ಮೈಸೂರು, ನ.21(ಎಸ್ಬಿಡಿ)- ಕನ್ನಡ ಸಾಹಿತ್ಯ ಪರಿಷತ್ತಿನ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಮಡ್ಡೀಕೆರೆ ಗೋಪಾಲ್, ಮಂಡ್ಯ ಜಿಲ್ಲಾ ಘಟಕ ರವಿ ಚಾಮಲಾಪುರ, ಕೊಡಗು ಜಿಲ್ಲಾ ಘಟಕ ಕೇಶವ ಕಾಮತ್, ಚಾಮರಾಜನಗರ ಜಿಲ್ಲಾ ಘಟಕ ಶೈಲ ಕುಮಾರ್ ಹಾಗೂ ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ರಾಗಿ ಪ್ರೊ.ಹೆಚ್.ಎಲ್.ಮಲ್ಲೇಶಗೌಡ ಆಯ್ಕೆಯಾಗಿದ್ದಾರೆ. ಮೈಸೂರಿನ ಜೆಎಲ್ಬಿ ರಸ್ತೆಯಲ್ಲಿರುವ ಮಹಾ ರಾಣಿ ಮಹಿಳಾ ಕಲಾ ಕಾಲೇಜು ಸೇರಿದಂತೆ ಜಿಲ್ಲೆಯ 10 ಕೇಂದ್ರಗಳಲ್ಲಿ ಭಾನುವಾರ ನಡೆದ ಚುನಾವಣೆ ಯಲ್ಲಿ ಒಟ್ಟು 5,722 ಮಂದಿ ಮತ ಚಲಾಯಿಸಿದ್ದು,…
ಮೈಸೂರಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಪುತ್ಥಳಿ ಅನಾವರಣ
November 22, 2021ಮೈಸೂರು,ನ.21(ಜಿಎ)-ಮೈಸೂರಿನ ಬಸವನಗುಡಿ ಉದ್ಯಾನವನದಲ್ಲಿ 1.30 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾಗಿ ರುವ ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಪುತ್ಥಳಿ ಯನ್ನು ಭಾನುವಾರ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ ಅವರು ಅನಾವರಣಗೊಳಿಸಿದರು. ನಂತರ ನಡೆದ ವೇದಿಕೆ ಸಮಾರಂಭದಲ್ಲಿ ಮಾತನಾಡಿದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಬಹಳ ದಿನಗಳಿಂದ ಈ ಸ್ಥಳದಲ್ಲಿ ಡಾ. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಪುತ್ಥಳಿಯನ್ನು ನಿರ್ಮಿಸಬೇಕು ಎಂಬ ಆಶಯವಿತ್ತು. ಅದು ಇಂದು ನೆರವೇರಿದೆ. ಇದು ಉತ್ತಮವಾದ ವಿಚಾರವಾಗಿದೆ ಎಂದು ಹೇಳಿದರು. ಮನುಷ್ಯನಿಗೆ ಶ್ವಾಸಕೋಶ…
‘ಹಂಸ’ರ ಸಂಗೀತ ಲಯ ತಪ್ಪಿದೆ
November 22, 2021ಮೈಸೂರು, ನ.21(ಎಂಕೆ)- ‘ಹಂಸ’ರ ಸಂಗೀತ ಲಯ ತಪ್ಪಿದರೆ, ಹರಿದಾಸರ ಸಂಗೀತ-ಸಾಹಿತ್ಯ ಸ್ಮರಣೆ ಮಾಡಿದ ರಾಘವೇಂದ್ರ ಸ್ವಾಮೀಜಿಗಳ ಸಂಗೀತ ಎಂದಿಗೂ ಲಯ ತಪ್ಪಲಿಲ್ಲ ಎಂದು ಉಡುಪಿ ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದ ಸ್ವಾಮೀಜಿ ಹೇಳಿದರು. ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಹರಿದಾಸ ಸಂಗೀತ ಸಾಹಿತ್ಯೋ ತ್ಸವ ಸಮಿತಿ ವತಿಯಿಂದ ಆಯೋಜಿಸಿದ ‘ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 350ನೇ ಆರಾಧನೆಯ ಸಂವತ್ಸರ ಸಂಸ್ಮರಣೆ’ ಹಾಗೂ ‘ರಾಘವೇಂದ್ರ ವೈಭವ- ನಮ್ಮ ನಡೆ ರಾಯರ ಕಡೆ’ ಕಾರ್ಯಕ್ರಮವನ್ನು…
ಹೊಟ್ಟೆಪಾಡಿಗಾಗಿ ಮೈಸೂರಿನ ಹೋಟೆಲ್ನಲ್ಲಿ ಪಾತ್ರೆ ತೊಳೆದಿದ್ದೆ…!
