ಹೊಳೆನರಸೀಪುರ: ಪಟ್ಟಣದ ಜನತೆಗೆ 24×7 ಕುಡಿಯುವ ನೀರು ಸರಬ ರಾಜು ಮಾಡಲಾಗುವುದು ಎಂದು ಲೋಕೋ ಪಯೋಗಿ, ಜಿಲ್ಲಾ ಉಸ್ತವಾರಿ ಸಚಿವ ಹೆಚ್.ಡಿ.ರೇವಣ್ಣ ಭರವಸೆ ನೀಡಿದರು. ಇದೇ ತಿಂಗಳ 31ರಂದು ನಡೆಯುವ ಪುರಸಭೆ ಚುನಾವಣೆ ಹಿನ್ನೆಲೆ ಅಭ್ಯರ್ಥಿ ಗಳ ಪರ ಪ್ರಚಾರಕ್ಕೂ ಮುನ್ನ ಪಟ್ಟಣದ ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, 20 ವರ್ಷಗಳಿಂದಲೂ ಜೆಡಿಎಸ್ ಪುರ ಸಭಾ ಆಡಳಿತದ ಚುಕ್ಕಾಣಿ ಹಿಡಿದಿದ್ದು, ಪ್ರಸ್ತುತ ಚುನಾವಣೆಯಲ್ಲೂ 23 ವಾರ್ಡ್ ಗಳಲ್ಲಿ ಜಯಭೇರಿ ಬಾರಿಸಿ ಅಧಿಕಾರ ಹಿಡಿಯಲಿದೆ…
ಮರ್ಯಾದೆಗಂಜಿದ ಕುಟುಂಬ ವಿಷ ಸೇವಿಸಿ ಆತ್ಮಹತ್ಯೆಗೆ ಶರಣು
August 28, 2018ಅರಕಲಗೂಡು: ಮರ್ಯಾದೆಗಂಜಿ ಇಡೀ ಕುಟುಂಬವೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ತಾಲೂಕಿನ ದೊಡ್ಡನಾಯಕ ಕೊಪ್ಪಲಿನಲ್ಲಿ ನಡೆದಿದೆ.ಗ್ರಾಮದ ಕೃಷ್ಣ (55), ಪತ್ನಿ ನಂಜಮ್ಮ (50), ಪುತ್ರಿ ಭೂಮಿಕಾ (22) ಮೃತರು. ಘಟನೆ ವಿವರ: ಆ.6ರಂದು ನಡೆದ ಇದೇ ಗ್ರಾಮದ ನಾಗರಾಜು ಎಂಬುವರ ಕೊಲೆ ಪ್ರಕರಣದಲ್ಲಿ ಅಡಿಕೆಬೊಮ್ಮನಹಳ್ಳಿ ಗ್ರಾಮದ ಶ್ರೀಧರ ಮತ್ತು ಕೃಷ್ಣ ಅವರ ಪುತ್ರ ಲೋಕೇಶನನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಈ ಮಧ್ಯೆ ನಾಗರಾಜು ಕೊಲೆ ಹಿಂದೆ ಕೃಷ್ಣ ಅವರ ಕುಟುಂಬ ಭಾಗಿಯಾಗಿದೆ ಎಂದು ನಾಗರಾಜು ಮನೆಯವರು…
ಸ್ಥಳೀಯ ಸಂಸ್ಥೆ ಚುನಾವಣೆ: ವಿವಿಧೆಡೆ ಸಚಿವರು, ಶಾಸಕರ ಬಿರುಸಿನ ಪ್ರಚಾರ
August 27, 2018ಹಾಸನ: ಇದೇ ತಿಂಗಳು 31ರಂದು ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆ ಪಕ್ಷದ ಅಭ್ಯರ್ಥಿಗಳ ಪರ ಸಚಿವರು, ಶಾಸಕರು ನಗರದ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದರು. ಸಚಿವ ಹೆಚ್.ಡಿ.ರೇವಣ್ಣ ಪ್ರಚಾರ: ನಗರಸಭೆ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಪರ ನಗರದ ವಿವಿಧೆಡೆ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಬಿರುಸಿನ ಪ್ರಚಾರ ನಡೆಸಿದರು. ಮೊದಲು ನಗರದ ಸಮೀಪ ಆಡುವಳ್ಳಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ಕಾರ್ಯಕರ್ತರ ಜೊತೆ ಕೆಲ ಸಮಯ ಚರ್ಚಿಸಿದರು. ಬಳಿಕ ತೆರೆದ ವಾಹನದಲ್ಲಿ ಸಂಚರಿಸಿ ಪಕ್ಷದ…
