ಮೈಸೂರು

ಮಾ.ಹಿರಣ್ಣಯ್ಯ ನಿಧನಕ್ಕೆ ಬ್ರಾಹ್ಮಣ ಸಂಘದಿಂದ ಶ್ರದ್ಧಾಂಜಲಿ
ಮೈಸೂರು

ಮಾ.ಹಿರಣ್ಣಯ್ಯ ನಿಧನಕ್ಕೆ ಬ್ರಾಹ್ಮಣ ಸಂಘದಿಂದ ಶ್ರದ್ಧಾಂಜಲಿ

May 4, 2019

ಮೈಸೂರು: ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಅವರ ನಿಧನಕ್ಕೆ ಮೈಸೂರಿನ ಇಟ್ಟಿಗೆಗೂಡಿನಲ್ಲಿ ರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಮೈಸೂರು ನಗರ ಜಿಲ್ಲಾ ಬ್ರಾಹ್ಮಣ ಸಂಘದ ಕಚೇರಿಯಲ್ಲಿ ಶ್ರದ್ಧಾಂ ಜಲಿ ಸಲ್ಲಿಸಲಾಯಿತು. ಮೈಸೂರು ನಗರ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್. ಹಿರಣ್ಣಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ಸಂಘದ ಪದಾಧಿಕಾರಿಗಳು, ಮುಖಂಡರು ಮೌನಾಚರಣೆ ಮಾಡಿ ಸಂತಾಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಿ.ಟಿ. ಪ್ರಕಾಶ್, ಸ್ವಾತಂತ್ರ್ಯಾ ನಂತರ ಪ್ರಜಾ ಪ್ರಭುತ್ವದಲ್ಲಿ ರಾಜಕೀಯ ವಿಡಂಬನೆ, ಟೀಕೆ…

ಮಜ್ಜಿಗೆ ಸೇವಿಸಿ ಗುಂಡ್ಲುಪೇಟೆಯ ಒಂದೇ ಕುಟುಂಬದ 9 ಮಂದಿ ಅಸ್ವಸ್ಥ
ಮೈಸೂರು

ಮಜ್ಜಿಗೆ ಸೇವಿಸಿ ಗುಂಡ್ಲುಪೇಟೆಯ ಒಂದೇ ಕುಟುಂಬದ 9 ಮಂದಿ ಅಸ್ವಸ್ಥ

May 4, 2019

ಮೈಸೂರು: ಜಮೀನಿನಲ್ಲಿ ಊಟದ ನಂತರ ಮಜ್ಜಿಗೆ ಸೇವಿ ಸಿದ್ದ ಒಂದೇ ಕುಟುಂಬದ 9 ಮಂದಿ ಅಸ್ವಸ್ಥರಾದ ಘಟನೆ ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ತಾಲೂಕಿನ ಬಸವಾಪುರ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದೆ. ಗ್ರಾಮದ ಮಹದೇವಶೆಟ್ಟಿ(40), ನಾಗ ಶೆಟ್ಟಿ(40), ಸುಂದರಮ್ಮ(22), ಬೆಳ್ಳಮ್ಮ (50), ಅಖಿಲ್(4), ಸುಭಾಷ್(7), ಕಿಶೋರ್(2), ಸೇರಿದಂತೆ ಅಸ್ವಸ್ಥರಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಚಿಕ್ಕತಮ್ಮ ಎಂಬುವರ ಜಮೀನಿನಲ್ಲಿ ಜೋಳ ಬಿತ್ತನೆ ಮಾಡುತ್ತಿದ್ದಾಗ ಎಲ್ಲರೂ ಮಧ್ಯಾಹ್ನ 2.30 ಗಂಟೆ ವೇಳೆಗೆ ಊಟ ಮಾಡಿದ ನಂತರ ಬಿಸಿಲಿನ…

