ಮೈಸೂರು: ಮೈಸೂರಿನ ಕಲಾಮಂದಿರ ದಲ್ಲಿ ಇನೊವೇಟಿವ್ ಮೈಸೂರು ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಕೆರೆಮನೆ ಶಿವಾನಂದ ಹೆಗಡೆ ಇವರ ನಿರ್ದೇಶನದಲ್ಲಿ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕಲಾವಿದ ರಿಂದ ‘ವಾಲಿ ಮೋಕ್ಷ’ ಯಕ್ಷ ಗಾನ ಪ್ರದರ್ಶನ ನಡೆಯಿತು. ಯಕ್ಷಗಾನ ಪ್ರದರ್ಶನದಲ್ಲಿ ಹಿರಿಯ ಕಲಾವಿದ ಅನಂತ ಕೆರೆಮನೆ ಶಿವಾನಂದ ಹೆಗಡೆ ರಾಮನ ಪಾತ್ರದಲ್ಲಿ ಮಿಂಚಿದರು. ಹಡಿನಬಾಳು ಶ್ರೀಪಾದ ಹೆಗಡೆ, ಈಶ್ವರ ಭಟ್ ಹಂಸಳ್ಳಿ, ವಿಘ್ನೇಶ್ವರ ಹಾವಗೋಡಿ ಮುಂತಾದವರು ಉತ್ತಮ ಕುಣಿತ ಮತ್ತು ಮಾತುಗಾರಿಕೆಯಿಂದ ರಂಜಿಸಿದರು….
ಪ್ರಧಾನಿ ಅಭ್ಯರ್ಥಿಯಾಗುವ ಶಕ್ತಿ ಹೆಚ್.ಡಿ. ದೇವೇಗೌಡರಿಗಿದೆ
August 13, 2018ಮೈಸೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎದುರಿಗೆ ಸರಿನಾಟಿಯಾಗಿ ನಿಲ್ಲಬಹುದಾದ ಪ್ರಬಲ ನಾಯಕ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರೇ ಆಗಬಹುದು. ಅವರಿಗೆ ಆ ಶಕ್ತಿಯಿದೆ ಎಂದು ಮಾಜಿ ಸಚಿವರೂ ಆದ ಜೆಡಿಎಸ್ ರಾಜ್ಯಾಧ್ಯಕ್ಷ ಎ.ಹೆಚ್. ವಿಶ್ವನಾಥ್ ಹೇಳಿದರು. ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಮುಂಬರುವ ಲೋಕಸಭಾ ಚುನಾವಣೆ ಯ ಬಿಜೆಪಿ ಪ್ರಧಾನಿ ಅಭ್ಯರ್ಥಿಯೂ ಆದ ಹಾಲಿ ಪ್ರಧಾನಿ ನರೇಂದ್ರ ಮೋದಿ ಎದುರು ಪ್ರಬಲ ನಾಯಕರಾಗುವ ಶಕ್ತಿ…
ಜನೌಷಧ ಕೇಂದ್ರದಲ್ಲಿ ಔಷಧಿ ಕೊರತೆಯಾಗದಂತೆ ಕೇಂದ್ರ ಸರ್ಕಾರದಿಂದ ಕ್ರಮ ಶಾಸಕ ಎಸ್. ರಾಮದಾಸ್
August 13, 2018ಮೈಸೂರು: ಕರ್ನಾಟಕ ರಾಜ್ಯವೂ ಸೇರಿದಂತೆ ದೇಶದ ವಿವಿಧೆಡೆಯಿರುವ 4400ಕ್ಕೂ ಹೆಚ್ಚು ಪ್ರಧಾನ ಮಂತ್ರಿ ಜನೌಷದ ಕೇಂದ್ರಗಳಲ್ಲಿ ಔಷಧಗಳ ಕೊರತೆ ಉಂಟಾಗದಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದ್ದಾರೆ. ಜನೌಷಧ ಕೇಂದ್ರಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ನವದೆಹಲಿಯಲ್ಲಿ ಕೇಂದ್ರ ಸಚಿವರಾದ ಅನಂತ್ ಕುಮಾರ್ ಅವರ ಕಛೇರಿಯಲ್ಲಿ ನಡೆದ ಸಭೆಯಲ್ಲಿ ದೇಶದ ಎಲ್ಲಾ ರಾಜ್ಯಗಳಲ್ಲಿರುವ ಜನೌಷಧಿ ಕೇಂದ್ರಗಳ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸಿ, ಇನ್ನಷ್ಟು ಔಷಧಿಗಳು ಲಭ್ಯವಾಗುವುದರೊಂದಿಗೆ ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ಔಷಧ ಪೂರೈಕೆಗೆ ಕ್ರಮ ಕೈಗೊಳ್ಳುವುದರೊಂದಿಗೆ ಅಗತ್ಯ…