November 22, 2021ಮೈಸೂರು, ನ.21(ಆರ್ಕೆಬಿ)- ತೀರಾ ಬಡತನದಲ್ಲಿ ಜೀವನ ದೂಡುತ್ತಿದ್ದ ನನಗೆ ಮೈಸೂರಿನ ಕಿತ್ತಳೆ ವ್ಯಾಪಾರ ಜೀವನದ ದಾರಿ ತೋರಿಸಿತು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಹರೇಕಳ ಹಾಜಬ್ಬ ತಮ್ಮ ಮೈಸೂರಿನ ಹಳೆಯ ನೆನಪು ಗಳನ್ನು ಹಂಚಿಕೊಂಡರು. ಮೈಸೂರಿನ ನಂಜರಾಜ ಬಹ ದ್ದೂರ್ ಛತ್ರದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸಿದ್ದ ಕನ್ನಡ ಪುಸ್ತಕ ಹಬ್ಬದಲ್ಲಿ ಸನ್ಮಾನ ಸ್ವೀಕರಿ ಸಿದ ಬಳಿಕ `ಮೈಸೂರು ಮಿತ್ರ’ ನೊಂದಿಗೆ ತಮ್ಮ ಮೈಸೂರಿನ ನೆನಪುಗಳನ್ನು ಬಿಚ್ಚಿಟ್ಟರು. ನನಗಾಗ 22 ವರ್ಷ ಇರಬಹುದು. 1979ರಲ್ಲಿ ಮೈಸೂರಿನ ದೇವರಾಜ ಮಾರುಕಟ್ಟೆ…
ಶಂಕರಾಚಾರ್ಯರ ಪ್ರತಿಮೆ ನಿರ್ಮಾತೃ ಅರುಣ್ ಯೋಗಿರಾಜ್ ನಿವಾಸಕ್ಕೆ ಕೇಂದ್ರ ಸಚಿವರ ಭೇಟಿ
November 22, 2021ಮೈಸೂರು, ನ.21(ಎಂಕೆ)- ಮೈಸೂರಿನಲ್ಲಿ ಕಲಾಗ್ರಾಮದ ಮಾದರಿಯಲ್ಲಿ ಶಿಲ್ಪಕಲೆ ಕಲಿಕೆಗೆ ವ್ಯವಸ್ಥೆ ಕಲ್ಪಿಸಲು ಸರ್ಕಾರದಿಂದ ಪ್ರಯತ್ನಿಸ ಲಾಗುವುದು ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಕೇದಾರನಾಥದಲ್ಲಿ ಪ್ರತಿಷ್ಠಾಪನೆಗೊಂಡ ಶಂಕರಾ ಚಾರ್ಯರ ಪ್ರತಿಮೆಯ ನಿರ್ಮಾತೃ ಶಿಲ್ಪಿ ಅರುಣ್ ಯೋಗಿರಾಜ್ ಮನೆಗೆ ಭಾನುವಾರ ಭೇಟಿ ನೀಡಿದ ಕೇಂದ್ರ ಸಚಿವೆ, ಶಿಲ್ಪಿ ಅರುಣ್ ಯೋಗಿ ರಾಜ್ ಹಾಗೂ ಕುಟುಂಬದವರನ್ನು ಸನ್ಮಾನಿಸಿ ದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಯವರಿಂದ ಲೋಕಾರ್ಪಣೆಗೊಂಡ ಸುಮಾರು 12 ಅಡಿ…
ಜನರ ಆಶೋತ್ತರಗಳಿಗೆ ಧಕ್ಕೆಯಾಗದಂತೆ ನಾಡು-ನುಡಿಗಾಗಿ ಸೇವೆ ಸಲ್ಲಿಸುತ್ತೇನೆ
