ಮೈಸೂರು, ನ.28- ಒಡಹುಟ್ಟಿದ ಅಣ್ಣನೇ ತನ್ನ ಅಪ್ರಾಪ್ತ ತಂಗಿಯ ಮೇಲೆ ಅತ್ಯಾಚಾರವೆಸಗಿದ್ದು, ಆಕೆ ಈಗ ಗರ್ಭಿಣಿ ಯಾಗಿರುವ ಅಮಾನವೀಯ ಘಟನೆ ಸಾಂಸ್ಕøತಿಕ ನಗರಿ ಮೈಸೂರಿನ ಗಿರಿದರ್ಶಿನಿ ಬಡಾವಣೆಯಿಂದ ವರದಿಯಾಗಿದೆ. ತಂದೆ-ತಾಯಿ ಇಲ್ಲದೇ ಇಬ್ಬರು ಸಹೋದರರೊಂದಿಗೆ ವಾಸಿಸುತ್ತಿದ್ದ 17 ವರ್ಷದ ಡಿಪ್ಲೊಮಾ ವಿದ್ಯಾರ್ಥಿನಿ ಅಣ್ಣನಿಂ ದಲೇ ಅತ್ಯಾಚಾರಕ್ಕೆ ಒಳಗಾದವಳಾಗಿದ್ದು, ಆಕೆಗೆ ತಾನು ಗರ್ಭಿಣಿ ಯಾಗಿರುವ ಅರಿವೇ ಇರಲಿಲ್ಲ. ಹೊಟ್ಟೆನೋವು ಕಾಣಿಸಿಕೊಂಡ ಪರಿಣಾಮ ಚಿಕಿತ್ಸೆಗಾಗಿ ಈಕೆ ಕೆ.ಆರ್.ಆಸ್ಪತ್ರೆಗೆ ತೆರಳಿದಾಗ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿ ಗರ್ಭಿಣಿಯಾಗಿದ್ದ ಕಾರಣ ಮಹಿಳಾ…
‘ಆಸ್ತಿ’ ಆಸೆ: ಖಾಲಿ ಪತ್ರಗಳ ಮೇಲೆ ಸತ್ತ ಅಜ್ಜಿಯ ಹೆಬ್ಬೆಟ್ಟು ಮುದ್ರೆ!
November 29, 2021ಮೈಸೂರು,ನ.28- ಹಣ ಮತ್ತು ಆಸ್ತಿ ಮುಂದೆ ಮಾನವೀಯ ಮೌಲ್ಯಗಳು ಹೋಗಲಿ ಮನುಷ್ಯತ್ವವೂ ಮಣ್ಣು ಪಾಲಾ ಗುತ್ತಿದೆ. ಒಂದಲ್ಲ ಒಂದು ಕಡೆ ಆಸ್ತಿ ಗಾಗಿಯೇ ಪ್ರಾಣ ವನ್ನೂ ಬಿಡುವು ದರ ನಡುವೆ, ಹೆಣದ ಹೆಬ್ಬೆಟ್ಟು ಮುದ್ರೆ ಹಾಕಿಕೊಂಡು ಆಸ್ತಿ ಗಳಿಸುವ ಮಟ್ಟಕ್ಕೂ ಮನುಷ್ಯ ಮುಂದಾಗಿದ್ದಾನೆ. ಇದಕ್ಕೆ ನಿದರ್ಶನವೊಂದು ವರದಿಯಾಗಿದೆ. ಮೈಸೂರಿನ ಶ್ರೀರಾಂಪುರದಲ್ಲಿ ಆಸ್ತಿ ಆಸೆಗಾಗಿ ವೃದ್ಧೆಯೊಬ್ಬರ ಶವದ ಹೆಬ್ಬೆಟ್ಟು ಮುದ್ರೆಯನ್ನು ಆಕೆಯ ಸಂಬಂಧಿಕರು ದಾಖಲೆ ಪತ್ರಗಳಿಗೆ ಒತ್ತಿಕೊಂಡಿರುವ ಅಮಾನವೀಯ ಘಟನೆ ವರದಿಯಾಗಿದೆ. ಮನೆಯಲ್ಲಿ ಮಲಗಿಸಿರುವ ಹೆಣದ ಹೆಬ್ಬೆಟ್ಟು ಮುದ್ರೆ…
ಭಾರತೀಯರಿಗೆ ಭಾರತೀಯತೆ ಮುಖ್ಯವೇ ಹೊರತು ಎಡಪಂಥ, ಬಲಪಂಥ ಅಲ್ಲ
November 28, 2021ಮೈಸೂರು,ನ.27(ಎಂಕೆ)-ಭಾರತೀಯ ರಿಗೆ ಭಾರತೀಯತೆ ಮುಖ್ಯವೇ ಹೊರತು ಎಡಪಂಥೀಯ ಹಾಗೂ ಬಲಪಂಥೀಯ ಎಂಬುದಲ್ಲ. ನಮಗೆ ಈ ಎಡ-ಬಲ ಎಂಬುದನ್ನು ನೀಡಿದವರು ಬ್ರಿಟಿಷರು ಎಂದು ಸುಪ್ರಿಂ ಕೋರ್ಟ್ ನ್ಯಾಯವಾದಿ ಜೆ.