ಅರೇಹಳ್ಳಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ
August 27, 2018ಬೇಲೂರು: ತಾಲೂಕಿನ ಅರೇಹಳ್ಳಿ ಗ್ರಾಪಂ ಅನ್ನು ಪಟ್ಟಣ ಪಂಚಾಯಿತಿ ಯನ್ನಾಗಿ ಮೇಲ್ದರ್ಜಗೆರಿಸಲು ಶಿಫಾರಸು ಮಾಡಲಾಗುವುದು ಎಂದು ಶಾಸಕ ಕೆ.ಎಸ್.ಲಿಂಗೇಶ್ ಭರವಸೆ ನೀಡಿದರು. ಅರೇಹಳ್ಳಿಯ ಗಾಪಂ ಡಾ.ಅಂಬೇಡ್ಕರ್ ಸಭಾಂಗಣದಲ್ಲಿ ನಡೆದ ಗ್ರಾಮಸಭೆ ಉದ್ಘಾ ಟಿಸಿ ಮಾತನಾಡಿದ ಅವರು, ಅರೇಹಳ್ಳಿಯಲ್ಲಿ 2011 ಜನ ಗಣತಿಯಂತೆ 8,500 ಜನ ಸಂಖ್ಯೆಯಿದೆ. ನಂತರದ 7 ವರ್ಷದಲ್ಲಿ ಜನಸಂಖ್ಯೆ ಹೆಚ್ಚಳವಾಗಿದೆ. ಇದರೊಂದಿಗೆ ಅರೇಹಳ್ಳಿ ಸಮೀಪದ ಕಡೆಗರ್ಜೆ ಗ್ರಾಮವನ್ನು ಅರೇಹಳ್ಳಿ ಗ್ರಾಪಂಗೆ ಸೇರಿಸಿಕೊಂಡರೆ 10 ಸಾವಿರ ಜನಸಂಖ್ಯೆ ದಾಟಲಿದೆ. ನಂತರ ಅರೇ ಹಳ್ಳಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ…
ಕಾಂಗ್ರೆಸ್ ಗೆಲುವಿಗೆ ಸಹಕರಿಸಿದರೆ ವಿಶೇಷ ಪ್ಯಾಕೇಜ್: ಈಶ್ವರ್ ಖಂಡ್ರೆ ಭರವಸೆ
August 26, 2018ಚನ್ನರಾಯಪಟ್ಟಣ: ಪುರಸಭೆ ಮೇಲೆ ಕಾಂಗ್ರೆಸ್ ಬಾವುಟ ಹಾರಿಸಲು ಪಟ್ಟಣದ ಮತದಾರರು ಸಹಕರಿಸಿದರೆ ವಿಶೇಷ ಪ್ಯಾಕೇಜ್ ಮೂಲಕ ಅನುದಾನ ನೀಡಿ ನಗರವನ್ನು ಅಭಿವೃದ್ಧಿ ಮಾಡಲಾ ಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಭರವಸೆ ನೀಡಿದರು. ಸ್ಥಳೀಯ ಚುನಾವಣೆ ಹಿನ್ನೆಲೆ ಪಟ್ಟಣ ದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ನಾನು ಪೌರಾಡಳಿತ ಸಚಿವನಾಗಿದ್ದಾಗ ಇಲ್ಲಿನ ಪುರಸಭೆಗೆ ನಗರೋತ್ಥಾನ ಯೋಜನೆ ಮೂಲಕ 7.50 ಕೋಟಿ ರೂ. ಅನುದಾನ ನೀಡಿದ್ದೆ. ಈಗ ವಾರ್ಡ್ನಲ್ಲಿ ರಸ್ತೆ, ಒಳ ಚರಂಡಿ…
ಕುಡಿದ ಮತ್ತಿನಲ್ಲಿ ಮೇರಿ ಮೂರ್ತಿ ಭಗ್ನ ಪ್ರಕರಣ: ಆರೋಪಿಗಳಿಗೆ ನ್ಯಾಯಾಂಗ ಬಂಧನ
