ಮೈಸೂರು, ಅ.25(ಎಂಕೆ)- ನ.1ರ ಕನ್ನಡ ರಾಜ್ಯೋತ್ಸವವನ್ನು ಅರ್ಥ ಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಕನ್ನಡ ರಾಜ್ಯೋತ್ಸವ ಆಚ ರಣೆಯ ಸಂಬಂಧ ಪೂರ್ವಸಿದ್ಧತಾ ಸಭೆ ನಡೆಸಿ, ಮಾತನಾಡಿದ ಅವರು, ಕಳೆದ ವರ್ಷದಂತೆಯೇ ಅಚ್ಚುಕಟ್ಟಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡ ಲಾಗುವುದು. ಅಂದು ಬೆಳಗ್ಗೆ 8.30ಕ್ಕೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮ ಶೇಖರ್ ಹಾಗೂ ಇನ್ನಿತರೆ ಗಣ್ಯರು ಅರ ಮನೆಯ ಆವರಣದಲ್ಲಿರುವ ಶ್ರೀ ಭುವನೇ ಶ್ವರಿ…
ದೇಶದಲ್ಲಿ ಸಂಸ್ಕøತ, ಸಂಸ್ಕøತಿ ಮೇಲೆ ಭಾರೀ ಆಕ್ರಮಣವಾಗುತ್ತಿದೆ
October 26, 2021ಮೈಸೂರು, ಅ.25 (ಎಸ್ಪಿಎನ್)- ನಮ್ಮ ನೆರೆಯ ಬಾಂಗ್ಲಾದೇಶ ಹಾಗೂ ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ, ಹಲ್ಲೆಗಳು ನಡೆದು ಅವರ ಜೀವ ನವೇ ನರಕವಾಗುತ್ತಿದೆ. ಈ ದೌರ್ಜನ್ಯವನ್ನು ನಾವು ಸಹಿಸಿಕೊಳ್ಳುವುದು ಅನಿವಾರ್ಯವೇ? ಎಂದು ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಪ್ರಶ್ನಿಸಿದರು. ಮೈಸೂರಿನ ಟಿ.ಕೆ.ಬಡಾವಣೆಯಲ್ಲಿ ರುವ ಶ್ರೀ ಕೃಷ್ಣಧಾಮದಲ್ಲಿ ಸೋಮವಾರ ನಡೆದ ಸರಳ ಸಮಾರಂಭದಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘ ಹಾಗೂ ಭಕ್ತ ವೃಂದದಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶ್ರೀಗಳು, ನಮ್ಮ ದೇಶದಲ್ಲಿ ಸಂಸ್ಕøತ…
ನ.5ರಿಂದ 45 ದಿನಗಳ ಕಾಲ ವಸ್ತುಪ್ರದರ್ಶನ
October 25, 2021ಮೈಸೂರು,ಅ.24(ಎಂಟಿವೈ)- ಕೊರೊನಾ ಅಲೆ ಕಾರಣ ದಿಂದ ಕಳೆದ 2 ವರ್ಷದಿಂದ ಯಾವುದೇ ಚಟುವಟಿಕೆಯಿಲ್ಲದೆ ಮಂಕಾಗಿದ್ದ ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ನ.5 ರಿಂದ 45 ದಿನಗಳ ಕಾಲ ವಿವಿಧ ವಸ್ತುಗಳ ಪ್ರದರ್ಶನ, ಮಾರಾಟ ಮೇಳ ಹಾಗೂ ಅಮ್ಯೂಸ್ಮೆಂಟ್ ಪಾರ್ಕ್ ತಲೆ ಎತ್ತಲಿದೆ. ಈ ಮಧ್ಯೆ ದಸರಾ ಹಿನ್ನೆಲೆಯಲ್ಲಿ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಆರಂಭಗೊಂಡಿರುವ ಅಮ್ಯೂಸ್ಮೆಂಟ್ ಪಾರ್ಕ್ ಜನರನ್ನು ಆಕರ್ಷಿಸುತ್ತಿದ್ದು, ಪ್ರತಿನಿತ್ಯ ಸಾವಿರಾರು ಮಂದಿ ಇಲ್ಲಿಗೆ ಆಗಮಿಸಿ, ಸಂಭ್ರಮಪಡುತ್ತಿದ್ದಾರೆ. 2019ರ ದಸರಾ ಬಳಿಕ ಮೈಸೂರಿನ ದಸರಾ ವಸ್ತುಪ್ರದರ್ಶ ನದ ಆವರಣದಲ್ಲಿ…
