂಡರು ಜೆಡಿಎಸ್ನತ್ತ ಮುಖ ಮಾಡುವ ಸಾಧ್ಯತೆಗಳು ಗೋಚರಿಸಿವೆ. ಈ ಬಾರಿಯ ಪುರಸಭಾ ಚುನಾವಣೆ ಯಲ್ಲಿ 23 ವಾರ್ಡ್ಗಳಲ್ಲೂ ಕಾಂಗ್ರೆಸ್ ಹಾಗೂ ಜೆಡಿಎಸ್ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ರಾಷ್ಟ್ರಿಯ ಪಕ್ಷ ಬಿಜೆಪಿ ಮಾತ್ರ ಕಾಂಗ್ರೆಸ್ಗೆ ಪರೋಕ್ಷ ಬೆಂಬಲ ಸೂಚಿಸಿ ಕೇವಲ 12 ವಾರ್ಡ್ಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇದು…
ಹಾಸನ 5 ಸ್ಥಳೀಯ ಸಂಸ್ಥೆಗಳ ಮತದಾನದ ವಿಶೇಷತೆಗಳು
September 1, 2018ಹಾಸನ: ಹಾಸನದ 1ನೇ ವಾರ್ಡ್ನಲ್ಲಿ ತೆರೆಯಲಾಗಿದ್ದ ಮತಗಟ್ಟೆಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಆಗಮಿಸಿ ಹಕ್ಕು ಚಲಾಯಿಸಿದರಲ್ಲದೆ, ಕರ್ತವ್ಯದ ನಡವೆಯೂ ಮತದಾನ ಮಾಡಿ ಮಾದರಿಯಾದರು. ಹಕ್ಕು ಚಲಾಯಿಸಿದ ನವ ದಂಪತಿ: ಹೊಳೆನರಸೀಪುರ ವಾರ್ಡ್ ನಂ. 2ರಲ್ಲಿ ನವದಂಪತಿ ಮದುವೆ ನಂತರ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಪಟ್ಟಣದ ಚನ್ನಾಂಬಿಕಾ ಕಲ್ಯಾಣಮಂಟಪ ದಲ್ಲಿಂದು ಮದುವೆಯಾದ ಪೂಜಾ, ಕಾರ್ತಿಕ್ ನವ ದಂಪತಿ ತಾಳಿಕಟ್ಟಿದ ಕೂಡಲೇ ವಾರ್ಡ್ ನಂ. 2ರ ಸರ್ಕಾರಿ ಮಹಿಳಾ…
ಹಾಸನ 5 ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಾಂತಿಯುತ ಮತದಾನ
September 1, 2018ಹಾಸನ: ಜಿಲ್ಲೆಯ 5 ನಗರ ಸ್ಥಳೀಯ ಸಂಸ್ಥೆಗಳಿಗೆ ಇಂದು ನಡೆದ ಮತ ದಾನವು ಕೆಲವೆಡೆ ಮತಯಂತ್ರ ದೋಷ, ಸಣ್ಣ-ಪುಟ್ಟ ಗೊಂದಲ ಹೊರತುಪಡಿಸಿ ಯಾವುದೇ ಅಹಿತಕರ ಘಟನೆ ಸಂಭವಿಸಿ ದಂತೆ ಬಹುತೇಕ ಶಾಂತಿಯುತವಾಗಿ ಮುಕ್ತಾಯಗೊಂಡಿತು. 5 ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 135 ವಾರ್ಡ್ಗಳಲ್ಲಿ 486 ಅಭ್ಯರ್ಥಿಗಳು ಸ್ಪರ್ಧಿ ಸಿದ್ದು, 274 ಮತಗಟ್ಟೆಗಳಲ್ಲಿ ಇಂದು ಮತ ದಾನ ನಡೆಯಿತು. ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 5ಗಂಟೆಗೆ ಮುಕ್ತಾಯಗೊಂಡು, ಹಾಸನ ನಗರಸಭೆಯಲ್ಲಿ ಶೇ. 63.02, ಅರಸೀಕೆರೆ…
