ಮೈಸೂರು: ಬೆಳಕಿನ ವೈಭವದಲ್ಲಿ ಮೂಡಿ ಬಂದ ಹಸಿರು ಚಪ್ಪರ… ವಿದ್ಯುತ್ ದೀಪಗಳ ಅಲಂಕಾರದಲ್ಲಿ ಮುಳುಗಿದ ಮೈಸೂರು… ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ಬುಧವಾರ ನಡೆದ ದಸರಾ ದೀಪಾಲಂಕಾರ ಉದ್ಘಾಟನೆಯ ವೇಳೆ ಈ ಬಗೆಯ ಬೆಳಕಿನ ವೈಭವತೆಯ ನೋಟ ಕಂಡುಬಂದಿತು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಿಮೋಟ್ ಕೀ ಒತ್ತುವ ಮೂಲಕ ‘ದಸರಾ ದೀಪಾಲಂಕಾರ-2018’ಕ್ಕೆ ಚಾಲನೆ ನೀಡಿದರು. ಸಯ್ಯಾಜಿರಾವ್ ರಸ್ತೆಯಲ್ಲಿ ನಿರ್ಮಿಸಿರುವ ಹಸಿರು ಚಪ್ಪರ ಎಲ್ಲರನ್ನು ಕೈ ಬೀಸಿ ಕರೆಯುತ್ತಿದೆ. ತಂತ್ರಜ್ಞಾನದ ಬಳಕೆಯಿಂದ ರಿಮೋಟ್ ಕೀ ಒತ್ತುತ್ತಿದಂತೆ ರಸ್ತೆಯಲ್ಲಿ ಹಸಿರು ದೀಪದ…
ದಸರಾ ವಿಶೇಷ ಬಸ್ಗಳಿಗೆ ಸಿಎಂ ಹಸಿರು ನಿಶಾನೆ
October 11, 2018ಮೈಸೂರು: ಮೈಸೂರು ದಸರಾ ಮಹೋತ್ಸವ ಸಂದರ್ಭದಲ್ಲಿ ಪ್ರವಾಸಿಗರ ಅನುಕೂಲತೆ ದೃಷ್ಟಿಯಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಮೈಸೂರಿನಿಂದ ಹೆಚ್ಚುವರಿ 50 ವಿಶೇಷ ಬಸ್ಗಳನ್ನು ರಸ್ತೆಗಿಳಿಸಿದೆ. ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಬಸ್ಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಕೆಎಸ್ ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಉಮಾಶಂಕರ್, ವಿಭಾಗೀಯ ನಿಯಂತ್ರಣಾಧಿಕಾರಿ…
ದಸರಾ ಚಲನ ಚಿತ್ರೋತ್ಸವಕ್ಕೆ ಸಿಎಂ ಕುಮಾರಸ್ವಾಮಿ ಚಾಲನೆ
October 11, 2018ಮೈಸೂರು: ಚಿತ್ರರಂಗ ಸಮಾಜ ಪರಿವರ್ತನೆಗೆ ಪರಿಣಾಮಕಾರಿ ಮಾಧ್ಯಮ. ಹೀಗಾಗಿ ಸಮಾಜವನ್ನು ತಪ್ಪು ದಾರಿಗೆ ಎಳೆಯದಂತೆ ಸಿನಿಮಾ ಮಾಧ್ಯಮ ಎಚ್ಚರ ವಹಿಸಬೇಕು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಮೈಸೂರಿನ ಕಲಾಮಂದಿರದಲ್ಲಿ ದಸರಾ ಚಲನಚಿತ್ರೋತ್ಸವ ಉಪಸಮಿತಿ ಬುಧವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮೈಸೂರು ದಸರಾ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಮಾಜದ ಉನ್ನತ ಬದಲಾವಣೆಗೆ ಸಿನಿಮಾ ಮಾಧ್ಯಮ ಪರಿಣಾಮಕಾರಿ. ಹೀಗಾಗಿ ಸಿನಿಮಾಗಳಲ್ಲಿ ಮಚ್ಚು, ಲಾಂಗುಗಳೆಂಬ ಹಿಂಸೆಯ ಸನ್ನಿವೇಶಗಳನ್ನು ಕಡಿಮೆ ಮಾಡುವ ಅಗತ್ಯವಿದೆ. ಸಮಾಜದಲ್ಲಿ ಶಾಂತಿ ಸುವ್ಯ ವಸ್ಥೆ ನೆಲೆಸುವಂತೆ ಸಿನಿಮಾ…