ಅದ್ಧೂರಿ ಕೆಂಪೇಗೌಡರ ಜಯಂತಿಗೆ ನಿರ್ಧಾರ
August 13, 2018ಬನ್ನೂರು: ‘ತಾಲೂಕಿನ ಎಪಿಎಂಸಿ ಆವರಣದಲ್ಲಿ ಸೆ. 8ರಂದು ನಾಡ ಪ್ರಭು ಕೆಂಪೇಗೌಡರ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುವುದು’ ಎಂದು ಒಕ್ಕಲಿಗ ಸಂಘದ ಪ್ರಧಾನ ಕಾರ್ಯದರ್ಶಿ ವೈ.ಎಸ್.ರಾಮಸ್ವಾಮಿ ಹೇಳಿದರು. ಪಟ್ಟಣದ ಸರ್ವಮಂಗಳ ನಂಜೇಗೌಡ ಸಮುದಾಯ ಭವನದಲ್ಲಿ ಭಾನುವಾರ ನಡೆದ ಕೆಂಪೇಗೌಡ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಒಕ್ಕಲಿಗರು ತಮ್ಮ ಉತ್ಸಾಹವನ್ನು ಕಳೆದುಕೊಳ್ಳುತ್ತಿರುವುದು ವಿಪರ್ಯಾಸ ವಾಗಿದೆ. ಮನುಷ್ಯನಿಗೆ ಉತ್ಸಾಹ ಇದ್ದರೆ ಎಂತಹ ಕೆಲಸವನ್ನೂ ಮಾಡಬಹುದು. ಮೊದಲು ನಾವು ಉತ್ಸಾಹ ಕಂಡುಕೊಳ್ಳ ಬೇಕಿದೆ ಎಂದು ತಿಳಿಸಿದರು. ಒಕ್ಕಲಿಗ…
ಗ್ರಂಥಾಲಯ ಸೌಲಭ್ಯ ಸದ್ಬಳಕೆಗೆ ಸಲಹೆ
August 13, 2018ಮೂಗೂರು: ಗ್ರಾಮದ ಗ್ರಂಥಾಲಯದಲ್ಲಿ ಭಾನುವಾರ ಗ್ರಂಥಪಾಲಕರ ದಿನಾಚರಣೆಯನ್ನು ಆಚರಿಸಲಾಯಿತು. ಗ್ರಾಮದ ಮುಖಂಡ ಎಂ.ಕೆ. ಸಿದ್ದರಾಜು ಅವರು ಗ್ರಂಥಾಲಯದ ಪಿತಾಮಹ ರಂಗ ನಾಥನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಗ್ರಂಥಾಲಯ ಕಟ್ಟಡ ಮುಜರಾಯಿ ಇಲಾಖೆಯ ಕೊಠಡಿ ಯಲ್ಲಿರುವ ಕಾರಣ ಸೂಕ್ತ ಕಟ್ಟಡ ನಿರ್ಮಾಣ ವಾಗಬೇಕಿದೆ. ಗ್ರಂಥಾಲಯ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿ ಅವರು ಸರ್ಕಾರಿ ಜಾಗ ನೀಡಬೇಕು ಎಂದು ಮನವಿ ಮಾಡಿದರು. ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಪುಸ್ತಕ ಗಳನ್ನು ಓದುವ…
ಕಾಡಂಚಿನ ಗ್ರಾಮದ ಬಡಗಲಪುರ ಸರ್ಕಾರಿ ಶಾಲೆಗೆ ಬ್ಯಾಂಡ್ಸೆಟ್ ಡ್ರಮ್
August 13, 2018ಮೈಸೂರು: ಮೈಸೂರಿನ ರೋಟರಿ ಮಿಡ್ಟೌನ್ ಸಮುದಾಯ ಸೇವೆ ವಿಭಾಗದ ವತಿಯಿಂದ ಕಾಡಂಚಿನ ಗ್ರಾಮದ ಸರ್ಕಾರಿ ಶಾಲೆಯೊಂದಕ್ಕೆ ಬ್ಯಾಂಡ್ಸೆಟ್ ಡ್ರಮ್ ಹಾಗೂ ಇತರೆ ಪರಿಕರಗಳನ್ನು ಕೊಡುಗೆ ನೀಡಲಾಗಿದೆ. ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಕಾಡಂಚಿನ ಗ್ರಾಮವಾದ ಬಡಗಲಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಂದಾಜು 10 ಸಾವಿರ ರೂ.ಮೌಲ್ಯದ ಬ್ಯಾಂಡ್ಸೆಟ್ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ರೋಟರಿ ಮಿಡ್ಟೌನ್ ಸಮುದಾಯ ಸೇವೆ ವಿಭಾಗದ ನಿರ್ದೇ ಶಕರಾದ ರೋ.ಅಯ್ಯಣ್ಣ, ರೋ.ವೀರೇಶ್ ಅವರು, ಬಡಗಲಪುರ ಶಾಲಾ ಶಿಕ್ಷಕರಾದ ರೋಹಿತ್, ಬೀರೇಶ್ ಅವರಿಗೆ ಬ್ಯಾಂಡ್ಸೆಟ್ ಗಳನ್ನು…
ಮೈದುಂಬಿ ಹರಿಯುತ್ತಿರುವ ಕಪಿಲಾ ನದಿ: ರಾಷ್ಟ್ರೀಯ ಹೆದ್ದಾರಿ ಬಂದ್: ನದಿ ದಂಡೆ ಬಳಿ ಜನಜಂಗುಳಿ
August 13, 2018ತಾಂಡವಪುರ: ನಂಜನಗೂಡಿನ ಕಪಿಲಾ ನದಿಯು ಮೈದುಂಬಿ ಹರಿಯುತ್ತಿದ್ದು, ನದಿಯ ರಮಣೀಯ ದೃಶ್ಯವನ್ನು ಕಣ್ತುಂಬಿ ಕೊಳ್ಳಲು ಜನರು ತಂಡೋಪ ತಂಡವಾಗಿ ಬಂದು ವೀಕ್ಷಿಸುತ್ತಿದ್ದಾರೆ. ಕೇರಳದ ವೈನಾಡಿನಲ್ಲಿ ಮುಂಗಾರು ಹಂಗಾಮಿನಡಿ ಉತ್ತಮ ಮಳೆಯಾಗುತ್ತಿದ್ದು, ಕಬಿನಿ ಜಲಾಶಯ ಸಂಪೂರ್ಣ ಭರ್ತಿಯಾದ ಹಿನ್ನೆಲೆಯಲ್ಲಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದ್ದು, ಇದರಿಂದ ಕಬಿನಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ರಾಷ್ಟ್ರೀಯ ಹೆದ್ದಾರಿ 766ರ ನಂಜನಗೂಡು -ಮೈಸೂರು ನಡುವಿನ ಮಲ್ಲನ ಮೂಲೆ ಮಠದ ಹತ್ತಿರ, ಹಾಗೂ ಚಿಕ್ಕಯ್ಯನ ಛತ್ರ ಗ್ರಾಮದ…
ಶ್ರೀಕಂಠೇಶ್ವರನ ಸನ್ನಿಧಿ ತಲುಪಿದ ಕಪಿಲೆ
August 12, 2018ನಂಜನಗೂಡು: ಕಬಿನಿ ಜಲಾಶಯದಿಂದ ಕಳೆದ ಎರಡು ದಿನದಿಂದ ಸತತವಾಗಿ 80 ಸಾವಿರ ಕ್ಯೂಸೆಕ್ ನೀರು ಹೊರ ಬಿಟ್ಟ ಪರಿಣಾಮ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಪಿಲೆ, ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯವನ್ನು ಸ್ಪರ್ಶಿಸಿದೆ. ಇಂದು ಬೆಳಿಗ್ಗೆ ನೀರಿನ ಮಟ್ಟ ಹೆಚ್ಚಾಗಿದ್ದು, ಚಾಮರಾಜನಗರ ಬೈಪಾಸ್ ರಸ್ತೆಯನ್ನು ದಾಟಿ ಕಪಿಲಾ ನದಿಯ ನೀರು ಶ್ರೀಕಂಠೇಶ್ವರ ದೇವಾಲಯವನ್ನು ಭಾಗಶಃ ಆವರಿಸಿದೆ. ದೇವಾಲ ಯದ ಬಲ ಭಾಗದಲ್ಲಿರುವ ರಾಷ್ಟ್ರಪತಿ ರಸ್ತೆಗೂ ನೀರು ನುಗ್ಗಿದ್ದಲ್ಲಿ ದೇವಾಲಯ ಸಂಪೂರ್ಣವಾಗಿ ಜಲಾವೃತವಾಗುವ ಸಾಧ್ಯತೆ ಇದೆ. ದೇವಾಲಯದ ಪ್ರವೇಶ ದ್ವಾರದಲ್ಲಿ…
