ಮೈಸೂರು, ಸೆ.14(ಎಂಕೆ)- ಪ್ರತಿ ಷ್ಠಾಪನೆಯಾದ ಮೇಲೆ ಯಾವುದೇ ಕಾರಣಕ್ಕೂ ದೇವಸ್ಥಾನವನ್ನು ಕೆಡವ ಬಾರದು. ಇದು ಯಾರಿಗೂ ಕ್ಷೇಮವಲ್ಲ. ಸುಪ್ರೀಂಕೋರ್ಟ್ನ ಆದೇಶ ಪಾಲಿಸು ವುದು ಮುಖ್ಯವಾದರೂ, ಅಧಿಕಾರಿಗಳು ಆದೇಶದಲ್ಲಿರುವ ಅಂಶಗಳನ್ನು ಸರಿಯಾಗಿ ಅರ್ಥೈಸಿಕೊಂಡು ಕಾರ್ಯಾಚರಣೆ ನಡೆಸ ಬೇಕು ಎಂದು ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಶ್ರೀ ದತ್ತ ವಿಜಯಾ ನಂದ ಸ್ವಾಮೀಜಿ ಹೇಳಿದರು. ತಮ್ಮ 18ನೇ ಚಾತುರ್ಮಾಸ್ಯ ವ್ರತ ಹಿನ್ನೆಲೆ ನಗರದ ಹೆಬ್ಬಾಳ್ ಕಾಲೋನಿ ಯಲ್ಲಿರುವ ಶ್ರೀ ಪಟ್ಟಲದಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ, ಪೌರಕಾರ್ಮಿಕ ಕುಟುಂಬ ಗಳಿಗೆ ಆರ್ಥಿಕ…
ದೇವಸ್ಥಾನಗಳ ಉಳಿವಿಗಾಗಿ ಸಹಿ ಸಂಗ್ರಹ ಅಭಿಯಾನ
September 15, 2021ಮೈಸೂರು, ಸೆ.14-ಪರಿಸರ ಸ್ನೇಹಿ ಬಳಗದ ವತಿಯಿಂದ ಮೈಸೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ದಿವಾನ್ ಪೂರ್ಣಯ್ಯ ಛತ್ರದ ಎದುರು ಚಾಮುಂಡೇಶ್ವರಿ ದೇವಸ್ಥಾನವೂ ಸೇರಿದಂತೆ ಮೈಸೂರಿನಲ್ಲಿರುವ ದೇವಸ್ಥಾನಗಳನ್ನು ತೆರವುಗೊಳಿಸದಂತೆ ಸಾರ್ವಜನಿಕರಿಂದ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು. ಈ ಅಭಿಯಾನ ಕುರಿತು ಮಾತನಾಡಿದ ನಗರಪಾಲಿಕೆ ಸದಸ್ಯ ಕೆ.ಜಿ.ರಮೇಶ್, ದೇವಸ್ಥಾನಗಳನ್ನು ಒಡೆಯುವ ಕೆಲಸ ನಿಜಕ್ಕೂ ಬೇಸರದ ಸಂಗತಿ. ಯಾರೊಬ್ಬರ ಗಮನಕ್ಕೂ ತರದೆ, ಏಕಾಏಕಿ ರಾತ್ರೋರಾತ್ರಿ ದೇವಸ್ಥಾನಗಳನ್ನು ತೆರವುಗೊಳಿಸುವುದು ಸೂಕ್ತವಲ್ಲ. ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದು ನಿರ್ಧರಿಸುವುದು ಉತ್ತಮ ಎಂದು ಅಭಿಪ್ರಾಯಪಟ್ಟರು. ಜೀವನದ…
ಮೈಸೂರಿನ ಎನ್ಸಿಸಿ ಘಟಕದಲ್ಲಿ ದೇಶದ ಪ್ರಥಮ ಮೈಕ್ರೋಲೈಟ್ ಸಿಮ್ಯುಲೇಟರ್ ಸೌಲಭ್ಯ
September 15, 2021ಮೈಸೂರು, ಸೆ. 