ಮೈಸೂರು, ಮಾ.9(ಆರ್ಕೆ)- ಪ್ರಸಾದ (Piಟgಡಿimಚಿge ಖeರಿuveಟಿಚಿಣioಟಿ ಚಿಟಿಜ Sಠಿiಡಿiಣuಚಿಟ ಊeಡಿiಣಚಿge ಂug meಟಿಣಚಿಣioಟಿ ಆಡಿive) ಯೋಜನೆ ಯಡಿ ಮೈಸೂರಿನ ಚಾಮುಂಡಿಬೆಟ್ಟದ ಸಮಗ್ರ ಅಭಿವೃದ್ಧಿಗೆ ಅನುದಾನ ನೀಡು ವಂತೆ ಸಂಸದ ಪ್ರತಾಪ್ ಸಿಂಹ ಅವರು ಕೇಂದ್ರ ಪ್ರವಾಸೋದ್ಯಮ ಇಲಾಖೆ ಹೆಚ್ಚುವರಿ ಮಹಾ ನಿರ್ದೇಶಕರಾದ (ಎಡಿಜಿ) ರೂಪಿಂದರ್ ಬ್ರಾರ್ ಅವರಿಗೆ ಮನವಿ ಮಾಡಿದ್ದಾರೆ. ನವದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ನ ಟ್ರಾನ್ಸ್ಪೋರ್ಟ್ ಭವನದಲ್ಲಿರುವ ಕಚೇರಿ ಯಲ್ಲಿ ಇಂದು ಬೆಳಿಗ್ಗೆ ಎಡಿಜಿ ಅವರನ್ನು ಭೇಟಿ ಮಾಡಿದ ಅವರು, ಚಾಮುಂಡಿ ಬೆಟ್ಟದ ಅಭಿವೃದ್ಧಿಗಾಗಿ ಪ್ರಧಾನಿ…
ಎಲ್ಐಸಿ ಖಾಸಗೀಕರಣ ಪ್ರಸ್ತಾಪ ಕೈಬಿಡಲು ಆಗ್ರಹಿಸಿ ಪ್ರತಿಭಟನೆ
March 9, 2021ಮೈಸೂರು,ಮಾ.8(ಪಿಎಂ)- ಭಾರತೀಯ ಜೀವ ವಿಮಾ ನಿಗಮದಲ್ಲಿ (ಎಲ್ಐಸಿ) ಷೇರು ಮಾರುಕಟ್ಟೆ ಮೂಲಕ ಬಂಡ ವಾಳ ತೊಡಗಿಸುವ ಹಾಗೂ ವಿದೇಶಿ ನೇರ ಬಂಡವಾಳ ಮಿತಿ ಹೆಚ್ಚಳದ ಪ್ರಸ್ತಾಪಗಳನ್ನು ಕೈಬಿಡಬೇಕು. ಜೊತೆಗೆ ಯಾವುದೇ ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿ ಖಾಸಗೀಕರಣ ಮಾಡಬಾರದು ಎಂದು ಒತ್ತಾಯಿಸಿ ಎಲ್ಐಸಿ ನೌಕರರು ಸೋಮವಾರ ಪ್ರತಿಭಟನೆ ನಡೆಸಿದರು. ಮೈಸೂರಿನ ಬನ್ನಿಮಂಟಪದಲ್ಲಿರುವ ಎಲ್ಐಸಿ ವಿಭಾ ಗೀಯ ಕಾರ್ಯಾಲಯದ ಎದುರು ಮಧ್ಯಾಹ್ನದ ಭೋಜನ ವಿರಾಮ ವೇಳೆಯಲ್ಲಿ ಅಧಿಕಾರಿ ಮತ್ತು ನೌಕರರು ಪ್ರತಿಭಟನೆ ನಡೆಸಿದರು. ಎಲ್ಐಸಿ ಕ್ಲಾಸ್-1 ಅಧಿಕಾರಿಗಳ…
ಕೌಟುಂಬಿಕ ವಿಷಯದಲ್ಲಿ ಮಹಿಳೆಗೆ ಪ್ರಧಾನ ಸ್ಥಾನ
