ಮಂಡ್ಯ

ನಾಳೆ ಲೋಕ ಅದಾಲತ್: ನ್ಯಾ.ಜಿ.ತಿಮ್ಮಯ್ಯ
ಮಂಡ್ಯ

ನಾಳೆ ಲೋಕ ಅದಾಲತ್: ನ್ಯಾ.ಜಿ.ತಿಮ್ಮಯ್ಯ

July 13, 2018

ಮಂಡ್ಯ: ನಾಗಮಂಗಲ ಪಟ್ಟಣದ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಜು.14 ರಂದು ಲೋಕ ಅದಾಲತ್ ನಡೆಯಲಿದ್ದು, ಹಿರಿಯ ಮತ್ತು ಕಿರಿಯ ಶ್ರೇಣಿಯ ನ್ಯಾಯಾಲಯದ ಕಕ್ಷಿದಾರರು ಇತ್ಯರ್ಥ ಪಡಿಸಿಕೊಳ್ಳ ಬಹುದಾದ ವ್ಯಾಜ್ಯಗಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾ ಧೀಶೆ ಎಂ.ಭಾರತಿ ಹಾಗೂ ಕಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶ ಜಿ.ತಿಮ್ಮಯ್ಯ ತಿಳಿಸಿದರು. ನಾಗಮಂಗಲ ಪಟ್ಟಣದ ಜೆಎಂಎಫ್‍ಸಿ ನ್ಯಾಯಾಲಯ ಸಭಾಂಗಣದಲ್ಲಿ ಈ ಕುರಿತು ಗುರುವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ನ್ಯಾಯಾಧೀಶರು, ರಾಜೀ ಸಂಧಾನದ ಮೂಲಕ ಎರಡೂ ಕಡೆಯ…

ದೂರುದಾರನ ವಿರುದ್ಧವೇ ತಿರುಗಿಬಿದ್ದ ಪಡಿತರದಾರರು: ನ್ಯಾಯಬೆಲೆ ಅಂಗಡಿಯಲ್ಲಿ ಅಕ್ರಮ ಆರೋಪ, ಅಧಿಕಾರಿಗಳಿಂದ ದಿಢೀರ್ ಭೇಟಿ, ಪರಿಶೀಲನೆ
ಮಂಡ್ಯ

ದೂರುದಾರನ ವಿರುದ್ಧವೇ ತಿರುಗಿಬಿದ್ದ ಪಡಿತರದಾರರು: ನ್ಯಾಯಬೆಲೆ ಅಂಗಡಿಯಲ್ಲಿ ಅಕ್ರಮ ಆರೋಪ, ಅಧಿಕಾರಿಗಳಿಂದ ದಿಢೀರ್ ಭೇಟಿ, ಪರಿಶೀಲನೆ

July 13, 2018

ನಾಗಮಂಗಲ: ತಾಲೂಕಿನ ಬಳಪದ ಮಂಟಿಕೊಪ್ಪಲು ಸರ್ಕಾರಿ ನ್ಯಾಯ ಬೆಲೆ ಅಂಗಡಿಯಲ್ಲಿ ಹಲವು ಅಕ್ರಮಗಳು ನಡೆದಿವೆ ಎಂಬ ದೂರಿನ ಮೇರೆಗೆ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ಸುಜಾತ ಹುಲ್ಮನಿ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಬಳಪದಮಂಟಿಕೊಪ್ಪಲು ನ್ಯಾಯಬೆಲೆ ಅಂಗಡಿ ವ್ಯಾಪ್ತಿಯ ಗದ್ದೇಬೂವನಹಳ್ಳಿ ಗ್ರಾಪಂ ಸದಸ್ಯ ಅಮ್ಮನಕಟ್ಟೆ ಬಸವರಾಜು ಎಂಬುವರು ಪಡಿತರ ಅಂಗಡಿಯಲ್ಲಿ ಹಲವು ಡಬಲ್ ಕಾರ್ಡ್‍ಗಳಿವೆ. ನಿಗದಿತ ಬೆಲೆಗಿಂತ ಹೆಚ್ಚು ದರ ಪಡೆಯುತ್ತಿದ್ದಾರೆ. ಮರಣ ಹೊಂದಿರುವವರ ಹೆಸರಿನಲ್ಲೂ ಪಡಿತರ ಲಪಟಾಯಿಸಿದ್ದಾರೆ. ತಿಂಗಳಿಗೆ 4…