14(ಆರ್ಕೆ)- ಮೈಸೂ ರಿನ ರಾಮಸ್ವಾಮಿ ಸರ್ಕಲ್ನಲ್ಲಿರುವ ‘3 ಕರ್ನಾಟಕ ಗಲ್ರ್ಸ್ ಬೆಟಾಲಿಯನ್ ಎನ್ಸಿಸಿ ಘಟಕ’ದಲ್ಲಿ ದೇಶದ ಮೊದಲ ಮೈಕ್ರೋಲೈಟ್ ಸಿಮ್ಯುಲೇಟರ್ ಸಾಧನ ವನ್ನು ಅಳವಡಿಸಲಾಗಿದೆ. ಬೆಂಗಳೂರು ಮೂಲದ ಏರ್-ಎಕ್ಸ್ ಸಿಮ್ಯುಲೇಟರ್ ಲ್ಯಾಬ್ಸ್ ಕಂಪನಿಯು ಈ ಸಾಧನವನ್ನು ಅಳವಡಿಸಿದ್ದು, ಎನ್ಸಿಸಿ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ತರುಣ್ಕುಮಾರ್ ಐಚ್ ಅವರು ಸೋಮ ವಾರ ಭೇಟಿ ನೀಡಿ, ಪರಿಶೀಲಿಸಿದರು. ಅವರು, ಕರ್ನಾಟಕ-ಗೋವಾ ಎನ್ಸಿಸಿ ಡೈರೆಕ್ಟೊರೇಟ್ನ ಉಪ ಮಹಾನಿರ್ದೇಶಕ ಎನ್ಸಿಸಿ ಏರ್ ಕಮಾಂಡರ್ ಬಿ.ಎಸ್. ಕಣ್ವಾತ್ರೊಂದಿಗೆ ಎರಡು ದಿನಗಳ ಮೈಸೂರು…
ಡಾ.ರಾಜ್ಕುಮಾರ್ ರಸ್ತೆಯಲ್ಲಿ ಫುಟ್ಪಾತ್ ಒತ್ತುವರಿ ತೆರವು
September 14, 2021ಮೈಸೂರು,ಸೆ.13(ಆರ್ಕೆ)-ಮೈಸೂರಿನ ರಾಘವೇಂದ್ರನಗರ ಬಳಿ ಡಾ.ರಾಜ್ಕುಮಾರ್ ರಸ್ತೆಯಲ್ಲಿ ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಸಿದ್ಧಾರ್ಥನಗರ ಸಂಚಾರ ಠಾಣೆ ಪೊಲೀಸರು ಉದಯಗಿರಿ ಮತ್ತು ನಜರ್ ಬಾದ್ ಠಾಣೆ ಪೊಲೀಸರ ನೆರವಿನಿಂದ ಡಾ.ರಾಜ್ಕುಮಾರ್ ರಸ್ತೆಯ ಇಕ್ಕೆಲಗಳ ಫುಟ್ಪಾತ್ನಲ್ಲಿ ತಲೆ ಎತ್ತಿದ್ದ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿದರು. ಪಾದಚಾರಿಗಳು ಓಡಾಡಲು ತೊಂದರೆ ಯಾಗುವ ರೀತಿ ಮತ್ತೆ ಒತ್ತುವರಿ ಮಾಡಿದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚ ರಿಕೆ ನೀಡಿದರು. ಅಂಗಡಿ, ಗ್ಯಾರೇಜ್ಗಳ ಮುಂದೆ ಶೀಟ್ಗಳನ್ನು ಅಳವಡಿಸಿ ಫುಟ್ ಪಾತ್…
ದಿನೇ ದಿನೆ ಕುಸಿಯುತ್ತಿರುವ ಪ್ರಧಾನಿ ಮೋದಿ ಜನಪ್ರಿಯತೆ: ಮಾಜಿ ಸಭಾಪತಿ ಸುದರ್ಶನ್
September 14, 2021ಮೈಸೂರು, ಸೆ.13(ಆರ್ಕೆಬಿ)- ಜನರ ಭಾವನೆ, ನಾಡಿ ಮಿಡಿತ ಅರ್ಥ ಮಾಡಿಕೊಳ್ಳದಿದ್ದರ ಪರಿಣಾಮ ಕೋವಿಡ್ ಸಂದರ್ಭದಲ್ಲಿ ಜನರಿಗೆ ಸಿಗಬೇಕಾದ ಸೌಲಭ್ಯಗಳು, ಬಡಜನರಿಗೆ, ಕಾರ್ಮಿಕರಿಗೆ ಸಿಕ್ಕಿಲ್ಲ. ಪೆಟ್ರೋಲ್, ಡೀಸೆಲ್, ಗ್ಯಾಸ್ ಇನ್ನಿತರ ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸಲಾಗದ ಸರ್ಕಾರದ ವಿರುದ್ಧ ಜನ ಬೇಸರ ಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ದಿನೇ ದಿನೆ ಕುಸಿಯುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ತಿಳಿಸಿದರು. ಮೈಸೂರು ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಇಂದು ಅಧೋಗತಿಗಿಳಿದ ಆರ್ಥಿಕ ಪರಿಸ್ಥಿತಿ…
ಅ.5ರಂದು ಮಹಿಷಾ ದಸರಾ ಆಚರಣೆ
