ಮೈಸೂರು: ಮರಿಮಲ್ಲಪ್ಪ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ವಿದ್ವಾನ್ ಡಾ.ಬಿ.ಎಸ್. ಪರ್ವತರಾಜು ಅವರಿಗೆ ಈ ಸಾಲಿನ `ಅಮರವಾಣಿ ಪ್ರಶಸ್ತಿ’ಯನ್ನು ಬುಧವಾರ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ.ಎನ್.ಎಸ್. ತಾರಾನಾಥ್ ಪ್ರದಾನ ಮಾಡಿದರು. ಜೆಎಲ್ಬಿ ರಸ್ತೆಯ ಐಡಿಯಲ್ ಜಾವಾ ರೋಟರಿ ಸಭಾಂಗಣದಲ್ಲಿ ರೋಟರಿ ಕ್ಲಬ್ ಮೈಸೂರು ಮಿಡ್ಟೌನ್ ವತಿಯಿಂದ ಪ್ರೊ.ಎಂ.ಜಿ. ನಂಜುಂಡಾರಾಧ್ಯ ಸ್ಮಾರಕ, ರೋಟರಿ ಮೈಸೂರು ಮಿಡ್ಟೌನ್ -ಅಮರವಾಣಿ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ನಂತರ ಪ್ರೊ.ಎನ್.ಆರ್.ತಾರಾನಾಥ್ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಕನ್ನಡ ಕಲಿಸುವುದೇ ಕಷ್ಟದ…
ಏಷ್ಯಾ ಕಪ್: ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು
September 20, 2018ದುಬೈ: ಯುಎಇನಲ್ಲಿ ನಡೆ ಯುತ್ತಿರುವ ಏಷ್ಯಾ ಕಪ್ ಟೂರ್ನಿಯ ‘ಎ’ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಭುವನೇಶ್ವರ್ ಕುಮಾರ್ ಹಾಗೂ ಕೇದರ್ ಜಾಧವ್ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ 43.1 ಓವರ್ ಗಳಲ್ಲಿ 162ರನ್ಗಳಿಗೆ ಆಲೌಟಾಯಿತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ್ದ ಭಾರತಕ್ಕೆ ನಾಯಕ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಬಿರುಸಿನ ಬ್ಯಾಟಿಂಗ್ ನೆರವಿ ನಿಂದ 29 ಓವರ್ಗಳಲ್ಲಿ…
ಬೇರೆ ಸಾಹಿತಿಗಳ ಕೃತಿಗಳಂತೆ ಬೇಂದ್ರೆಯವರ ಕೃತಿಗಳು ಸಾಹಿತ್ಯ ಪ್ರೇಮಿಗಳ ಕೈ ಸೇರಲಿಲ್ಲ
September 20, 2018ವಿಮರ್ಶಕ ಡಾ. ಹೆಚ್.ಎಸ್. ಸತ್ಯನಾರಾಯಣ ವಿಷಾದ ಮೈಸೂರು: ಬೇರೆ ಬೇರೆ ಸಾಹಿತಿಗಳು ಹಾಗೂ ಕವಿಗಳ ಕೃತಿಗಳು ಸಿಗುವಂತೆ ದ.ರಾ.ಬೇಂದ್ರೆಯವರ ಕೃತಿಗಳು ಸಾಹಿತ್ಯ ಪ್ರೇಮಿಗಳ ಕೈ ಸೇರಲಿಲ್ಲ ಎಂದು ವಿಮರ್ಶಕ ಚಿಕ್ಕಮಗಳೂರಿನ ಡಾ.ಹೆಚ್.ಎಸ್. ಸತ್ಯನಾರಾಯಣ ವಿಷಾದಿಸಿದ್ದಾರೆ. ಮೈಸೂರಿನ ಮಹಾರಾಜ ಪದವಿ ಕಾಲೇಜಿನ ಜೂನಿಯರ್ ಬಿ.ಎ. ಹಾಲ್ ನಲ್ಲಿ ಬುಧವಾರ ಮಹಾರಾಜ ಕಾಲೇಜಿನ ಕನ್ನಡ ವಿಭಾಗ ಮತ್ತು ಕನ್ನಡ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ `ಬೇಂದ್ರೆ ಮತ್ತು ಅಡಿಗರ ಆಯ್ದ ಕವಿತೆಗಳು: ಅನುಭವ ಮತ್ತು ಅಭಿವ್ಯಕ್ತಿಯ ವಿಭಿನ್ನ…
