ಮೈಸೂರು: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಯುವಕನಿಗೆ ಮೈಸೂರು ಜಿಲ್ಲಾ ಪೆÇೀಕ್ಸೋ ವಿಶೇಷ ನ್ಯಾಯಾಲಯ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ, ತೀರ್ಪು ನೀಡಿದೆ. ಮೈಸೂರಿನ ಹಿನಕಲ್ನ ನಿವಾಸಿ ತಿಮ್ಮಯ್ಯ(21) ಶಿಕ್ಷೆಗೆ ಗುರಿಯಾದ ಯುವಕ. ಈತ ಖಾಸಗಿ ಕಾಲೇಜೊಂದರಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದು, ಸಂಜೆ ವೇಳೆ ಶಾಲಾ ಮಕ್ಕಳಿಗೆ ಪಾಠ ಹೇಳಿ ಕೊಡುತ್ತಿದ್ದ. 2016ರ ಆಗಸ್ಟ್ 10ರಂದು ಮಕ್ಕಳಿಗೆ ಪಾಠ ಮುಗಿಸಿದ ಬಳಿಕ ಎಲ್ಕೆಜಿ ವ್ಯಾಸಂಗ ಮಾಡುತ್ತಿದ್ದ ನಾಲ್ಕು ವರ್ಷದ ಬಾಲಕಿಯನ್ನು ಮನೆಯಲ್ಲೇ ಇರಿಸಿಕೊಂಡ ತಿಮ್ಮಯ್ಯ,…
ಎಸ್ಸಿ-ಎಸ್ಟಿ ನೌಕರರ ಮುಂಬಡ್ತಿ ವಿಚಾರ: ವಿಚಾರಣೆ ಮುಂದೂಡಿಕೆ
January 17, 2019ಮೈಸೂರು: ಎಸ್ಸಿ-ಎಸ್ಟಿ ನೌಕರರ ಮುಂಬಡ್ತಿ ಮೀಸಲಾತಿ ರಕ್ಷಣಾ ಮಸೂದೆ 2017ರ ಕಾಯ್ದೆಯನ್ನು ಮರು ಸ್ಥಾಪಿಸಲು ಮಂಗಳವಾರ ಹಾಜರಿದ್ದ ರಾಜ್ಯ ಸರ್ಕಾರದ ಪರ ವಕೀಲರ ಮನವಿಗೆ ಸುಪ್ರೀಂಕೋರ್ಟ್ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ ಎಂದು ಅಲ್ಪಸಂಖ್ಯಾತ, ಹಿಂದುಳಿದ, ಸಾಮಾನ್ಯ ವರ್ಗಗಳ ನೌಕರರ ಸಂಘದ(ಅಹಿಂಸಾ) ಅಧ್ಯಕ್ಷ ಎಂ.ನಾಗರಾಜು `ಮೈಸೂರು ಮಿತ್ರ’ನಿಗೆ ತಿಳಿಸಿದರು. ಸುಪ್ರೀಂಕೋರ್ಟ್ನಲ್ಲಿ ಮಂಗಳವಾರ ನಡೆದ ವಿಚಾರಣೆಯಲ್ಲಿ ರಾಜ್ಯ ಸರ್ಕಾರದ ಪರ ಹಾಜರಿದ್ದ ಬಸವ ಪ್ರಭು ಪಾಟೀಲ್ ಅವರು, ಎಸ್ಸಿ-ಎಸ್ಟಿ ನೌಕರರ ಬಡ್ತಿ ಮೀಸಲು ರಕ್ಷಣಾ ಕಾಯ್ದೆ-2017ರ ಅನುಷ್ಠಾನಗೊಳಿಸಲು ಸೂಚನೆ…
ಬೈಕ್ ಹಿಂದೆ ಒಂದು ನಂಬರ್, ಮುಂದೆ ಮತ್ತೊಂದು ನಂಬರ್!