ಸಿಎಂ ಕುಮಾರಸ್ವಾಮಿ, ಅಂತಾರಾಷ್ಟ್ರೀಯ ಅಥ್ಲೀಟ್ ಪೂವಮ್ಮರಿಂದ ದಸರಾ ಕ್ರೀಡಾಕೂಟಕ್ಕೆ ಚಾಲನೆ
October 11, 2018ಕ್ರೀಡಾಪಟುಗಳಿಗೆ ಸರ್ಕಾರದಿಂದ ಅಗತ್ಯ ನೆರವು: ಸಿಎಂ ಭರವಸೆ ಮೈಸೂರು: ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಆಯೋ ಜಿಸಿರುವ ದಸರಾ ಕ್ರೀಡಾಕೂಟಕ್ಕೆ ಬುಧ ವಾರ ಚಾಲನೆ ನೀಡಲಾಯಿತು. ದಸರಾ ಕ್ರೀಡಾ ಉಪಸಮಿತಿ, ಯುವ ಸಬಲೀಕರಣ ಮತ್ತು ಕ್ರೀಡೆ ಇಲಾಖೆ ಸಹ ಯೋಗದಲ್ಲಿ ಇಂದಿನಿಂದ ಆಯೋಜಿ ಸಿರುವ ದಸರಾ ಕ್ರೀಡಾಕೂಟಕ್ಕೆ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಅಂತಾರಾಷ್ಟ್ರೀಯ ಅಥ್ಲೀಟ್ ಎಂ.ಆರ್. ಪೂವಮ್ಮ ಚಾಲನೆ ನೀಡಿದರು. ಪಥಸಂಚಲನ: ಕ್ರೀಡಾ ಸಮವಸ್ತ್ರ ಧರಿಸಿದ್ದ ವೇಟ್ ಲಿಫ್ಟಿಂಗ್, ವಾಲಿಬಾಲ್,…
ದಸರಾ ಆಹಾರ ಮೇಳಕ್ಕೆ ಚಾಲನೆ ಕಾದು ಕುಳಿತಿದ್ದ ಭೋಜನ ಪ್ರಿಯರಿಗೆ ಸುಗ್ಗಿ
October 11, 2018ಮೈಸೂರು,: ದಸರಾ ಮಹೋತ್ಸವದಲ್ಲಿ ಆಹಾರ ಪ್ರಿಯರ ಆಕರ್ಷಕ ತಾಣವಾಗುವ ಆಹಾರ ಮೇಳ ಬುಧವಾರ ಚಾಲನೆ ಪಡೆದುಕೊಂಡಿತು. ರಾಜ್ಯದ ನಾನಾ ಭಾಗ ಹಾಗೂ ವಿವಿಧ ರಾಜ್ಯಗಳ ವೈವಿಧ್ಯಮಯ ಆಹಾರಗಳ ಜೊತೆಗೆ ಈ ಬಾರಿ ವಿದೇಶಗಳ ಆಹಾರ ಶೈಲಿಯೂ ಘಮಘಮಿಸಲಿದೆ. ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಮೀಪದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ ಹಾಗೂ ಲಲಿತ ಮಹಲ್ ಹೆಲಿಪ್ಯಾಡ್ನ ಮುಡಾ ಮೈದಾನದಲ್ಲಿ ಇಂದಿನಿಂದ ಆಹಾರ ಮೇಳ ಚಾಲನೆ ಪಡೆದುಕೊಂಡಿದ್ದು, ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಅ.18ರವರೆಗೆ ಹಾಗೂ ಲಲಿತ ಮಹಲ್ ಹೆಲಿಪ್ಯಾಡ್ನ…
ಇಂದಿನಿಂದ ಮೈನವಿರೇಳಿಸುವ ದಸರಾ ಕುಸ್ತಿ
