ಮೈಸೂರು: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ವಿಭಜಕದ ಮೇಲೇರಿ, ನಂತರ ಮೂರು ಪಲ್ಟಿ ಹೊಡೆದ ಪರಿಣಾಮ ಮೈಸೂರಿನ ವಕೀಲ ಸಾವನ್ನಪ್ಪಿ, ಇತರ ಇಬ್ಬರು ಗಾಯ ಗೊಂಡಿರುವ ಘಟನೆ ಕಳೆದ ಮಧ್ಯರಾತ್ರಿ ಬಿಳಿಕೆರೆ ಸಮೀಪ ಎಳನೀರು ಬೋರೆ ಬಳಿ ಹುಣಸೂರು ರಸ್ತೆಯಲ್ಲಿ ಸಂಭವಿಸಿದೆ. ಮೈಸೂರಿನ ಮಂಚೇಗೌಡನಕೊಪ್ಪಲು, ಅಭಿಷೇಕ್ ಸರ್ಕಲ್ ನಿವಾಸಿ ಶ್ರೀನಿವಾಸ ಗೌಡರ ಮಗ ಬಾಲಕೃಷ್ಣ(42) ಸಾವನ್ನಪ್ಪಿದ ವಕೀಲ. ಅಪಘಾತದಿಂದ ಗಾಯಗೊಂಡಿ ರುವ ಎಂಜಿ ಕೊಪ್ಪಲಿನ ಹುಚ್ಚೇಗೌಡ ಮತ್ತು ನಾರಾಯಣ ಅವರು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಹೊರ ರೋಗಿಗ…
3ಕ್ಕಿಂತ ಹೆಚ್ಚು ನಾಯಿ ಸಾಕಬಾರದೇಕೆ?
June 16, 2018ಮೈಸೂರು: ನಾವು ಪ್ರಾಣಿಪ್ರಿಯರು. ಮೂರಕ್ಕಿಂತ ಹೆಚ್ಚು ನಾಯಿಗಳನ್ನು ಸಾಕಬಾರದೆಂದರೆ ಹೇಗೆ? ಎಂದು ಎನ್ಜಿಓ ಪ್ರಮುಖರು ಇಂದಿಲ್ಲಿ ಮೈಸೂರು ಮಹಾನಗರ ಪಾಲಿಕೆ ಪಶು ವೈದ್ಯಾಧಿಕಾರಿಗಳನ್ನು ಪ್ರಶ್ನಿಸಿದರು. ಮನೆಗಳಲ್ಲಿ ನಾಯಿಗಳನ್ನು ಸಾಕಲು ಪಾಲಿಕೆಯಿಂದ ಪೂರ್ವಾನುಮತಿ ಪಡೆಯ ಬೇಕೆಂಬ ನಿಯಮ ಜಾರಿಗೆ ತರಲು ಮುಂದಾ ಗಿರುವ ಹಿನ್ನೆಲೆಯಲ್ಲಿ ಮೈಸೂರಿನ ಬೋಗಾದಿ ಬಳಿ ಇರುವ ಪೀಪಲ್ ಫಾರ್ ಅನಿಮಲ್ (ಪಿಎಫ್ಎ) ಸಂಸ್ಥೆ ಆವರಣದಲ್ಲಿ ಏರ್ಪ ಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪ್ರಾಣಿಪ್ರಿಯ ಸರ್ಕಾರೇತರ ಸಂಘ-ಸಂಸ್ಥೆ ಪ್ರಮುಖರು ಪಾಲ್ಗೊಂಡು ನಾಯಿ ಗಳ ಸಾಗಾಣಿಕೆಗೆ ನಿಯಂತ್ರಣ ಹೇರು…
ವನ್ಯ ಜೀವಿಗಳ ಮಾದರಿ ಪ್ರದರ್ಶನ `ಮೈಸೂರು ಉತ್ಸವ’ಕ್ಕೆ ಚಾಲನೆ
June 16, 2018ಮೈಸೂರು: ಕಾಡು ಪ್ರಾಣಿಗಳನ್ನು ನೋಡಲೆಂದು ಮೃಗಾಲ ಯಕ್ಕೆ ಹೋದರೂ ಅವುಗಳ ಗೀಳನ್ನು ಕೇಳುವುದು ಅಪರೂಪ. ಆದರೆ, ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಅತ್ಯಾಧುನಿಕ ತಂತ್ರಜ್ಞಾನದಿಂದ ತಯಾರಿಸಿದ ರೋಬೋಟಿಕ್ ವನ್ಯ ಮೃಗಗಳ ಮೃಗಾಲಯವನ್ನೇ ನಿರ್ಮಿಸಿದ್ದು ಪ್ರಾಣಿಗಳ ಚಲನೆ, ಗೀಳಿನ ಅನುಭವ ಪಡೆಯಬಹುದು. ಹೌದು! ಮಕ್ಕಳಲ್ಲಿ ನಿಸರ್ಗದ ಬಗ್ಗೆ ಅರಿವು ಹಾಗೂ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ಉದ್ದೇಶದಿಂದ ಮೆ.