ಉದ್ಯೋಗ, ಉನ್ನತ ಶಿಕ್ಷಣ ಮಾಹಿತಿ ಕೇಂದ್ರ ತೆರೆಯಿರಿ
ಮಂಡ್ಯ

ಉದ್ಯೋಗ, ಉನ್ನತ ಶಿಕ್ಷಣ ಮಾಹಿತಿ ಕೇಂದ್ರ ತೆರೆಯಿರಿ

July 13, 2018

ಕೆ.ಆರ್.ಪೇಟೆ:  ಯಾವುದೇ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡದೇ, ಸರಳವಾಗಿ ಮಾಡುವಂತೆ ರಾಜ್ಯ ವಿಧಾನಸಭೆ ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ರೈತರಿಗೆ ಸಲಹೆ ನೀಡಿದರು. ಪಟ್ಟಣದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ತಾಲೂಕು ಒಕ್ಕಲಿಗರ ಸಂಘ ಮತ್ತು ನೇಗಿಲಯೋಗಿ ಸಮಾಜ ಸೇವಾ ಟಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಒಕ್ಕಲಿಗ ಸಮಾಜದ ವಧೂ-ವರರ ಮಾಹಿತಿ ಕೇಂದ್ರ ಉದ್ಘಾಟನಾ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಒಕ್ಕಲಿಗ ವಧೂ-ವರರ ಮಾಹಿತಿ ಕೇಂದ್ರ ಸ್ಥಾಪನೆ ಮಾಡಿರುವುದು ಶ್ಲಾಘನೀಯ. ಇದರ ಜೊತೆಗೆ ಉದ್ಯೋಗ…

ಗ್ರಾಮ ಲೆಕ್ಕಿಗನ ವರ್ಗಾವಣೆಗೆ ಒತ್ತಾಯಿಸಿ ಧರಣಿ
ಮಂಡ್ಯ

ಗ್ರಾಮ ಲೆಕ್ಕಿಗನ ವರ್ಗಾವಣೆಗೆ ಒತ್ತಾಯಿಸಿ ಧರಣಿ

July 12, 2018

ಮಂಡ್ಯ: ಶ್ರೀರಂಗಪಟ್ಟಣ ತಾಲೂಕು ಅರಕೆರೆ ಹೋಬಳಿ ಪೀಹಳ್ಳಿ ಮತ್ತು ಬನ್ನಹಳ್ಳಿ ವೃತ್ತದ ಗ್ರಾಮಲೆಕ್ಕಿ ಗರ (ವಿಎ) ವರ್ಗಾವಣೆಗೆ ಒತ್ತಾಯಿಸಿ ನಗರದ ವಿಶ್ವೇಶ್ವ ರಯ್ಯ ಪ್ರತಿಮೆ ಎದುರು ಬುಧ ವಾರ ವೃತ್ತಗಳ ವ್ಯಾಪ್ತಿಯ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಈ ವೇಳೆ ಜಿಲ್ಲಾಧಿ ಕಾರಿ ಅವರಿಗೆ ಮನವಿ ಸಲ್ಲಿ ಸಿದ ಪ್ರತಿಭಟನಾಕಾರರು, ಪೀಹಳ್ಳಿ ಮತ್ತು ಬನ್ನಹಳ್ಳಿ ವೃತ್ತದಲ್ಲಿ ಕಳೆದ 4 ವರ್ಷದಿಂದ ಕೆಲಸ ನಿರ್ವಹಿಸುತ್ತಿರುವ ಗ್ರಾಮಲೆಕ್ಕಾಧಿಕಾರಿ ನಿಂಗಪ್ಪಾಜಿ ಲಂಚಕೋರರಾಗಿದ್ದಾರೆಂದು ಆರೋಪಿಸಿದರು. ಲಂಚ ನೀಡದಿದ್ದರೆ ಸಬೂಬು ಹೇಳುತ್ತಾರೆ. ಪ್ರಶ್ನಿಸಿದರೆ ಕ್ರಿಮಿನಲ್ ಮೊಕದ್ದಮೆ…