ಸಾಯಿ ದೀಪಕ್ ಹೇಳಿದರು. ಮೈಸೂರು ವಿಶ್ವವಿದ್ಯಾನಿಲಯ ಮಾನಸ ಗಂಗೋತ್ರಿಯಲ್ಲಿನ ವಿಜ್ಞಾನ ಭವನದಲ್ಲಿ ಮಂಥನ ಮೈಸೂರು ಸಂಸ್ಥೆ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ `ಇಂಡಿಯಾ ದಟ್ ಈಸ್ ಭಾರತ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಭಾರತೀಯರು ಒಂದೇ ಆಗಿದ್ದರು. ನಂತರ ಬಂದ ಬ್ರಿಟಿಷ ರಿಂದಾಗಿ ಎಡಪಂಥೀಯ ಹಾಗೂ ಬಲ…
ನಾಳೆ ದಡದಕಲ್ಲಹಳ್ಳಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ
November 28, 2021ಮೈಸೂರು, ನ.27- ಮೈಸೂರು ತಾಲೂಕು ಇಲವಾಲ ಹೋಬಳಿ ದಡದ ಕಲ್ಲಹಳ್ಳಿ ಗ್ರಾಮದಲ್ಲಿ ನ.29ರ ಸೋಮವಾರದಂದು ಶ್ರೀನಿವಾಸ ಕಲ್ಯಾಣ ಮಹೋತ್ಸವವನ್ನು ಏರ್ಪಡಿಸಲಾಗಿದೆ. ಅಂದು ಬೆಳಗ್ಗೆ 9 ಗಂಟೆಗೆ ದಡದಕಲ್ಲಹಳ್ಳಿ ಶ್ರೀ ವೆಂಕಟರಮಣಸ್ವಾಮಿ ವಿಭವ ಮೂರ್ತಿ ಸ್ವಾಮಿ ದೇವಸ್ಥಾನ ವಾರ್ಷಿಕೋತ್ಸವ ಹಾಗೂ ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವವನ್ನು ಶ್ರೀ ಯದುಗಿರಿ ಯತಿರಾಜ ಮಠದ ಪೀಠಾಧ್ಯಕ್ಷರಾದ ಶ್ರೀ ಯದುಗಿರಿ ಯತಿರಾಜ ಜೀಯರ್ ಮತ್ತು ಚಿಲಕವಾಡಿ ಮಠದ ಶ್ರೀ ಇಮ್ಮಡಿ ಗುರು ಲಿಂಗ ಸ್ವಾಮೀಜಿ ಅವರ ದಿವ್ಯಸಾನಿಧ್ಯದಲ್ಲಿ ನೆರವೇರಿಸಲಾಗುತ್ತಿದೆ. ಈ ಮಹಾನ್ ಉತ್ಸವದಲ್ಲಿ…
ಪಡುವಾರಹಳ್ಳಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
November 28, 2021ಮೈಸೂರು,ನ.26-ಮೈಸೂರಿನ ಪಡು ವಾರಹಳ್ಳಿಯಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್ ಸ್ಮರಣೆ ಕಾರ್ಯಕ್ರಮ ನಡೆಸಲಾಯಿತು. ಇಲ್ಲಿನ ನವಜ್ಯೋತಿ ಕನ್ನಡ ಯುವಕರ ಸಂಘದಿಂದ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ಮಾತನಾಡಿ, ಕನ್ನಡ ಭಾಷೆ, ನೆಲ-ಜಲ ರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ ಎಂದು ಭಾವಿಸಿ ಸತ್ಕಾರ್ಯಗಳನ್ನು ನಡೆಸಬೇಕು. ಪುನೀತ್ ರಾಜ್ಕುಮಾರ್ ಎಲ್ಲಾ ವಯೋಮಾನದ ಪ್ರೇಕ್ಷಕರ ಮನಮುಟ್ಟಿದ್ದರು. ಜೊತೆಗೆ ಹಲವು ಸಾಮಾಜಿಕ ಸೇವೆಗಳ ಮೂಲಕ ಸಾರ್ಥ ಕತೆ ಸಾಧಿಸಿದ್ದರು ಎಂದರು. ಕಾಂಗ್ರೆಸ್ ಮುಖಂಡ ಕೆ.ಹರೀಶ್ಗೌಡ ಸರ್ಕಾರಿ ಹಿರಿಯ ಪ್ರಾಥಮಿಕ…