ಕುರುಬಾರಹಳ್ಳಿ ಸರ್ವೇ ನಂ. 4 ಮತ್ತು ಆಲನಹಳ್ಳಿ ಸರ್ವೇ ನಂ. 41ರ ವಿವಾದ: ಇಲ್ಲಿರುವ ಮುಡಾ ಬಡಾವಣೆ ನಿವಾಸಿಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅಭಯ
August 12, 2018ಮೈಸೂರು: ಕುರುಬಾರಹಳ್ಳಿ ಸರ್ವೇ ನಂ. 4 ಮತ್ತು ಆಲನಹಳ್ಳಿ ಸರ್ವೇ ನಂ. 41ರ ಭೂಮಿಯ ವ್ಯಾಪ್ತಿಯಲ್ಲಿ ಈ ಹಿಂದೆ ನಗರ ವಿಶ್ವಸ್ಥ ಮಂಡಳಿ (ಸಿಐಟಿಬಿ), ನಂತರ ಮೈಸೂರು ನಗರಾಭಿ ವೃದ್ಧಿ ಪ್ರಾಧಿಕಾರ (ಮುಡಾ) ಅಭಿವೃದ್ಧಿಪಡಿಸಿರುವ ಬಡಾವಣೆಗಳಾದ ಸಿದ್ದಾರ್ಥ ನಗರ, ಕೆ.ಸಿ. ನಗರ, ಜೆ.ಸಿ. ನಗರ ಮತ್ತು ಆಲನಹಳ್ಳಿಯ ಸಾವಿರಾರು ನಿವಾಸಿಗಳ ಕಳೆದ 5 ವರ್ಷಗಳ ನಿರಂತರ ಹೋರಾಟಕ್ಕೆ ಇದೀಗ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುವುದರೊಂದಿಗೆ ಕಡೆಗೂ ಫಲ ಸಿಗುವ ನಿರೀಕ್ಷೆ ಇದೆ. ಕುರುಬಾರ ಹಳ್ಳಿ ಸರ್ವೇ…
ಗುಡ್ ಮಾರ್ನಿಂಗ್, ಗುಡ್ ನೈಟ್ ಮೆಸೇಜ್ ಮಾಡುವವರಿಗೆ ಪಾಲಿಕೆ ಚುನಾವಣೆಗೆ ಪಕ್ಷದ ಟಿಕೆಟ್ ಇಲ್ಲ ಮಾಜಿ ಸಚಿವ ಸಿ.ಟಿ.ರವಿ ಖಡಕ್ ನುಡಿ
August 12, 2018ಮೈಸೂರು: ಚುನಾವಣೆ ಸಮೀಪಿಸುತ್ತಿರುವಂತೆಯೇ ಪಕ್ಷದ ನಾಯಕರಿಗೆ ಗುಡ್ ಮಾರ್ನಿಂಗ್, ಗುಡ್ನೈಟ್ ಮೆಸೇಜ್ಗಳು ಹೆಚ್ಚಾಗುತ್ತಿವೆ. ಇಂತಹ ಮೆಸೇಜ್ ಕಳುಹಿಸುವವರ ಹೊರತಾಗಿ ಜನರೊಂದಿಗೆ ಬೆರೆತು ಕೆಲಸ ಮಾಡುವವರನ್ನು ಗುರುತಿಸಿ ಟಿಕೆಟ್ ನೀಡಲಾಗುತ್ತದೆ ಎಂದು ಮಾಜಿ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ. ಮೈಸೂರಿನ ರಾಮಾನುಜ ರಸ್ತೆಯ ರಾಜೇಂದ್ರ ಕಲಾಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಚುನಾವಣಾ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಹಾಗೂ ಯೋಗ್ಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಹಿನ್ನೆಲೆಯಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು. ಇದೇ ಸೂತ್ರವನ್ನು ನಗರ ಸ್ಥಳೀಯ…