ಪತ್ರಕರ್ತರಿಗೆ ವಿಶ್ವ ಪತ್ರಿಕಾ ದಿನದ ಶುಭ ಕೋರಿದ ಸಚಿವ ಜಿಟಿಡಿ
ಮೈಸೂರು

ಪತ್ರಕರ್ತರಿಗೆ ವಿಶ್ವ ಪತ್ರಿಕಾ ದಿನದ ಶುಭ ಕೋರಿದ ಸಚಿವ ಜಿಟಿಡಿ

May 4, 2019

ಮೈಸೂರು: ವಿಶ್ವ ಪತ್ರಿಕಾ ದಿನದ ಪ್ರಯುಕ್ತ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಪತ್ರಕರ್ತರಿಗೆ ಶುಭಾ ಶಯ ತಿಳಿಸಿದ್ದಾರೆ. ಇಂದು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ. ಪತ್ರಿಕಾ ಸ್ವಾತಂತ್ರ್ಯದ ಮೂಲಭೂತ ಸಿದ್ದಾಂತಗಳ ರಕ್ಷಣೆ ಮತ್ತು ಕೆಲಸದ ನಿರ್ವಹಣೆ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ಪತ್ರಕರ್ತರಿಗೆ ಗೌರವ ಸಲ್ಲಿಸುವುದು ಈ ದಿನದ ಮುಖ್ಯ ಉದ್ದೇಶ. ಯುನೆಸ್ಕೋದ ಈ ಸದುದ್ದೇಶ ಈಡೇರಲಿ. ಕಾರ್ಯನಿರತ ಪತ್ರಕರ್ತರಿಗೆ ರಕ್ಷಣೆ ಸಿಗಲಿ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಕರ್ನಾಟಕ ಮುಕ್ತ ವಿವಿ ವಿವಿಧ ಕೋರ್ಸ್‍ಗಳಿಗೆ ಆಗಸ್ಟ್ 31ರವರೆಗೆ ಪ್ರವೇಶಾವಕಾಶ
ಮೈಸೂರು

ಕರ್ನಾಟಕ ಮುಕ್ತ ವಿವಿ ವಿವಿಧ ಕೋರ್ಸ್‍ಗಳಿಗೆ ಆಗಸ್ಟ್ 31ರವರೆಗೆ ಪ್ರವೇಶಾವಕಾಶ

May 4, 2019

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯದಲ್ಲಿ 31 ವಿಷಯಗಳಿಗೆ ಪ್ರವೇಶಾತಿ ಮುಂದಿನ ವಾರ ಆರಂಭವಾಗಲಿದ್ದು, ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಆಗಸ್ಟ್ 31 ರೊಳಗೆ ಪ್ರವೇಶಾತಿ ಪಡೆಯಬಹುದು ಎಂದು ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ತಿಳಿಸಿದ್ದಾರೆ. ಮುಕ್ತ ವಿವಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗಘೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್‍ಎಲ್‍ಎಂ ಹೊರತುಪಡಿಸಿ ಉಳಿದೆಲ್ಲಾ ಕೋರ್ಸುಗಳಿಗೆ ಪ್ರವೇಶಾತಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾದಿಂದ ಒಪ್ಪಿಗೆ ಪಡೆದುಕೊಂಡು ಎಲ್‍ಎಲ್‍ಎಂ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಯುಜಿಸಿ ಮುಕ್ತ ವಿವಿಗೆ 2018-19ನೇ ಸಾಲಿನಿಂದ 2022-23ನೇ…

ಎಸ್‍ಯುಸಿಐ ವತಿಯಿಂದ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಕಚೇರಿ ಬಳಿ ಪ್ರತಿಭಟನೆ
ಮೈಸೂರು

ಎಸ್‍ಯುಸಿಐ ವತಿಯಿಂದ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಕಚೇರಿ ಬಳಿ ಪ್ರತಿಭಟನೆ

