ಹುಣಸೂರು: ಚುನಾ ವಣೆ ನೀತಿ ಸಂಹಿತೆ ಉಲ್ಲಂಘಿಸಿದ ಸಂಬಂಧ ಅರಣ್ಯ ಸಚಿವ ಶಂಕರ್ ಅವರ ವಿರುದ್ಧ ಕೆ.ಆರ್.ನಗರ ಪೆÇಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ನವೆಂ ಬರ್ 3ರ ತನಕ ನೀತಿ ಸಂಹಿತೆ ಜಾರಿ ಯಲಿದ್ದು, 18.10.2018ರ ಗುರುವಾರ ದಂದು ಸಂಜೆ 6.20ರಲ್ಲಿ ಮೈಸೂರು ಕಡೆಯಿಂದ ಕೆ.ಎ-03 ಜಿ.ಎ-2727 ನಂಬರಿನ ಸರ್ಕಾರಿ ವಾಹನದಲ್ಲಿ ಅರಣ್ಯ ಸಚಿವರ ಕಾರು ಕೆ.ಅರ್.ನಗರದ ಕಡೆಗೆ ಚಲಿಸುವಾಗ ದೊಡ್ಡೇಕೊಪ್ಪಲು ಗ್ರಾಮದ ಬಳಿ ಇರುವ ಚುನಾವಣಾ…
3 ಗ್ರಾಮಗಳ 244 ಕುಟುಂಬಗಳಿಗೆ ಪಡಿತರ ಸಮಸ್ಯೆ
October 20, 2018ಬೆಟ್ಟದತುಂಗ ನ್ಯಾಯಬೆಲೆ ಅಂಗಡಿ ಬಳಿ ದೊಡ್ಡೇಗೌಡನ ಕೊಪ್ಪಲು, ನಾಗನಗಳ್ಳಿ, ನಾಗನಹಳ್ಳಿಕೊಪ್ಪಲು ಗ್ರಾಮಸ್ಥರ ಪ್ರತಿಭಟನೆ ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ದೊಡ್ಡೇಗೌಡನ ಕೊಪ್ಪಲು, ನಾಗನಹಳ್ಳಿ ಹಾಗೂ ನಾಗನಹಳ್ಳಿ ಕೊಪ್ಪಲು ಗ್ರಾಮದ 244 ಬಿಪಿಎಲ್ ಕುಟುಂಬಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಪೂರೈಕೆಯಾಗುವ ಪಡಿತರ ದೊರೆಯದ ಕಾರಣ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಈ ಗ್ರಾಮಗಳ ಬಿಪಿಎಲ್ ಕುಟುಂಬಗಳು ಸಮೀಪದ ಬೆಟ್ಟದತುಂಗ ಗ್ರಾಮದ ನ್ಯಾಯಬೆಲೆ ಅಂಗಡಿ ವ್ಯಾಪ್ತಿಗೆ ಒಳಪಟ್ಟಿದ್ದು, 4 ಕಿ.ಮೀ. ಸಂಚರಿಸಿ ಪಡಿತರ ಪಡೆಯಬೇಕಾಗಿದೆ. ಅಷ್ಟು ದೂರ ಪಡಿತರ…
ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಸಾವು
October 20, 2018ಸೆಸ್ಕ್ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ ಬೈಲಕುಪ್ಪೆ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಯನ್ನು ತುಳಿದು ರೈತರೊಬ್ಬರು ಸ್ಥಳ ದಲ್ಲೇ ಮೃತಪಟ್ಟಿರುವ ಘಟನೆ ಮನುಗನ ಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ. ಮೃತಪಟ್ಟ ವ್ಯಕ್ತಿ ಮನುಗನಹಳ್ಳಿ ಗ್ರಾಮದ ಮಹಲಿಂಗಪ್ಪಗೌಡ ಅವರ ಮಗ ನಂಜುಂಡೇಗೌಡ(50). ಗ್ರಾಮದ ಗೋವಿಂದೇಗೌಡರಿಗೆ ಸೇರಿದ ಜಮೀನಿನ ಮೇಲೆ ವಿದ್ಯುತ್ ತಂತಿ ಹಾದುಹೋಗಿದ್ದು, ಅದು ತುಂಡಾಗಿ ಬಿದ್ದಿತ್ತು. ಅದನ್ನು ಗಮನಿಸದೆ ರೈತ ನಂಜುಂಡೇಗೌಡ ತುಳಿದು, ಮೃತಪಟ್ಟಿದ್ದಾರೆ. ಘಟನೆ ವಿವರ: ಒಂದು ವಾರದ ಹಿಂದೆಯೇ ಕಂಬದಿಂದ ತುಂಡಾಗಿ ಬಿದ್ದಿದ್ದ ವಿದ್ಯುತ್…
ಮುಖ್ಯಮಂತ್ರಿ ಚಂದ್ರು ಅವರಿಗೆ ಕಾವೇರಿ ರತ್ನ ಪ್ರಶಸ್ತಿ ಪ್ರಧಾನ
October 20, 2018ಬೈಲಕುಪ್ಪೆ: ಕಾವೇರಿ ನದಿ ಮಲಿನ ಆಗದಂತೆ ಸಾರ್ವಜನಿಕರು ಎಚ್ಚರ ವಹಿಸಬೇಕಾಗಿದೆ ಎಂದು ಹಿರಿಯ ಚಿತ್ರನಟ ಮುಖ್ಯಮಂತ್ರಿ ಚಂದ್ರು ತಿಳಿಸಿದರು.ಕೊಡಗಿನ ಗಡಿಭಾಗದ ಬಿ.ಎಂ.ರಸ್ತೆ ಬದಿ ಭಾರವಿ ಕಾವೇರಿ ಕನ್ನಡ ಸಂಘದ ವತಿಯಿಂದ ನಿರ್ಮಿಸಿರುವ ಕಾವೇರಮ್ಮನ ಆವರಣದಲ್ಲಿ 6ನೇ ವರ್ಷದ ಕಾವೇರಿರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಕಾವೇರಿ ನದಿ ನೀರಿಗಾಗಿ ತಮಿಳುನಾಡಿ ನವರು ಕ್ಯಾತೆ ತೆಗೆದಾಗ ಒಗ್ಗಟ್ಟಿನಿಂದ ಪಕ್ಷಭೇದ ಮರೆತು ನಾವೆಲ್ಲರೂ ಹೋರಾಟಕ್ಕೆ ಸಜ್ಜಾಗುತ್ತೇವೆ. ಅದೇ ರೀತಿ ಪ್ರವಾಹ ದಿಂದ ನಲುಗಿದ ಕೊಡಗಿನ ಕುಟುಂಬ ಸ್ಥರಿಗೆ ನೆರವಾಗಬೇಕಾಗಿದೆ. ನಾನು ಸಹ…
ಓಪನ್ ಸ್ಟ್ರೀಟ್ ಫೆಸ್ಟ್ನಲ್ಲಿ ಲೈಂಗಿಕ ದೌರ್ಜನ್ಯ
October 18, 2018ಮೈಸೂರು: ಅಕ್ಟೋಬರ್ 13 ರಂದು ನಡೆದ ಓಪನ್ ಸ್ಟ್ರೀಟ್ ಫೆಸ್ಟ್ನಲ್ಲಿ ಪುಂಡರಿಂದ ಲೈಂಗಿಕ ದೌರ್ಜನ್ಯ ಕ್ಕೊಳಗಾದ ಯುವತಿಯರು, ಮಹಿಳೆಯರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಕಾರ್ಯಕ್ರಮ ಆಯೋಜಕರ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ ಪೊಲೀಸರು ಮಾತ್ರ ಅಂತಹ ಘಟನೆ ನಡೆದ ಬಗ್ಗೆ ಸಿಸಿ ಟಿವಿ ಕ್ಯಾಮರಾಗಳ ಫುಟೇಜ್ನಲ್ಲಿ ಪುರಾವೆ ಇಲ್ಲ ಎನ್ನುತ್ತಿದ್ದಾರೆ. ಲೈಂಗಿಕ ಕಿರುಕುಳ ಅನುಭವಿಸಿದ ಹಲವು ಮಹಿಳೆಯರು ಹಾಗೂ ಯುವತಿಯರು ‘ಮೈಸೂರು ಮಿತ್ರ’ ಕಚೇರಿಗೂ ದೂರವಾಣಿ ಕರೆ ಮಾಡಿ ತಮಗಾದ ಹಿಂಸೆ, ಅವಮಾನ ಗಳ…
ಜಂಬೂಸವಾರಿ ಪುಷ್ಪಾರ್ಚನೆ ಕೊನೆ ತಾಲೀಮು 3 ಗಂಟೆ ತಡ