October 11, 2018ಮೈಸೂರು: ಮೈಸೂರು ದಸರಾ ಮಹೋ ತ್ಸವ-2018 ಅಂಗವಾಗಿ ದಸರಾ ಕುಸ್ತಿ ನಾಳೆಯಿಂದ 15ರವರೆಗೆ ನಡೆಯಲಿದೆ. ಮೈಸೂರು ದಸರಾ ಮಹೋ ತ್ಸವದ ಹತ್ತು ಹಲವು ಆಕರ್ಷಣೆಗಳಲ್ಲಿ ನಾಡಕುಸ್ತಿ ಮಹತ್ವದ್ದಾಗಿದೆ. ಮೈಸೂರು ವಿಭಾಗ ಮಟ್ಟದ, ರಾಜ್ಯ ಮಟ್ಟದ ಗ್ರೀಕೊ ರೋಮನ್, ರಾಜ್ಯಮಟ್ಟದ ಫ್ರೀಸ್ಟೈಲ್ ಮತ್ತು ರಾಜ್ಯಮಟ್ಟದ ಮಹಿಳಾ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಕುಸ್ತಿ ಪಟುಗಳ ದೇಹ ತೂಕ ತೆಗೆದುಕೊಳ್ಳುವ, ವೈದ್ಯಕೀಯ ಪರೀಕ್ಷೆ ನಡೆಸುವ ದಿನಾಂಕವನ್ನು ಕುಸ್ತಿ ಉಪಸಮಿತಿ ಬಿಡುಗಡೆಗೊಳಿಸಿದೆ. 2ನೇ ಮೈಸೂರು ವಿಭಾಗ ಮಟ್ಟದ ಫ್ರೀಸ್ಟೈಲ್ ಕುಸ್ತಿ ಪಂದ್ಯಾವಳಿ ದೇಹ…
ದಸರಾ ಆಹಾರ ಮೇಳದಲ್ಲಿ ಆರೋಗ್ಯ ವರ್ಧಕ ಕಾಡುಬಾಳೆ ಕಾಯಿಯ ತಿನಿಸು ಲಭ್ಯ
October 11, 201850 ರೂ. ಕೊಟ್ಟರೆ ಕಾಡುಬಾಳೆ ಸಾಂಬಾರ್, ಮುದ್ದೆ ಸವಿಯಲು ಸಿದ್ಧ ಮೈಸೂರು: ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಮೈಸೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಆವರಣ ದಲ್ಲಿ ಇಂದಿನಿಂದ ಆರಂಭವಾದ ಆಹಾರ ಮೇಳದಲ್ಲಿ ಬುಡಕಟ್ಟು ಆಹಾರ ದರ್ಶಿನಿ ಯಲ್ಲಿ ನಾಟಿ ಔಷಧೀಯ ಗುಣವುಳ್ಳ ಕಾಡುಬಾಳೆಕಾಯಿ ಸಾಂಬಾರ್, ಮಾಗಳಿ ಬೇರು ಟೀ, ಬಿದಿರಕ್ಕಿ ಪಾಯಸ ದೊರೆಯಲಿದೆ. ಹೆಚ್.ಡಿ.ಕೋಟೆಯ ಬುಡಕಟ್ಟು ಕೃಷಿಕರ ಸಂಘದ ವತಿಯಿಂದ ತೆರೆಯ ಲಾಗಿರುವ ಬುಡಕಟ್ಟು ದರ್ಶಿನಿಯಲ್ಲಿ ಇದೇ ಮೊದಲ ಬಾರಿಗೆ ಕಾಡುಬಾಳೆಕಾಯಿ ಸಾಂಬಾರ್, ಮುದ್ದೆ ನೀಡಲಾಗುತ್ತಿದೆ. ಕಾಕನಕೋಟೆ…
ಇಂದು ಮಹಿಳಾ ದಸರಾ ಉದ್ಘಾಟನೆ
October 11, 2018ಮೈಸೂರು: ಮೈಸೂರು ದಸರಾ ಮಹೋತ್ಸವ -2018 ಅಂಗವಾಗಿ ಅ.11ರಂದು ಬೆಳಿಗ್ಗೆ 7.30ಕ್ಕೆ ಅಂಬಾವಿಲಾಸ ಅರಮನೆ ಮುಂಭಾಗದಲ್ಲಿ ರಂಗೋಲಿ ಸ್ಪರ್ಧೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಡಾ.ಜಯಮಾಲ ಉದ್ಘಾಟಿಸುವರು. ಮಹಿಳಾ ದಸರಾ -2018ರ ಉದ್ಯಮ ಸಂಭ್ರಮ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳು ಹಾಗೂ ಮಹಿಳಾ ಉದ್ಯಮಿಗಳು ತಯಾರಿಸುವ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಬೆಳಿಗ್ಗೆ 11 ಗಂಟೆಗೆ ಜೆ.ಕೆ.ಮೈದಾನದಲ್ಲಿ ಸಚಿವೆ ಡಾ.ಜಯಮಾಲ ಉದ್ಘಾಟಿಸುವರು….