August 26, 2018ಬೇಲೂರು: ಕುಡಿದ ಮತ್ತಿನಲ್ಲಿ ತಾಲೂಕಿನ ಮತ್ತಿಹಳ್ಳಿ ಚರ್ಚ್ ಆವರಣ ದಲ್ಲಿದ್ದ ಮೇರಿ ಮೂರ್ತಿಯನ್ನು ಭಗ್ನಗೊಳಿ ಸಿದ್ದ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಅರೇಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆಲೂರು ತಾಲೂಕಿನ ಸುಳಗೋಡು ಗ್ರಾಮದ ವಿಷ್ಣು, ಬೇಲೂರು ತಾಲೂಕಿನ ಕರ್ಕಿಹಳ್ಳಿ ಕೌಶಿಕ್, ಮತ್ತಿಹಳ್ಳಿ ಪ್ರಸನ್ನ, ಪಾಂಡವಪುರ ತಾಲೂಕಿನ ಶಂಭುಕನ ಹಳ್ಳಿ ಕುಮಾರಸ್ವಾಮಿ ಬಂಧಿತರು. ಇವರು ಆ.14ರ ಮಧ್ಯರಾತ್ರಿ ತಾಲೂಕಿನ ಅರೇಹಳ್ಳಿ ಠಾಣೆ ವ್ಯಾಪ್ತಿಯ ಮತ್ತಿಹಳ್ಳಿ ಗ್ರಾಮದ ಸಂತ ಮಿಕಾಯಿಲ್ ಚರ್ಚ್ನಲ್ಲಿದ್ದ ಮೇರಿ ಮೂರ್ತಿಯನ್ನು ಕುಡಿದ ಮತ್ತಿನಲ್ಲಿ ಭಗ್ನ ಗೊಳಿಸಿ…
ಎಲ್ಲೆಡೆ ಸಂಭ್ರಮದ ಶ್ರೀ ವರಮಹಾಲಕ್ಷ್ಮಿ ವ್ರತ
August 25, 2018ಹಾಸನ: ನಗರ ಸೇರಿದಂತೆ ಜಿಲ್ಲೆಯೆಲ್ಲೆಡೆ ಶ್ರಾವಣ ಮಾಸದ ಮೊದಲ ಹಬ್ಬವಾದ ಶ್ರೀ ವರಮಹಾಲಕ್ಷ್ಮಿ ವ್ರತವನ್ನು ಶದ್ಧಾ ಭಕ್ತಿಯಿಂದ ಆಚರಿಸಲಾಯಿತು. ನಗರದ ಪ್ರತಿ ಮನೆ-ಮನೆಗಳಲ್ಲೂ ವಿಜೃಂಭಣೆಯಿಂದ ಶ್ರೀ ವರಮಹಾಲಕ್ಷ್ಮಿ ವ್ರತ ನೆರವೇರಿತು. ವ್ರತದ ಹಿನ್ನೆಲೆ ನಗರದ ಎಲ್ಲಾ ಬಡಾವಣೆಗಳಲ್ಲಿಯೂ ಸಂಭ್ರಮ-ಸಡಗರ ಮನೆ ಮಾಡಿತ್ತು. ಹಬ್ಬದ ಅಂಗವಾಗಿ ಹಿಂದಿನ ದಿನದಂದೇ ಮನೆ ಶುಚಿಗೊಳಿಸಿ ವರಮಹಾಲಕ್ಷ್ಮಿ ಆಹ್ವಾನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಬೆಲೆ ಏರಿಕೆ ನಡುವೆಯೂ ಅಗತ್ಯ ವಸ್ತುಗಳನ್ನು ಖರೀದಿಸಿ ವಿವಿಧ ಸಿದ್ಧತೆ ಮಾಡಿಕೊಳ್ಳ ಲಾಗಿತ್ತು. ಮುಂಜಾನೆಯಿಂದಲೇ ನಗರದ ವಿವಿಧ ಬಡಾವಣೆಯ ಮನೆಗಳಲ್ಲಿ…
ಸ್ಥಳೀಯ ಚುನಾವಣೆ ಕಣದಲ್ಲಿ 486 ಅಭ್ಯರ್ಥಿಗಳು
August 25, 2018ಹಾಸನ: ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಯಲ್ಲಿ ಜಿಲ್ಲೆಯ 5 ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 135 ವಾರ್ಡ್ಗಳಲ್ಲಿ ಅಂತಿಮವಾಗಿ 486 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜಿಲ್ಲೆಯಲ್ಲಿ 5 ನಗರ ಸ್ಥಳೀಯ ಸಂಸ್ಥೆ ಗಳಿಗೆ ಚುನಾವಣೆ ನಡೆದಿದೆ ಇದರಲ್ಲಿ ಹಾಸನ 35, ಅರಸೀಕೆರೆಯ ನಗರಸಭೆಯ 31 ಹಾಗೂ ಚನ್ನರಾಯಪಟ್ಟಣ, ಹೊಳೆ ನರಸೀಪುರ ಮತ್ತು ಸಕಲೇಶಪುರ ಪುರಸಭೆ ಗಳ 23 ವಾರ್ಡ್ಗಳಿಗೆ ಚುನಾವಣೆ ನಡೆ ಯಲಿದೆ. ಹಾಸನ ನಗರಸಭೆಯಲ್ಲಿ ಒಟ್ಟು 175 ಮಂದಿ ನಾಮಪತ್ರ ಸಲ್ಲಿಸಿದ್ದರು. 1 ನಾಮ ಪತ್ರ…