ಫನ್ವಲ್ರ್ಡ್ ಅಂಡ್ ರೆಸಾಟ್ರ್ಸ್ ಇಂಡಿಯಾ ಪ್ರೈ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ವಿನೋದ್ಕುಮಾರ್ ಸಬರ್ವಾಲ್, ಇಂದಿನಿಂದ ಮೈಸೂರು ಉತ್ಸವ ವಸ್ತು…
ಕೌಟಿಲ್ಯ ವಿದ್ಯಾಲಯದಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ
June 16, 2018ಮೈಸೂರು: “ಆಡಿದ ಮಾತು, ಕಳೆದುಕೊಂಡ ಅವಕಾಶ ಹಾಗೂ ಘಟಿಸಿದ ಕಾಲವನ್ನು ಮರಳಿ ಪಡೆಲು ಸಾಧ್ಯವಿಲ್ಲ” ಎಂದು ಕೌಟಿಲ್ಯ ವಿದ್ಯಾ ಲಯದ ಪ್ರತಿಜ್ಞಾವಿಧಿ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಸೇನಾಧಿಕಾರಿ ‘ಕರ್ನಲ್ ಮಹೇಂದ್ರ ಬಾಬು’ ಅವರು ವಿದ್ಯಾರ್ಥಿ ನಾಯಕರಿಗೆ ಕಿವಿಮಾತು ಹೇಳಿದರು. ಮುಂದಿನ ಭವ್ಯ ಭವಿಷ್ಯದ ಪ್ರಜೆಗಳಾಗಿ ಹೊರಬರಲಿರುವ ವಿದ್ಯಾರ್ಥಿಗಳಲ್ಲಿ ನಾಯಕ ತ್ವದ ಗುಣವನ್ನು ಬೆಳೆಸುವ ಸಲುವಾಗಿ ವಿವಿಧ ಸ್ಥಾನಗಳಿಗೆ ಸ್ಪರ್ಧಿಸಿದ್ದ ಆಕಾಂಕ್ಷಿತ ಪ್ರತಿನಿಧಿಗಳಿಗೆ ಚುನಾವಣೆ ನಡೆಸಲಾಯಿತು. ವಿದ್ಯಾಲಯದ ನಾಯಕ, ನಾಯಕಿ, ಸಾಂಸ್ಕೃತಿಕ, ಕ್ರೀಡೆ, ಶಿಸ್ತಿನ ನಾಯಕರುಗಳನ್ನು…
ಡಾ. ಸೆಲ್ವಕುಮಾರ್ ಸಿಎಂ ಸಚಿವಾಲಯ ಕಾರ್ಯದರ್ಶಿ
June 16, 2018ಬೆಂಗಳೂರು: ಮುಖ್ಯಮಂತ್ರಿ ಸಚಿವಾಲಯದ ಕಾರ್ಯದರ್ಶಿಯಾಗಿ ಡಾ.ಎಸ್. ಸೆಲ್ವಕುಮಾರ್ ಅವ ರನ್ನು ನೇಮಕ ಮಾಡಲಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಇದೇ ಹುದ್ದೆಯಲ್ಲಿ ಕಾರ್ಯನಿರ್ವ ಹಿಸುತ್ತಿದ್ದ ತುಷಾರ್ಗಿರಿನಾಥ್ ಅವರನ್ನು ಬೆಂಗಳೂರು ನೀರು ಸರಬ ರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಹಸುಗಳ ಕಳವಿಗೆ ಯತ್ನ: ಇಬ್ಬರ ಬಂಧನ
