ಬೆಟ್ಟದಪುರ: ಕೊಡಗು ಜಿಲ್ಲೆಯ ಪ್ರವಾಹ ಪೀಡಿತ ಸಂತ್ರಸ್ತರ ನೆರವಿಗೆ ಪಿರಿಯಾಪಟ್ಟಣ ತಾಲೂಕಿನ ಚಪ್ಪರದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ದಿಂದ ಲಕ್ಷ ರೂ ನೀಡಲು ತೀರ್ಮಾನಿ ಸಲಾಗಿದೆ. ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮದಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2018-19ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಬೆಟ್ಟದಪುರ ಎಂಸಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಚಂದ್ರಶೇಖರ್ ಅವರು ನೆರವಿನ ಹಣ ವನ್ನು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಕಳಸಿಕೊಡುವುದಾಗಿ ತಿಳಿಸಿದರು. ಸಹಕಾರ ಸಂಘಗಳಲ್ಲಿ ಸಾಲ ಪಡೆದವರು ಸರಿಯಾದ…
ಹುಲಿ ಪತ್ತೆಗೆ ಮತ್ತೆ ಕಾರ್ಯಾಚರಣೆ
August 25, 2018ಹುಣಸೂರು: ತಾಲೂಕಿನ ಹನಗೋಡು ಸಮೀಪದ ಕೆ.ಜಿ. ಹಬ್ಬನಕುಪ್ಪೆ ಗ್ರಾಮದ ತರಗನ್ ಎಸ್ಟೇಟ್ನಲ್ಲಿ ಹುಲಿ ಕಾಣಿಸಿಕೊಂಡು ಭಯ ಹುಟ್ಟಿಸಿದ ಹಿನ್ನೆಲೆ ಯಲ್ಲಿ ಇಲಾಖೆ ಕಾರ್ಯಾಚರಣೆ ಕಾರ್ಯ ಕೈಗೊಂಡಿದ್ದು, ಸ್ಥಳಕ್ಕೆ ವನ್ಯಜೀವಿ ವಿಭಾಗದ ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಜಯರಾಂ ಮತ್ತು ಸಹಾಯಕ ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಜಗತ್ರಾಂ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ನಾಗರಹೊಳೆ ಅರಣ್ಯದ ವೀರನಹೊಸಳ್ಳಿ ವಲಯಕ್ಕೆ ಹೊಂದಿಕೊಂಡಿರುವ ಕೆ.ಜಿ. ಹಬ್ಬನಕುಪ್ಪೆ ಗ್ರಾಮದಲ್ಲಿರುವ 650 ಎಕರೆ ಪ್ರದೇಶದ ತರಗನ್ ಎಸ್ಟೇಟ್ನಲ್ಲಿ ಕಳೆದ 8 ದಿನಗಳಿಂದ ನಿರಂತರವಾಗಿ…
ಮಳೆ ಹಾನಿ: ಶಾಸಕ, ಸಂಸದರಿಂದ ಪರಿಶೀಲನೆ