January 17, 2019ಮೈಸೂರು: ಆಗಾಗ ತನ್ನ ದ್ವಿಚಕ್ರ ವಾಹನದ ನಂಬರ್ ಪ್ಲೇಟ್ ಬದಲಾಯಿಸಿ ಓಡಿಸುತ್ತಿದ್ದ ವ್ಯಕ್ತಿಯೋರ್ವ ತಪಾಸಣೆ ವೇಳೆ ಸಿಕ್ಕಿಬಿದ್ದಿರುವ ಘಟನೆ ಆದಿಪಂಪ ರಸ್ತೆಯಲ್ಲಿ ನಡೆದಿದೆ. ದೊಡ್ಡಹುಂಡಿ ಗ್ರಾಮದ ನಿವಾಸಿ ಬಸವರಾಜು(19) ಸಿಕ್ಕಿಬಿದ್ದವನು. ಆರೋಪಿ ಜ.14 ರಂದು ತನ್ನ ಇಬ್ಬರು ಸ್ನೇಹಿತ ರೊಂದಿಗೆ ಆದಿಪಂಪ ರಸ್ತೆಯಲ್ಲಿ ಬರು ವಾಗ ಅಲ್ಲಿಯೇ ತಪಾಸಣೆ ನಡೆಸುತ್ತಿದ್ದ ವಿವಿ ಪುರಂ ಸಂಚಾರಿ ಪೊಲೀಸರು ಮೂರು ಜನ ದ್ವಿಚಕ್ರ ವಾಹನದಲ್ಲಿ ಬರುತ್ತಿರುವು ದನ್ನು ಕಂಡು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ವಾಹನ ನಂಬರ್ ಪರಿಶೀಲಿಸಿದಾಗ ಪ್ರಕರಣ…
ಗುಣಮಟ್ಟದ ಸಂಶೋಧನೆಯಲ್ಲಿ ರಾಜ್ಯದ ಬಹಳಷ್ಟು ಕಾಲೇಜು ಹಿಂದೆ ಬಿದ್ದಿವೆ
January 17, 2019ಮೈಸೂರು: ಗುಣಮಟ್ಟದ ಸಂಶೋಧನೆಯಲ್ಲಿ ರಾಜ್ಯದ ಬಹಳಷ್ಟು ಕಾಲೇಜುಗಳು ಹಿಂದೆ ಬಿದ್ದಿವೆ ಎಂದು ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಎಸ್. ಎನ್.ಹೆಗಡೆ ವಿಷಾದಿಸಿದರು. ಮೈಸೂರಿನ ಗೋಕುಲಂನಲ್ಲಿರುವ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇ ಜಿನ ವಿದ್ಯುನ್ಮಾನ ಮತ್ತು ಸಂಪರ್ಕಶಾಸ್ತ್ರ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ `ಪರಸ್ಪರ ಸಂಶೋಧನೆ ದೃಷ್ಟಿಕೋನ’ ಕಾರ್ಯಾ ಗಾರ ಉದ್ಘಾಟಿಸಿ ಅವರು ಮಾತನಾಡಿದರು. ಸಂಶೋಧನೆಗಳನ್ನು ಅಂಕ, ಪದವಿ ಗಳಿಗೆ ಸೀಮಿತಗೊಳಿಸದೆ ಅದರಾಚೆಗೂ ವಿಸ್ತರಿಸಬೇಕಿದೆ. ಸಂಶೋಧನೆ ಕೇವಲ ರಾಜ್ಯ-ರಾಷ್ಟ್ರ ಅಷ್ಟೇ ಅಲ್ಲದೆ, ಅಂತರ ರಾಷ್ಟ್ರೀಯ ಮಟ್ಟದಲ್ಲೂ ನಡೆಯಬೇಕು ಎಂದು ಅಭಿಪ್ರಾಯಪಟ್ಟರು. ಪ್ರಸ್ತುತ…
ಸಂಭ್ರಮದಿಂದ ಸಂಕ್ರಾಂತಿ ಆಚರಣೆ
January 17, 2019ಮೈಸೂರು: ಹೊಸ ವರ್ಷದ ಮೊದಲ ಹಬ್ಬ, ರೈತರ ಪಾಲಿನ ಸುಗ್ಗಿಹಬ್ಬ `ಮಕರ ಸಂಕ್ರಾಂತಿ’ಯನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಯುವ ಕರು ಜಾನುವಾರುಗಳನ್ನು ಸಿಂಗರಿಸಿ ಕಿಚ್ಚು ಹಾಯಿಸಿದರೆ, ಹೆಂಗಳೆಯರು ಎಳ್ಳು-ಬೆಲ್ಲ ಬೀರುವ ಮೂಲಕ ಸಂಭ್ರಮಿಸಿದರು. ಉತ್ತರಾಯಣದ ಮೂಲಕ ಹೊಸ ಸಂವ ತ್ಸರವನ್ನು ಬರಮಾಡಿಕೊಳ್ಳುವ ಸಂಕ್ರಾಂತಿ ಹಬ್ಬವನ್ನು ಪ್ರತಿವರ್ಷ ಎಲ್ಲೆಡೆ ಸಡಗರ, ಸಂಭ್ರಮದಿಂದ ಆಚರಿಸುವ ವಾಡಿಕೆಯಿದೆ. ಹೊಲ-ಗದ್ದೆಗಳಲ್ಲಿ ಬೆಳೆದ ಬೆಳೆ ರೈತರ ಮನೆ ಸೇರುವುದರೊಂದಿಗೆ ವರ್ಷವಿಡೀ ಕೃಷಿ ಚಟುವಟಿಕೆಗೆ ಮೈಯೊಡ್ಡಿ ದುಡಿದ ಜಾನುವಾರುಗಳಿಗೆ ವಿಶ್ರಾಂತಿ ನೀಡುವುದ…