June 16, 2018ಮೈಸೂರು: ಹಸುಗಳನ್ನು ಕಳವು ಮಾಡಲೆತ್ನಿಸಿ ಸಾರ್ವಜನಿಕರಿಗೆ ಸಿಕ್ಕಿಬಿದ್ದ ಇಬ್ಬರು ಖದೀಮರನ್ನು ಮೈಸೂರಿನ ವಿಜಯನಗರ ಠಾಣೆ ಪೊಲೀಸರು ಬಂಧಿಸಿ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪಿರಿಯಾಪಟ್ಟಣ ಮೂಲದ ಪುನೀತ್(20) ಹಾಗೂ ಹೇಮಂತ್(22) ಬಂಧಿತರಾಗಿದ್ದು, ಪರಾರಿಯಾಗಿರುವ ಮತ್ತೋರ್ವ ಆರೋಪಿ ನವೀನ್ಗೆ ಶೋಧ ನಡೆಸಲಾಗುತ್ತಿದೆ. ವಿಜಯನಗರ 3ನೇ ಹಂತದ ನಿವಾಸಿ ಜನಾರ್ಧನ್ ಅವರು ತಮ್ಮ ಮನೆಯ ಸಮೀಪ ಚೌಡೇಶ್ವರಿ ದೇವಾಲಯದ ಹಿಂಭಾಗದಲ್ಲಿ 2 ಹಸುಗಳನ್ನು ಕಟ್ಟ್ಟಿಹಾಕಿದ್ದರು. ಬುಧವಾರ ರಾತ್ರಿ ಟಾಟಾ ಏಸ್ ಗೂಡ್ಸ್ ವಾಹನ(ಕೆಎ-10, 8978)ದಲ್ಲಿ ಬಂದಿದ್ದ ಈ ಮೂವರು ಆರೋಪಿಗಳು,…
ಮೈಸೂರಲ್ಲಿ ಖಾಸಗಿ ಶಾಲಾ ವಾಹನ ಚಾಲಕರಿಗೆ ಸುರಕ್ಷತಾ ಅರಿವು
June 16, 2018ಮೈಸೂರು: ಶಾಲಾ ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಕಾಳಜಿ ವಹಿಸಿರುವ ಮೈಸೂರು ಜಿಲ್ಲಾಡಳಿತವು, ಅಗತ್ಯ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ. ಪ್ರಾದೇಶಿಕ ಸಾರಿಗೆ ಜಂಟಿ ಆಯುಕ್ತರ ಕಚೇರಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಸಂಯುಕ್ತಾ ಶ್ರಯದಲ್ಲಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಇಂದು ಖಾಸಗಿ ಶಾಲಾ-ಕಾಲೇಜುಗಳ ವಾಹನಗಳ ತಪಾಸಣೆ ಮತ್ತು ಚಾಲಕರಿಗೆ ಅರಿವಿನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸದ್ವಿದ್ಯಾ, ವಿದ್ಯಾವರ್ಧಕ, ಎಸ್ವಿಐ, ವಿಶ್ವ ಪ್ರಜ್ಞ ಸಂಯುಕ್ತ ಪಿಯು ಕಾಲೇಜು, ಮೈಕಾ, ಅಮೃತ ವಿದ್ಯಾಲಯ,…
ಜೂಜಾಟ: 6 ಮಂದಿ ಬಂಧನ 4 ಲಕ್ಷ ನಗದು, 12 ದ್ವಿಚಕ್ರ ವಾಹನ ವಶ
June 16, 2018ಮೈಸೂರು: ಜೂಜಾಟದಲ್ಲಿ ತೊಡಗಿದ್ದ 6 ಮಂದಿಯನ್ನು ಬಂಧಿಸಿರುವ ಜಿಲ್ಲಾ ಅಪರಾಧ ಗುಪ್ತಚರ ವಿಭಾಗದ ಪೊಲೀಸರು, ಪಣಕ್ಕಿಟ್ಟಿದ್ದ ಸುಮಾರು 4 ಲಕ್ಷ ರೂ. ಹಣ ಹಾಗೂ 12 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಇಲವಾಲ ಪೊಲೀಸ್ ಠಾಣಾ ವ್ಯಾಪ್ತಿಯ ಯಲಚನಹಳ್ಳಿ ಬಳಿಯಿರುವ ಕರ್ನಾಟಕ ಗೃಹಮಂಡಳಿಗೆ ಸೇರಿದ ಖಾಲಿ ಜಾಗದಲ್ಲಿ ಗುರುವಾರ ರಾತ್ರಿ ಜೂಜಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ತಿಳಿದ ಪೊಲೀಸರು ದಾಳಿ ನಡೆಸಿ, ಸುತ್ತಮುತ್ತಲ ಗ್ರಾಮದವರಾದ ಕುಮಾರ್, ನಾಗರಾಜು, ಮಹೇಶ್, ಎನ್.ಕುಮಾರ್, ಆನಂದ ಹಾಗೂ ಬೋರ ಅಲಿಯಾಸ್ ಮನು ಅವರನ್ನು…