ರಾಜ್ಯ ಸರ್ಕಾರದ ವಿರುದ್ಧ ಜಿಲ್ಲೆಯಲ್ಲಿ ಪ್ರತ್ಯೇಕ ಪ್ರತಿಭಟನೆ: ಸ್ತ್ರೀಶಕ್ತಿ ಮಹಿಳಾ ಸಂಘದ ಸಾಲಮನ್ನಾಕ್ಕೆ ಆಗ್ರಹ
ಮಂಡ್ಯ

ರಾಜ್ಯ ಸರ್ಕಾರದ ವಿರುದ್ಧ ಜಿಲ್ಲೆಯಲ್ಲಿ ಪ್ರತ್ಯೇಕ ಪ್ರತಿಭಟನೆ: ಸ್ತ್ರೀಶಕ್ತಿ ಮಹಿಳಾ ಸಂಘದ ಸಾಲಮನ್ನಾಕ್ಕೆ ಆಗ್ರಹ

July 12, 2018

ಕೆ.ಆರ್.ಪೇಟೆ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಚುನಾವಣೆಗೂ ಮುನ್ನ ನೀಡಿದ ಭರವಸೆಯಂತೆ ಸ್ತ್ರೀಶಕ್ತಿ ಮಹಿಳಾ ಸ್ವಸಹಾಯ ಸಂಘದ ಬ್ಯಾಂಕ್ ಸಾಲ ಮನ್ನಾ ಮಾಡಬೇಕು. ಡೀಸೆಲ್, ಪೆಟ್ರೋಲ್, ವಿದ್ಯುತ್ ದರ ಕಡಿತಗೊಳಿಸಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ಬುಧವಾರ ತಾಲೂಕು ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರವಾಸಿ ಮಂದಿರ ವೃತ್ತದಲ್ಲಿ ಸಮಾ ವೇಶಗೊಂಡ ಕಾರ್ಯಕರ್ತರು ಹಾಗೂ ಸಂಘಟನೆಯ ಮಹಿಳಾ ಘಟಕದ ಪದಾಧಿಕಾರಿಗಳು ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ಮೈಸೂರು-ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿಯನ್ನು ತಡೆದು, ರಾಜ್ಯ ಸರ್ಕಾರದ ವಿರುದ್ಧ…

ಕೃಷಿ ಸಾಲ ಮನ್ನಾಕ್ಕೆ ಒತ್ತಾಯಿಸಿ ರಸ್ತೆ ತಡೆ
ಮಂಡ್ಯ

ಕೃಷಿ ಸಾಲ ಮನ್ನಾಕ್ಕೆ ಒತ್ತಾಯಿಸಿ ರಸ್ತೆ ತಡೆ

July 12, 2018

ಭಾರತೀನಗರ:  ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದ ವಿಶ್ವೇಶ್ವರಯ್ಯ ಪುತ್ಥಳಿ ಬಳಿ ಬುಧವಾರ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇಲ್ಲಿನ ವಿಶ್ವೇಶ್ವರಯ್ಯ ಪುತ್ಥಳಿ ಬಳಿ ಜಮಾಯಿಸಿದ ರೈತ ಸಂಘದ ಕಾರ್ಯಕರ್ತರು ಮದ್ದೂರು-ಮಳವಳ್ಳಿ ಮುಖ್ಯರಸ್ತೆ ಯನ್ನು ತಡೆದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರೈತರು ಮೂರ್ನಾಲ್ಕು ವರ್ಷಗಳಿಂದ ನಿರಂತರವಾಗಿ ಬರಗಾಲಕ್ಕೆ ಸಿಲುಕಿ ನಷ್ಟ ಅನುಭವಿಸುತ್ತಿದ್ದಾರೆ. ಜೀವನ ನಿರ್ವಹಣೆಗಾಗಿ ಹಾಗೂ ಕೃಷಿಗಾಗಿ ಸಾಲ ಸಿಗದಿದ್ದ ಸಂದರ್ಭದಲ್ಲಿ ಚಿನ್ನಾ ಭರಣ…

ಜು.22 ರಿಂದ ನೀರು ಬಿಡಲು ಸಿಎಸ್‍ಪಿ ಸೂಚನೆ: ಕೆಆರ್‌ಎಸ್‌ ಭರ್ತಿಗೆ 8 ಅಡಿ ಬಾಕಿ
ಮಂಡ್ಯ

ಜು.22 ರಿಂದ ನೀರು ಬಿಡಲು ಸಿಎಸ್‍ಪಿ ಸೂಚನೆ: ಕೆಆರ್‌ಎಸ್‌ ಭರ್ತಿಗೆ 8 ಅಡಿ ಬಾಕಿ

July 12, 2018

ಮಂಡ್ಯ: ‘ಕಾವೇರಿ ನೀರಾವರಿ ನಿಗಮ ವ್ಯಾಪ್ತಿಯ ಪ್ರದೇಶದಲ್ಲಿರುವ ಎಲ್ಲಾ ಕೆರೆಗಳಿಗೆ ನಾಲೆಗಳ ನೇರ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಅಧಿಕಾರಿ ಗಳು ಶೀಘ್ರವೇ ಸಿದ್ಧಪಡಿಸಿ, ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು’ ಎಂದು ಸಣ್ಣ ನೀರಾವರಿ ಸಚಿವರು ಹಾಗೂ ಕಾವೇರಿ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಸಿ.ಎಸ್. ಪುಟ್ಟರಾಜು ಹೇಳಿದರು. ಬೆಂಗಳೂರಿನ ವಿಧಾನ ಸೌಧದ ಕೊಠಡಿ ಸಂಖ್ಯೆ 303ರಲ್ಲಿ ಬುಧವಾರ ನಡೆದ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರೈತರ ವ್ಯವಸಾಯಕ್ಕೆ ಸಹಕಾರಿಯಾಗು ವಂತಹ ಬಹಳಷ್ಟು…

ಮನೆಗಳ್ಳರ ಬಂಧನ: 18.56 ಲಕ್ಷ ಮೌಲ್ಯದ ವಸ್ತುಗಳ ವಶ
ಮಂಡ್ಯ

ಮನೆಗಳ್ಳರ ಬಂಧನ: 18.56 ಲಕ್ಷ ಮೌಲ್ಯದ ವಸ್ತುಗಳ ವಶ

July 12, 2018

ಶ್ರೀರಂಗಪಟ್ಟಣ:  ಹಗಲು ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ, ಅವರಿಂದ 18,56,800ರೂ. ಮೌಲ್ಯದ ಚಿನ್ನ, ಬೆಳ್ಳಿ, ಟಿವಿ, ಸೀರೆಯನ್ನು ಕೆಆರ್‌ಎಸ್‌ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಾಲರಾಜ್(62), ಸೋಮಶೇಖರ್ ಅಲಿಯಾಸ್ ಸೋಮ(32), ಶ್ರೀಕಂಠ ಅಲಿಯಾಸ್ ಕಂಠ (32), ರಾಜು ಬಿನ್ ನಾಗರಾಜ(19) ಬಂಧಿತರಾಗಿದ್ದು, ಇವರೆಲ್ಲರು ಮೈಸೂರು ಜಿಲ್ಲೆ ಕೆ.ಆರ್.ನಗರದ ಪಟ್ಟಣದ ಬೋವಿ ಜನಾಂಗದ ಶ್ರೀರಾಮ ಬ್ಲಾಕ್‍ನ ನಿವಾಸಿ ಗಳಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದರು. ಈ ನಾಲ್ವರು ಟಾಟಾ ಏಸ್ ವಾಹನವನ್ನು ಬಳಸಿಕೊಂಡು ಹಾಡುಹಗಲೇ ಮನೆಗಳ ಕಳ್ಳತನ ಮಾಡುತ್ತಿರುವ ಬಗ್ಗೆ…