ದಿ ಮೈಸೂರು ಸಿಟಿ ಕೋ-ಆಪರೇಟಿವ್ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಎಸ್ಬಿಎಂ ಮಂಜು ಅವಿರೋಧ ಆಯ್ಕೆ
January 17, 2019ಮೈಸೂರು: ಪ್ರತಿಷ್ಠಿತ ದಿ ಮೈಸೂರು ಸಿಟಿ ಕೋ-ಆಪರೇಟಿವ್ ಬ್ಯಾಂಕ್ನ ನೂತನ ಅಧ್ಯಕ್ಷರಾಗಿ ಮೈಸೂರು ಮಹಾನಗರ ಪಾಲಿಕೆ ಸದಸ್ಯರೂ ಆದ ಎಸ್ಬಿಎಂ ಮಂಜು ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ. ಬುಧವಾರ ನಡೆದ ಚುನಾವಣೆÉ ಯಲ್ಲಿ ಎಸ್.ಬಿ.ಎಂ.ಮಂಜು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಹಿಂದಿನ ಅಧ್ಯಕ್ಷ ಮಾಜಿ ಮೇಯರ್ ಬಿ.ಕೆ.ಪ್ರಕಾಶ್ ಅವರು ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಇಂದು ಚುನಾವಣೆ ನಡೆಯಿತು. ಮಂಜು ಸತತ ಮೂರು ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿ ದ್ದಾರೆ. ಚುನಾವಣಾಧಿಕಾರಿಯಾಗಿ ಜಿ.ಗಿರೀಶ್ ಕರ್ತವ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ…
ಜ.19, 20ರಂದು ಕಾದಂಬರಿಕಾರ ಎಸ್.ಎಲ್.ಭೈರಪ್ಪ ಸಾಹಿತ್ಯೋತ್ಸವ
January 17, 2019ಮೈಸೂರು: ಮೈಸೂರಿನ ಎಸ್.ಎಲ್.ಭೈರಪ್ಪ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪನವರ ಕೃತಿಗಳ ಕುರಿತಾದ 2 ದಿನಗಳ ಎಸ್.ಎಲ್.ಭೈರಪ್ಪ ಸಾಹಿತ್ಯೋತ್ಸವ ಕಾರ್ಯ ಕ್ರಮವನ್ನು ಜ.19ರಂದು ಏರ್ಪಡಿಸಲಾಗಿದೆ. ಅಂದು ಬೆಳಗ್ಗೆ 9.30ಕ್ಕೆ ಮೈಸೂರಿನ ಹುಣ ಸೂರು ರಸ್ತೆಯಲ್ಲಿರುವ ಕಲಾಮಂದಿರದಲ್ಲಿ ಕಾರ್ಯ ಕ್ರಮ ನಡೆಯಲಿದ್ದು, ಜ್ಞಾನಪೀಠ ಪ್ರಶಸ್ತಿ ಪುರಸ್ಕøತರು ಹಾಗೂ ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ.ಚಂದ್ರಶೇಖರ ಕಂಬಾರ ಉದ್ಘಾಟನೆ ಹಾಗೂ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಖ್ಯಾತ ಭಾಷಾ ಶಾಸ್ತ್ರಜ್ಞ ಡಾ.ಪ್ರದಾನ ಗುರುದತ್ತ ಅವರು ಡಾ.ಎಸ್.ಎಲ್.ಭೈರಪ್ಪನವರೊಂದಿಗಿನ ಸಂದರ್ಶನಗಳ ಸಂಕಲನ…
ಬಹುರೂಪಿಯಲ್ಲಿ ವಿವಿಧ ಕ್ಷೇತ್ರದಲ್ಲಿ ತೊಡಗಿರುವ ಮಂಗಳಮುಖಿಯರ ಭಾವಚಿತ್ರ ಪ್ರದರ್ಶನ