ಚೀಟಿ ವ್ಯವಹಾರದಲ್ಲಿ ಲಕ್ಷಾಂತರ ರೂ. ವಂಚನೆ: ನೊಂದವರ ಅಳಲು
October 11, 2018ಮೈಸೂರು: ಯಾವುದೇ ರಹದಾರಿ ಇಲ್ಲದೆ ಚೀಟಿ ವ್ಯವಹಾರ ನಡೆಸಿ, ಸಾಕಷ್ಟು ಜನರಿಗೆ ಲಕ್ಷಾಂತರ ರೂ. ವಂಚಿಸಿದ ಮೈಸೂರಿನ ಶ್ರೀರಾಂಪುರದ ಎನ್.ಗುರುಮೂರ್ತಿ ಉರುಫ್ ರಾಜು, ಅವರ ಪತ್ನಿ ಪ್ರೀತಿ, ಬಾಮೈದ ಮಂಜು ಹಾಗೂ ಅಳಿಯ ಶಶಿಕುಮಾರ್ ವಿರುದ್ಧ ಅಶೋಕಪುರಂ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ಚೀಟಿಯಿಂದ ಹಣ ಕಳೆದುಕೊಂಡು ನೊಂದ ಹಲವರು ಬುಧವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ರೈಲ್ವೆ ಇಲಾಖೆಯ ನಿವೃತ್ತ ನೌಕರ ಶ್ರೀರಾಂಪುರದ ಟಿ.ಎಸ್.ಹನುಮಂತರಾಯಪ್ಪ, ಶ್ರೀರಾಂಪುರದ ಆನಂದ ಬಸವರಾಜು, ರುದ್ರಪ್ಪಸ್ವಾಮಿ, ವಿಜಯನಗರ 2ನೇ…
ಆರಂಭವಾಯ್ತು ದಸರಾ ವಸ್ತು ಪ್ರದರ್ಶನ ಸಿಎಂ ಕುಮಾರಸ್ವಾಮಿ ಅವರಿಂದ ಉದ್ಘಾಟನೆ
October 11, 2018ಮೈಸೂರು: ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ 90 ದಿನಗಳ ಕಾಲ ಆಯೋ ಜಿಸಿರುವ ದಸರಾ ವಸ್ತು ಪ್ರದರ್ಶನಕ್ಕೆ ಬುಧವಾರ ಚಾಲನೆ ನೀಡಲಾಯಿತು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ದಸರಾ ವಸ್ತು ಪ್ರದರ್ಶನವನ್ನು ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು. ಈ ವೇಳೆ ಬೀಸು ಕಂಸಾಳೆ, ನಂದಿದ್ವಜ ಮತ್ತಿತರೆ ಕಲಾತಂಡಗಳು ಭವ್ಯ ಸ್ವಾಗತ ನೀಡಿದವು. ಆದರೆ, ಪ್ರತಿ ವರ್ಷದಂತೆ ಈ ವರ್ಷವೂ ವಸ್ತು ಪ್ರದ ರ್ಶನ ಆವರಣ ಬಹುತೇಕ ಖಾಲಿ ಯಾಗಿದ್ದು, ಖಾಸಗಿಯ 136 ಮಳಿಗೆಗಳಲ್ಲಿ 80, 95…