August 25, 2018ಅಂತರಸಂತೆ: ಕಬಿನಿ ಹಿನ್ನೀರು ಮತ್ತು ಮಳೆಯಿಂದ ಹಾನಿಗೊಳ ಗಾದ ಡಿ.ಬಿ.ಕುಪ್ಪೆ ಗ್ರಾಪಂ ವ್ಯಾಪ್ತಿಯ ಹಲವು ಗ್ರಾಮಗಳಿಗೆ ಸಂಸದ ಆರ್.ಧ್ರುವನಾರಾ ಯಣ್ ಮತ್ತು ಶಾಸಕ ಅನಿಲ್ ಚಿಕ್ಕಮಾದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಚ್ಚೂರು, ಆನೆಮಾಳ, ವಡಕನಮಾಳ, ಬಾವಲಿ ಮುಂತಾದ ಗ್ರಾಮಗಳಿಗೆ ಭೇಟಿ ಕೊಟ್ಟು ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿ ಸರಕಾರ ಮತ್ತು ತಾಲೂಕು ಆಡಳಿತ ನಿಮ್ಮ ನೆರವಿಗೆ ಇದೆ ಎಂದು ಹೇಳಿ ಸರ್ಕಾರ ದಿಂದ ಸಿಗುವ ಸವಲತ್ತು ಹಾಗೂ ಪರಿಹಾರ ಕೊಡಿಸುವ ಭರವಸೆ ನೀಡಿದರು. ನಂತರ ಡಿ.ಬಿ.ಕುಪ್ಪೆ ಗ್ರಾಮದ…
ಎನ್ಐಇನಲ್ಲಿ ಆ.31ರಿಂದ 2 ದಿನ `ಆಕಾರ್-2018’ ಅಂತರ ಕಾಲೇಜು ಸ್ಪರ್ಧೆ
August 25, 2018ಮೈಸೂರು: ಮೈಸೂರಿನ ಮಾನಂದವಾಡಿ ರಸ್ತೆಯಲ್ಲಿರುವ ಎನ್ಐಇ ಕಾಲೇಜಿನ ಇಂಜಿನಿಯರಿಂಗ್ ವಿಭಾಗವು ಆ.31 ಮತ್ತು ಸೆ.1ರಂದು `ಆಕಾರ್-2018’ ಅಂತರ ಕಾಲೇಜು ಸ್ಪರ್ಧೆ, `ವಿಪತ್ತು ನಿರ್ವಹಣೆ ಹಾಗೂ ವಾಹನ ಸಂಚಾರ ತಾಂತ್ರಿಕತೆ ಮತ್ತು ನಿರ್ವಹಣೆ’ ಕುರಿತು ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಿದೆ ಎಂದು ಎನ್ಐಇ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಎನ್.ಸುರೇಶ್ ಇಂದಿಲ್ಲಿ ತಿಳಿಸಿದರು. ಪಾದಚಾರಿಗಳ ಸುರಕ್ಷತೆಗಾಗಿ ಆ.26ರಂದು ಬೆಳಿಗ್ಗೆ 6.30 ಗಂಟೆಗೆ ಕಾಲೇಜಿನ ಅಮೃತ ಮಹೋತ್ಸವ ಕಟ್ಟಡ ದಿಂದ 5 ಕಿ.ಮೀ `ಆಕಾರ್ ಓಟ’ ಏರ್ಪಡಿಸಲಾಗಿದ್ದು, ಸಂಸದ…
ಮೃಗಾಲಯಕ್ಕೆ ಶ್ರೀ ಸುತ್ತೂರು ಮಠದ ಕೊಡುಗೆ
August 25, 2018ಮೈಸೂರು: ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 103ನೇ ಜಯಂತಿ ಮಹೋತ್ಸವದ ಅಂಗವಾಗಿ ಆ.29ರಂದು ಮೈಸೂರಿನ ಮೃಗಾಲಯದ ಪ್ರಾಣಿ-ಪಕ್ಷಿಗಳಿಗೆ ಆಹಾರ ಒದಗಿಸಲು ಶ್ರೀ ಸುತ್ತೂರು ಮಠದಿಂದ ನೀಡುವ 1 ಲಕ್ಷ ರೂ.ಗಳ ಚೆಕ್ಕನ್ನು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಯವರಿಗೆ ನೀಡಿದರು. ಈ ವೇಳೆ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ಕಾರ್ಯದರ್ಶಿ ಎಸ್. ಶಿವಕುಮಾರಸ್ವಾಮಿ, ಆರ್.ಎಸ್. ನಂಜುಂಡಸ್ವಾಮಿ, ಗಣೇಶ್ ಮತ್ತಿತರರಿದ್ದರು.
ವರಮಹಾಲಕ್ಷ್ಮಿ ಹಬ್ಬ; ನೋಟುಗಳ ನಡುವೆ ಕಂಗೊಳಿಸಿದ ಧನಲಕ್ಷ್ಮಿ..!