ದೀಪಾಲಂಕಾರಕ್ಕೆ ತೆರೆ
October 25, 2021ಮೈಸೂರು, ಅ.24(ಎಂಕೆ)- ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿದ್ಯುತ್ ದೀಪಾಲಂ ಕಾರಕ್ಕೆ ಭಾನುವಾರ ತೆರೆಬಿದ್ದಿತು. ಆದರೆ ಕೊನೆ ದಿನದ ದೀಪಾಲಂಕಾರ ವೀಕ್ಷಿಸಲು ಮಳೆ ಅಡ್ಡಿಯನ್ನುಂಟುಮಾಡಿತು. ಅ.7ರಿಂದ ಆರಂಭವಾಗಿದ್ದ ದಸರಾ ದೀಪಾಲಂಕಾರವು ಅ.15ರ ಜಂಬೂಸವಾರಿ ದಿನದಂದು ಮುಕ್ತಾಯಗೊಳ್ಳಬೇಕಿತ್ತು. ಪ್ರವಾಸಿಗರ ಒತ್ತಾಯದ ಮೇರೆಗೆ ಅ.24 ರವರೆಗೂ ವಿಸ್ತರಣೆಗೊಂಡು ಸತತ 18 ದಿನಗಳ ಕಾಲ ಮೈಸೂರಿನೆಲ್ಲೆಡೆ ಬೆಳಗಿತು. ನಗರದ ಪ್ರಮುಖ ವೃತ್ತಗಳು, ರಸ್ತೆಗಳು ಸೇರಿದಂತೆ 105 ಕಿ.ಮೀ ವಿಸ್ತೀರ್ಣದವರೆಗೆ ಸಿಂಗರಿಸಿದ್ದ ವರ್ಣರಂಜಿತ ದೀಪಾಲಂ ಕಾರ ಲಕ್ಷಾಂತರ ಪ್ರವಾಸಿಗರ ಕಣ್ಮನ…
ರಾಜಕೀಯ ಬೇಡವೆಂದು ಕಣ್ಣೀರಿಟ್ಟ ಸಿದ್ದರಾಮಯ್ಯಗೆ ಆತ್ಮಸ್ಥೈರ್ಯ ತುಂಬಿದ್ದು ಹೆಚ್.ಡಿ.ದೇವೇಗೌಡರು
October 25, 2021ಮೈಸೂರು,ಅ.24(ಪಿಎಂ)-ರಾಜಕೀಯ ಸಾಕಾಗಿದೆ ಎಂದು ಕಣ್ಣೀರಿಟ್ಟ ಸಿದ್ದರಾಮಯ್ಯನವರಿಗೆ ಆತ್ಮಸ್ಥೈರ್ಯ ತುಂಬಿ ರಾಜಕಾರಣದಲ್ಲಿ ಮುಂದುವರೆಯುವಂತೆ ಮಾಡಿದ್ದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನು ವಾರ ನಡೆದ ಸಂವಾದ ಕಾರ್ಯ ಕ್ರಮದಲ್ಲಿ ಮಾತ ನಾಡಿದ ಅವರು, ಈಗ ಪಕ್ಷ ಕಟ್ಟಿದೆ ಎಂದು ಹೇಳು ತ್ತಿರುವ ಸಿದ್ದರಾಮಯ್ಯನವರು 1999ರಲ್ಲಿ ಸೋತಾಗ ದೇವೇಗೌಡರ `ಅನುಗ್ರಹ’ ಮನೆಗೆ ಬಂದು `ನನಗೆ ರಾಜಕೀಯ ಸಾಕಾಗಿದೆ. ಅದರ ಸಹವಾಸವೇ ಬೇಡ. ಕರೀ ಕೋಟು ಹಾಕಿಕೊಂಡು…
ಸಿದ್ದಾರ್ಥನಗರ ಮೋರಿಯಲ್ಲಿ ಕೊಚ್ಚಿ ಹೋದ ವ್ಯಕ್ತಿ
