ನೇಪಾಳದಲ್ಲಿ ಭಾರೀ ಮಳೆಗೆ ಸಿಲುಕಿರುವ ಮೈಸೂರು ಯಾತ್ರಾರ್ಥಿಗಳ ಬಗ್ಗೆ ಜಿಲ್ಲಾಡಳಿತದಿಂದ ಮಾಹಿತಿ ಸಂಗ್ರಹ, ಸುರಕ್ಷಿತವಾಗಿ ಕರೆತರಲು ನಿರಂತರ ಪ್ರಯತ್ನ ಮೈಸೂರು: ಮಾನಸ ಸರೋವರ ಯಾತ್ರೆಗೆ ತೆರಳಿರುವ ಮೈಸೂ ರಿನ 12 ಮಂದಿ ಯಾತ್ರಾರ್ಥಿಗಳು ಸುರಕ್ಷಿತ ಸ್ಥಳದಲ್ಲಿದ್ದಾರೆ ಎಂಬುದನ್ನು ಜಿಲ್ಲಾಡಳಿತ ದೃಢಪಡಿಸಿಕೊಂಡಿದೆ. ಮಾನಸ ಸರೋವರ ಯಾತ್ರೆಗೆ ತೆರಳಿದ್ದ ರಾಜ್ಯದ ಒಟ್ಟು 290 ಮಂದಿ ನೇಪಾಳದ ಸಿಮಿಕೋಟ್ನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಸಿಲುಕಿ ಪರದಾಡುತ್ತಿದ್ದಾರೆಂಬ ಮಾಹಿತಿ ಸೋಮವಾರ ರಾತ್ರಿ ಸಿಕ್ಕಿತ್ತು. ಆ ಪೈಕಿ ಮೈಸೂರಿನ 12 ಮಂದಿ ಯಾತ್ರಾರ್ಥಿ ಗಳೂ…
ಮಂಡ್ಯ ಲೋಕಸಭಾ ಕ್ಷೇತ್ರದ ಮೇಲೆ ಸಾಫ್ಟ್ ವೇರ್ ಉದ್ಯಮಿಗಳ ಕಣ್ಣು
July 3, 2018ಮಂಡ್ಯ: ಲೋಕಸಭಾ ಕ್ಷೇತ್ರದ ಮೇಲೆ ಐಟಿ ಉದ್ಯಮಿಗಳ ಕಣ್ಣು ಬಿದ್ದಿದೆ. ಕ್ಷೇತ್ರದ ಮೇಲೆ ಒಬ್ಬೊಬ್ಬರೇ ಒಲವು ತೋರುತ್ತಿದ್ದು ಮತ್ತಷ್ಟು ಕುತೂಹಲಕ್ಕೆ ಕಾರಣ ವಾಗಿದೆ. ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಮೇಲುಕೋಟೆ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಸೋಲು ಅನುಭವಿಸಿರೋ ಉದ್ಯಮಿ, ರೈತ ನಾಯಕ ದಿವಂಗತ ಕೆ.ಎಸ್. ಪುಟ್ಟಣ್ಣಯ್ಯ ಪುತ್ರ ದರ್ಶನ್ ಪುಟ್ಟಣ್ಣಯ್ಯ ಸ್ಪರ್ಧೆಗೆ ರೈತ ಸಂಘದ ಕೆಲ ಕಾರ್ಯಕರ್ತರು ಒತ್ತಡ ಹಾಕುತ್ತಿದ್ದಾರೆ. ದರ್ಶನ್ ಪುಟ್ಟಣ್ಣಯ್ಯ ತಮ್ಮ ಅಮೆರಿಕಾ ಕಂಪನಿಯನ್ನು ಮಾರಾಟ ಮಾಡಿ, ಮೈಸೂರಿನಲ್ಲಿ ವ್ಯವಹಾರ ಮಾಡೋ ಜೊತೆಗೆ ರೈತ ಹೋರಾಟ…
ಎಲ್ಲಾ ಜಿಲ್ಲೆಗಳಲ್ಲೂ ಜಾನಪದ ಲೋಕ ಸ್ಥಾಪನೆಯಾಗಲಿ
July 2, 2018ಮಂಗಲದಲ್ಲಿ ನಡೆದ ಭರ್ಜರಿ ನಾಟಿಕೋಳಿ ಸಾಂಬಾರ್, ರಾಗಿ ಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಕೆಟಿಎಸ್, 7 ಮುದ್ದೆ ಉಂಡ ಮೀಸೆ ಈರೇಗೌಡಗೆ ಜಯ ಮಂಡ್ಯ: ಜಾನಪದ ತಜ್ಞ ಎಚ್.ಎಲ್.