August 25, 2018ಚಾಮುಂಡೇಶ್ವರಿಗೆ ನೋಟುಗಳಿಂದ ಸಿಂಗಾರ: ನೋಡಲು ಮುಗಿಬಿದ್ದ ಭಕ್ತ ಸಾಗರ ಮಂಡ್ಯ: ಜಿಲ್ಲಾದ್ಯಂತ ವರಮಹಾಲಕ್ಷ್ಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಶುಕ್ರವಾರ ಆಚರಿಸಲಾಯಿತು.ಮಂಡ್ಯ, ಶ್ರೀರಂಗಪಟ್ಟಣ, ಪಾಂಡವಪುರ, ಕೆ.ಆರ್.ಪೇಟೆ, ಮದ್ದೂರು, ನಾಗಮಂಗಲ ಸೇರಿದಂತೆ ವಿವಿಧೆಡೆ ಲಕ್ಷ್ಮಿ ದೇವಸ್ಥಾನಗಳಲ್ಲಿ ವಿವಿಧ ರೀತಿಯಲ್ಲಿ ಪೂಜಾ ಕೈಂಕರ್ಯ ನೆರವೇರಿಸಿದ ಬಗ್ಗೆ ವರದಿಯಾಗಿದೆ. ಮಂಡ್ಯದ ಆನೆಕರೆ ಬೀದಿಯ ಲಕ್ಷ್ಮಿ ದೇವಸ್ಥಾನ, ಚಾಮುಂಡೇಶ್ವರಿ ನಗರದ ಚಾಮುಂಡೇಶ್ವರಿ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದವು. ಭಕ್ತರಿಗೆ ಪ್ರಸಾದ ವಿನಿಯೋಗ, ಭಕ್ತಿಗಾಯನ ಕಾರ್ಯಕ್ರಮಗಳೂ ಜರುಗಿದವು. ಶ್ರೀರಂಗಪಟ್ಟಣ ವರದಿ:…
ಮೈಸೂರು ಮಹಾ ನಗರಪಾಲಿಕೆ ಚುನಾವಣೆ: ಅಂತಿಮ ಕಣದಲ್ಲಿ 393 ಮಂದಿ
August 24, 201866 ಮಂದಿ ಕಣದಿಂದ ಹಿಂದಕ್ಕೆ 65 ವಾರ್ಡ್ಗೆ ಒಟ್ಟು 484 ಮಂದಿ ನಾಮಪತ್ರ ಸಲ್ಲಿಕೆ, 25 ಮಂದಿ ನಾಮಪತ್ರ ತಿರಸ್ಕೃತವಾಗಿದ್ದವು ಅತೀ ಹೆಚ್ಚು ಮಂದಿ ವಾರ್ಡ್ ನಂ.7ರ ಮೇಟಗಳ್ಳಿಯಲ್ಲಿದ್ದರೆ, ಅತೀ ಕಡಿಮೆ ವಾರ್ಡ್ ನಂ.22ರ ಪಡುವಾರಹಳ್ಳಿಯಲ್ಲಿ ಬರೀ ಇಬ್ಬರೆ ಆರು ದಿನ ಬಹಿರಂಗ ಪ್ರಚಾರಕ್ಕೆ ಅವಕಾಶ ಆ.29ರ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಆ.31ರಂದು ಮತದಾನ ಸೆ.3ರಂದು ಮತ ಎಣಿಕೆ ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ಒಟ್ಟು 65 ವಾರ್ಡ್ಗಳಿಗೆ 393 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ಒಟ್ಟು…
ಕೊಡಗು ಪುನರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ನಿರ್ಧಾರ
August 24, 2018ಹೈದರಾಬಾದ್ ಭೂ ವಿಜ್ಞಾನಿಗಳ ವರದಿ ಅನ್ವಯ ಕ್ರಮ ತಕ್ಷಣದಿಂದಲೇ ಭೂ ಪರಿವರ್ತನೆ ನಿಷೇಧ ಪುನರ್ ನಿರ್ಮಾಣ ಸಂಬಂಧ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿಉನ್ನತ ಸಮಿತಿ ರಚನೆ 6 ತಿಂಗಳಲ್ಲಿ ಪುನರ್ ನಿರ್ಮಾಣ, ಇದಕ್ಕೆ ಕೇಂದ್ರದ ನೆರವು ನಿರೀಕ್ಷೆ ಬೆಂಗಳೂರು: ಭಾರೀ ಮಳೆ, ಪ್ರವಾಹದಿಂದ ತನ್ನ ಸ್ವಾಭಾವಿಕ ಸ್ವರೂಪವನ್ನೇ ಕಳೆದುಕೊಂಡಿರುವ ಕೊಡಗು ಜಿಲ್ಲೆಯನ್ನು ಪುನರ್ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಕಾರ್ಯಕ್ಕೆ ಸಂಬಂಧಿಸಿದಂತೆ ಜಿಲ್ಲಾ ವ್ಯಾಪ್ತಿಯಲ್ಲಿ ಭೂ ಪರಿವರ್ತನೆ ನಿಷೇಧ ಮಾಡಿರುವುದಲ್ಲದೆ, ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ…
ಸಂತ್ರಸ್ತರಿಗೆ 42 ಎಕರೆ ಪ್ರದೇಶದಲ್ಲಿ ಶೀಘ್ರ ಮಾದರಿ ಮನೆಗಳ ನಿರ್ಮಾಣ
August 24, 2018ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಗ್ರಾಮಸ್ಥರಿಗೆ ಮಡಿಕೇರಿ, ಸೋಮವಾರಪೇಟೆ ತಾಲೂಕಿನ ವಿವಿಧೆಡೆ 42 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಸಮರೋಪಾದಿಯಲ್ಲಿ ನವ ತಂತ್ರಜ್ಞಾನ ಬಳಸಿ ಮಾದರಿ ಮನೆಗಳನ್ನು ಸರ್ಕಾರ ನಿರ್ಮಿಸಿಕೊಡಲಿದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಈಗಾಗಲೇ 42 ಎಕರೆ ಜಾಗವನ್ನು ಮಡಿಕೇರಿ ತಾಲೂಕಿನ ಕೆ.ನಿಡುಗಣೆ, 1ನೇ ಮೊಣ್ಣಂಗೇರಿ, ಕರ್ಣಂಗೇರಿ, ಸೋಮವಾರಪೇಟೆ ತಾಲೂಕಿನ ತಾಕೇರಿ ಗ್ರಾಮಗಳಲ್ಲಿ ಗುರುತಿಸಲಾಗಿದೆ. ಪ್ರತಿ ಪಂಚಾಯತ್ ನಿಂದಲೂ ಲಭ್ಯವಿರುವ ಜಮೀನಿನ…
ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಹಣ್ಣು, ಹೂವು, ತರಕಾರಿ ಮಾರಾಟ ಬಲು ಜೋರು
August 24, 2018ಮೈಸೂರು: ಶುಕ್ರವಾರದ ವರ ಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಮೈಸೂರಿನ ದೇವರಾಜ ಮಾರುಕಟ್ಟೆ, ವಾಣಿ ವಿಲಾಸ ಮಾರುಕಟ್ಟೆ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಗುರುವಾರ ಹೂವು, ಹಣ್ಣು, ತರಕಾರಿ ವ್ಯಾಪಾರ ಬಲು ಜೋರಾಗಿತ್ತು. ಶ್ರಾವಣ ಶುಕ್ಲ ಪೂರ್ಣಿಮೆಯ ಹಿಂದಿನ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬವನ್ನು ಮಹಿಳೆಯರು ಶ್ರದ್ಧಾ ಭಕ್ತಿಗಳಿಂದ ಆಚರಿಸುತ್ತಾರೆ. ಇದರ ಅಂಗವಾಗಿ ಮಹಿಳೆಯರು ಹೂವು, ಹಣ್ಣು, ತರಕಾರಿ, ಸೀರೆ ಮತ್ತಿತರ ಉಡುಪುಗಳ ಖರೀದಿಯಲ್ಲಿ ತೊಡಗುವುದು ಸಾಮಾನ್ಯ. ಅಂತೆಯೇ ಗುರುವಾರ ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ ಪೂಜೆಗೆ ಅಗತ್ಯ ಪದಾರ್ಥಗಳನ್ನು ಮಹಿಳೆಯರು ಮುಗಿಬಿದ್ದು…