ಪತ್ರಕರ್ತರಿಗೆ ವಿಶ್ವ ಪತ್ರಿಕಾ ದಿನದ ಶುಭ ಕೋರಿದ ಸಚಿವ ಜಿಟಿಡಿ
ಮೈಸೂರು

ಪತ್ರಕರ್ತರಿಗೆ ವಿಶ್ವ ಪತ್ರಿಕಾ ದಿನದ ಶುಭ ಕೋರಿದ ಸಚಿವ ಜಿಟಿಡಿ

May 4, 2019

ಮೈಸೂರು: ವಿಶ್ವ ಪತ್ರಿಕಾ ದಿನದ ಪ್ರಯುಕ್ತ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಪತ್ರಕರ್ತರಿಗೆ ಶುಭಾ ಶಯ ತಿಳಿಸಿದ್ದಾರೆ. ಇಂದು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ. ಪತ್ರಿಕಾ ಸ್ವಾತಂತ್ರ್ಯದ ಮೂಲಭೂತ ಸಿದ್ದಾಂತಗಳ ರಕ್ಷಣೆ ಮತ್ತು ಕೆಲಸದ ನಿರ್ವಹಣೆ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ಪತ್ರಕರ್ತರಿಗೆ ಗೌರವ ಸಲ್ಲಿಸುವುದು ಈ ದಿನದ ಮುಖ್ಯ ಉದ್ದೇಶ. ಯುನೆಸ್ಕೋದ ಈ ಸದುದ್ದೇಶ ಈಡೇರಲಿ. ಕಾರ್ಯನಿರತ ಪತ್ರಕರ್ತರಿಗೆ ರಕ್ಷಣೆ ಸಿಗಲಿ ಎಂದು ಅವರು ಟ್ವೀಟ್ ಮಾಡಿದ್ದಾರೆ.

Translate »