October 18, 2018ಮೈಸೂರು: ಜಂಬೂ ಸವಾರಿಯ ಪುಷ್ಪಾರ್ಚನೆಯ ಅಂತಿಮ ತಾಲೀಮು ಬುಧವಾರ ಅರಮನೆಯ ಆವರಣದಲ್ಲಿ 3 ಗಂಟೆ ತಡವಾಗಿ ನಡೆಯಿತು. ಅಂಬಾರಿ ಆನೆ ಅರ್ಜುನನಿಗೆ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ಪುಷ್ಪಾರ್ಚನೆ ಮಾಡಿದರು. ಎಂದಿನಂತೆ ಜಂಬೂಸವಾರಿಯ ಮೆರವಣಿಗೆಯಲ್ಲಿ ಬಲರಾಮ ಮುಂಚೂಣಿಯಲ್ಲಿ ಸಾಗಿದನು. ನಂತರ ಅಭಿಮನ್ಯು ಹಿಂದೆ ಗಜಪಡೆ ಇತರೆ ಸದಸ್ಯರು ಹೆಜ್ಜೆ ಹಾಕುತ್ತಿದ್ದಂತೆ ಪೊಲೀಸ್ ತುಕಡಿಗಳು ಶಿಸ್ತಿನಿಂದ ಪಥಸಂಚಲನ ನಡೆಸಿ, ಗೌರವ ವಂದನೆ ಸಲ್ಲಿಸಿದವು. ಅಂಬಾರಿಗೆ ಪುಷ್ಪಾರ್ಚನೆ ಮಾಡುತ್ತಿದ್ದಂತೆಯೇ ಪೊಲೀಸ್ ಬ್ಯಾಂಡ್ ವಾದನ ತಂಡದ ಸದಸ್ಯರು ರಾಷ್ಟ್ರಗೀತೆ ನುಡಿಸಿದರು. ಫಿರಂಗಿದಳದ…
ಆಯುಧ ಪೂಜೆಗಾಗಿ ವ್ಯಾಪಾರ ಜೋರು
October 18, 2018ಮೈಸೂರು: ಆಯುಧ ಪೂಜೆ ಹಾಗೂ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬುಧ ವಾರ ಹೂವು-ಹಣ್ಣು ಸೇರಿದಂತೆ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿತ್ತು. ಆಯುಧ ಪೂಜೆ ಹಿನ್ನೆಲೆ ಯಲ್ಲಿ ಪೂಜಾ ಸಾಮಗ್ರಿಗಳ ಬೆಲೆ ಹೆಚ್ಚಾಗಿತ್ತಾದರೂ ಜನರು ಮುಗಿಬಿದ್ದು ಖರೀದಿ ಮಾಡಿದರು. ದೇವರಾಜ ಮಾರುಕಟ್ಟೆ, ಸಯ್ಯಾಜಿರಾವ್ ರಸ್ತೆ, ಧನ್ವಂ ತರಿ ರಸ್ತೆ, ಅಗ್ರಹಾರ ವೃತ್ತ, ವಿನೋಬಾ ರಸ್ತೆ, ಟೆರಿಷಿ ಯನ್ ಕಾಲೇಜು, ಸಿದ್ಧಾರ್ಥನಗರ, ಕುವೆಂಪುನಗರ, ಒಂಟಿ ಕೊಪ್ಪಲು, ತಿಲಕ್ನಗರ ವೃತ್ತ ಸೇರಿದಂತೆ ವಿವಿಧೆಡೆಗಳಲ್ಲಿ ಬಗೆ ಬಗೆಯ ಹೂವು, ಪೂಜಾ…
25 ತಂಡಗಳಿಂದ ಮೈಸೂರಲ್ಲಿ ಪಾರಂಪರಿಕ ನಿಧಿ ಶೋಧ
October 18, 2018ಮೈಸೂರು: ಮೈಸೂ ರಲ್ಲಿ 25 ತಂಡದ ನೂರು ಮಂದಿ ಯುವಕ -ಯುವತಿಯರು ಇಂದು ಪಾರಂಪರಿಕ ನಿಧಿ ಶೋಧ (ಟ್ರೆಷರ್ ಹಂಟ್) ನಡೆಸಿದರು. ದಸರಾ ಮಹೋತ್ಸವದ ಅಂಗವಾಗಿ ಮೈಸೂರು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ದ್ವಿಜ ಕನ್ಸರ್ವೇಷನ್ ಸೊಸೈಟಿ ಆಫ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಅದ್ಭುತ ಪಾರಂಪರಿಕ ನಿಧಿ ಶೋಧ ಕಾರ್ಯಕ್ರಮಕ್ಕೆ ಅರಮನೆ ಉತ್ತರ ದ್ವಾರದ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಹೆಚ್.ಪಿ.ಜನಾರ್ಧನ್ ಅವರು ಹಸಿರು…