ಸಿದ್ದರಾಮಯ್ಯ ಶೋಷಿತ ವರ್ಗಗಳ ಆಶಾಕಿರಣ
November 28, 2021ಮೈಸೂರು,ನ.27(ಎಂಟಿವೈ)-ಇತ್ತೀಚಿನ ದಿನಗಳಲ್ಲಿ ರಾಜ ಕಾರಣದಲ್ಲಿ ತೋರಿಕೆಯೇ ಹೆಚ್ಚಾಗಿದೆ. ಮಾಜಿ ಸಿಎಂ ಸಿದ್ದ ರಾಮಯ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗದ ಹಿತಕಾಯುವಲ್ಲಿ ತೋರಿದ ಬದ್ಧತೆ ಬೇರೆ ಯಾವ ರಾಜ ಕಾರಣಿಗಳಿಂದಲೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಭವನದಲ್ಲಿ ಮೈಸೂರು ವಿವಿಯ ಎನ್.ರಾಚಯ್ಯ ಅಧ್ಯಯನ ಪೀಠ ಹಾಗೂ ರಾಜ್ಯಶಾಸ್ತ್ರ ಅಧ್ಯಯನ ಪೀಠದ ವತಿಯಿಂದ ಆಯೋಜಿಸಿದ್ದ `ಪೌರಬಂಧು’ ಕೃತಿ ಬಿಡುಗಡೆ ಸಮಾ ರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ…
ಪಿಗ್ಮಿ ಕಲೆಕ್ಟರ್ಗಳ ದೋಚುತ್ತಿದ್ದ ಐವರು ಸುಲಿಗೆಕೋರರ ಸೆರೆ
November 28, 2021ಮೈಸೂರು,ನ.27(ಆರ್ಕೆ)-ಪಿಗ್ಮಿ ಕಲೆಕ್ಟರ್ ಗಳಿಂದ ಹಣ ಮತ್ತು ಮೊಬೈಲ್ ದೋಚುತ್ತಿದ್ದ ಬೆಂಗಳೂರಿನ ಮೂವರು ಸೇರಿದಂತೆ ಐವರು ಸುಲಿಗೆಕೋರರ ಗ್ಯಾಂಗ್ ಅನ್ನು ಕೃತ್ಯ ನಡೆದ 24 ಗಂಟೆಯೊಳಗೆ ಬಂಧಿಸುವಲ್ಲಿ ಉದಯಗಿರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಮೈಸೂರಿನ ಎನ್.ಆರ್. ಮೊಹಲ್ಲಾ, ಶಿವಾಜಿ ರಸ್ತೆಯ ನಯಾಜ್ ಪಾಷಾ ಮಗ ಸಲೀಂ ಪಾಷಾ ಅಲಿಯಾಸ್ ಸಲೀಂ (25), ಎಜೆ ಬ್ಲಾಕ್ 2ನೇ ಕ್ರಾಸ್ ನಿವಾಸಿ ಫೈರೋಜ್ ಖಾನ್ ಮಗ ಪಾಜಿಲ್ ಖಾನ್ ಅಲಿಯಾಸ್ ಪಾಜಿಲ್(26), ಬೆಂಗಳೂ ರಿನ ಅಂಜನಾಪುರದ ಆವಲಹಳ್ಳಿ 1ನೇ ಕ್ರಾಸ್ ನಿವಾಸಿ…
ಇಂದು ನಮೋ ಕಪ್ ಚದುರಂಗ ಪಂದ್ಯಾವಳಿ
November 28, 2021ಮೈಸೂರು, ನ.27(ಪಿಎಂ)- ಬಿಜೆಪಿ ಮೈಸೂರು ನಗರ ಯುವ ಮೋರ್ಚಾ ವತಿಯಿಂದ ನವೆಂಬರ್ 28ರಂದು ನಮೋ ಕಪ್ ಮುಕ್ತ ಚದುರಂಗ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಮೋರ್ಚಾದ ನಗರಾಧ್ಯಕ್ಷ ಎಂ.ಜೆ.ಕಿರಣ್ಗೌಡ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕಾರಣದೊಂದಿಗೆ ಕ್ರೀಡೆಗೂ ಉತ್ತೇಜನ ನೀಡಬೇಕು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರ (ನಮೋ) ಹೆಸರಿನಲ್ಲಿ ಫಸ್ಟ್ ಮೂವ್ ಚೆಸ್ ಟ್ರಸ್ಟ್ನ ಸಹಯೋಗದೊಂದಿಗೆ ಈ ಚದುರಂಗ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಹೇಳಿದರು. ನಗರದ ಬಿಜೆಪಿ ಕಚೇರಿಯಲ್ಲಿ…
