ಮಡಿಕೇರಿ ಜು.13- ಕೊಡಗು ಎಂದರೆ ಮಳೆ, ಮಳೆ ಎಂದರೆ ಕೊಡಗು ಎಂಬಾಂತಾ ಗಿದೆ. ಪಶ್ಚಿಮಘಟ್ಟ ಸಾಲಿನ ಎತ್ತರ ಪ್ರದೇಶದ ಲ್ಲಿರುವ ಕೊಡಗು ಜಿಲ್ಲೆ ಅರಬ್ಬಿ ಸಮುದ್ರದಿಂದ ಬೀಸುವ ನೈಋತ್ಯ ಮಾನ್ಸೂನ್ ಮಾರುತ ವನ್ನು ತಡೆದು ಧಾರಾಕಾರ ಮಳೆ ಸುರಿಯು ತ್ತದೆ. ವ್ಯಾಪಕ ಮಳೆಯಾಗುವುದರಿಂದ ಜಿಲ್ಲೆಯಲ್ಲಿನ ನದಿ, ತೊರೆ, ಹಳ್ಳ, ಕೊಳ್ಳ, ಜಲಪಾತಗಳು ತುಂಬಿ ಹರಿಯುತ್ತಿವೆ. ಜು.9 ರಂದು 52, 10 ರಂದು 98, 11 ರಂದು 66.71, 12 ರಂದು 72.70 ಮತ್ತು 13 ರಂದು 49.28…
ಜು.22, ಕೊಡವ ಸಮಾಜಗಳಿಂದ ಪ್ರತಿಭಟನೆ
July 14, 2022ಮಡಿಕೇರಿ,ಜು.13- ಸಾಮಾಜಿಕ ಜಾಲ ತಾಣಗಳಲ್ಲಿ ಕೊಡವ ಕುಲದೇವಿ ಕಾವೇರಿ ಹಾಗೂ ಜನಾಂಗದ ಬಗ್ಗೆ ಕಿಡಿಗೇಡಿಗಳು ಅವಹೇಳನಕಾರಿ ಹೇಳಿಕೆಯನ್ನು ಹಾಕಿರುವ ಕುರಿತು ವಿವಿಧ ಕೊಡವ ಸಮಾಜಗಳು ತೀವ್ರ ಖಂಡನೆ ವ್ಯಕ್ತಪಡಿಸಿವೆ. ಈ ಕಿಡಿಗೇಡಿ ಕೃತ್ಯದ ವಿರುದ್ಧ ಕೊಡವ ಸಮಾಜಗಳು ಹಾಗೂ ವಿವಿಧ ಸಂಘಟನೆಗಳು ದೂರು ನೀಡಿದ್ದರೂ ಈವರೆಗೆ ಯಾವುದೇ ಕಾನೂನು ಕ್ರಮ ಕೈಗೊಳ್ಳದೇ ಇರುವುದರ ವಿರುದ್ಧ ಕೊಡವ ಸಮಾಜಗಳ ಒಕ್ಕೂಟ, ಅಖಿಲ ಕೊಡವ ಸಮಾಜ ಹಾಗೂ ವಿವಿಧ ಕೊಡವ ಸಂಘಟನೆಗಳ ಸಹಭಾಗಿತ್ವದಲ್ಲಿ ಜು.22ರಂದು ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು…
ಕೊಡಗು ಮಳೆ ಹಾನಿ ಪ್ರದೇಶಕ್ಕೆಸಿಎಂ ಬೊಮ್ಮಾಯಿ ಭೇಟಿ
July 13, 2022ಮಡಿಕೇರಿ, ಜು.12-ಕೊಡಗು ಜಿಲ್ಲಾ ವ್ಯಾಪ್ತಿ ಯಲ್ಲಿ ಕಳೆದ ಎರಡು ವಾರಗಳಿಂದ ಧಾರಾಕಾರ ಮಳೆ ಸುರಿದಿದ್ದು, ಇದರಿಂದ ಉಂಟಾಗಿರುವ ಹಾನಿ ಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರಿಶೀಲನೆ ನಡೆಸಿ, ಸಂತ್ರಸ್ತರಿಗೆ ಅಗತ್ಯ ನೆರವು ನೀಡುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ. ಕುಶಾಲನಗರ ಕೊಪ್ಪ ಮೂಲಕ ಕೊಡಗಿಗೆ ಆಗಮಿಸಿದ ಸಿ.ಎಂ. ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್, ಕಂದಾಯ ಸಚಿವ ಅಶೋಕ್, ಸಂಸದ ಪ್ರತಾಪ ಸಿಂಹ, ಜಿಲ್ಲೆಯ ಶಾಸಕರುಗಳಾದ ಕೆ.ಜಿ.ಬೋಪಯ್ಯ ಮತ್ತು ಎಂ.ಪಿ.ಅಪ್ಪಚ್ಚು ರಂಜನ್ ಅವರೊಂದಿಗೆ ಜಿಲ್ಲಾ…
ಕೊಡಗಲ್ಲಿ ಮಳೆ ಆರ್ಭಟ: ಇಂದು ಮುಖ್ಯಮಂತ್ರಿ ಭೇಟಿ
July 12, 2022ಮಡಿಕೇರಿ,ಜು.11- ಕೊಡಗು ಜಿಲ್ಲೆಯಾದ್ಯಂತ ಮಳೆ ಯಿಂದ ವ್ಯಾಪಕ ಹಾನಿಯಾಗಿದ್ದು, ನಾಳೆ (ಮಂಗಳವಾರ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ, ಹಾನಿಗೀಡಾದ ಪ್ರದೇಶಗಳ ಪರಿಶೀಲನೆ ನಡೆಸಲಿದ್ದಾರೆ. ನಾಳೆ ಬೆಳಗ್ಗೆ ಮೈಸೂರಿಗೆ ವಿಶೇಷ ವಿಮಾನದಲ್ಲಿ ಆಗಮಿಸಿ, ಅಲ್ಲಿಂದ ರಸ್ತೆ ಮೂಲಕ ಕೊಡಗಿಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 2.30ರವರೆಗೆ ಕೊಡಗಿನ ವಿವಿಧೆಡೆ ಮಳೆಯಿಂದ ಹಾನಿಗೀಡಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ, ಪರಿ ಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ. ಅಪಾರ ಹಾನಿ: ಸೋಮವಾರ ಮಳೆ ಆರ್ಭಟ ಕಡಿಮೆ ಇತ್ತಾದರೂ, ಅವಾಂತರಗಳು ತಪ್ಪಿಲ್ಲ. ಮರಗಳು ಮುರಿದು…
ಅಬ್ಬರಿಸುತ್ತಿರುವ ಮಳೆ ತತ್ತರಿಸಿದ ಕೊಡಗು
July 11, 2022ಮಡಿಕೇರಿ,ಜು.10-ಕೊಡಗು ಜಿಲ್ಲಾದ್ಯಂತ ಶನಿವಾರದಿಂದ ಮಳೆ ಆರ್ಭಟಿಸುತ್ತಿದ್ದು, ಅಕ್ಷರಃ ಕೊಡಗು ನಲುಗಿ ಹೋಗಿದೆ. ಗಾಳಿ ಸಹಿತ ಮಳೆ ಅಬ್ಬರಿಸುತ್ತಿದ್ದು, ಗುಡ್ಡ ಕುಸಿತ ಗೊಂಡು ಶಾಲೆಯೊಂದು ಜಖಂಗೊಂಡಿದ್ದು, ಮತ್ತೊಂದು ಕಡೆ ತೂಗು ಸೇತುವೆಗೆ ಹಾನಿ ಯಾಗಿದೆ. ಇದರೊಂದಿಗೆ ಜಿಲ್ಲೆಯ ಎಲ್ಲಾ ನದಿ ತೊರೆಗಳು ಪ್ರವಾಹ ಮಟ್ಟ ಮೀರಿ ಹರಿಯು ತ್ತಿದ್ದು, ವಿವಿಧೆಡೆ ಪ್ರವಾಹ ಉಂಟಾಗಿದೆ. ಈ ನಡುವೆ ಸೋಮವಾರ ಬೆಳಗಿನ 8.30 ರವರೆಗೆ ಜಿಲ್ಲೆಯಾದ್ಯಂತ “ಆರೆಂಜ್ ಅಲರ್ಟ್” ಘೋಷಣೆ ಮಾಡಲಾಗಿದೆ. ಮಳೆ-ಗಾಳಿಗೆ ಅನಾಹುತಗಳು ಘಟಿಸಿದ್ದು, ಆಸ್ತಿಪಾಸ್ತಿಗೆ ಹಾನಿ ಯಾದ ಬಗ್ಗೆ…
ಕೊಡಗಲ್ಲಿ ನಿರಂತರ ಮಳೆ: ಕೆಲವೆಡೆ ಭೂ ಕುಸಿತ
July 7, 2022ಮಡಿಕೇರಿ,ಜು.6- ಕೊಡಗು ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಲಘು ಭೂ ಕುಸಿತ, ಮರ ಮುರಿದು ಬಿದ್ದಿರುವುದು, ಮಳೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದ್ದು, ಗುರುವಾರ ಬೆಳಗ್ಗೆವರೆಗೂ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಮಡಿಕೇರಿ-ಮಾಣಿ ರಾಷ್ಟ್ರೀಯ ಹೆದ್ದಾರಿ 275ನ ಕರ್ತೋಜೆ ಬಳಿ ಹೆದ್ದಾರಿಗೆ ಮರಗಳು ನೆಲಕ್ಕೆ ಉರುಳಿ ಬೀಳುವುದರಿಂದರೊಂದಿಗೆ ಭಾರೀ ಭೂ ಕುಸಿದು ವಾಹನ ಸಂಚಾರ ಕೆಲಕಾಲ ಬಂದ್ ಆಗಿತ್ತು. ಹಿಟಾಚಿ ಸಹಾಯದಿಂದ ಮಣ್ಣು ತೆರವುಗೊಳಿಸಿ ಸಂಚಾರಕ್ಕೆ ಮುಕ್ತ ಗೊಳಿಸಲಾಯಿತು. ಮಾದಾಪುರ ಜಂಬೂರು ರಸ್ತೆಗೆ ಮರ ಮುರಿದು ಬಿದ್ದು ಕೆಲ ಕಾಲ ರಸ್ತೆ…
ಕೊಡಗಿನಲ್ಲಿ ಮುಂದುವರೆದ ಮಳೆ ಅಬ್ಬರ
July 6, 2022ಮಡಿಕೇರಿ, ಜು.5- ಕೊಡಗಿನಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಭಾರೀ ಗಾಳಿಯೊಂದಿಗೆ ಮಳೆ ಅಬ್ಬರಿಸುತ್ತಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಜಿಲ್ಲೆಯಾ ದ್ಯಂತ ಬುಧವಾರ ಬೆಳಗ್ಗೆ 8.30ರವರೆಗೆ ಮತ್ತೆ “ಆರೆಂಜ್ ಅಲರ್ಟ್” ಘೋಷಣೆ ಮಾಡಲಾಗಿದೆ. ಗಾಳಿ ಮಳೆಗೆ ಮುರಿದು ಬಿದ್ದ ಮರಗಳಿಂದ ವಿದ್ಯುತ್ ಕಂಬ ಗಳಿಗೂ ಹಾನಿಯಾಗಿದ್ದು, ಹಲವು ಗ್ರಾಮ ಗಳು ಕಗ್ಗತ್ತಲಿನಲ್ಲಿ ಮುಳುಗಿವೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿಬಾಯಿಸಿ, ಸಮರೋಪಾದಿಯಲ್ಲಿ ತುರ್ತು ಕಾರ್ಯಗಳನ್ನು ನಿರ್ವಹಿಸಲು ಎನ್ಡಿಆರ್ ಎಫ್ ತಂಡ ಜಿಲ್ಲೆಗೆ ಆಗಮಿಸಿದ್ದು, ಕೆಲವು ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಹಾರ…
ಕೊಡಗಲ್ಲಿ ವರುಣನ ಆರ್ಭಟ: ಆರೆಂಜ್ ಅಲರ್ಟ್ ಘೋಷಣೆ
July 5, 2022ಮಡಿಕೇರಿ,ಜು.4-ಕೊಡಗು ಜಿಲ್ಲೆಯಾದ್ಯಂತ ಸೋಮ ವಾರ ಮಳೆ ಮತ್ತಷ್ಟು ಬಿರುಸು ಪಡೆದುಕೊಂಡಿದ್ದು, ಮಂಗಳವಾರ ಬೆಳಗ್ಗೆ 8.30ರವರೆಗೆ ಜಿಲ್ಲೆಯಾದ್ಯಂತ `ಆರೆಂಜ್ ಅಲರ್ಟ್’ ಘೋಷಣೆ ಮಾಡಲಾಗಿದೆ. ಈ ಅವಧಿಯಲ್ಲಿ 64.5 ಮಿಮೀನಿಂದ 115.5 ಮಿಮೀ ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಮಡಿಕೇರಿ-ಭಾಗಮಂಡಲ ರಸ್ತೆಯಲ್ಲಿ ಎರಡು ಅಡಿಗೂ ಹೆಚ್ಚು ನೀರು ಹರಿಯುತ್ತಿರುವುದರಿಂದ ಇಲ್ಲಿನ ರಸ್ತೆ ಸಂಪರ್ಕ ಕಡಿತಗೊಂಡಿದೆ. ಮಡಿಕೇರಿಯಲ್ಲಿರುವ ಎನ್ಡಿಆರ್ಎಫ್ ತಂಡ ಸಂಭಾವ್ಯ ಭೂ ಕುಸಿತ ಘಟಿಸಬಹುದಾದ ಚಾಮುಂಡೇಶ್ವರಿ ನಗರ, ಇಂದಿರಾ ನಗರ, ಮಂಗಳೂರು ರಸ್ತೆ ಸಮೀಪದ ತಾಳತ್ ಮನೆ…
ಕೊಡಗಲ್ಲಿ ಧಾರಾಕಾರ ಮಳೆ: ಕೆಆರ್ಎಸ್ ಅಣೆಕಟ್ಟೆಗೆ ಒಳಹರಿವು ಹೆಚ್ಚಳ
July 5, 2022ಮೈಸೂರು, ಜು. 4(ಆರ್ಕೆ)- ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಕೆಲ ದಿನಗಳಿಂದ ಮಳೆ ಧಾರಾಕಾರವಾಗಿ ಸುರಿಯುತ್ತಿರುವುದರಿಂದ ಕೃಷ್ಣರಾಜ ಸಾಗರ (ಕೆಆರ್ಎಸ್) ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದೆ. ಸೋಮವಾರ ಬೆಳಗ್ಗೆ 22,466 ಕ್ಯೂಸೆಕ್ ಇದ್ದ ಒಳಹರಿವಿನ ಪ್ರಮಾಣ, ಸಂಜೆ ವೇಳೆಗೆ 24,000 ಕ್ಯೂಸೆಕ್ಗೇರಿತ್ತು. ಇಂದು ಕೆಆರ್ಎಸ್ ಅಣೆಕಟ್ಟೆಯಲ್ಲಿ 111.12 ಅಡಿ ನೀರು ಸಂಗ್ರಹವಾಗಿದ್ದು, ಒಳಹರಿವಿನ ಪ್ರಮಾಣ ಇನ್ನೂ ಅಧಿಕವಾಗುವ ನಿರೀಕ್ಷೆ ಇರುವುದರಿಂದ ಈ ಬಾರಿ ಅವಧಿಗೂ ಮುನ್ನವೇ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ ಎಂದು…
ಕೊಡಗಲ್ಲಿ ಮುಂದುವರೆದ ಭಾರೀ ಮಳೆ ಮತ್ತೆ ಹಲವೆಡೆ ಭೂ ಕುಸಿತ, ಧರೆಗುರುಳಿದ ಮರಗಳು
July 4, 2022ಮಡಿಕೇರಿ,ಜು.3- ಕೊಡಗುಜಿಲ್ಲೆಯಾದ್ಯಂತ ಭಾರೀ ಮಳೆ ಮುಂದು ವರೆದಿದ್ದು, ಅಲ್ಲಲ್ಲಿ ಭೂ ಕುಸಿತ, ಮರ ಮುರಿದು ಬಿದ್ದಿರುವ ಘಟನೆಗಳ ಸಹಿತ ಹಾನಿಗಳಾದ ಬಗ್ಗೆ ವರದಿಯಾಗಿದೆ. ಅಮ್ಮತ್ತಿ, ಮಾದಾಪುರ, ಗರಗಂದೂರು, ಕೂಡಿಗೆ ಮತ್ತಿತ್ತರ ಕಡೆಗಳಲ್ಲಿ ಮರಗಳು ಮುರಿದು ಬಿದ್ದಿದ್ದು, ವಿದ್ಯುತ್ ಕಂಬಗಳು ಮತ್ತು ತಂತಿಗಳು ತುಂಡರಿಸಲ್ಪಟ್ಟಿದೆ. ಇದರಿಂದ ಕೆಲವು ಭಾಗಗಳಲ್ಲಿ ಕಗ್ಗತ್ತಲು ಮನೆ ಮಾಡಿದೆ. ಸುರಿಯುತ್ತಿರುವ ಮಳೆಯ ನಡುವೆ ವಿದ್ಯುತ್ ಕಂಬಗಳ ಬದಲಿ ವ್ಯವಸ್ಥೆ ಹಾಗೂ ಲೈನ್ಗಳ ದುರಸ್ತಿ ಕಾರ್ಯ ಸಮಾರೋಪಾದಿಯಲ್ಲಿ ಸಾಗಿದೆಎಂದು ಚೆಸ್ಕಾಂ ಇಲಾಖೆ ಮಾಹಿತಿ ನೀಡಿದೆ. ರಸ್ತೆಗೆಅಡ್ಡಲಾಗಿ…