May 4, 2019

ಮೈಸೂರು: ಮೈಸೂರು ತಾಲೂಕಿನ ಹಿನಕಲ್ ಗ್ರಾಮ ಪಂಚಾ ಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ-ಕಮ್ಯುನಿಸ್ಟ್ (ಎಸ್‍ಯು ಸಿಐ) ಆಶ್ರಯದಲ್ಲಿ ಮೈಸೂರು ಜಿಲ್ಲಾಧಿ ಕಾರಿ ಕಚೇರಿ ಮತ್ತು ಮೈಸೂರು ಜಿಲ್ಲಾ ಪಂಚಾಯತ್ ಕಚೇರಿ ಎದುರು ಪ್ರತಿ ಭಟನೆ ನಡೆಸಲಾಯಿತು. ಮೈಸೂರಿನ ಕೂಗಳತೆ ದೂರದಲ್ಲಿರುವ ಹಿನಕಲ್‍ನಲ್ಲಿ ಕುಡಿಯುನ ನೀರಿಗಾಗಿ ಜನತೆ ಪ್ರತಿದಿನ ಪರದಾಡುತ್ತಿದ್ದಾರೆ. ಮಹಿಳೆ ಯರು, ಮಕ್ಕಳು ತಮ್ಮ ಕೆಲಸಗಳನ್ನು ಬಿಟ್ಟು ನೀರಿಗಾಗಿ ಗಂಟೆಗಟ್ಟಲೆ ಕಾದು ಕೆಲ ವೊಮ್ಮೆ ಖಾಲಿ…

ಮೈಸೂರಿನ ಆಯಿಷ್ ಸಿಬ್ಬಂದಿ ಭಾಗಿ, ವಿಚಾರ ಮಂಡನೆ
ಮೈಸೂರು

ಮೈಸೂರಿನ ಆಯಿಷ್ ಸಿಬ್ಬಂದಿ ಭಾಗಿ, ವಿಚಾರ ಮಂಡನೆ

May 4, 2019

ಮೈಸೂರು: ಹಿಮಾಚಲ ಪ್ರದೇಶದ ಸೊಲಾನ್‍ನಲ್ಲಿ ಇತ್ತೀಚೆಗೆ ನಡೆದ 86ನೇ ರಾಷ್ಟ್ರೀಯ ಸೆಮಿನಾರ್ ಕಮ್ ಹಿಂದಿ ಕಾರ್ಯಾಗಾರದಲ್ಲಿ ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ (ಆಯಿಷ್)ಯ ಇಬ್ಬರು ಸಿಬ್ಬಂದಿ ಪಾಲ್ಗೊಂಡಿದ್ದರು. ದೆಹಲಿಯ ರಾಜ್ ಭಾಷಾ ಸಂಸ್ಥಾನ ಆಯೋಜಿಸಿದ್ದ ಈ ಕಾರ್ಯಾಗಾರದಲ್ಲಿ ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ಪರವಾಗಿ ಸಹಾಯಕ ರಿಜಿಸ್ಟ್ರಾರ್ ಎನ್.ಪರಿಮಳಾ ಮತ್ತು ಪ್ರಚಾರ ಮತ್ತು ಮಾಹಿತಿ ಅಧಿಕಾರಿ ಎ.ಆರ್.ಕೀರ್ತಿ ಪಾಲ್ಗೊಂಡಿದ್ದರು. ಕಾರ್ಯಾಗಾರದಲ್ಲಿ ಸಹಾಯಕ ರಿಜಿಸ್ಟ್ರಾರ್ ಎನ್.ಪರಿಮಳಾ ಅವರು ‘ಸಂಸ್ಥೆ ಮತ್ತು ಶೈಕ್ಷಣಿಕ ಚಟುವಟಿಕೆಗಳ…

ಮೈಸೂರು ಉತ್ತರ, ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ವ್ಯಾಪ್ತಿ ಕುಸಿತ
ಮೈಸೂರು

ಮೈಸೂರು ಉತ್ತರ, ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿ ವ್ಯಾಪ್ತಿ ಕುಸಿತ