September 14, 2021ಮೈಸೂರು, ಸೆ.13 (ಆರ್ಕೆಬಿ)- ಮೈಸೂರು ಎಂದು ಹೆಸರು ಬರಲು ಕಾರಣನಾದ ಮಹಿಷಾ ಯಾವುದೇ ಧರ್ಮ, ಜಾತಿಗೆ ಸೀಮಿತನಲ್ಲ. ಮೂಲ ನಿವಾಸಿಗಳು ಮುಂದಿನ ಅ.5ರಂದು ಮಹಿಷಾ ದಸರಾ ಆಚರಿಸುತ್ತೇವೆ. ಮಹಿಷಾಸುರ ಉತ್ಸವ ಮೂರ್ತಿ ಅನಾ ವರಣ, ಪುಷ್ಪಾರ್ಚನೆ ಮತ್ತು ನುಡಿ ನಮನ ಸಲ್ಲಿಸಲಿದ್ದೇವೆ ಎಂದು ಮಹಿಷಾ ದಸರಾ ಅನುಷ್ಠಾನ ಸಮಿತಿ ತಿಳಿಸಿದೆ. ಸಂವಿಧಾನ ವಿರೋಧಿಗಳು 2019 ರಿಂದಲೂ ಮಹಿಷಾ ದಸರಾ ಆಚರಣೆಗೆ ಅಡ್ಡಿಪಡಿಸುತ್ತಿದ್ದಾರೆ. ಆದರೆ ಕೋವಿಡ್ ಮಾರ್ಗಸೂಚಿ ಆಧರಿಸಿ, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನಮ್ಮ ಕರ್ತವ್ಯದ ಭಾಗವಾಗಿ ಆಚರಿಸುತ್ತಿದ್ದೇವೆ….
ವಕೀಲರೊಬ್ಬರಿಗೆ ಪಿಎಸ್ಐ ನಿಂದಿಸಿದ ಆರೋಪ; ಮೈಸೂರಲ್ಲಿ ವಕೀಲರ ದಿಢೀರ್ ಪ್ರತಿಭಟನೆ
September 14, 2021ಮೈಸೂರು,ಸೆ.13(ಪಿಎಂ)-ವಕೀಲರೊಬ್ಬ ರನ್ನು ಪೊಲೀಸ್ ಸಬ್ಇನ್ಸ್ಪೆಕ್ಟರ್ (ಪಿಎಸ್ಐ) ಒಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿ ದ್ದಾರೆ ಎಂದು ಆರೋಪಿಸಿ ಮೈಸೂರು ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ದಿಢೀರ್ ಪ್ರತಿಭಟನೆ ನಡೆಸಿದರು. ಮೈಸೂರಿನ ಜಿಲ್ಲಾ ನ್ಯಾಯಾಲಯದ ಎದುರಿನ ಗಾಂಧಿ ಪುತ್ತಳಿ ಬಳಿ ಜಮಾ ಯಿಸಿ ಅರ್ಧ ತಾಸಿಗೂ ಹೆಚ್ಚು ಕಾಲ ಪ್ರತಿ ಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಕಕ್ಷಿದಾರರ ಕುರಿತು ಮಾತನಾಡಲು ನಮ್ಮ ವಕೀಲರೊಬ್ಬರು ಠಾಣೆಗೆ ತೆರಳಿ ದಾಗ ಸದರಿ ಪಿಎಸ್ಐ ಇರಲಿಲ್ಲ. ದೂರ ವಾಣಿ ಕರೆ ಮಾಡಿದಾಗ ಪಿಎಸ್ಐ ಏಕ…
ಧಾರ್ಮಿಕ ಕಟ್ಟಡ ತೆರವು ವಿಷಯದಲ್ಲಿ ಬಿಜೆಪಿಯಲ್ಲೇ ಗೊಂದಲ ಖಂಡಿಸಿ ಮೈಸೂರಲ್ಲಿ ಕಾಂಗ್ರೆಸ್ ಪ್ರತಿಭಟನೆ
September 14, 2021ಮೈಸೂರು, ಸೆ.13(ಎಸ್ಬಿಡಿ)- ಧಾರ್ಮಿಕ ಕಟ್ಟಡಗಳ ತೆರವುಗೊಳಿಸುವ ಬಗ್ಗೆ ಬಿಜೆಪಿ ಮುಖಂಡರು ಗೊಂದಲ ಸೃಷ್ಟಿಸುವ ಮೂಲಕ ಜನರ ಭಾವನೆಯೊಂದಿಗೆ ಚೆಲ್ಲಾಟವಾಡು ತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡ ಎನ್.ಎಂ.ನವೀನ್ ಕುಮಾರ್ ನೇತೃತ್ವದಲ್ಲಿ ಮೈಸೂರಿನ ಅಗ್ರಹಾರದ ನೂರೊಂದು ಗಣಪತಿ ದೇವಾಲಯದ ಬಳಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ನವೀನ್ಕುಮಾರ್ ಮಾತನಾಡಿ, ಮೈಸೂರಿನಲ್ಲಿ ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆ ಮುಂದುವರೆಸಲಾಗಿದೆ. 2011ರಲ್ಲಿ ಬಿಜೆಪಿ ಸರ್ಕಾರವೇ ದೇವಾ ಲಯಗಳ ತೆರವಿಗೆ ಪಟ್ಟಿ ಸಿದ್ಧಪಡಿಸಿತ್ತು. ಈಗಿನ ಸರ್ಕಾರ ದೇವಾಲಯಗಳನ್ನು ಕೆಡವಿ ಹಾಕುವ ಕಾರ್ಯಕ್ಕೆ ಮುಂದಾಗಿದೆ….
ಇಂದು ಗಜ ಪಯಣಕ್ಕೆ ಚಾಲನೆ
September 13, 2021ಮೈಸೂರು, ಸೆ.12(ಆರ್ಕೆ)- ಹುಣಸೂರು ತಾಲೂಕು ವೀರನಹೊಸಳ್ಳಿಯಲ್ಲಿ ನಾಳೆ (ಸೆ.13) ಮೈಸೂರು ದಸರಾ ಮಹೋತ್ಸವದ ಗಜಪಯಣ ಆರಂಭವಾಗಲಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮ ಶೇಖರ್ ಅವರು ಸೋಮವಾರ ಬೆಳಗ್ಗೆ 9.30 ಗಂಟೆಗೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 8 ಆನೆಗಳನ್ನೊಳಗೊಂಡ ಗಜಪಯಣಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ. ಮೈಸೂರು ಮೇಯರ್ ಸುನಂದಾ ಪಾಲನೇತ್ರ, ಉಪ ಮೇಯರ್ ಅನ್ವರ್ ಬೇಗ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಹೆಚ್.ಪಿ.ಮಂಜುನಾಥ್, ಕೆ.ಮಹದೇವ, ಸಾ.ರಾ. ಮಹೇಶ್, ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ಎಸ್.ಎ. ರಾಮದಾಸ್, ತನ್ವೀರ್ ಸೇಠ್,…
ಸೆ.19ರಂದು ವೀರಶೈವ ಮಹಾಸಭಾ ರಾಷ್ಟ್ರೀಯ ನಾಯಕರ ಆಗಮನ
September 13, 2021ಮೈಸೂರು, ಸೆ.12(ಆರ್ಕೆಬಿ)- ನಿರಂಜನ ಮಠದ ಅಸ್ಮಿತೆಯನ್ನು ಉಳಿಸುವ ಸಲುವಾಗಿ ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಭಾನುವಾರ 44 ದಿನಗಳನ್ನು ಪೂರೈಸಿತು. ಪ್ರತಿಭಟನೆ ಸೆ.19ರಂದು ಭಾನುವಾರ 50ನೇ ದಿನಕ್ಕೆ ಕಾಲಿಡುತ್ತಿರುವ ಸಂದರ್ಭ ದಲ್ಲಿ ಅಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ, ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ, ಸೇರಿದಂತೆ ರಾಜ್ಯ ಮಟ್ಟದ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಇಂದು ನಿರಂಜನ ಮಠ ಅಹೋ ರಾತ್ರಿ ಹೋರಾಟ ಸಭೆಯಲ್ಲಿಂದು ತಿಳಿಸಲಾಯಿತು. ವೀರಶೈವ…










