ಮೈಸೂರು, ಸೆ.೯(ಎಸ್ಬಿಡಿ)- ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯ ಸರ್ಕಾರದ ನಿಲುವಿಗೆ ನಮ್ಮ ಪಕ್ಷ ಬೆಂಬಲ ನೀಡಲಿದೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹೇಳಿದರು. ಮೈಸೂರಿಗೆ ಗುರು ವಾರ ಆಗಮಿಸಿದ್ದ ಅವರು ಇಲ್ಲಿನ ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತ ನಾಡಿದರು. ಕಾವೇರಿ ನದಿ ನೀರು ವಿಚಾರದಲ್ಲಿ ರಾಜ್ಯ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡರೂ ಅದನ್ನು ನಮ್ಮ ಪಕ್ಷ ಬೆಂಬಲಿಸಲಿದೆ ಎಂದು ಸ್ಪಷ್ಟಪಡಿಸಿದರು. ಕಾವೇರಿ ನದಿ ನೀರು ಹಂಚಿಕೆ ಕುರಿತು…
ಜಿ.ಟಿ.ದೇವೇಗೌಡ ಈಗ ಜೆಡಿಎಸ್ನಲ್ಲೇ ಇದ್ದಾರೆ
September 11, 2021ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು ಕಾಂಗ್ರೆಸ್ ಸೇರುವರೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಜಿಟಿಡಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿಲ್ಲ, ಅವರು ಜೆಡಿಎಸ್ನಲ್ಲೇ ಇದ್ದಾರೆ. ಸಿದ್ದರಾಮಯ್ಯ, ಯಡಿಯೂರಪ್ಪನವರ ಮನೆಗೂ ಹೋಗಿ ಕ್ಷೇತ್ರದ ವಿಚಾರಗಳ ಬಗ್ಗೆ ಚರ್ಚೆ ನಡೆಸಿ ದ್ದಾರೆ. ಅದಕ್ಕೆಲ್ಲಾ ನಾನು ಪ್ರತಿಕ್ರಿಯೆ ನೀಡು ವುದಿಲ್ಲ. ಅವರು ಪಕ್ಷ ಬಿಟ್ಟಾಗ ನಾನು ಮಾತ ನಾಡುತ್ತೇನೆ ಎಂದರು. ಜಿಟಿಡಿಯನ್ನು ಪಕ್ಷದಲ್ಲೇ ಉಳಿಸಿಕೊಳ್ಳುತ್ತೀರಾ? ಎಂಬ ಪ್ರಶ್ನೆಗೆ `ಅದು ಮುಂದಿನ ವಿಚಾರ. ಸದ್ಯಕ್ಕೆ ಅವರು…
ಮಾಜಿ ಪ್ರಧಾನಿ ದೇವೇಗೌಡರಿಗೆ ಸುತ್ತೂರು ಶ್ರೀಗಳ ಆಶೀರ್ವಾದ
September 11, 2021ಮೈಸೂರು, ಸೆ.೯(ಎಂಕೆ)- ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಗುರುವಾರ ಭೇಟಿ ನೀಡಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಆಶೀ ರ್ವಾದ ಪಡೆದು ಕುಶಲೋಪರಿ ನಡೆಸಿದರು. ಬಳಿಕ ಸುತ್ತೂರು ಶ್ರೀಗಳೊಂದಿಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರತ್ಯೇಕ ವಾಗಿ ಸಮಾಲೋಚನೆ ನಡೆಸಿ, ಪ್ರಸಾದ ಸ್ವೀಕರಿಸಿದರು. ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಶಾಸಕ ರಾದ ಸಿ.ಎಸ್.ಪುಟ್ಟರಾಜು, ಸಾ.ರಾ. ಮಹೇಶ್, ಕೆ.ಮಹದೇವ್, ಅಶ್ವಿನ್ ಕುಮಾರ್, ನಗರ ಪಾಲಿಕೆ ಸದಸ್ಯ ಕೆ.ವಿ. ಶ್ರೀಧರ್, ಮೈಸೂರು…
ನಿಫಾ ಆತಂಕ: ಕೇರಳ ಗಡಿಯಲ್ಲಿ ಕಟ್ಟೆಚ್ಚರ
September 11, 2021ಮೈಸೂರು, ಸೆ.೯(ಎಂಟಿವೈ)- ನೆರೆ ರಾಜ್ಯಗಳಲ್ಲಿ ಕೊರೊನಾ ವೈರಸ್ ಹೆಚ್ಚಳದೊಂದಿಗೆ ನಿಫಾ ವೈರಸ್ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ-ಕೇರಳ ಗಡಿ ಬಾವಲಿ ಚೆಕ್ಪೋಸ್ಟ್ನಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲದೆ ಗಡಿದಾಟುವ ಪ್ರತಿ ಯೊಬ್ಬರನ್ನು ತಪಾಸಣೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸೂಚಿಸಿದ್ದಾರೆ. ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಪಿ.ಪ್ರಸಾದ್ ಹಾಗೂ ಹೆಚ್.ಡಿ.ಕೋಟೆ ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ಚಾಮರಾಜನಗರ ಜಿಲ್ಲಾ ಡಳಿತಕ್ಕೆ ಸೂಚನೆ ನೀಡಿದ್ದು, ಕೇರಳ ರಾಜ್ಯದಲ್ಲಿ ನಿಫಾ ವೈರಸ್ ಕಾಣ ಸಿಕೊಂಡಿರುವ ಹಾಗೂ ಕೋವಿಡ್ ಪ್ರಕರಣಗಳು…
‘ತೇಜಸ್ವಿ’ ನೆನಪಿನ ದೋಣಿಯಲ್ಲಿ ಸಾಗಿದ ಸಿದ್ದರಾಮಯ್ಯ!
September 9, 2021ಮೈಸೂರು,ಸೆ.8-ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನದ ಅಂಗವಾಗಿ ಚಿತ್ರಕಲಾ ಪರಿಷತ್ತಿ ನಲ್ಲಿ ಆಯೋಜಿಸಿದ್ದ ತೇಜಸ್ವಿ ಜೀವಲೋಕ ಹಾಗೂ ಕುರಿಂಜಿ ಲೋಕ ಸಾಕ್ಷ್ಯಚಿತ್ರ, ಛಾಯಾ ಚಿತ್ರ ಪ್ರದರ್ಶನ ಕಾರ್ಯಕ್ರಮ ತೇಜಸ್ವಿ ಅವರ ಚಿಂತನಾ ಲೋಕ ತೆರೆದಿಟ್ಟಿತು. ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದ ವಿಪಕ್ಷ ನಾಯಕ ಸಿದ್ದರಾಮಯ್ಯ, ನಾನು ವಿದ್ಯಾರ್ಥಿಯಾಗಿದ್ದಾಗ ತೇಜಸ್ವಿಯವರ ಪರಿಚಯ ನನಗಿರಲಿಲ್ಲ. ವಾರ ಕ್ಕೊಮ್ಮೆ ಮೈಸೂರಿಗೆ ಬರುತ್ತಿದ್ದರು. ಮೈಸೂರಿನಲ್ಲಿ ಕೆ. ರಾಮದಾಸ್ ಅವರು ತೇಜಸ್ವಿಯವರ ಆಪ್ತ ಸ್ನೇಹಿತರಾಗಿದ್ದರು. ಇವರು ಕೂಡ ಶಿವಮೊಗ್ಗ ಜಿಲ್ಲೆಯವರು. ತೇಜಸ್ವಿಯವರಿಗೆ ಶ್ರೀ ರಾಮ್ ಎನ್ನುವ ಇನ್ನೊಬ್ಬ…