ಮನೆ ಖಾತೆ ವರ್ಗಾವಣೆಗೆ ಲಂಚ ಸ್ವೀಕಾರ
September 20, 2018ಎಸಿಬಿ ಬಲೆಗೆ ಬಿದ್ದ ಪಾಲಿಕೆ ರೆವಿನ್ಯೂ ಇನ್ಸ್ಪೆಕ್ಟರ್ ಮೈಸೂರು: ಮನೆ ಖಾತೆ ವರ್ಗಾ ವಣೆ ಮಾಡಲು 2 ಸಾವಿರ ಲಂಚ ಸ್ವೀಕರಿಸುತ್ತಿದ್ದ ರೆವಿನ್ಯೂ ಇನ್ಸ್ಪೆಕ್ಟರ್ ಬುಧವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ. ಪಾಲಿಕೆ ವಲಯ ಕಚೇರಿ-8(ಉದಯಗಿರಿ)ರ ರೆವಿನ್ಯೂ ಇನ್ಸ್ಪೆಕ್ಟರ್(ಆರ್ಐ) ಪಿ.ಕುಮಾರ ಸ್ವಾಮಿ ಎಸಿಬಿ ಬಲೆಗೆ ಬಿದ್ದವರು. ಉದಯಗಿರಿ ನಿವಾಸಿ ಲಕ್ಷ್ಮಿಬಾಯಿ ಎಂಬುವರು ಮನೆ ಖಾತೆ ವರ್ಗಾವಣೆಗಾಗಿ ವಲಯ ಕಚೇರಿ 8ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆರ್ಐ ಕುಮಾರಸ್ವಾಮಿ ಖಾತೆ ವರ್ಗಾವಣೆ ಮಾಡಿಕೊಡಲು ಇಲ್ಲದ ಸಬೂಬು ಹೇಳಿ ಸತಾಯಿಸುತ್ತಿದ್ದರು. ಇದರಿಂದ ಮನನೊಂದ…
ಜಮೀನು ವಿವಾದ: ಮಚ್ಚಿನಿಂದ ಹಲ್ಲೆ
September 20, 2018ಸಕಲೇಶಪುರ: ಜಮೀನು ಒತ್ತುವರಿ ಹಿನ್ನೆಲೆ ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ತಾಲೂಕಿನ ಸಿಂಗೋಡನಹಳ್ಳಿಯಲ್ಲಿ ನಡೆದಿದೆ.ಗ್ರಾಮದ ರಂಗೇಗೌಡ ಎಂಬುವರ ಮೇಲೆ ಮಂಜೇಗೌಡ ಎಂಬುವವರು ಹಲ್ಲೆ ಮಾಡಿದ್ದಾರೆ. ಜಮೀನು ಒತ್ತುವರಿ ಕುರಿತು ಕೆಲ ದಿನಗಳ ಹಿಂದೆ ರಂಗೇ ಗೌಡ ಹಾಗೂ ಮಂಜೇಗೌಡರ ಮಧ್ಯೆ ಜಗಳ ನಡೆದಿತ್ತು. ಮಂಗಳವಾರ ಸಂಜೆ ರಂಗೇಗೌಡ ದನ ಮೇಯಿಸಿ ಹಿಂದಿರು ಗುವಾಗ ರಸ್ತೆಯಲ್ಲಿ ಅಡ್ಡಗಟ್ಟಿದ ಮಂಜೇ ಗೌಡ ಜಗಳ ತೆಗೆದು ಹಲ್ಲೆ ಮಾಡಿದ್ದಾರೆ. ಪರಿಣಾಮ ರಂಗೇ ಗೌಡರ ಬಲ ಕಿವಿಗೆ ಏಟಾಗಿದೆ. ಗಾಯಗೊಂಡ ರಂಗೇ ಗೌಡರನ್ನು…
ಜಾರಕಿಹೊಳಿ ಸಹೋದರರ ಅಸಮಾಧಾನ ನಿವಾರಣೆ