ನಾಗೇಗೌಡರು ರಾಮನಗರ ದಲ್ಲಿ ಸ್ಥಾಪಿಸಿರುವ ಜಾನಪದ ಲೋಕದ ಶಾಖೆಯನ್ನು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರ ಗಳಲ್ಲೂ ಸ್ಥಾಪಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ತಿಳಿಸಿದರು. ತಾಲೂಕಿನ ಮಂಗಲ ಗ್ರಾಮದಲ್ಲಿಂದು ಆಯೋಜಿಸಲಾಗಿದ್ದ ನಾಟಿಕೋಳಿ ಸಾಂಬಾರ್, ರಾಗಿ ಮುದ್ದೆ ಉಣ್ಣುವ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಆಧು ನಿಕತೆಯ ಸೋಗಿನಲ್ಲಿ ‘ನಶಿಸಿ…
ಕುಕ್ಕರ್ ವಿಷಲ್ ನುಂಗಿ ಮಗು ಸಾವು
July 2, 2018ಮದ್ದೂರು: ಕುಕ್ಕರ್ನ ವಿಷಲ್ ನುಂಗಿ ಮಗು ಮೃತಪಟ್ಟಿರುವ ಘಟನೆ ತಾಲೂಕಿನ ನಗರಕೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಹಾಗೂ ನ್ಯಾಯಬೆಲೆ ಅಂಗಡಿ ಮಾಲೀಕ ಜಿ.ಶಿವರಾಮಯ್ಯ ಅವರ ಪುತ್ರ ಮರಿನಿಂಗೇಗೌಡ, ರೂಪ ದಂಪತಿ ಪುತ್ರ ಭುವನ್ಗೌಡ(1) ಸಾವನ್ನಪ್ಪಿದ ಮಗು. ಶನಿವಾರ ರಾತ್ರಿ ಮಗುವಿನ ಅಜ್ಜಿ ಪುಟ್ಟ ಲಿಂಗಮ್ಮ ಅವರು ಮನೆಯಲ್ಲಿ ಅಡುಗೆ ಮಾಡುತ್ತಿದ್ದ ವೇಳೆ ಅಲ್ಲೇ ಇದ್ದ ಕುಕ್ಕರ್ನ ವಿಷಲ್ ಅನ್ನು ಮಗು ಭುವನ್ಗೌಡ ಬಾಯಿಗೆ ಹಾಕಿಕೊಂಡು ಆಟವಾಡುತ್ತಿತ್ತು. ಈ ವೇಳೆ ಬಾಯಲಿದ್ದ ವಿಷಲ್ ಅನ್ನು ಮಗು ನುಂಗಿದೆ….
ಮಂಡ್ಯ ಅಭಿವೃದ್ಧಿಗೆ ಪತ್ರಕರ್ತರ ಸಹಕಾರ ಅಗತ್ಯ: ಎಂ.ಶ್ರೀನಿವಾಸ್
July 2, 2018ಮಂಡ್ಯ: ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ಮೈಸೂರು ನಗರ ಗಳ ನಡುವೆ ದೊಡ್ಡ ಹಳ್ಳಿಯಂತಿರುವ ಮಂಡ್ಯ ನಗರದ ಅಭಿವೃದ್ಧಿಗೆ ಪತ್ರಕರ್ತರು ಸೇರಿದಂತೆ ಎಲ್ಲರ ಸಹಕಾರ ಅಗತ್ಯ ಎಂದು ಶಾಸಕ ಎಂ.ಶ್ರೀನಿವಾಸ್ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿಂದು ಜಿಲ್ಲಾ ಪತ್ರಕರ್ತರ ಮತ್ತು ಮುದ್ರಣಕಾರರ ಸಹ ಕಾರ ಸಂಘ ಆಯೋಜಿಸಿದ್ದ ಕನ್ನಡ ಪತ್ರಿಕಾ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ‘ಒಂದು ಕಾಲದಲ್ಲಿ ಪ್ರಪಂಚಕ್ಕೆ ಸಕ್ಕರೆ ನೀಡುತ್ತಿದ್ದ ಜಿಲ್ಲೆ ಇಂದು ಕೈಗಾರಿಕೆ, ವ್ಯಾಪಾರ, ಕೃಷಿಯಲ್ಲಿ ಹಿಂದುಳಿದಿದೆ. ರೈತರು ಸಾಲದ ಸುಳಿಯಲ್ಲಿ ಸಿಲುಕಿ…
ಎಸ್ಟಿಜಿಯಲ್ಲಿ ವಿದ್ಯಾರ್ಥಿ ಪರಿಷತ್ ಚುನಾವಣೆ
