ಹೆಚ್.ಡಿ.ಕೋಟೆ, ಫೆ.29(ಮಂಜು)- ಸರ್ವಜ್ಞರು ನಾಡಿನ ವಿಶಿಷ್ಟ ಕವಿಯಾಗಿದ್ದು, ಬದುಕಿಗೆ ಅಗತ್ಯವಾಗಿರುವ ಎಲ್ಲಾ ವಿಷಯಗಳ ಬಗ್ಗೆ ತಮ್ಮ ತ್ರಿಪದಿಗಳಲ್ಲಿ ಬೆಳಕು ಚೆಲ್ಲಿದ್ದಾರೆ ಎಂದು ತಹಶೀಲ್ದಾರ್ ಆರ್.ಮಂಜುನಾಥ್ ತಿಳಿಸಿದರು. ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತ್ರಿಪದಿಗಳಲ್ಲಿ ಜಾತ್ಯತೀತ, ಮಾನವೀಯ ಮೌಲ್ಯ ಕಾಣಬಹುದಾಗಿದ್ದು, ಇವು ಸಾರ್ವಕಾಲಿಕ ಸತ್ಯವನ್ನು ತಿಳಿಸುತ್ತದೆ. ತ್ರಿಪದಿಯ ಮೂಲಕ ಸರ್ವಜ್ಞ ಸಮಾನತೆ ಸಂದೇಶ ಸಾರಿದರು. ಇವರ ಆದರ್ಶ ಮತ್ತು ತತ್ವಗಳನ್ನು ಇಂದಿನ ಯುವ ಜನರು ಅಳವಡಿಕೊಳ್ಳುವುದು…
ಬಿಎಸ್ವೈ ಹುಟ್ಟುಹಬ್ಬ: ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ
February 28, 2020ತಿ.ನರಸೀಪುರ, ಫೆ.27(ಎಸ್.ಕೆ)- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ 78ನೇ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ತಿ.ನರಸೀಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕರೋಹಟ್ಟಿ ಮಹದೇವಯ್ಯ ಮಾತನಾಡಿ, ರೈತ ಹಾಗೂ ಜನಪರ ಹೋರಾಟದ ಮೂಲಕವೇ ರಾಜಕಾರಣ ಆರಂಭಿಸಿದ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯ ಕಂಡಂತಹ ಧೀಮಂತ ರಾಜಕಾರಣಿಯಾಗಿದ್ದಾರೆ. ಶಾಸಕರಾಗಿ, ವಿಪಕ್ಷ ನಾಯಕರಾಗಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಅಧಿಕಾರಕ್ಕೆ ತಂದಂತಹ ಯಡಿಯೂರಪ್ಪ ಅವರು ಮುಂದಿನ…
ಮಠಗಳಿಂದ ದೇಶಕ್ಕೆ ಸಂಸ್ಕಾರಯುತ ಮಕ್ಕಳ ಬಳುವಳಿ
February 9, 2020ತಿ.ನರಸೀಪುರ, ಫೆ. 8(ಎಸ್ಕೆ)-ದಾಸೋಹ ದೊಂದಿಗೆ ಶಿಕ್ಷಣವನ್ನೂ ನೀಡುವ ಮಠ-ಮಾನ್ಯಗಳು ದೇಶಭಕ್ತಿ ಹಾಗೂ ಸಂಸ್ಕಾರ ಯುತ ಮಕ್ಕಳನ್ನು ದೇಶಕ್ಕೆ ಬಳುವಳಿಯಾಗಿ ನೀಡುತ್ತಿವೆ ಎಂದು ಮುಜರಾಯಿ, ಮೀನು ಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಶಂಸಿಸಿದರು. ತಾಲೂಕಿನ ಮುಡುಕುತೊರೆಯಲ್ಲಿರುವ ಜಗದ್ಗುರು ಶ್ರೀ ಶಿವರಾತ್ರೀಶ್ವರ ಮಂಗಳ ಮಂಟಪದಲ್ಲಿ ಶುಕ್ರವಾರ ಸಂಜೆ ನಡೆದ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು ಮಾತನಾಡಿದರು. ಧಾರ್ಮಿಕ ಕೇಂದ್ರಗಳಾಗಿರುವ ಮಠ ಗಳು ಅಕ್ಷರ ದಾಸೋಹದ ಮೂಲಕ ಜ್ಞಾನ ಹಾಗೂ ಸಂಸ್ಕಾರವಂತ ಪ್ರಜೆ…
ಸಾಲ ಬಾಧೆ: ರೈತ ಆತ್ಮಹತ್ಯೆ
February 9, 2020ಹನಗೋಡು, ಫೆ. 8-ಸಾಲ ಬಾಧೆ ಯಿಂದ ಮನನೊಂದು ರೈತ ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಹುಣಸೂರು ತಾಲೂ ಕಿನ ನೇರಳಕುಪ್ಪೆ ಗ್ರಾಮ ದಲ್ಲಿ ಶನಿವಾರ ನಡೆದಿದೆ. ಹೋಬಳಿಯ ನೇರಳಕುಪ್ಪೆ ನಿವಾಸಿ ಜಯರಾಮ(40) ಮೃತ ರೈತ. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ವಿವರ: ಜಯರಾಮ ತಮ್ಮ 6 ಎಕರೆ ಜಮೀನಿನಲ್ಲಿ ಬೇಸಾಯಕ್ಕಾಗಿ ಹುಣಸೂರು ಎಂಡಿಸಿಸಿ ಬ್ಯಾಂಕ್ನಲ್ಲಿ 2 ಲಕ್ಷ ಹಾಗೂ ಎಲ್ಅಂಡ್ಟಿ ಫೈನಾನ್ಸ್ನಿಂದ ಟ್ರ್ಯಾಕ್ಟರ್ ಖರೀದಿಗೆ 7 ಲಕ್ಷ ರೂ. ಸೇರಿದಂತೆ ವಿವಿಧೆಡೆ ಮಾಡಿದ್ದ 3 ಲಕ್ಷ ರೂ. ಕೈಸಾಲ…
ತಾಯಿಯಿಂದ ಬೇರ್ಪಟ್ಟ ಮರಿಯಾನೆ ಮತ್ತಿಗೋಡು ಶಿಬಿರಕ್ಕೆ ಸ್ಥಳಾಂತರ
February 9, 2020ಹನಗೋಡು, ಫೆ. 8(ಮಹೇಶ)-ನಾಲ್ಕು ದಿನಗಳ ಹಿಂದೆ ಕಾಡಾನೆ ಹಿಂಡಿನಿಂದ ಬೇರ್ಪಟ್ಟು ತಾಯಿಗಾಗಿ ಪರಿತಪಿಸುತ್ತಿರುವ ಸುಮಾರು 20 ದಿನದ ಹೆಣ್ಣಾನೆ ಮರಿಯನ್ನು ಮತ್ತಿಗೋಡು ಅರಣ್ಯ ಆನೆ ಶಿಬಿರಕ್ಕೆ ಸ್ಥಳಾಂತರಿಸಲಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಹಳ್ಳಿ ಅರಣ್ಯ ವಲಯದ ಭರತ ವಾಡಿ ಗ್ರಾಮದತ್ತ ಮೇವು ಅರಸಿ ಬಂದಿದ್ದ ಕಾಡಾನೆ ಹಿಂಡು ಮತ್ತೆ ಕಾಡು ಸೇರುವ ಬರದದಲ್ಲಿ 20 ದಿನಗಳ ಹೆಣ್ಣಾನೆ ಮರಿ ತಾಯಿಂದ ಬೇರ್ಪಟ್ಟಿತ್ತು. ಇದನ್ನು ಅರಿತ ಭರತವಾಡಿ ಗ್ರಾಮಸ್ಥರು ಮರಿಯಾನೆಯನ್ನು ಉಪಚರಿಸಿ, ವೀರನ ಹೊಸಹಳ್ಳಿಯ ವಲಯ ಅರಣ್ಯಾಧಿಕಾರಿ ರವೀಂದ್ರ…
ಹಾಡಹಗಲೇ ಕಾರು ಗಾಜು ಒಡೆದು ಲಕ್ಷ ರೂ. ಕಳವು