ತಂಬಾಕು ಹರಾಜು ಪ್ಲಾಟ್ಫಾರಂ ದೂರದೂರಿಗೆ ಸ್ಥಳಾಂತರ
September 9, 2021ಮೈಸೂರು, ಸೆ.8(ಆರ್ಕೆಬಿ)- ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆ ಹೋಬಳಿ ಹಾಡ್ಯ, ಬೆಣಗನಹಳ್ಳಿ ಮತ್ತು ನಾಡಪ್ಪನಹಳ್ಳಿ ಕ್ಲಸ್ಟರ್ಗಳನ್ನು ಒಳಗೊಂಡ ಚಿಲ್ಕುಂದ ತಂಬಾಕು ಬೆಳೆಗಾರರು ಚಿಲ್ಕುಂದ-62 ಹರಾಜು ಪ್ಲಾಟ್ಫಾರಂನಲ್ಲಿ ಮಾರಾಟ ಮಾಡುತ್ತಿದ್ದು, ಏಕಾಏಕಿ ನಮ್ಮನ್ನು 40 ಕಿ.ಮೀ ದೂರದ ರಾಮನಾಥಪುರ ಹಾಗೂ 35 ಕಿ.ಮೀ. ದೂರದ ಕಟ್ಟೆಮಳಲವಾಡಿಗೆ ವರ್ಗಾ ಯಿಸಿರುವುದರಿಂದ ತಂಬಾಕು ಬೆಳೆಗಾರರು ತೊಂದರೆ ಅನುಭವಿಸುವಂತಾಗಿದೆ ಎಂದು ಈ ಮೂರೂ ಕ್ಲಸ್ಟರ್ಗಳ ರೈತರು ದೂರಿದ್ದಾರೆ. ಮೈಸೂರು ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ಯಲ್ಲಿ ಈ ವಿಷಯ ತಿಳಿಸಿದ ತಂಬಾಕು ಬೆಳೆಗಾರ ಮುಖಂ…
ಬಟ್ಟೆ ಬ್ಯಾಗ್ ಖರೀದಿಗೆ ಸ್ವಚ್ಛತಾ ಕಾರ್ಯದ ಹಣ ನೀಡುವ ಆದೇಶ ರೋಹಿಣಿ ಸಿಂಧೂರಿ ವಿರುದ್ಧ ಕ್ರಮಕ್ಕೆ ಕೆ.ಆರ್.ನಗರ ಪುರಸಭೆ ಸದಸ್ಯರ ಆಗ್ರಹ
September 9, 2021ಮೈಸೂರು, ಸೆ.8(ಆರ್ಕೆಬಿ)- ಕೆ.ಆರ್.ನಗರ ಪುರಸಭೆಯಲ್ಲಿ ಸ್ವಚ್ಛತೆ ಕಾಯ್ದು ಕೊಂಡಿದ್ದಕ್ಕಾಗಿ ಕೇಂದ್ರ ಸರ್ಕಾರದಿಂದ ಪುರಸ್ಕಾರವಾಗಿ ಬಂದಿದ್ದ 10 ಲಕ್ಷ ರೂ.ಗಳನ್ನು ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಬಟ್ಟೆ ಬ್ಯಾಗ್ ಖರೀದಿಗಾಗಿ ವಾಪಸು ನೀಡುವಂತೆ ಅಕ್ರಮವಾಗಿ ಆದೇಶ ನೀಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳ ಬೇಕೆಂದು ಕೆ.ಆರ್. ನಗರ ಪುರಸಭೆ ಸದಸ್ಯರು ಆಗ್ರಹಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಸದಸ್ಯ ಕೆ.ಎಲ್.ಜಗದೀಶ್, ಬಟ್ಟೆ ಬ್ಯಾಗ್ ಬೆಲೆ ಸುಮಾರು 9 ರೂ.ಗಳಾದರೆ, ಅದಕ್ಕೆ…
ಫೀ.ಮಾ. ಕೆ.ಎಂ.ಕಾರ್ಯಪ್ಪ ಅವರ ಹೆಸರಿಡಿ