July 2, 2018ಚಿನಕುರಳಿ: ಇಲ್ಲಿನ ಎಸ್ಟಿಜಿ ಪಬ್ಲಿಕ್ ಶಾಲೆಯಲ್ಲಿ 2018-19ನೇ ಸಾಲಿನ ವಿದ್ಯಾರ್ಥಿ ಪರಿಷತ್ ಚುನಾವಣೆ ನಡೆಯಿತು. ಶಾಲೆಯ ಹೆಡ್ಬಾಯ್ ಹಾಗೂ ಹೆಡ್ ಗರ್ಲ್ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಿಗದಿ ಯಾಗಿತ್ತು. ಹೆಡ್ಬಾಯ್ ಸ್ಥಾನಕ್ಕೆ 9ನೇ ತರಗತಿ ವಿದ್ಯಾರ್ಥಿಗಳಾದ ಎಂ.ಸಂಜಯ್, ಎನ್. ನರೇಶ್, ಕೆ.ಪಿ.ಯೋಗೇಶ್, ಟಿ. ವಿಲಾಸ್ಗೌಡ, ಕೆ.ಎನ್.ತೇಜಸ್, ಕೆ.ಎನ್. ಹರ್ಷಿತ್ ಚುನಾವಣೆಗೆ ಸ್ಪರ್ಧಿಸಿದ್ದರು. ಹೆಡ್ಗರ್ಲ್ ಸ್ಥಾನಕ್ಕೆ 9ನೇ ತರಗತಿ ವಿದ್ಯಾರ್ಥಿ ನಿಯರಾದ ಎಸ್.ಭವಾನಿ, ಜಿ.ಸಿ.ಗಾನವಿ, ಪಿ.ಎಂ.ಅಪೂರ್ವ, ಎನ್.ಹಿತೈಶಿ, ಪಿ.ಜಿ. ರಕ್ಷಿತಾ ಹಾಗೂ ಕೆ.ವಿ ದಿಶಾ ಸ್ಪರ್ಧಿಸಿದ್ದರು. ಈ ವಿದ್ಯಾರ್ಥಿ…
ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟನೆ
July 2, 2018ಕೆ.ಆರ್.ಪೇಟೆ: ಪಟ್ಟಣದ ಪುರಸಭಾ ವ್ಯಾಪ್ತಿಯ ಹೊಸಹೊಳಲಿನ ವಿಜಯನಗರ ಬಡಾವಣೆ ಮುಖ್ಯರಸ್ತೆ ಅಭಿ ವೃದ್ಧಿ ಪಡಿಸುವಂತೆ ಆಗ್ರಹಿಸಿ ಪುರಸಭೆ ಅಧಿಕಾರಿಗಳ ವಿರುದ್ಧ ಇಲ್ಲಿನ ನಿವಾಸಿಗಳು ಪ್ರತಿಭಟನೆ ನಡೆಸಿದರು. ಹೊಸಹೊಳಲು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹೆಚ್.ಆರ್. ನಂದಕುಮಾರ್, ಮುಖಂಡರಾದ ಹೆಚ್.ಡಿ. ಉದಯಕುಮಾರ್, ವೆಂಕಟಶೆಟ್ಟಿ, ಎಚ್.ಆರ್. ವೆಂಕಟೇಶ್, ರಾಘು, ಹೆಚ್.ವಿ.ರಘುನಾಥ್, ಜಿ.ವೆಂಕಟೇಶ್, ಸುನೀತಾ, ಭಾಗ್ಯ, ಪುಷ್ಪಾಂಜಲಿ ಮತ್ತಿತರರ ನೇತೃತ್ವದಲ್ಲಿ ಬೀದಿ ಗಳಿದು ಪ್ರತಿಭಟನೆ ನಡೆಸಿದ ಪ್ರತಿಭಟ ನಾಕಾರರು, ಕಳೆದ 35ವರ್ಷಗಳಿಂದ ವಿಜಯನಗರ ಬಡಾವಣೆ ಮುಖ್ಯ ರಸ್ತೆ ಯನ್ನು…
ದಲಿತರೊಂದಿಗೆ ಬಹಿರಂಗ ಸಂವಾದ ನಡೆಸಿದ ಶಾಸಕ ರವೀಂದ್ರ ಶ್ರೀಕಂಠಯ್ಯ
July 2, 2018ಮಂಡ್ಯ: ಇದೇ ಪ್ರಥಮ ಬಾರಿಗೆ ಪರಿಶಿಷ್ಠ ಜಾತಿ ಮತ್ತು ಪಂಗಡದವರೊಂದಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಇಂದು ನಡೆಸಿದ ಸಂವಾದದಲ್ಲಿ ಸಮಸ್ಯೆಗಳ ಮಹಾ ಪೂರವೇ ಹರಿದು ಬಂತು..! ನಗರದ ಗಾಂಧಿ ಭವನದಲ್ಲಿಂದು ಆಯೋ ಜಿಸಲಾಗಿದ್ದ ಶ್ರೀರಂಗಪಟ್ಟಣ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಪರಿಶಿಷ್ಟ ಜಾತಿ ಹಾಗೂ ಪಂಗಡದವರೊಂದಿಗೆ ಸಂವಾದ ಕಾರ್ಯ ಕ್ರಮದಲ್ಲಿ ಕಾವೇರಿ ನದಿ ದಡದಲ್ಲಿದ್ದರೂ ಮಹದೇವಪುರಕ್ಕೆ ಶುದ್ಧ ಕುಡಿಯುವ ನೀರೇ ಇಲ್ಲಾ…. ಸ್ಮಶಾನ ಒತ್ತುವರಿಯಾಗಿದ್ದು ಹೆಣ ಹೂಳಲು ಜಾಗವೇ ಇಲ್ಲ…ರಸ್ತೆ, ಚರಂಡಿ ಮಾಡಿಸಿ ಕೊಡಿ… ನಿರಂತರ ದೌರ್ಜನ್ಯ…
ಪಾಂಡವಪುರ ಸರ್ವಾಂಗೀಣ ಅಭಿವೃದ್ಧಿಗೆ ವಿಶೇಷ ಯೋಜನೆ
July 2, 2018ಪಾಂಡವಪುರ: ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಈಗಾಗಲೇ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟ ರಾಜು ತಿಳಿಸಿದರು. ಭಾನುವಾರ ಬೆಳಿಗ್ಗೆ ಪಟ್ಟಣದ ಕೃಷ್ಣಾ ನಗರದ ತಮ್ಮ ನಿವಾಸದಲ್ಲಿ ಸಾರ್ವಜನಿಕ ರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಪಾಂಡವಪುರದ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಲಾಗಿದೆ. ಮೈಸೂರು ಉಪ ನಗರ ಮಾದರಿಯಲ್ಲಿ ಪಟ್ಟಣಕ್ಕೆ ಅಗತ್ಯವಿರುವ ರಸ್ತೆ, ಯುಜಿಡಿ, ಪಾರ್ಕ್, ಸುಸಜ್ಜಿತ ಆಸ್ಪತ್ರೆ ಕಟ್ಟಡ, ಈಜುಕೊಳ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದರು. ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೂ ಹಲವು…
ಮಕ್ಕಳಿಗೆ ಪಾಠಮಾಡದೆ ರಾಜಕಾರಣದಲ್ಲಿ ಶಿಕ್ಷಕರ ಕಾಲಹರಣ
June 30, 2018ಮಂಡ್ಯ: ಮಕ್ಕಳಿಗೆ ಸರಿಯಾಗಿ ಪಾಠ ಮಾಡದೆ ರಾಜಕೀಯ ನಾಯಕರ ಜೊತೆ ತಿರುಗಾಡುತ್ತಾ ಕಾಲಹರಣ ಮಾಡುತ್ತಿ ರುವ ಶಿಕ್ಷಕರ ವಿರುದ್ಧ ತಾಪಂ ಸಭೆಯಲ್ಲಿಂದು ಆಕ್ರೋಶ ವ್ಯಕ್ತವಾಯಿತು. ತಾಪಂ ಸಭಾಂಗಣದಲ್ಲಿಂದು ಅಧ್ಯಕ್ಷೆ ಶೈಲಜಾ ಅಧ್ಯಕ್ಷತೆಯಲ್ಲಿ ನಡೆದ 2018-19ನೇ ಸಾಲಿನ ತಾಪಂ ಕಾರ್ಯಕ್ರಮಗಳ ಕ್ರಿಯಾ ಯೋಜನೆ ಸಭೆಯಲ್ಲಿ ಮಾತನಾಡಿದ ಸದಸ್ಯ ಬೋರೇಗೌಡ, ಶಿಕ್ಷಕರು ಸಮರ್ಪಕ ವಾಗಿ ಕೆಲಸ ನಿರ್ವಹಿಸುತ್ತಿಲ್ಲ. ಸಾರ್ವ ಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಓಡಾಡಿ ಕೊಂಡಿರುತ್ತಾರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು….