ಮೈಸೂರು,ಫೆ.20-ಶಿಥಿಲಗೊಂಡು ದುಸ್ಥಿತಿಗೆ ಒಳಗಾಗಿ ರುವ ಪಾರಂಪರಿಕ ಕಟ್ಟಡಗಳ ಪಾಲಿಗೆ ಮೈಸೂರಿನ ರಂಗಾ ಚಾರ್ಲು ಪುರಭವನ ಬಹುತೇಕ ಸೇರ್ಪಡೆಗೊಂಡಿದ್ದು, ನಿರ್ವಹಣೆಯ ಕೊರತೆ, ದುರಸ್ತಿಗೆ ನ್ಯಾಯಾಲಯದಲ್ಲಿ ಪ್ರಕರಣದ ಅಡ್ಡಿಯಿಂದಾಗಿ ಮೈಸೂರು ಮಹಾನಗರ ಪಾಲಿಕೆ ಕೈಕಟ್ಟಿ ಕೂರಬೇಕಾದ ತ್ರಿಶಂಕು ಸ್ಥಿತಿಗೆ ಸಿಲುಕಿದೆ. ಈ ಹಿಂದೆ ಪುರಭವನದ ಕಟ್ಟಡ ಹಾಗೂ ಆವರಣ ದಲ್ಲಿ ಮಲ್ಪಿಲೆವೆಲ್ ಪಾರ್ಕಿಂಗ್ ಕಟ್ಟಡ ನಿರ್ಮಾಣಕ್ಕಾಗಿ ಗುತ್ತಿಗೆ ಪಡೆದಿದ್ದ ಹೈದ್ರಾಬಾದ್ ಮೂಲದ ಛಾಬ್ರಿಯಾ ಅಸೋಸಿಯೇಟ್ಸ್ ಮಾಡಿದ ಯಡವಟ್ಟು, ನ್ಯಾಯಾಲಯ ದಲ್ಲಿರುವ ಪ್ರಕರಣ ಇತ್ಯರ್ಥಗೊಳಿಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಲ್ಲಿ ಇಲ್ಲದ ಇಚ್ಛಾಶಕ್ತಿಯಿಂದಾಗಿ…
ಮೈಸೂರು ಪ್ರಮುಖ ಸ್ಟಾರ್ಟ್ಅಪ್ ಆಗಿ ರೂಪುಗೊಳ್ಳುತ್ತಿದೆ
February 20, 2022ಮೈಸೂರು, ಫೆ. 19(ಆರ್ಕೆ)- ಕೈಗಾರಿಕೋದ್ಯ ಮಕ್ಕೆ ಪೂರಕ ವಾತಾವರಣವಿರುವ ಸಾಂಸ್ಕøತಿಕ ನಗರಿ ಮೈಸೂರು, ರಾಷ್ಟ್ರದ ಪ್ರಮುಖ ಸ್ಟಾರ್ಟ್ಅಪ್ ಆಗಿ ರೂಪುಗೊಳ್ಳುತ್ತಿದೆ ಎಂದು ಎಲೆಕ್ಟ್ರಾನಿಕ್ಸ್, ಐಟಿ-ಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯ ದರ್ಶಿ ಡಾ. ಇ.ವಿ.ರಮಣರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ. ಜೆಎಸ್ಎಸ್ ಮಹಾವಿದ್ಯಾ ಪೀಠ ಎಸ್ಜೆಸಿಇ-ಸ್ಟೆಪ್ ಹಾಗೂ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಸಂಯು ಕ್ತಾಶ್ರಯದಲ್ಲಿ ಮೈಸೂರಿನ ಎಸ್ಜೆಸಿಇ ಆವರಣದ ಗೋಲ್ಡನ್ ಜ್ಯೂಬಿಲಿ ಸೆಮಿನಾರ್ ಹಾಲ್ನಲ್ಲಿ ಇಂದು ನಡೆದ ಮೈಸೂರಿನ ಪ್ರಥಮ ಚಿಪ್ ಡಿಸೈನ್ ಕಂಪನಿಯು ಪಿಎಲ್ಎಸ್ಪಿ ಡಿಸೈನ್ ಸೆಂಟರ್…
ಸರ್ಕಾರಿ ಆಸ್ತಿಗೆ ನಕಲಿ ದಾಖಲೆ ಸೃಷ್ಟಿಸಿ ಖಾಸಗಿಯವರಿಗೆ ಖಾತೆ ಹುಣಸೂರು ನಗರಸಭೆ ಮಾಜಿ ಆಯುಕ್ತ ಶಿವಪ್ಪನಾಯಕ ಬಂಧನ
February 19, 2022ಹುಣಸೂರು, ಫೆ.18(ಕೆಕೆ)-ಸರ್ಕಾರಿ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸಿ, ಖಾಸಗಿ ವ್ಯಕ್ತಿಗೆ ಖಾತೆ ಮಾಡಿಕೊಟ್ಟ ಆರೋಪದ ಮೇರೆಗೆ ಹುಣ ಸೂರು ನಗರಸಭೆಯ ಹಿಂದಿನ ಆಯುಕ್ತ ಶಿವಪ್ಪನಾಯಕ (ಹಾಲಿ ಅಮಾನತಿನಲ್ಲಿ ದ್ದಾರೆ) ಮತ್ತು ದ್ವಿತೀಯ ದರ್ಜೆ ಸಹಾ ಯಕಿ ಹೆಚ್.ಎ. ಅನಿತಾಕುಮಾರಿ (ಹಾಲಿ ಸರಗೂರು ಪಪಂ ದ್ವಿತೀಯ ದರ್ಜೆ ಸಹಾಯಕಿ) ಅವರನ್ನು ಹುಣಸೂರು ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ರನ್ನು ನ್ಯಾಯಾಲಯಕ್ಕೆ ಹಾಜರುಪಡಿಸ ಲಾಗಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ವಿವರ: ಹುಣಸೂರು ನಗರಸಭೆಯ ಒಳಚರಂಡಿ ವ್ಯವಸ್ಥೆಗೆ ವೆಟ್ಲ್ಯಾಂಡ್ಗಾಗಿ…
ಖಾಸಗಿಯವರಿಗೆ ಗೋಮಾಳ ನೀಡುವುದನ್ನು ಖಂಡಿಸಿ ಮೈಸೂರಲ್ಲಿ ಸಿಪಿಐ ಪ್ರತಿಭಟನೆ
February 19, 2022ಮೈಸೂರು,ಫೆ.18(ಎಂಟಿವೈ)- ರಾಜ್ಯದ ವಿವಿಧೆಡೆ ಗೋಮಾಳವನ್ನು ಖಾಸಗಿ ಸಂಘ-ಸಂಸ್ಥೆ, ಧಾರ್ಮಿಕ ಟ್ರಸ್ಟ್ ಹಾಗೂ ಉದ್ಯಮಿಗಳಿಗೆ ಭೋಗ್ಯ ಅಥವಾ ಬಾಡಿಗೆ ಆಧಾರದಲ್ಲಿ ನೀಡುವುದರಿಂದ ಹಿಂದೆ ಸರಿದು, ಬಗರ್ ಹುಕ್ಕುಂ ಅರ್ಜಿದಾರರಿಗೆ ಸಾಗುವಳಿ ಪತ್ರ ನೀಡುವಂತೆ ಆಗ್ರಹಿಸಿ ಸಿಪಿಐ ಕಾರ್ಯಕರ್ತರು ಮೈಸೂರಲ್ಲಿಂದು ಪ್ರತಿಭಟನೆ ಮಾಡಿದರು. ಮೈಸೂರಿನ ಮಹಾತ್ಮಗಾಂಧಿ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರ ಗೋಮಾಳಗಳನ್ನು ಖಾಸಗಿಯವರಿಗೆ ನೀಡಲು ಮುಂದಾಗಿದೆ. ಹೀಗೆ, ರಾಜ್ಯದಲ್ಲಿ 19.39 ಲಕ್ಷ ಎಕರೆ ಗೋಮಾಳದ ಜಾಗವನ್ನು ಖಾಸಗಿ ಸಂಘ-ಸಂಸ್ಥೆ, ಧಾರ್ಮಿಕ ಕೇಂದ್ರ, ಟ್ರಸ್ಟ್ ಹಾಗೂ ಬೃಹತ್…
ನೀನು ದೇಶದ್ರೋಹಿ: ಡಿಕೆಶಿ ನಿಮ್ಮಪ್ಪ ದೇಶದ್ರೋಹಿ: ಈಶ್ವರಪ್ಪ
February 17, 2022ಬೆಂಗಳೂರು, ಫೆ. ೧೬- ನೀನು ದೇಶದ್ರೋಹಿ…, ನಿಮ್ಮಪ್ಪ ದೇಶದ್ರೋಹಿ… ಇದು ಹಳ್ಳಿಯ ಬೀದಿಯಲ್ಲಿ ಕೇಳಿ ಬಂದ ಮಾತಲ್ಲ…! ವಿಧಾನಸಭೆ ಕಲಾಪದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಗ್ರಾಮೀಣಾ ಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಬೈದಾಟ. ಜವಾಬ್ದಾರಿಯುತ ಸ್ಥಾನದಲ್ಲಿರುವ ಇವರಿಬ್ಬರೂ ತಮ್ಮ ಸ್ಥಾನಮಾನದ ಘನತೆ-ಗೌರವ ಮರೆತು ವಾಕ್ಸಮರದ ಜೊತೆಗೆ ಪರಿಸ್ಥಿತಿ ಕೈಕೈ ಮಿಲಾಯಿಸುವ ಹಂತಕ್ಕೂ ತಲುಪಿ ದ್ದರಿಂದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯ ವರು ಸಭೆಯನ್ನು ಮುಂದೂಡುವAತಹ ವಾತಾವರಣ ನಿರ್ಮಾಣವಾಯಿತು. ಸಭೆ ಮುಂದೂಡಿ ಮೈಕ್ ಸಂಪರ್ಕ ಕಡಿತಗೊಂಡ…
ಕನ್ನಡದ ಹಿರಿಯ ಸಾಹಿತಿ ಡಾ.ಚೆನ್ನವೀರ ಕಣವಿ ನಿಧನ
February 17, 2022ಧಾರವಾಡ, ಫೆ. ೧೬- ಕನ್ನಡದ ಖ್ಯಾತ ಹಿರಿಯ ಸಾಹಿತಿ ಡಾ.ಚೆನ್ನವೀರ ಕಣವಿ ಅವರು ಇಂದು ನಿಧನರಾದರು. ಅವರಿಗೆ ೯೩ ವರ್ಷ ವಯಸ್ಸಾಗಿತ್ತು. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಕಣವಿ ಅವರನ್ನು ಧಾರವಾಡದ ಎಸ್ ಡಿಎಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸ ಲಾಗುತ್ತಿತ್ತು. ಆದರೆ ಬುಧವಾರ ಬೆಳಗ್ಗೆ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಮೊದಲು ಕೋವಿಡ್ನಿಂದ ಸಂಪೂರ್ಣ ಗುಣ ಮುಖರಾಗಿದ್ದರು. ಜೂನ್ ೨೮,೧೯೨೮ ರಂದು ಧಾರವಾಡ ಜಿಲ್ಲೆಯ ಹೊಂಬಳ ದಲ್ಲಿ ಚೆನ್ನವೀರ ಕಣವಿಯವರು ಜನಿ ಸಿದ್ದರು. ಕರ್ನಾಟಕ…
ಬಾಲಿವುಡ್ ಸಂಗೀತ ನಿರ್ದೇಶಕ, ಗಾಯಕ ಬಪ್ಪಿ ಲಹಿರಿ ನಿಧನ
February 17, 2022ಮುಂಬೈ, ಫೆ. ೧೬- ಹಿರಿಯ ಗಾಯಕ ಮತ್ತು ಸಂಗೀತ ಸಂಯೋಜಕ ಬಪ್ಪಿ ಲಹಿರಿ ಅವರು ಬುಧವಾರ ಬೆಳಗ್ಗೆ ನಿಧನರಾದರು. ಅನಾರೋಗ್ಯದಿಂದಾಗಿ ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದ ಬಪ್ಪಿ ಲಹಿರಿ, ಚಿಕಿತ್ಸೆ ಫಲಕಾರಿ ಯಾಗದೇ ಇಂದು ಸಾವನ್ನಪ್ಪಿದ್ದಾರೆ. ಬಪ್ಪಿ ಡಾ ಎಂದು ಜನಪ್ರಿಯರಾಗಿದ್ದ ಅವರು ಭಾರತೀಯ ಗಾಯಕ, ಸಂಯೋಜಕ, ರಾಜಕಾರಣ ಮತ್ತು ರೆಕಾರ್ಡ್ ನಿರ್ಮಾಪಕರಾಗಿದ್ದರು. ಅವರು ಭಾರತೀಯ ಸಿನಿಮಾದಲ್ಲಿ ಸಂಶ್ಲೇಷಿತ ಡಿಸ್ಕೋ ಸಂಗೀತದ ಬಳಕೆ ಯನ್ನು ಜನಪ್ರಿಯಗೊಳಿಸಿದ್ದರು. ತಮ್ಮದೇ ಆದ ಕೆಲವು ರಚನೆಗಳನ್ನು ಹಾಡಿದ್ದು, ಅಮರ್ ಸಂಗೀತಾ,…
ಸರ್ಕಾರಿ ಶಾಲೆಗೆ ೬೦ ಲಕ್ಷಕ್ಕೂ ಅಧಿಕ ಮೌಲ್ಯದ ಎರಡೂವರೆ ಎಕರೆ ಭೂಮಿ ದಾನ
February 17, 2022ಎಸ್.ಬಿ.ದೇವರಾಜ ಮೈಸೂರು, ಫೆ.೧೬- ಶಾಲಾ-ಕಾಲೇಜಿನಲ್ಲಿ ಧರ್ಮ ಸಂಕೇತ ವಸ್ತç ಧರಿಸುವ ವಿಚಾರವಾಗಿ ವಿವಾದ ಮುಂದುವರೆದಿರುವ ಸಂದರ್ಭದಲ್ಲಿ ಮುಸ್ಲಿಂ ಕುಟುಂಬವೊAದು ಸರ್ಕಾರಿ ಶಾಲೆಗೆ ಎರಡೂವರೆ ಎಕರೆ ಭೂಮಿಯನ್ನು ದಾನ ನೀಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದೆ. ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕು ಹಂಪಾ ಪುರ ಹೋಬಳಿ ಬಾಚೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಲೇಟ್ ಮಹಮ್ಮದ್ ಜಾಫರ್ ಕುಟುಂಬದವರು ಶಾಲೆ ಸಮೀಪದ ಭೂಮಿಯನ್ನು ದಾನ ನೀಡಿದ್ದಾರೆ. ಗ್ರಾಮದ ಸರ್ವೆ ನಂಬರ್ ೩೪ರಲ್ಲಿರುವ ಒಟ್ಟು ನಾಲ್ಕು ಎಕರೆ ಜಮೀನಿನ ಪೈಕಿ ೨ ಎಕರೆ…