ಇಂದು ಹಾಸನ 5 ಸ್ಥಳೀಯ ಸಂಸ್ಥೆಗಳಿಗೆ ಮತದಾನ
August 31, 2018ಹಾಸನ: ತೀವ್ರ ಕುತೂಹಲ ಕೆರಳಿಸಿರುವ ಜಿಲ್ಲಾ ಸ್ಥಳೀಯ ಸಂಸ್ಥೆಗಳಿಗೆ ನಾಳೆ(ಆ.31) ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದ್ದು, ಮುನ್ನ ದಿನವಾದ ಇಂದು ಮಸ್ಟರಿಂಗ್ ಕಾರ್ಯ ನಡೆಯಿತು. ಮತಗಟ್ಟೆಗಳಿಗೆ ಪೊಲೀಸ್ ಬಿಗಿ ಬಂದೋಬಸ್ತ್ನಲ್ಲಿ ಮತಯಂತ್ರ ರವಾನಿಸಲಾಯಿತು. ನಗರದ ಸರ್ಕಾರಿ ಮಹಿಳಾ ಕಾಲೇಜು ಆವರಣ ದಿಂದ ನಿಗದಿಪಡಿಸಿದ್ದ ವಾಹನದಲ್ಲಿ ಚುನಾವಣಾ ಧಿಕಾರಿಗಳು ಮತಯಂತ್ರದೊಂದಿಗೆ ಬಿಗಿ ಭದ್ರತೆ ಯಲ್ಲಿ ಮತ ಕೇಂದ್ರಕ್ಕೆ ಪ್ರಯಾಣ ಬೆಳೆಸಿದರು. ಮತಗಟ್ಟೆ, ಮತದಾರರ ವಿವರ: ಜಿಲ್ಲೆಯ 5 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ…
ಶಾಸಕ ಪ್ರೀತಮ್ ಜೆ.ಗೌಡ, ಬೆಂಬಲಿಗರ ವಿರುದ್ಧ ದೂರು ದಾಖಲು
August 31, 2018ಹಾಸನ: -ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಹಿನ್ನೆಲೆ ಹಾಸನ ವಿಧಾನ ಸಭಾಕ್ಷೇತ್ರದ ಶಾಸಕ ಪ್ರೀತಮ್ ಜೆ.ಗೌಡ ಸೇರಿದಂತೆ 20 ಮಂದಿ ಬೆಂಬಲಿ ಗರ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಹಾಸನ ನಗರ ಠಾಣೆ ಸಹಾಯಕ ಪೆÇಲೀಸ್ ಸಬ್ಇನ್ಸ್ಪೆಕ್ಟರ್ ಸತ್ಯನಾರಾಯಣ ನೀಡಿ ರುವ ದೂರಿನ ಮೇರೆಗೆ ಎಫ್ಐಆರ್ ಹಾಕಲಾಗಿದ್ದು, ಸ್ಥಳೀಯ ಚುನಾವಣೆ ಹಿನ್ನೆಲೆ ಅಕ್ರಮ ಮದ್ಯ ಹಂಚು ತ್ತಿರುವವರನ್ನು ವಶಕ್ಕೆ ಪಡೆದಿದ್ದರಿಂದ ತಡರಾತ್ರಿ ಪೆÇಲೀಸ್ ಠಾಣೆಗೆ ನುಗ್ಗಿ ಶಾಸಕ ಪ್ರೀತಮ್ ಜೆ.ಗೌಡ ಅವಾಚ್ಯ ಶಬ್ದಗಳಿಂದ ನಿಂದಿಸಿ,…
ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ
August 31, 2018ಹೊಳೆನರಸೀಪುರ: ಸಾಲಬಾಧೆ ತಾಳಲಾರದೆ ವಿಷ ಸೇವಿಸಿ ರೈತ ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ತಾಲೂಕಿನ ಹಿರೇಬೆಳಗುಲಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ವಾಸಿ ಬಸವಲಿಂಗಪ್ಪ(41) ಮೃತ ರೈತ. ಇವರು ತಮ್ಮ 4 ಎಕರೆ ಜಮೀನಿನಲ್ಲಿ ಜೋಳ, ಶುಂಠಿ ಬೇಸಾಯ ಮಾಡಿದ್ದರು. ಇದಕ್ಕಾಗಿ ವಿವಿಧ ಮಹಿಳಾ ಸ್ವಸಹಾಯ ಸಂಘಗಳಿಂದ ಒಟ್ಟು 1.90 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಬೆಳೆ ನಷ್ಟದ ಪರಿಣಾಮ ಬೇಸತ್ತ ಬಸವಲಿಂಗಪ್ಪ ವಿಷ ಸೇವಿಸಿ ಅಸ್ವಸ್ಥ ಗೊಂಡಿದ್ದರು. ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಹಾಸನ ಜಿಲ್ಲಾಸ್ಪತ್ರೆಗೆ…
ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ
August 30, 2018ಹಾಸನ: ರಾಜ್ಯ ಚುನಾವಣಾ ಆಯೋಗವು ನಿಗದಿಪಡಿಸಿರುವಂತೆ ಆ.31ರಂದು ಜಿಲ್ಲೆಯ ಸಂಸ್ಥೆ ಚುನಾವಣೆ ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ. ಜಿಲ್ಲೆಯ 5 ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 135 ವಾರ್ಡ್ಗಳಲ್ಲಿ ಆ.31ರಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಅಂತಿಮವಾಗಿ 486 ಅಭ್ಯರ್ಥಿಗಳು ಕಣದಲ್ಲಿದ್ದು, 274 ಮತಗಟ್ಟೆ ಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಮತಗಟ್ಟೆಗೂ ಮತದಾನಾ ಧಿಕಾರಿಗಳನ್ನು ನೇಮಿಸಿ, ತರಬೇತಿ ನೀಡಲಾಗಿದೆ. ಮತಗಟ್ಟೆಗಳಿಗೆ ಅವಶ್ಯಕವಿರುವಷ್ಟು ವಿದ್ಯುನ್ಮಾನ ಮತಯಂತ್ರಗಳನ್ನು ಆಯಾ ತಾಲೂಕುಗಳ ಚುನಾವಣಾ ಧಿಕಾರಿ ಮತ್ತು ತಹಶೀಲ್ದಾರ್ ನೇತೃತ್ವದಲ್ಲಿ…
ಶಿರಾಡಿಘಾಟ್ ರಸ್ತೆ ಸಂಚಾರ ಇನ್ನೂ 6 ತಿಂಗಳು ಅಸಾಧ್ಯ
August 30, 2018ಹಾಸನ: ತೀವ್ರ ಮಳೆಯಿಂದಾಗಿ ಶಿರಾಡಿಘಾಟ್ ರಸ್ತೆ ಬಹುತೇಕ ಹಾಳಾಗಿದ್ದು, ಇನ್ನು 6 ತಿಂಗಳು ಸಂಚಾರ ಅಸಾಧ್ಯ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ತಿಳಿಸಿದರು. ಖಾಸಗಿ ಹೋಟೆಲೊಂದರಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಎರಡುವರೆ ತಿಂಗಳಿನಿಂದ ನಿರಂತರ ವಾಗಿ ಮಳೆ ಸುರಿಯುತ್ತಿದ್ದು, ಅಪೂರ್ಣಗೊಂಡಿರುವ ಶಿರಾಡಿ ಘಾಟ್ ರಸ್ತೆ ಕಾಮಗಾರಿ ಪ್ರಾರಂಭಿಸಲು ಸಾಧ್ಯವಿಲ್ಲ. ಮಳೆ ನಿಲ್ಲುವವರೆಗೂ ಮಡಿಕೇರಿ-ಮಂಗಳೂರು ಹಾಗೂ ಶಿರಾಡಿ ಮಾರ್ಗದಲ್ಲಿ ಯಾವ ವಾಹನ ಸಂಚರಿಸಲು ಸಾಧ್ಯವಾಗುವುದಿಲ್ಲ ಎಂದರು. ಅಪಾರ ಮಳೆಗೆ ಜಿಲ್ಲೆಯಲ್ಲಿ ಕಾಫಿ, ಭತ್ತ, ಆಲೂಗಡ್ಡೆ ಸಂಪೂರ್ಣ…
ಸಾಲಬಾಧೆ: ರೈತ ಆತ್ಮಹತ್ಯೆ
August 30, 2018ಬೇಲೂರು: ಸಾಲಬಾಧೆ ತಾಳದೆ ರೈತನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಪ್ರಸಾದಿಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಅಣ್ಣೇಗೌಡ (65) ಆತ್ಮಹತ್ಯೆ ಮಾಡಿ ಕೊಂಡವರು. ದೀರ್ಘಕಾಲದ ಅನಾರೋಗ್ಯ ಪೀಡಿತೆ ಪತ್ನಿಯನ್ನು ಮಂಗಳವಾರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಮನೆಗೆ ವಾಪಸ್ಸಾಗಿ ನೇಣುಬಿಗಿದುಕೊಂಡಿದ್ದಾರೆ. ಮೃತರು ತಮ್ಮ ಒಂದೂವರೆ ಎಕರೆ ಜಮೀನು ಜೋಳ ಹಾಗೂ ಶುಂಠಿ ಬಿತ್ತನೆ ಮಾಡಿದ್ದರು. ಅತಿವೃಷ್ಟಿಯಿಂದ ಬೆಳೆ ನಷ್ಟವಾಗಿ ಆತಂಕದಲ್ಲಿದ್ದರು. ಬ್ಯಾಂಕಿ ನಲ್ಲಿ 2 ಲಕ್ಷ ರೂ., 4 ಲಕ್ಷ ರೂ. ಕೈಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಮೃತರ ಪುತ್ರ…
ತೆಪ್ಪ ಮಗುಚಿ ಮಹಿಳೆ ನೀರು ಪಾಲು
August 30, 2018ಸಕಲೇಶಪುರ: ಹೇಮಾವತಿ ನದಿಯಲ್ಲಿ ತೆಪ್ಪ ಮುಳುಗಿ ಮಹಿಳೆ ನೀರು ಪಾಲಾಗಿರುವ ಘಟನೆ ತಾಲೂಕಿನ ಐಗೂರು ಗ್ರಾಮದ ಬಳಿ ಸಂಜೆ ನಡೆದಿದೆ. ಚಿಕ್ಕಂದೂರು ನಿವಾಸಿ ಸೌಮ್ಯ ಮೃತರು. ಸತತ ಮಳೆ ಪರಿಣಾಮ ಪ್ರವಾಹದಿಂದ ಚಿಕ್ಕಂದೂರು ಸಂಪರ್ಕ ಸೇತುವೆ ಕೊಚ್ಚಿ ಹೋಗಿದ್ದು, ತೆಪ್ಪ ಆಶ್ರಯಿಸಿ ಎಂದಿನಂತೆ ಕೃಷಿ ಕಾರ್ಯಕ್ಕೆ ತೆರಳಿ ಗ್ರಾಮಕ್ಕೆ ವಾಪಸ್ಸಾ ಗುತ್ತಿದ್ದಾಗ ಐಗೂರು ಸಮೀಪ ತೆಪ್ಪ ಮಗುಚಿದೆ. ಪರಿಣಾಮ ಸೌಮ್ಯ ನೀರು ಪಾಲಗಿದ್ದಾರೆ. ಜೊತೆಯಲ್ಲಿದ್ದ ಮೂವರು ಮಹಿಳೆಯರು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಿ ಮಿಸಿದ…