October 25, 2021ಸಿದ್ದಾರ್ಥನಗರ ವಿನಯಮಾರ್ಗ 2ನೇ ಕ್ರಾಸ್ ನಿವಾಸಿ ಎಂ.ಜೆ. ಚಂದ್ರೇಗೌಡ(60) ಎಂಬುವರೇ ಮೋರಿಯಲ್ಲಿ ಕೊಚ್ಚಿಹೋದವ ರಾಗಿದ್ದಾರೆ. ಇಂದು ಸಂಜೆ ಸುಮಾರು 6ಗಂಟೆಗೆ ಆರಂಭವಾದ ಧಾರಾಕಾರ ಮಳೆ ತಡರಾತ್ರಿಯಾದರೂ ಸುರಿಯುತ್ತಿತ್ತು. ಈ ಮಳೆಯಿಂದಾಗಿ ಮೈಸೂರು ನಗರದ ಮೋರಿಗಳಲ್ಲಿ ನದಿಯಂತೆ ನೀರು ಹರಿಯಲಾರಂಭಿಸಿತು. ರಾತ್ರಿ 11 ಗಂಟೆ ಸುಮಾರಿಗೆ ಸಿದ್ದಾರ್ಥ ನಗರದ ವಿನಯಮಾರ್ಗ 2ನೇ ಕ್ರಾಸ್ನ 1109ನೇ ಸಂಖ್ಯೆಯ ಮನೆ ಕಾಂಪೌಂಡ್ ಒಳಗೂ ನೀರು ತುಂಬಿತ್ತು. ಇದರಿಂದಾಗಿ ಮನೆಮಂದಿ ನೀರನ್ನು ಹೊರಹಾಕುವ ಪ್ರಯತ್ನ ದಲ್ಲಿದ್ದರು ಎಂದು ಹೇಳಲಾಗಿದೆ. ಈ ವೇಳೆ ಮನೆ…
ಜಿಂಕೆ ಚರ್ಮ ಮಾರುತ್ತಿದ್ದ ಆಂಧ್ರದ ಮೂವರ ಬಂಧನ
October 24, 2021ಮೈಸೂರು,ಅ.23(ಎಂಟಿವೈ)-ಮೈಸೂರಿನ ಕುಕ್ಕರಹಳ್ಳಿ ಕೆರೆ ಬಳಿ ಜಿಂಕೆ ಚರ್ಮ ಮಾರಾಟ ಮಾಡುತ್ತಿದ್ದ ಆಂಧ್ರಪ್ರದೇಶದ ಮೂವರನ್ನು ಅರಣ್ಯ ಸಂಚಾರಿ ದಳದ ತಂಡ ಬಂಧಿ ಸಿದ್ದು, ಒಂದು ಜಿಂಕೆ ಚರ್ಮ ವಶಪಡಿಸಿಕೊಂಡಿದೆ. ಆಂಧ್ರಪ್ರದೇಶ ಚಿತ್ತೂರು ಜಿಲ್ಲೆಯ ಪಲಮನೇರು ತಾಲೂಕಿನ ಶಿಕಾರಿ ಕಾಲೋನಿಯ ನಿವಾಸಿ ಕುಟ್ಟಿ ಯಪ್ಪ ಬಿನ್ ಕಣಗಪರಂ(42), ವಿಜಯ್ಕಾಂತ್ ಬಿನ್ ದೇವರಾಜ್ (45), ಕಮಲ್ಹಾಸನ್ ಬಿನ್ ಪರಶುರಾಮ್(43) ಬಂಧಿತರಾ ದವರು. ಬಂಧಿತರು ಹಕ್ಕಿಪಿಕ್ಕಿ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಈ ವಿಚಾರ ತಿಳಿದ ಅರಣ್ಯ ಸಂಚಾರಿ ದಳದ ಸಿಬ್ಬಂದಿ ದಾಳಿ ಮಾಡಿ ಇಬ್ಬರು…
ಕಾಂಗ್ರೆಸ್ ಮುಖಂಡರ ವಿರುದ್ಧ ಮಾನನಷ್ಟ ಮೊಕದ್ದಮೆ
October 24, 2021ಮೈಸೂರು,ಅ.23(ಎಂಟಿವೈ)-ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಬಗ್ಗೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಅವಹೇಳನಕಾರಿಯಾಗಿ ಮಾತನಾಡಿದ್ದು, ಅವರ ವಿರುದ್ಧ ಮಾನನಷ್ಟ ಮೊಕ ದ್ದಮೆ ದಾಖಲಿಸಲಾಗು ವುದು ಎಂದು ಬಿಜೆಪಿ ಯುವ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಧೀರಜ್ ಪ್ರಸಾದ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ವಿರುದ್ಧ ನೀಡಿರುವ ಹೇಳಿಕೆ ತೀವ್ರ ಖಂಡನೀಯ. ಬಿಜೆಪಿಯಲ್ಲಿ ಅಧ್ಯಕ್ಷರಿಗೆ ವಿಶೇಷವಾದ ಗೌರವವಿದೆ. ಕೋಟ್ಯಾಂತರ ಕಾರ್ಯಕರ್ತರ ಗೌರವ ಪಡೆದಿರುವ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರನ್ನು ಅಸಂಬದ್ಧ…
ಸಿದ್ದರಾಮಯ್ಯ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ನೋಡಿಕೊಂಡು ಬರಲಿ: ಪ್ರಸಾದ್
October 24, 2021ಮೈಸೂರು,ಅ.23(ಪಿಎಂ)- `ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಒಂದು ತಿಂಗಳು ಅಫ್ಘಾನಿಸ್ತಾನಕ್ಕೆ ಕಳುಹಿಸಬೇಕು. ಅಲ್ಲಿ ಅವರು ತಾಲಿಬಾನ್ ಆಡಳಿತ ಹೇಗಿದೆ? ಎಂದು ನೋಡಿಕೊಂಡು ಬರಲಿ’ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಗುಡುಗಿದ್ದಾರೆ. `ಆರ್ಎಸ್ಎಸ್ ಮತ್ತು ಬಿಜೆಪಿಯವರು ತಾಲಿಬಾನಿಗಳಂತೆ ವರ್ತಿಸುತ್ತಿದ್ದಾರೆ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯರನ್ನು ಒಂದು ತಿಂಗಳು ಅಫ್ಘಾನಿಸ್ತಾನಕ್ಕೆ ಕಳುಹಿಸಬೇಕು. ಅವರು ಅಲ್ಲಿ ತಾಲಿಬಾನ್ ಆಡಳಿತ ನೋಡಲಿ. ಆಮೇಲೆ ಮಾತನಾಡಲಿ ಎಂದರು. ಮೈಸೂರಿನ ಮಾನಸಗಂಗೋ ತ್ರಿಯ ಸೆನೆಟ್ ಭವನದ ಆವರಣದಲ್ಲಿ ಮಾಧ್ಯಮದವರೊಂದಿಗೆ…
ಮೈಸೂರಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ನಾಳೆ ಬಿಯಾಂಡ್ ಬೆಂಗಳೂರು ಸಮ್ಮಿಟ್ ಉದ್ಘಾಟನೆ
October 24, 2021ಮೈಸೂರು, ಅ.23- ಕೆ-ಟೆಕ್, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಮತ್ತು ಸ್ಟಾರ್ಟ್ ಅಪ್ ಕರ್ನಾಟಕದ ಸಂಯುಕ್ತ ಆಶ್ರಯದಲ್ಲಿ ಅಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಮೈಸೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ರ್ಯಾಡಿಸನ್ ಬ್ಲೂ ಹೋಟೆಲ್ನಲ್ಲಿ ಅ.25ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಬಿಯಾಂಡ್ ಬೆಂಗಳೂರು ಸಮ್ಮಿಟ್ ಕಾರ್ಯಕ್ರಮವನ್ನು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವ ಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟಿಸಲಿದ್ದಾರೆ. ರಾಜ್ಯಾದ್ಯಂತ ಇರುವ ಎರಡನೇ ಮತ್ತು 3ನೇ ದರ್ಜೆ ನಗರಗಳಲ್ಲಿ ಸಮೂಹ ತಂತ್ರಜ್ಞಾನಗಳನ್ನು ಉತ್ತೇಜಿಸುವ ದೃಷ್ಟಿಯಿಂದ…