ಮೈಸೂರು ಅರಮನೆ ದಕ್ಷಿಣ ದ್ವಾರಕ್ಕೆ ‘ಅಂಬಾರಿ’ ಸ್ಥಳಾಂತರ
February 16, 2022ಮೈಸೂರು, ಫೆ.15 (ಆರ್ಕೆ)-ಪ್ರವಾಸಿಗರು ಮತ್ತು ಸಾರ್ವಜನಿಕರ ನೀರಸ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಮೈಸೂರಿನ ಜೆಎಲ್ಬಿ ರಸ್ತೆಯ ಮಯೂರ ಹೋಟೆಲ್ ಆವರಣದಿಂದ ಕಾರ್ಯಾಚರಿಸುತ್ತಿದ್ದ ಅಂಬಾರಿ ಡಬಲ್ ಡೆಕ್ಕರ್ ಬಸ್ಗಳನ್ನು ಅರಮನೆ ದಕ್ಷಿಣ ದ್ವಾರಕ್ಕೆ ಸ್ಥಳಾಂತರಿಸಲಾಗಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್ಟಿಡಿಸಿ)ದ ವ್ಯವಸ್ಥಾಪಕ ನಿರ್ದೇಶಕ ಜಿ. ಜಗದೀಶ್ ಈ ಕುರಿತು ನಿರ್ಧಾರ ಕೈಗೊಂಡಿದ್ದು, ನಾಳೆ (ಫೆ.16)ಯಿಂದಲೇ ಡಬಲ್ ಡೆಕ್ಕರ್ ಬಸ್ಗಳು ಅರಮನೆ ದಕ್ಷಿಣ ದ್ವಾರ(ಗನ್ ಹೌಸ್ ಬಳಿ ಕಾಡಾ ಕಚೇರಿ ಎದುರು)ದ ವಾಹನ ನಿಲುಗಡೆ ಸ್ಥಳದಿಂದ ಕಾರ್ಯಾಚರಣೆ ನಡೆಸÀಲಿವೆ….
ಬೀದಿಬದಿ ವ್ಯಾಪಾರಿಗಳು 2014ರ ಕಾಯ್ದೆಯ ಕಲ್ಯಾಣ ಕಾರ್ಯಕ್ರಮ ಸದ್ಬಳಕೆ ಮಾಡಿಕೊಳ್ಳಿ
February 16, 2022ಮೈಸೂರು,ಫೆ.15(ಎಂಟಿವೈ)- ರಾಷ್ಟ್ರೀಯ ಜೀವನೋಪಾಯ ಬೀದಿಬದಿ ವ್ಯಾಪಾರಿ ಗಳ ಅಧಿನಿಯಮ 2014, ಸದುಪ ಯೋಗ ಪಡೆದುಕೊಳ್ಳುವ ಮೂಲಕ ಬೀದಿಬದಿ ವ್ಯಾಪಾರಿಗಳು ಏಳಿಗೆ ಸಾಧಿ ಸುವತ್ತ ಗಮನ ಕೇಂದ್ರೀಕರಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವರಾಜ ಭೂತೆ ಸಲಹೆ ನೀಡಿದ್ದಾರೆ. ಮೈಸೂರು ಮಹಾನಗರ ಪಾಲಿಕೆಯ ಹಳೆ ಕೌನ್ಸಿಲ್ ಸಭಾಂಗಣದಲ್ಲಿ ಡೇ-ನಲ್ಮ್ ಅಭಿಯಾನದಡಿ ನಗರ ಬೀದಿಬದಿ ವ್ಯಾಪಾರಿ ಗಳ ಬೆಂಬಲ ಉಪಘಟಕದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಮತ್ತು ಪಟ್ಟಣ ವ್ಯಾಪಾರ ಸಮಿತಿ ಸದಸ್ಯರುಗಳಿಗೆ ಅಧಿನಿಯಮ, ನಿಯಮ ಮತ್ತು ಯೋಜನೆಗಳ…