ವರಮಹಾಲಕ್ಷ್ಮಿ ಹಬ್ಬ: ಬೆಲೆ ಏರಿಕೆ ನಡುವೆ ಭರ್ಜರಿ ವ್ಯಾಪಾರ
August 24, 2018ಅಗತ್ಯ ವಸ್ತುಗಳು ದುಬಾರಿ, ಜನರಲ್ಲಿ ಕುಂದದಾ ಉತ್ಸಾಹ ಹಾಸನ: ವರಮಹಾಲಕ್ಷ್ಮಿ ಹಬ್ಬದ ಮುನ್ನಾದಿನವಾದ ಗುರುವಾರ ಮಾರುಕಟ್ಟೆಯಲ್ಲಿ ಹೂ, ಹಣ್ಣಿನ ವ್ಯಾಪಾರ ಭರಾಟೆ ಜೋರಾಗಿ ನಡೆಯಿತು. ಹಬ್ಬಕ್ಕೆ ಅಗತ್ಯವಾದ ಬಾಳೆಕಂದು, ಮಾವಿನ ಸೊಪ್ಪು, ತಾವರೆ ಹೂವು, ಡೇರೆ ಹೂವು, ಬಾಳೆಹಣ್ಣು, ತರಕಾರಿ ಹಾಗೂ ಅಲಂಕಾರಿಕ ವಸ್ತುಗಳನ್ನು ಕೊಳ್ಳಲು ಗ್ರಾಹಕರು ಮುಗಿಬಿದ್ದರು. ನಗರದ ಕಸ್ತೂರಬಾ ರಸ್ತೆ ಹಾಗೂ ಕಟ್ಟಿನ ಕೆರೆ ಮಾರುಕಟ್ಟೆಯಲ್ಲಿ ಬೆಳಿಗ್ಗೆ ಯಿಂದಲೇ ಮಹಿಳೆಯರು, ಯುವತಿ ಯರು ಸೇರಿದಂತೆ ಸುತ್ತಲಿನ ಗ್ರಾಮಗಳ ಜನರು ಬಂದು ಹಬ್ಬಕ್ಕೆ ಅಗತ್ಯವಾದ ವಸ್ತು…
ಹೊಳೆನರಸೀಪುರ ಪುರಸಭೆ ಚುನಾವಣೆ: ಅಂತಿಮ ಕಣದಲ್ಲಿ 64 ಅಭ್ಯರ್ಥಿ
August 24, 2018ಹೊಳೆನರಸೀಪುರ: ಹೊಳೆನರಸೀಪುರ ಪುರ ಸಭೆಯ 23 ವಾರ್ಡ್ಗಳ ಚುನಾವಣೆಗೆ 100 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿತ್ತು. ಗುರುವಾರ 36 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದ ಹಿನ್ನಲೆಯಲ್ಲಿ 64 ಮಂದಿ ಅಂತಿಮ ಕಣದಲ್ಲಿ ಉಳಿದಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ಎಲ್ಲಾ ವಾರ್ಡ್ಗಳಲ್ಲಿ ಸ್ಪರ್ಧೆ ಮಾಡಿದ್ದು, ಬಿಜೆಪಿ 12, ಬಿಎಸ್ಪಿ 1 ವಾರ್ಡ್ನಲ್ಲಿ ಮಾತ್ರ ಸ್ಪರ್ಧೆ ಮಾಡಿದೆ. 5 ವಾರ್ಡ್ಗಳಲ್ಲಿ ಪಕ್ಷೇತರರು ಕಣದಲ್ಲಿದ್ದಾರೆ. ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ವಿವರ: 1ನೇ ವಾರ್ಡ್ನಲ್ಲಿ ಸುಧಾ ನಳಿನಿ(ಜೆಡಿಎಸ್), ಎಂ.ಮಂಜುಳ (ಕಾಂಗ್ರೆಸ್), ಗಾಯತ್ರಿ(ಬಿಜೆಪಿ), 2ನೇ ವಾರ್ಡ್ನಲ್ಲಿ…