November 22, 2021ಮೈಸೂರು, ನ.21(ಎಸ್ಬಿಡಿ)- ಜನರ ಆಶೋತ್ತರಗಳಿಗೆ ಧಕ್ಕೆ ಆಗದಂತೆ ಪ್ರಾಮಾಣಿಕ ಸೇವೆ ಸಲ್ಲಿಸುವುದಾಗಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ನೂತನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಭರವಸೆ ನೀಡಿದರು. ಫಲಿತಾಂಶ ಪ್ರಕಟವಾದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಇದು ನನ್ನ ಗೆಲುವಲ್ಲ, ಮತ ದಾರರ ಗೆಲುವು. ನನ್ನ ಬೆನ್ನೆಲುವಾಗಿ ನಿಂತು ಸಹಕರಿ ಸಿದ ಎಲ್ಲಾ ಮುಖಂಡರ ಗೆಲುವು. ಅಧಿಕ ಮತಗಳನ್ನು ನೀಡಿ ಗೆಲುವು ನೀಡಿರುವ ಜನರ ಆಶೋತ್ತರಗಳಿಗೆ ಧಕ್ಕೆಯಾಗದಂತೆ ಪ್ರಾಮಾಣಿಕವಾಗಿ ನಾಡು-ನುಡಿ ಸೇವೆ ಮಾಡುತ್ತೇನೆ ಎಂದು ತಿಳಿಸಿದರು. ಸಂಭ್ರಮಾಚರಣೆ:…
ಸಾಧಕರಿಗೆ `ಪುನೀತ್ ಯುವ ಕಣ್ಮಣಿ’ ಪ್ರಶಸ್ತಿ ಪ್ರದಾನ
November 22, 2021ಮೈಸೂರು, ನ.21(ಎಸ್ಪಿಎನ್)- `ಕರ್ನಾಟಕ ರತ್ನ’ ದಿವಂಗತ ಪುನೀತ್ ರಾಜ್ಕುಮಾರ್ ಸ್ಮರಣಾರ್ಥ ವಿವಿಧ ಕ್ಷೇತ್ರದ ಸಾಧಕರಿಗೆ `ಪುನೀತ್ ಯುವ ಕಣ್ಮಣಿ ಪ್ರಶಸ್ತಿ’ಯನ್ನು ಭಾನುವಾರ ಪ್ರದಾನ ಮಾಡಲಾಯಿತು. ಮೈಸೂರು ಪುರಭವನದ ಸಭಾಂ ಗಣದಲ್ಲಿ ವಿಶ್ವಮಾನವ ಡಾ.ರಾಜ್ ಕುಮಾರ್ ಅಭಿಮಾನಿ ಬಳಗದ ವತಿ ಯಿಂದ ಆಯೋಜಿಸಿದ್ದ ವಿವಿಧ ಸಾಧಕ ರಿಗೆ ಸನ್ಮಾನ ಹಾಗೂ ಸಂಗೀತ ಗಾಯನ ಕಾರ್ಯಕ್ರಮದಲ್ಲಿ ಪುನೀತ್ ಯುವ ಕಣ್ಮಣಿ ಪ್ರಶಸ್ತಿಯನ್ನು ಪೊಲೀಸ್ ಇಲಾಖೆಯ ಎಂ.ಶಿವಶಂಕರ್, ರಂಗಭೂಮಿ ಕ್ಷೇತ್ರದ ಕೆರೆಹಳ್ಳಿ ಮಹದೇವಸ್ವಾಮಿ, ಸೋನಳ್ಳಿ ಎಸ್.ಶಿವಣ್ಣ, ಶಿಲ್ಪಿ ಅರುಣ್ ಯೋಗಿ ರಾಜ್,…
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಚುನಾವಣೆ ಮೈಸೂರು ನಗರದಲ್ಲಿ ಶೇ.33.64, ಜಿಲ್ಲೆಯಲ್ಲಿ ಶೇ.42.77ರಷ್ಟು ಮತದಾನ
November 22, 2021ಮೈಸೂರು,ನ.21(ಆರ್ಕೆಬಿ)- ಕನ್ನಡಿ ಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಹಾಗೂ ಜಿಲ್ಲಾ ಧ್ಯಕ್ಷರ ಆಯ್ಕೆಗೆ ಭಾನುವಾರ ನಡೆದ ಚುನಾ ವಣೆಯಲ್ಲಿ ಮೈಸೂರು ನಗರದ 8 ಮತಗಟ್ಟೆ ಯಲ್ಲಿ 7,781 ಮತದಾರರ ಪೈಕಿ 2,618 ಮಂದಿ ಮತ ಚಲಾಯಿಸಿದ್ದಾರೆ. ಮೈಸೂರು ನಗರ ಸೇರಿದಂತೆ ಜಿಲ್ಲೆಯಲ್ಲಿರುವ 13, 760 ಮತದಾರರ ಪೈಕಿ 5,722 (ಶೇ.42. 77) ಮಂದಿ ಮತ ಚಲಾಯಿಸಿದ್ದಾರೆ. ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜು, ಹುಣಸೂರಿನ ಮಿನಿ ವಿಧಾನಸೌಧ, ಹೆಚ್.ಡಿ.ಕೋಟೆಯ ಮಿನಿ ವಿಧಾನಸೌಧ, ಸರ…