ಅಪ್ರಾಪ್ತೆ ಮೇಲೆ ಅತ್ಯಾಚಾರ: ಆರೋಪಿಗೆ 7 ವರ್ಷ ಜೈಲು ಶಿಕ್ಷೆ
June 16, 2018ಮೈಸೂರು: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗೆ ಮೈಸೂರಿನ 7ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 7 ವರ್ಷ ಕಠಿಣ ಶಿಕ್ಷೆ ವಿಧಿಸಿದೆ. ನಂಜನಗೂಡು ತಾಲೂಕು ಹೊರಳ್ಳಿ ಗ್ರಾಮದ ನಿವಾಸಿ ಮಹದೇವಸ್ವಾಮಿ(31)ಗೆ ಶಿಕ್ಷೆ ವಿಧಿಸಲಾಗಿದೆ. ಈತ 2012ರಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ್ದರ ಪರಿಣಾಮ ಆಕೆ ಗರ್ಭವತಿಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಬದನವಾಳು ಠಾಣೆ ಪೊಲೀಸರು, ಮಹದೇವಸ್ವಾಮಿಯನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಿದಾಗ ಮಗುವಿನ ತಂದೆ ಈತನೆ ಎಂದು ದೃಢಪಟ್ಟಿತ್ತು. ಬಳಿಕ…
ಕೃಷಿಗೆ ಟ್ರ್ಯಾಕ್ಟರ್, ಟಿಲ್ಲರ್, ಎತ್ತಿನಗಾಡಿ ಖರೀದಿಸಲು ಮಾಡಿದ ಸಾಲ ಮನ್ನಾ: ಸಿಎಂ ಕುಮಾರಸ್ವಾಮಿ ನಿರ್ಧಾರ
June 15, 2018ಬೆಂಗಳೂರು: ಕೃಷಿ ಉದ್ದೇಶಗಳಿಗೆ ರೈತರು ಟ್ರ್ಯಾಕ್ಟರ್, ಟಿಲ್ಲರ್, ಎತ್ತಿನ ಬಂಡಿ ಸೇರಿದಂತೆ ಆಧುನಿಕ ಯಂತ್ರ ಗಳನ್ನು ಸಾಲ ಮಾಡಿ ಖರೀದಿಸಿದ್ದರೆ ಅದನ್ನು ಮನ್ನಾ ಮಾಡಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಈಗಾಗಲೇ ಪ್ರಕಟಿಸಿರುವಂತೆ ಮೊದಲ ಹಂತದಲ್ಲಿ 15,000 ಕೋಟಿ ರೂ. ಕೃಷಿ ಸಾಲ ಮನ್ನಾ ಮಾಡಲಿದ್ದು, ತದನಂತರ ಕೃಷಿ ಉತ್ತೇಜನಕ್ಕಾಗಿ ಆಧುನಿಕ ಯಂತ್ರ ಗಳಿಗೆ ಮಾಡಿರುವ ಸಾಲ ಮನ್ನಾ ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ. ಬೆಳೆ ಹೆಸರಿನಲ್ಲಿ ಸಾಲ ಪಡೆದು ಐಷಾರಾಮಿ ಜೀವನದ ಸವಲತ್ತುಗಳನ್ನು ಖರೀದಿಸಿದ್ದರೆ, ಅಂತಹ ವರಿಗೆ…