February 6, 2020ಪಿರಿಯಾಪಟ್ಟಣ, ಫೆ.5(ವೀರೇಶ್)- ಹಾಡಹಗಲೇ ಕಾರಿನ ಗಾಜು ಒಡೆದು 1 ಲಕ್ಷ ರೂ. ನಗದನ್ನು ಕಳವು ಮಾಡಿರುವ ಘಟನೆ ಬುಧವಾರ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ವೆಂಕಟೇಶ್ವರ ಗ್ರಾನೈಟ್ ಮತ್ತು ಟೈಲ್ಸ್ ಶೋರೂಂ ಮಾಲೀಕ ಅಣ್ಣಪ್ಪ ಹಣ ಕಳೆದುಕೊಂಡವರು. ಇವರು ಬುಧವಾರ ಮಧ್ಯಾಹ್ನ ಪಟ್ಟಣದ ಸಿಂಡಿಕೇಟ್ ಬ್ಯಾಂಕ್ನಿಂದ 1 ಲಕ್ಷ ರೂ. ಡ್ರಾ ಮಾಡಿ ತಮ್ಮ ಮಾರುತಿ ಸ್ವಿಫ್ಟ್ ಡಿಸೈರ್ ಕಾರಿ (ಕೆಎ.12, ಝಡ್ 3191)ನ ಡ್ಯಾಶ್ಬೋರ್ಡ್ನಲ್ಲಿಟ್ಟು, ಊಟಕ್ಕೆ ಹೋಟೆಲ್ಗೆ ಹೋಗಲು ಬಸವೇಶ್ವರ ವೃತ್ತದ ಬಟ್ಟೆ ಅಂಗಡಿ ಮುಂದೆ ಕಾರ್…
ರೈತರ ಸಾಲಮನ್ನಾ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಧರಣಿ
February 6, 2020ಹುಣಸೂರು, ಫೆ.5(ಕೆಕೆ)-ರೈತರ ಸಾಲಮನ್ನಾಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ರೈತ ಸಂಘದಿಂದ ಧರಣಿ ನಡೆಸಿ, ಎಸಿ ಮೂಲಕ ರಾಜ್ಯ ಪಾಲರಿಗೆ ಹಕ್ಕೊತ್ತಾಯದ ಮನವಿ ಸಲ್ಲಿಸಲಾಯಿತು. ನಗರದ ಉಪ ವಿಭಾಗಾಧಿಕಾರಿ ಕಚೇರಿ ಎದುರು ಬುಧವಾರ ಜಮಾವಣೆಗೊಂಡ ರೈತರು, ಸಾಲಮನ್ನಾ ಸಮಸ್ಯೆ ಪರಿಹರಿಸುವಂತೆ ಘೋಷಣೆ ಕೂಗಿದರು. ರಾಜ್ಯದ ಹಿಂದಿನ ಸಮ್ಮಿಶ್ರ ಸರ್ಕಾರ ರೈತರ ಸಾಲಮನ್ನಾ ಯೋಜನೆ ಜಾರಿಗೆ ತಂದಿತು. ಇದರಿಂದ ಕೆಲ ರೈತರ ಸಾಲ ಭಾಗಶಃ ಮನ್ನಾ ಆಗಿದೆ. ಉಳಿದ ರೈತರ ಸಾಲ ಹಂತ-ಹಂತವಾಗಿ ಮನ್ನಾ ಆಗುತ್ತಿದೆ. ಪ್ರಸಕ್ತ ಸಾಲಿನಲ್ಲಿ…
ಈ ಬಾರಿ ಕಬಿನಿ ಬಲದಂಡೆ ನಾಲೆಗೆ ನೀರಿಲ್ಲ
February 6, 2020ನಂಜನಗೂಡು, ಫೆ. 5 (ರವಿ)- ಈ ಬಾರಿ ಬೇಸಿಗೆ ಬೆಳೆಗೆ ಕಬಿನಿ ಬಲದಂಡೆ ನಾಲೆಯ ಅಚ್ಚುಕಟ್ಟುದಾರರಿಗೆ ನೀರು ಬಿಡುವ ಪ್ರಸ್ತಾಪವಿಲ್ಲ ಎಂದು ಕಾವೇರಿ ನೀರಾವರಿ ನಿಗಮದ ಹುಲ್ಲಹಳ್ಳಿ ವ್ಯಾಪ್ತಿಯ ಅಧಿಕಾರಿ ರವೀಶ ತಿಳಿಸಿದರು. ಮಂಗಳವಾರ ತಾಲೂಕು ಆಡಳಿತ ಸ್ಥಳೀಯ ಅಂಬೇಡ್ಕರ್ ಭವನದಲ್ಲಿ ನಡೆದ ರೈತರ ಕುಂದು ಕೊರತೆಗಳ ಸಭೆಯಲ್ಲಿ ಅವರು ಮಾತನಾಡಿದರು. ಸಭೆಯಲ್ಲಿ ಕತ್ವಾಡಿಪುರದ ಶಿವಣ್ಣ ಮಾತನಾಡಿ, ಕಬಿನಿ ಅಚ್ಚುಕಟ್ಟು ಪ್ರದೇಶದ ಕೃಷಿಕರಾದ ನಾವೆಲ್ಲಾ ಈ ಸಾಲಿನ ನೆರೆ ಹಾವಳಿಯಿಂದಾಗಿ ಸಾಕಷ್ಠು ಹಾನಿ ಅನು ಭವಿಸಿದ್ದೇವೆ. ಜಲಾಶಯದಲ್ಲೂ…
ಕೆ.ಆರ್.ನಗರ-ಮೈಸೂರು ತಡೆರಹಿತ ಬಸ್ ಸೇವೆಗೆ ಚಾಲನೆ
February 4, 2020ಹಳ್ಳಿಹಕ್ಕಿ ಸತ್ಯಾಂಶ ಬರೆಯಲಿ ಮಾಜಿ ಸಚಿವ ಎ.ಹೆಚ್.ವಿಶ್ವನಾಥ್ ಬಗ್ಗೆ ಸಾ.ರಾ. ವ್ಯಂಗ್ಯ ಕೆ.ಆರ್.ನಗರ, ಫೆ.3(ಕೆಟಿಆರ್)-ಹಳ್ಳಿಹಕ್ಕಿ ಪುಸ್ತಕದಲ್ಲಿ ಸತ್ಯಾಂಶ ಬರೆಯಲಿ, ಅದನ್ನು ನಾನೂ ಓದುತ್ತೇನೆ ಎಂದು ಮಾಜಿ ಸಚಿವ, ಶಾಸಕ ಸಾ.ರಾ.ಮಹೇಶ್, ಎ.ಹೆಚ್. ವಿಶ್ವನಾಥ್ ಹೆಸರೇಳದೆ ವ್ಯಂಗ್ಯವಾಡಿದರು. ಪಟ್ಟಣ ಜನತೆಯ ಬಹುದಿನದ ಬೇಡಿಕೆ ಯಾದ ಕೆ.ಆರ್.ನಗರ-ಮೈಸೂರಿಗೆ ತಡೆರಹಿತ 6 ಬಸ್ಗಳ ಸಂಚಾರ ಸೇವೆಗೆ ಚಾಲನೆ ನೀಡಿದ ಅವರು, ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಈ ಹಿಂದೆ ಸಂಗೋಳ್ಳಿ ರಾಯಣ್ಣ ಸಮು ದಾಯ ಭವನ ಉದ್ಘಾಟನೆಗೆ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ತಾಲೂಕು…
ಒತ್ತುವರಿ ತೆರವಿಗೆ ಬಂದ ಅಧಿಕಾರಿಗಳು ಬರಿಗೈಯಲ್ಲಿ ವಾಪಸ್
February 4, 2020ಬೈಲಕುಪ್ಪೆ, ಫೆ.3(ರಾಜೇಶ್)-ಪಿರಿಯಾ ಪಟ್ಟಣ ತಾಲೂಕು ಮುತ್ತಿನಮುಳ್ಳುಸೋಗೆ ಗ್ರಾಮದ ಸರ್ವೇ ನಂ.54ರಿಂದ 65 ವರೆಗಿನ ಕಾವೇರಿ ನದಿ ತೀರದಲ್ಲಿನ ಒತ್ತುವರಿ ಜಮೀನು ತೆರವಿಗೆ ಆಗಮಿಸಿದ್ದ ಕಂದಾಯ ಇಲಾಖೆ ಅಧಿಕಾರಿಗಳ ತಂಡ ಉಚ್ಛ ನ್ಯಾಯಾ ಲಯದ ತಡೆಯಾಜ್ಞೆ ಇರುವುದನ್ನು ಅರಿತು ಬರಿಗೈಯಲ್ಲಿ ವಾಪಸ್ಸಾದರು. ಕಾವೇರಿ ನದಿ ತೀರ ಪ್ರದೇಶ ಒತ್ತುವರಿ ಹಿನ್ನೆಲೆಯಲ್ಲಿ ಮೇಲಧಿಕಾರಿಗಳ ಆದೇಶ ದಂತೆ ಶಿರಸ್ತೇದಾರ್ ವಿನೋದ್ ನೇತೃತ್ವದ ತಂಡ ಭಾನುವಾರ ಮುತ್ತಿನಮುಳ್ಳುಸೊಗೆ ಗ್ರಾಮಕ್ಕೆ ದಿಢೀರ್ ಭೇಟಿ ನೀಡಿ, ರೈತರ ಜಮೀನುಗಳ ಸರ್ವೇ ಕಾರ್ಯಕ್ಕೆ ಮುಂದಾ ಗಿತ್ತು. ವಿಷಯ…