ಮೇಲುಕೋಟೆ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ
ಮಂಡ್ಯ

ಮೇಲುಕೋಟೆ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ

July 12, 2018

ಪಾಂಡವಪುರ:  ‘ಮೇಲುಕೋಟೆ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿ ಆ ಮೂಲಕ ಕ್ಷೇತ್ರದ ಸರ್ವ ತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು’ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಹೇಳಿದರು. ತಾಲೂಕಿನ ಕದಲಗೆರೆ ಗ್ರಾಮದಲ್ಲಿ ನೂತನ ಬೋರೆ ದೇವರ ದೇವಸ್ಥಾನ ಉದ್ಘಾಟನೆ ಹಾಗೂ ಕಳಸ ಪ್ರತಿಷ್ಠಾಪನ ಮಹೋತ್ಸವ ಉದ್ಘಾಟಿಸಿ ಅವರು ಮಾತ ನಾಡಿದರು. ಮೇಲುಕೋಟೆ ಕ್ಷೇತ್ರದಲ್ಲಿ ಅಭಿವೃದ್ಧಿ ಪ್ರಾಧಿಕಾರ ವನ್ನು ರಚಿಸಿ ಕ್ಷೇತ್ರದ ಅಭಿವೃದ್ಧಿ ಪಡಿಸಲಾಗುವುದು. ಜೊತೆಗೆ, ಕ್ಷೇತ್ರದ ಎಲ್ಲಾ ಕಲ್ಯಾಣ ಗಳನ್ನು ಸಣ್ಣ ನೀರಾವರಿ ಇಲಾಖೆಯಿಂದಲೇ ಅಭಿವೃದ್ಧಿಪಡಿಸುತ್ತೇನೆ ಎಂದು…

ಹಾಲು ಶೀತಲೀಕರಣ ಘಟಕಕ್ಕೆ ಚಾಲನೆ: ಶೀಘ್ರದಲ್ಲಿಯೇ ಮನ್‍ಮುಲ್ ಕ್ಯಾನ್‍ಮುಕ್ತ ಒಕ್ಕೂಟ
ಮಂಡ್ಯ

ಹಾಲು ಶೀತಲೀಕರಣ ಘಟಕಕ್ಕೆ ಚಾಲನೆ: ಶೀಘ್ರದಲ್ಲಿಯೇ ಮನ್‍ಮುಲ್ ಕ್ಯಾನ್‍ಮುಕ್ತ ಒಕ್ಕೂಟ

July 12, 2018

ಮಂಡ್ಯ: ತಾಲೂಕಿನ ಉಮ್ಮಡಹಳ್ಳಿ ಗ್ರಾಮದ ಹಾಲು ಉತ್ಪಾ ದಕರ ಸಹಕಾರ ಸಂಘದಲ್ಲಿ ನಿರ್ಮಿಸಿರುವ ಹಾಲು ಶೀತಲೀಕರಣ ಘಟಕವನ್ನು ಬುಧವಾರ ಮನ್‍ಮುಲ್ ಅಧ್ಯಕ್ಷ ಕದಲೂರು ರಾಮಕೃಷ್ಣ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಈಗಾ ಗಲೇ 190 ಬಿಎಂಸಿ ಕೇಂದ್ರಗಳನ್ನು ಸ್ಥಾಪಿಸ ಲಾಗಿದೆ. ಇನ್ನು 105 ಬಿಎಂಸಿ ಕೇಂದ್ರಗಳು ಆಗಬೇಕಿದ್ದು, ಒಟ್ಟು ಜಿಲ್ಲೆಯಲ್ಲಿ 200 ಬಿಎಂಸಿ ಕೇಂದ್ರಗಳು ಆರಂಭಿಸಲಾಗು ವುದು. ಎಲ್ಲವೂ ಪೂರ್ಣಗೊಂಡಲ್ಲಿ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಕ್ಯಾನ್‍ಮುಕ್ತ ಒಕ್ಕೂಟ ವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು. ಮನ್‍ಮುಲ್ ಕೇವಲ…

1 84 85 86 87 88 108
Translate »