September 9, 2021ಮೈಸೂರು,ಸೆ.8(ಪಿಎಂ)-ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕೊಡುಗೆ ಏನೂ ಇಲ್ಲ. ಆದರೂ ಅವರ ಹೆಸರನ್ನು ಉದ್ಯಾ ನವನಕ್ಕೆ ನಾಮ ಕರಣ ಮಾಡಿದ್ದು, ನೆಹರು ಕುಟುಂ ಬಸ್ಥರ ಹೆಸರಿಟ್ಟು ಸೋನಿಯಾ ಗಾಂಧಿ ಮೆಚ್ಚಿಸಬೇಕಾದ ಅನಿವಾರ್ಯ ಕಾಂಗ್ರೆಸ್ಗೆ ಇದೆಯೇ ಹೊರತು, ನಮಗೆ ಅಂತಹ ಅನಿ ವಾರ್ಯತೆ ಇಲ್ಲ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು. ಮೈಸೂರಿನ ಜಲದರ್ಶಿನಿ ಅತಿಥಿಗೃಹದ ಆವರಣದಲ್ಲಿ ಬುಧವಾರ ಮಾಧ್ಯಮದವ ರಿಗೆ ಪ್ರತಿಕ್ರಿಯೆ ನೀಡಿದ ಅವರು, ಸದರಿ ರಾಷ್ಟ್ರೀಯ ಉದ್ಯಾನವನಕ್ಕೆ ಭಾರತೀಯ ಸೇನೆಯ…
ಸೆ.13ಕ್ಕೆ ಗಜಪಯಣ
September 9, 2021ಮೈಸೂರು, ಸೆ.8(ಎಂಟಿವೈ)- ಈ ಬಾರಿ ದಸರಾ ಮಹೋ ತ್ಸವವನ್ನು ಸರಳವಾಗಿ ಆಚರಿಸಲಿದ್ದು, ಹುಣಸೂರು ತಾಲೂಕು ವೀರನಹೊಸಹಳ್ಳಿ ಗೇಟ್ ಬಳಿ ಸೆ.13ರಂದು ಬೆಳಗ್ಗೆ 9.30ಕ್ಕೆ ಗಜಪಯಣಕ್ಕೆ ಚಾಲನೆ ನೀಡುವ ಮೂಲಕ 8 ಆನೆಗಳ ತಂಡ ವನ್ನು ಬರಮಾಡಿಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು. ಸರಳ ದಸರಾ ಕಾರಣದಿಂದಾಗಿ ಕಳೆದ ಬಾರಿ 5 ಆನೆಗಳ ನ್ನಷ್ಟೇ ಕರೆತರಲಾಗಿತ್ತು. ಆದರೆ ಈ ಬಾರಿ ಅದರ ಸಂಖ್ಯೆಯನ್ನು 8ಕ್ಕೆ ಹೆಚ್ಚಿಸಲಾಗಿದೆ. ಸೆ.13ರಂದು ವೀರನಹೊಸಹಳ್ಳಿಯಿಂದ ಮೈಸೂರಿಗೆ ಆಗಮಿಸುವ ಗಜಪಡೆಯನ್ನು ಸೆ.16ರಂದು ಬೆಳಗ್ಗೆ…
ಕೊರೊನಾ ಮಾನವೀಯತೆ ಪಾಠ ಕಲಿಸಿದೆ
September 8, 2021ಮೈಸೂರು, ಸೆ.7(ಆರ್ಕೆ)- ಮಹಾಮಾರಿ ಕೊರೊನಾ ಸೋಂಕು ಕಳೆದ ಒಂದೂ ವರೆ ವರ್ಷದಿಂದ ನಮಗೆ ಮಾನವೀಯ ತೆಯ ಪಾಠ ಕಲಿಸಿದೆ ಎಂದು ನವದೆಹ ಲಿಯ ಸಿಎಸ್ಐಆರ್ ಮಹಾ ನಿರ್ದೇಶಕ ಡಾ. ಶೇಖರ್ ಸಿ. ಮಂಡೆ ತಿಳಿಸಿದ್ದಾರೆ. ಕ್ರಾಫರ್ಡ್ ಭವನದಲ್ಲಿ ಇಂದು ನಡೆದ ಮೈಸೂರು ವಿಶ್ವವಿದ್ಯಾನಿಲಯದ 101ನೇ ಘಟಿಕೋತ್ಸವದಲ್ಲಿ, ಅವರು ಘಟಿಕೋತ್ಸವ ಭಾಷಣ ಮಾಡುತ್ತ, ಈ ಮಹಾಮಾರಿ ಪ್ರತಿಯೊಬ್ಬರಿಗೂ ಸವಾಲಿನ ಸನ್ನಿವೇಶ ಒಡ್ಡಿದೆ. ಜಗತ್ತು ಲಾಕ್ಡೌನ್ ಆದಾಗ ವೈದ್ಯರು, ಆರೋಗ್ಯ ಸಿಬ್ಬಂದಿ, ಇತರೆ ಆರೋಗ್ಯ ಸೇವೆ ಪೂರೈಸುವವರು, ಅಧಿಕಾರಿ ವರ್ಗ,…