ಸೋರುತಿಹುದು ಅಂಧ ಮಕ್ಕಳ ಶಾಲೆ ಮೇಲ್ಛಾವಣಿ
November 22, 2021ಮೈಸೂರು, ನ.18(ಜಿಎ)- ಮೈಸೂರಿನ ತಿಲಕ್ ನಗರದಲ್ಲಿರುವ ಅಂಧ ಮಕ್ಕಳ ಶಾಲೆಯು ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮತ್ತಷ್ಟು ಶಿಥಿಲಗೊಂಡು. ಮೇಲ್ಛಾ ವಣಿ ಸೋರುತ್ತಿದ್ದು, ವಿದ್ಯಾರ್ಥಿಗಳು ಆತಂಕದಲ್ಲೇ ಶಿಕ್ಷಣ ಪಡೆಯುತ್ತಿದ್ದಾರೆ. ನಿರಂತರ ಮಳೆಗೆ ಮೈಸೂರು ನಗರದಲ್ಲಿರುವ ಕೆಲವು ಹಳೆಯ ಕಟ್ಟಡಗಳು ಕುಸಿಯು ತ್ತಿದ್ದು, ಅದರ ಪಟ್ಟಿಗೆ ಈ ಕಟ್ಟಡವೂ ಸೇರಿ ಬಿಡುವುದೇ ಎಂಬ ಆತಂಕ ಎದುರಾಗಿದೆ. ಮಕ್ಕಳು ಮಲಗುವ ಕೋಣೆ ಮತ್ತು ಊಟ ಮಾಡುವ ಸ್ಥಳದ ಮೇಲ್ಛಾವಣಿಯ ಕೆಲ ಹೆಂಚುಗಳು ಒಡೆದು ಮಳೆ ನೀರು ಸೋರುತ್ತಿದೆ. ಮಳೆ ನೀರು ಗೋಡೆಗಳಿಗೆ…
ಮೈಸೂರಿನ ಪಡುವಾರಹಳ್ಳಿ ಜನಹಿತ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಆಯ್ಕೆ
November 22, 2021ಮೈಸೂರು, ನ.21(ಎಸ್ಪಿಎನ್)- ಮೈಸೂರು ನಗರದ ಪಡುವಾರಹಳ್ಳಿಯ ಜನಹಿತ ವಿವಿಧೋದ್ದೇಶ ಸಹಕಾರ ಸಂಘದ ಚುನಾವಣೆಯಲ್ಲಿ 13 ಸ್ಥಾನಗಳ ಪೈಕಿ 7 ಸಾಮಾನ್ಯ ಹಾಗೂ 1 ಹಿಂದುಳಿದ ನಿರ್ದೇ ಶಕ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆದು, ಐದು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಾಮಾನ್ಯ ಕ್ಷೇತ್ರದಿಂದ ಎನ್ ಚಂದ್ರ ಶೇಖರ್(115), ರಾಘವ್ ಎಂ.ಗೌಡ (115), ಎಂ.ಭೈರಪ್ಪ (111), ಎಂ. ಸೋಮಣ್ಣ (107), ಟಿ.ಸೋಮು(102), ಈ. ಲೋಕೇಶ್ವರ್ (101), ಕೃಷ್ಣಕುಮಾರ್ (93) ಹಾಗೂ ಹಿಂದುಳಿದ ವರ್ಗಗಳ ವಿಭಾಗದಿಂದ ಬಿ.ಸಂದೇಶ್,(89) ಆಯ್ಕೆಯಾಗಿದ್ದಾರೆ. ಒಟ್ಟು 13…