May 4, 2019

ಮೈಸೂರು: ಮೈಸೂರು ನಗರದ ಪ್ರದೇಶ ವ್ಯಾಪ್ತಿಯಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ಅತ್ಯಂತ ಕಳಪೆಯಾಗಿದೆ. ಕಳೆದ ಮಾರ್ಚ್-ಏಪ್ರಿಲ್‍ನಲ್ಲಿ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮೈಸೂರು ಜಿಲ್ಲೆಯ ಶೇಕಡಾವಾರು ಫಲಿತಾಂಶದಲ್ಲಿ ಪಿರಿಯಾ ಪಟ್ಟಣ ತಾಲೂಕು (ಶೇ.90.59) ಮೊದಲ ಸ್ಥಾನ ಪಡೆದಿದೆ. ಇಲ್ಲಿ ಶಿಕ್ಷಕರ ಸಮಸ್ಯೆ ನಡುವೆಯೂ ಮೊದಲ ಸ್ಥಾನ ಪಡೆದಿರುವುದು ವಿಶೇಷ. ಮೈಸೂರು ಉತ್ತರ ಮತ್ತು ದಕ್ಷಿಣ ಕ್ಷೇತ್ರ ಶಿಕ್ಷಣಾಧಿ ಕಾರಿಗಳ ವ್ಯಾಪ್ತಿಯಲ್ಲಿ ಕ್ರಮವಾಗಿ 9 ಮತ್ತು 7ನೇ ಸ್ಥಾನ ಪಡೆದಿದೆ. ಉಳಿದಂತೆ ಕ್ರಮವಾಗಿ ಮೈಸೂರು ಗ್ರಾಮಾಂತರ (ಶೇ.89.77)2ನೇ ಸ್ಥಾನ, ನಂಜನಗೂಡು (ಶೇ.88.22)…

ಕಾಡಾನೆಗಳ ದಾಳಿ, ಅಪಾರ ಬೆಳೆ ನಷ್ಟಅರಣ್ಯಕ್ಕಟ್ಟಲು ಅಧಿಕಾರಿಗಳ ಹರಸಾಹಸ
ಮೈಸೂರು

ಕಾಡಾನೆಗಳ ದಾಳಿ, ಅಪಾರ ಬೆಳೆ ನಷ್ಟಅರಣ್ಯಕ್ಕಟ್ಟಲು ಅಧಿಕಾರಿಗಳ ಹರಸಾಹಸ

May 4, 2019

ಜಯಪುರ: ಮೈಸೂರು ತಾಲೂಕಿನ ಜಯಪುರ ಹೋಬಳಿ ಸಮೀಪ ಕಾಡಾನೆಗಳು ಬೀಡು ಬಿಟ್ಟಿದ್ದು, ಸುತ್ತಮುತ್ತ ಗ್ರಾಮಗಳ ರೈತರ ಜಮೀನುಗಳಲ್ಲಿನ ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ. ಅರಣ್ಯಾಧಿಕಾರಿಗಳು ಆನೆಗಳನ್ನು ಕಾಡಿಗಟ್ಟಲು ಹರಸಹ ಪಡುತ್ತಿದ್ದಾರೆ. ಹೋಬಳಿಯ ಚಿಕ್ಕನಹಳ್ಳಿ ಕಾಯ್ದಿರಿಸಿದ ಅರಣ್ಯ ಪ್ರದೇಶದಲ್ಲಿ ವಾರದಿಂದ ಎರಡು ಕಾಡಾನೆಗಳು ಅರಣ್ಯ ಪ್ರದೇಶದ ವ್ಯಾಪ್ತಿಯ ರೈತರ ಜಮೀನುಗಳಲ್ಲಿ ಬೆಳೆದಿದ್ದ ಲಕ್ಷಾಂತರ ರೂ. ಮೌಲ್ಯದ ಅಪಾರ ಬೆಳೆಗಳನ್ನು ನಾಶ ಮಾಡಿದ್ದು, ಚಾಮುಂಡೇಶ್ವರಿ ಕ್ಷೇತ್ರದ ಬೆಟ್ಟದಬೀಡು ಸಮೀಪದ ಕೋಣನ ಬೆಟ್ಟ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿವೆ. ಆನೆಗಳನ್ನು…

ಈ ವಾಹನಗಳಿಗೆ ನೀವಾ ವಾರಸುದಾರರು!
ಮೈಸೂರು

ಈ ವಾಹನಗಳಿಗೆ ನೀವಾ ವಾರಸುದಾರರು!