ಶ್ರೀರಂಗಪಟ್ಟಣ ಪಾರಂಪರಿಕ ದಸರಾಕ್ಕೆ ಚಾಲನೆ
October 17, 2018ಶ್ರೀರಂಗಪಟ್ಟಣ: ಐತಿಹಾಸಿಕ ಪ್ರವಾಸಿ ತಾಣ ಶ್ರೀರಂಗಪಟ್ಟಣದಲ್ಲಿ ಇಂದಿನಿಂದ 3 ದಿನಗಳ ಕಾಲ ನಡೆಯುವ ಪಾರಂಪರಿಕ ದಸರಾ ಮಹೋತ್ಸವಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು. ತಾಲೂಕಿನ ಕಿರಂಗೂರು ಸಮೀಪದ ಬನ್ನಿಮಂಟಪದ ಬಳಿ ನಿರ್ಮಿಸಿದ್ದ ವೇದಿಕೆ ಏರಿ, ಚಾಮುಂಡೇಶ್ವರಿ ವಿಗ್ರಹ ಹೊತ್ತ ಆನೆ ಅಭಿಮನ್ಯುವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಉತ್ಸವಕ್ಕೆ ಮುಖ್ಯಮಂತ್ರಿ ಚಾಲನೆ ನೀಡಿದರು. ಬಳಿಕ ಶ್ರೀರಂಗಪಟ್ಟಣ ಪ್ರಮುಖ ಬೀದಿಯಲ್ಲಿ ಸಾಗಿದ ಮೆರವಣಿಗೆಯಲ್ಲಿ ಅಭಿಮನ್ಯುಗೆ, ವರಲಕ್ಷ್ಮೀ ಹಾಗೂ ಕಾವೇರಿ ಕುಮ್ಕಿ ಆನೆಗಳಾಗಿ ಸಾಥ್ ನೀಡಿದವು. ದಸರಾ ಉತ್ಸವಕ್ಕೆ ಚಾಲನೆ…
ಹುಣಸೂರು ಬಳಿ ರಸ್ತೆ ಅಪಘಾತ: ಬಾಲಿವುಡ್ ಸಾಹಸ ನಿರ್ದೇಶಕ ದುರ್ಮರಣ
October 17, 2018ಹುಣಸೂರು: ಹಿಂದಿ ಚಿತ್ರರಂಗದ ಸ್ಟಂಟ್ ಮಾಸ್ಟರ್ಗಳು (ಸಾಹಸ ನಿರ್ದೇಶಕರು) ತೆರಳುತ್ತಿದ್ದ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು ಉರುಳಿ ಬಿದ್ದ ಪರಿಣಾಮ ಮುಂಬೈ ಮೂಲದ ಒಬ್ಬ ಸ್ಟಂಟ್ ಮಾಸ್ಟರ್ ಸಾವನ್ನಪ್ಪಿದರೆ, ಚಾಲಕ ಸೇರಿದಂತೆ ಇಬ್ಬರು ಗಾಯಗೊಂಡಿರುವ ಘಟನೆ ಹುಣಸೂರು ತಾಲೂಕಿನ ಯಶೋಧರಪುರದ ಬಳಿಯಲ್ಲಿ ಮಂಗಳ ವಾರ ಮುಂಜಾನೆ ನಡೆದಿದೆ. ಸ್ಟಂಟ್ ಮಾಸ್ಟರ್ ಸತ್ತಾರ್ ಅಹಮದ್ ಖಾನ್(41) ದುರಂತದಲ್ಲಿ ಮೃತಪಟ್ಟವರು. ಮತ್ತೊಬ್ಬ ಸ್ಟಂಟ್ ಮಾಸ್ಟರ್ ಅರುಣ್ಕುಮಾರ್ ತೀವ್ರವಾಗಿ ಗಾಯಗೊಂಡಿದ್ದು, ಮೈಸೂರಿನ ಬೃಂದಾವನ್ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಲಕ ಉಮೇಶ್ಗೆ…