September 19, 2018ಬೆಂಗಳೂರು: ಬೆಳಗಾವಿ ದೊರೆಗಳು (ಜಾರಕಿಹೊಳಿ ಸಹೋದರರು) ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಇಂದು ಭೇಟಿ ಮಾಡಿ, ಚರ್ಚೆ ನಡೆಸಿ, ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡಿರುವುದಲ್ಲದೆ, ಮೈತ್ರಿ ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಗರದ ಪಂಚತಾರಾ ಹೊಟೇಲ್ ಒಂದರಲ್ಲಿ ಗಣಿ ಉದ್ಯಮಿ ಹಾಗೂ ಶಾಸಕ ನಾಗೇಂದ್ರ ಜೊತೆಗೂಡಿ ಮುಖ್ಯಮಂತ್ರಿಯವರ ಜೊತೆ ಸುಮಾರು ಎರಡು ತಾಸಿಗೂ ಹೆಚ್ಚು ಕಾಲ ಚರ್ಚೆ ನಡೆಸಿ, ತಮ್ಮ ಕೆಲವು ಬೇಡಿಕೆಗಳನ್ನು ಈಡೇರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಕೆಲವು ಬೇಡಿಕೆಗಳಿಗೆ ಕಾಂಗ್ರೆಸ್ ವರಿಷ್ಠರ ಮೇಲೆ ಒತ್ತಡ…
ಭಿನ್ನಮತ ಕೇವಲ ಮಾಧ್ಯಮ ಸೃಷ್ಟಿ
September 19, 2018ಬೆಂಗಳೂರು: ಕಾಂಗ್ರೆಸ್ನಲ್ಲಿ ಯಾವುದೇ ಭಿನ್ನಮತವಿಲ್ಲ. ಇದೆಲ್ಲಾ ಮಾಧ್ಯಮ ಸೃಷ್ಟಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ವಿಧಾನಸೌಧ ದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಯಾವುದೇ ಗೊಂದಲ, ಅಸಮಾಧಾನ ಇಲ್ಲ. ಕೇವಲ ಮಾಧ್ಯಮಗಳು ಈ ರೀತಿ ಭಿನ್ನಮತ ಆಗಿದೆ ಎಂದು ಬಿಂಬಿಸುತ್ತಿದ್ದಾರೆ. ಇದೆಲ್ಲ ಸತ್ಯಕ್ಕೆ ದೂರವಾದ ಸುದ್ದಿ. ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ. ಕೆಲವರು ನಿಗಮ ಮಂಡಳಿ ಅಧ್ಯಕ್ಷ ಸ್ಥಾನ, ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವುದು ಸತ್ಯ. ಆದರೆ ಯಾರೂ ಪಕ್ಷ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಯಾರೂ ಸಚಿವ ಸ್ಥಾನದ…
ಮೈಸೂರು ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿ ಆರಂಭ
September 19, 2018ಮೈಸೂರು: ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ನಗರ ಪಾಲಿಕೆಯು ಮೈಸೂರು ನಗರದಾದ್ಯಂತ ಎಲ್ಲಾ ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿ ಆರಂಭವಾಗಿದೆ. ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯಕ್ಕೆ ಪಾಲಿಕೆಯ ಎಲ್ಲಾ 9 ವಲಯ ಕಚೇರಿ ಸರಹದ್ದಿನಲ್ಲಿ ಕಳೆದ ಒಂದು ವಾರದಿಂದ ಕಾಮಗಾರಿ ಭರದಿಂದ ಸಾಗಿದ್ದು, ಇನ್ನೊಂದು ವಾರದಲ್ಲಿ ಕೆಲಸ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ವಲಯ 1ರಲ್ಲಿ ವಲಯಾಧಿಕಾರಿ ಸುನೀಲ್ಬಾಬು, 2ರಲ್ಲಿ ಜವರೇಗೌಡ, 3ರಲ್ಲಿ ಶಿವಾನಂದ್ಮೂರ್ತಿ, 4ನೇ ವಲಯದಲ್ಲಿ ಪ್ರಿಯದರ್ಶಿನಿ ಮತ್ತು 6ರಲ್ಲಿ…
ವಿಜಯಶ್ರೀಪುರ ನಿವಾಸಿಗಳ ಸಮಸ್ಯೆಗೆ ಸೂಕ್ತ ಕಾನೂನಾತ್ಮಕ ಪರಿಹಾರ
September 19, 2018ಬೆಂಗಳೂರು: ಮೈಸೂರಿನ ವಿಜಯಶ್ರೀಪುರ ಬಡಾವಣೆ ನಿವಾಸಿಗಳ ವಿವಾದ ಸಂಬಂಧ ವಸ್ತು ಸ್ಥಿತಿಯನ್ನು ನ್ಯಾಯಾಲಯದ ಗಮನಕ್ಕೆ ತಂದು, ನಿವಾಸಿಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೀಡಿದ್ದಾರೆ. ಬೆಂಗಳೂರಿನ ರೇಸ್ಕೋರ್ಸ್ ರಸ್ತೆ ಯಲ್ಲಿರುವ ಖನಿಜ ಭವನದಲ್ಲಿ ವಿಜಯಶ್ರೀಪುರ ಬಡಾವಣೆ ವಿವಾದ ಸಂಬಂಧಿತ ಸಭೆ ನಡೆಸಿದ ಅವರು, ಸುಪ್ರೀಂಕೋರ್ಟ್ನಲ್ಲಿ ದಾವೆ ಹೂಡಿರುವ ಕಾಂತರಾಜೇ ಅರಸ್ ಹಾಗೂ ಅವರ ಪರ ವಕೀಲರೊಂದಿಗೆ ಮಾತನಾಡಿ, ಮೊಕದ್ದಮೆ ವಾಪಸ್ಸು ತೆಗೆದುಕೊಳ್ಳುವಂತೆ ಮನವರಿಕೆ ಮಾಡಿಕೊಡುತ್ತೇವೆ. ಒಟ್ಟಾರೆ ನಿಮಗೆ ಅನುಕೂಲವಾಗುವಂತೆ ಸರ್ಕಾರ ಕ್ರಮ…
ಈ ಬಾರಿ ದಸರಾ ಮಹೋತ್ಸವದ ವಿಶೇಷ ಆಕರ್ಷಣೆ ಮತ್ಸ್ಯ ಮೇಳ
September 19, 2018ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ವೇಳೆ ಇದೇ ಮೊದಲ ಬಾರಿಗೆ ಮತ್ಸ್ಯಲೋಕ ಅನಾವರಣಗೊಳ್ಳಲಿದೆ. ಮೈಸೂರಿನ ಜೆ.ಕೆ.ಮೈದಾನದಲ್ಲಿ ನಡೆಯಲಿರುವ ರೈತ ದಸರಾ ಹಾಗೂ ಕೃಷಿ ಮೇಳದ ಒಂದು ಅಂಗವಾಗಿ ಮತ್ಸ್ಯಮೇಳ ಆಯೋಜಿಸಲು ನಿರ್ಧರಿಸಲಾಗಿದ್ದು, ವಿವಿಧ ತಳಿ ಹಾಗೂ ನಾನಾ ಬಣ್ಣದ ಮೀನುಗಳನ್ನು ಪ್ರದರ್ಶಿಸಿ ಪ್ರವಾಸಿಗರನ್ನು ಆಕರ್ಷಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಒಂದೇ ಸೂರಿನಡಿ ಬಗೆ ಬಗೆಯ ಮತ್ಸ್ಯ (ಮೀನು)ಗಳ ಸೌಂದರ್ಯ, ವಯ್ಯಾರವನ್ನು ಕಣ್ತುಂಬಿಕೊಳ್ಳುವ ಸದಾವಕಾಶವನ್ನು ಮೀನು ಗಾರಿಕಾ ಇಲಾಖೆ ಹಾಗೂ ಜಿಲ್ಲಾಡಳಿತ ಒದಗಿಸುತ್ತಿದೆ. ಇದಕ್ಕಾಗಿ ದೇಶ ವಿದೇಶಗಳ ಅಪರೂಪದ ಮೀನು…