May 4, 2019

ಮೈಸೂರು: ಅಪಘಾತ, ತಪಾಸಣೆ ಇನ್ನಿತರ ಸಂದರ್ಭಗಳಲ್ಲಿ ವಶಕ್ಕೆ ಪಡೆಯಲಾಗಿರುವ ವಿವಿಧ ಮಾದರಿಯ ದ್ವಿಚಕ್ರ ವಾಹನಗಳು ಹಾಗೂ ಆಟೋಗಳ ಮಾಲೀಕರ ಪತ್ತೆಗೆ ಮೈಸೂರಿನ ದಕ್ಷಿಣ ಪೊಲೀಸ್ ಠಾಣೆ ಪೊಲೀಸರು ಪ್ರಕಟಣೆ ನೀಡಿದ್ದಾರೆ. ದಕ್ಷಿಣ ಪೊಲೀಸ್ ಠಾಣೆ ಆವರಣದಲ್ಲಿರುವ 5 ಆಟೋ ಹಾಗೂ 32 ದ್ವಿಚಕ್ರ ವಾಹನಗಳ ಮಾಲೀಕರ ಪತ್ತೆಗೆ ಅನೇಕ ಬಾರಿ ಪ್ರಯತ್ನಿಸಿದರೂ ಪ್ರಯೋಜವಾಗಿಲ್ಲ. ಹಾಗಾಗಿ ಈ ವಾಹನಗಳ ಮಾಲೀಕರಿದ್ದಲ್ಲಿ ವಾರದೊಳಗೆ ಅಗತ್ಯ ದಾಖಲೆ ಯೊಂದಿಗೆ ಠಾಣೆಯ ಸಬ್ ಇನ್‍ಸ್ಪೆಕ್ಟರ್ ಜಯಪ್ರಕಾಶ್ ಅವರನ್ನು ಭೇಟಿ ಮಾಡ ಬೇಕು. ಮಾಲೀಕರ…

ಉದ್ದೂರ್ ಪ್ರೇಮೇಗೌಡ ಹುಣಸೂರು ತಾಪಂ ಉಪಾಧ್ಯಕ್ಷ
ಮೈಸೂರು

ಉದ್ದೂರ್ ಪ್ರೇಮೇಗೌಡ ಹುಣಸೂರು ತಾಪಂ ಉಪಾಧ್ಯಕ್ಷ

May 4, 2019

ಹುಣಸೂರು: ಇಲ್ಲಿನ ತಾಪಂ ಉಪಾಧ್ಯಕ್ಷ ಪ್ರೇಮ್‍ಕುಮಾರ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಉದ್ದೂರ್ ಪ್ರೇಮೇಗೌಡ ಸರ್ವಾನುಮತದಿಂದ ಆಯ್ಕೆಯಾದರು. ಕಲ್ಕುಂದ ಕ್ಷೇತ್ರದ ಹೆಚ್.ಪ್ರೇಮ್‍ಕುಮಾರ್ ಒಪ್ಪಂದದಂತೆ ರಾಜೀನಾಮೆ ನೀಡಿದರಿಂದ ಉಪಾಧ್ಯಕ್ಷ ಸ್ಥಾನ ತೆರವಾಗಿತ್ತು. ಈ ಸ್ಥಾನಕ್ಕೆ ನಿಗದಿಪಡಿಸಿದಂತೆ ಇಂದು ತಾಪಂ ಸಭಾಗಂಗಣದಲ್ಲಿ ಚುನಾವಣೆ ನಡೆಯಿತು. 23 ಸದಸ್ಯರ ಪೈಕಿ 14 ಸದಸ್ಯರು ಭಾಗವಹಿಸಿ ತೆರವಾಗಿದ್ದ ಸ್ಥಾನಕ್ಕೆ ಉದ್ದೂರ್‍ಕಾವಲ್ ಕ್ಷೇತ್ರದ ಎಸ್.ಪ್ರೇಮೆಗೌಡರನ್ನು ಆಯ್ಕೆಗೆ ಸರ್ವಾನುಮತದಿಂದ ಸಮ್ಮತಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‍ನ ತಟ್ಟೆಕೆರೆ ಶ್ರೀನಿವಾಸ್ ಅವರ ಹೆಸರನ್ನು ಸೂಚಿಸಲಾಗಿತ್ತಾದರೂ ಕೊನೆ…

1 1,011 1,012 1,013 1,014 1,015 1,611
Translate »