January 17, 2019ಮೈಸೂರು: ಮೈಸೂರಿನ ರಂಗಾಯಣದಲ್ಲಿ ನಡೆಯುತ್ತಿರುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಂಗಳಮುಖಿಯರ ಭಾವಚಿತ್ರಗಳನ್ನು ಅನಾವರಣಗೊಳಿಸಲಾಗಿದೆ. ಮೊಟ್ಟ ಮೊದಲು ಆಸ್ಪತ್ರೆಯ ನರ್ಸ್ ಆಗಿ ಸೇವೆಸಲ್ಲಿಸಿದ್ದ ಕೊಲ್ಕತ್ತದ ಜೀಯಾ ದಾಸ್, ಕವಿ ಹಾಗೂ ಶಿಕ್ಷಕರಾಗಿದ್ದ ಮುಂಬೈನ ಹೋಶಂಗ್ ಮೆರ್ಚನ್, ಎಂಎಲ್ಎ ಆಗಿದ್ದ ಮಧ್ಯಪ್ರದೇಶದ ಶಬನಮ್ ಮೌಸಿ, ಸುದ್ದಿ ನಿರೂಪಕಿಯಾಗಿದ್ದ ಕೊಲ್ಕತ್ತದ ಪದ್ಮಿನಿ ಪ್ರಕಾಶ್, ಮೊದಲ ಅಂರ್ತಜಾತಿ ವಿವಾಹವಾದ ಕೇರಳದ ಇಶಾಂತ್ ಮತ್ತು ಸೂರ್ಯ, ಚುನಾವಣೆ ಸ್ಪರ್ಧಿಸಿದ್ದ ಮುಮ್ತಾಜ್, ಸೈನಿಕ ವೃತ್ತಿಗೆ ಸೇರಿದ ದೆಹಲಿಯ ಶಬಿ, ಪೊಲೀಸ್…
ಮೇಲ್ವರ್ಗದ ಬಡವರಿಗೆ ಶೇ.10 ಮೀಸಲಾತಿ ಕೇಂದ್ರ ಸಚಿವ ಗೆಹ್ಲೋಟ್, ಸಿಎಂ ಕುಮಾರಸ್ವಾಮಿ ಅವರಿಗೆ ಫೆ.2ರಂದು ಕೃತಜ್ಞತೆ ಸಲ್ಲಿಕೆ
January 17, 2019ಮೈಸೂರು: ಮೇಲ್ವರ್ಗದ ಬಡವರಿಗೆ ಶೇ. 10 ಮೀಸಲಾತಿ ಕಲ್ಪಿಸಿರುವುದನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಸ್ವಾಗತಿಸುತ್ತಿದ್ದು, ಇದಕ್ಕೆ ಕಾರಣರಾದ ಕೇಂದ್ರ ಸಚಿವ ಗೆಹ್ಲೋಟ್ ಹಾಗೂ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಅಭಿನಂದಿಸಲು ಫೆ.2ರಂದು ಕೃತಜ್ಞತಾ ಸಮಾರಂಭ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ವಲಯ ಉಪಾಧ್ಯಕ್ಷ ಡಾ.ಬಿ.ಆರ್.ನಟರಾಜಜೋಯಿಸ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಾಹ್ಮಣರಿಗೂ ಮೀಸಲಾತಿ ಸೌಲಭ್ಯ ನೀಡುವಂತೆ ಆಗ್ರಹಿಸಿ ಕಳೆದ ಹಲವು ವರ್ಷಗಳಿಂದ…
ಮೈಸೂರು-ಬೆಂಗಳೂರು ನಡುವೆ ಪ್ರತೀ ಗಂಟೆಗೊಂದರಂತೆ ರೈಲು ಸೇವೆ
January 16, 2019ಮೈಸೂರು: ಇನ್ನು ಮುಂದೆ ಮೈಸೂರು-ಬೆಂಗಳೂರು ನಡುವೆ ಗಂಟೆ ಗೊಂದರಂತೆ ರೈಲು ಸಂಚಾರ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಭರವಸೆ ನೀಡಿದ್ದಾರೆ. ಸಂಕ್ರಾಂತಿ ಉಡುಗೊರೆಯಾಗಿ ಚೆನ್ನೈ- ಕೆಎಸ್ಆರ್ ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ರೈಲು (ಟ್ರೇನ್ ಸಂಖ್ಯೆ 12609/120610) ಸೇವೆಯನ್ನು ಮೈಸೂರಿಗೆ ವಿಸ್ತರಿ ಸಲಾಗಿದ್ದು, ಈ ರೈಲು ಸಂಚಾರಕ್ಕೆ ಮಂಗಳ ವಾರ ಮೈಸೂರು ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಬೆಂಗಳೂರು-ಚೆನ್ನೈ ನಡುವೆ ಸಂಚರಿ ಸುತ್ತಿದ್ದ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲನ್ನು…