ಸಂವಿಧಾನ ಬದಲಿಸಲು ಮುಂದಾದರೆ ರಕ್ತಕ್ರಾಂತಿಯೇ ಆಗುತ್ತದೆ
November 28, 2021ಮೈಸೂರು,ನ.27(ಎಂಟಿವೈ)- ಸಂವಿಧಾನವನ್ನು ಬದಲಿಸಬೇಕು ಎಂದು ಉದ್ದೇಶಿಸಿರುವವರನ್ನು ಹಾಗೂ ಸಂವಿಧಾನವನ್ನು ವಿರೋಧಿಸುವವರನ್ನು ನಾವು ಪ್ರಬಲವಾಗಿ ವಿರೋಧಿಸಬೇಕು. ಉದ್ದೇಶ ಪೂರ್ವಕವಾಗಿ ಸಂವಿಧಾನ ಬದಲಿಸಲು ಮುಂದಾ ದರೆ ರಕ್ತಕ್ರಾಂತಿಯೇ ಆಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಭವನ ದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಎನ್.ರಾಚಯ್ಯ ಅಧ್ಯಯನ ಪೀಠ, ರಾಜ್ಯಶಾಸ್ತ್ರ ಅಧ್ಯಯನ ಪೀಠ ಹಾಗೂ ಕರ್ನಾಟಕ ರಾಜ್ಯ ಪೌರಕಾರ್ಮಿಕರ ಸಂಘಟನೆಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಾಜಿ ಮೇಯರ್ ನಾರಾಯಣ್ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರ ಕುರಿತಾದ ‘ಪೌರಬಂಧು’ ಕೃತಿ…
ದಸರಾ ವಿಶೇಷ ವಸ್ತು ಪ್ರದರ್ಶನ ಪ್ರಾರಂಭ
November 27, 2021ಪ್ರತಿನಿತ್ಯ ಸಂಜೆ ೪ರಿಂದ ರಾತ್ರಿ ೯ರವರೆಗೆ ಅವಕಾಶ ಮನರಂಜನೆ ಜೊತೆಗೆ ವಸ್ತುಗಳ ಪ್ರದರ್ಶನ-ಮಾರಾಟ ಮೈಸೂರು, ನ.೨೬(ಎಸ್ಬಿಡಿ)- ಮೈಸೂರಿನಲ್ಲಿ ಇಂದಿನಿAದ ದಸರಾ ವಿಶೇಷ ವಸ್ತು ಪ್ರದರ್ಶನ ಆರಂಭವಾಗಿದೆ.ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿ ಕಾರದ ಆವರಣದಲ್ಲಿ ಜ.೩೦ರವರೆಗೆ ಒಟ್ಟು ೬೬ ದಿನಗಳ ಕಾಲ ಪ್ರತಿದಿನ ಸಂಜೆ ೪ರಿಂದ ರಾತ್ರಿ ೯ ಗಂಟೆವರೆಗೆ ವಸ್ತು ಪ್ರದರ್ಶನ ಮತ್ತು ಮಾರಾಟ ನಡೆಯಲಿದ್ದು, ಪ್ರಾಧಿಕಾರದ ಅಧ್ಯಕ್ಷ ಹೇಮಂತ್ಕುಮಾರ್ ಗೌಡ ಶುಕ್ರವಾರ ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಿದರು. ನಂತರ ಮಾಧ್ಯಮಗ ಳೊಂದಿಗೆ ಮಾತನಾಡಿ, ವಿಶ್ವವಿಖ್ಯಾತ…