March 9, 2021ಮೈಸೂರು, ಮಾ.8(ಎಸ್ಪಿಎನ್)-ಭಾರತೀಯ ಸಂಸ್ಕøತಿಯಲ್ಲಿ ಮಹಿಳೆಗೆ ಮಾತೃ ಸ್ಥಾನ ನೀಡಿ, ಗೌರವಿಸ ಲಾಗುತ್ತಿದೆ. ನಮ್ಮ ಕೌಟುಂಬಿಕ ವ್ಯವಸ್ಥೆಯಲ್ಲಿ ಮಹಿಳೆ, ತಾಯಿ, ಸೊಸೆ, ಮಗಳು, ಹೆಂಡತಿ ಹೀಗೆ ವಿವಿಧ ಸ್ಥಾನಗಳಲ್ಲಿ ಪ್ರತಿನಿಧಿಸಿ, ನಮ್ಮ ಸಂಸ್ಕøತಿಗೆ ಗೌರವ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಮಾಜಿ ಶಾಸಕ ವಾಸು ಅಭಿಪ್ರಾಯಪಟ್ಟರು. ಮೈಸೂರು ವಿಜಯನಗರ 2ನೇ ಹಂತದ ಶ್ರೀಕೃಷ್ಣದೇವ ರಾಯ ವೃತ್ತದಲ್ಲಿ ಸುಜೀವ್ ಸಂಸ್ಥೆ ವತಿಯಿಂದ ಆಯೋ ಜಿಸಿದ್ದ ಮಹಿಳಾ ದಿನಾಚರಣಾ ಪ್ರಯುಕ್ತ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು. ತಿ.ನರಸೀಪುರ ತಾಲೂಕಿನ…
ಸವಾಲನ್ನು ಆಯ್ಕೆ ಮಾಡಿಕೊಂಡು ಮಹಿಳೆಯರ ಸಬಲೀಕರಣಕ್ಕೆ ಹೋರಾಟ ಅಗತ್ಯ
March 9, 2021ಮೈಸೂರು, ಮಾ.8(ಆರ್ಕೆಬಿ)- `ಸವಾಲನ್ನು ಆಯ್ಕೆ ಮಾಡು’ ಎಂಬುದು ಈ ವರ್ಷದ ವಿಶ್ವ ಮಹಿಳಾ ದಿನಾ ಚರಣೆಯ ಘೋಷಣೆಯಾಗಿದ್ದು, ನಾವೆ ಲ್ಲರೂ ಈ ಸವಾಲನ್ನು ಆಯ್ಕೆ ಮಾಡಿ ಕೊಂಡು ಮಹಿಳೆಯರ ಸಬಲೀಕರಣಕ್ಕೆ ಹೋರಾಡಬೇಕಾಗಿದೆ ಎಂದು ನಿವೃತ್ತ ಡಿಸಿಪಿ ಬಸವರಾಜ ಮಾಲಗತ್ತಿ ತಿಳಿಸಿದರು. ಮೈಸೂರಿನ ಜೆಎಲ್ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಸೋಮವಾರ ಮಹಿಳಾ ರಕ್ಷಣಾ ಪಡೆಯನ್ನು ಉದ್ಘಾಟಿಸಿ ಅವರು ಮಾತ ನಾಡಿದರು. ಮಹಿಳೆಯರ ಮೇಲಿನ ತಾರತಮ್ಯ, ದೌರ್ಜನ್ಯ, ಅಸಮಾನತೆ ವಿರುದ್ಧ ಹೋರಾ ಡುವುದು ಇಂದಿನ ಅನಿವಾರ್ಯ ವಾಗಿದೆ ಎಂದು ಅವರು…
ಸೈಬರ್ ಕ್ರೈಮ್ ವಿಚಾರದಲ್ಲಿ ಇಲಾಖಾ ಸಿಬ್ಬಂದಿ ಎಚ್ಚರ ವಹಿಸುವುದು ಅವಶ್ಯ
March 9, 2021ಮೈಸೂರು,ಮಾ.8(ಎಂಟಿವೈ)-ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ ಹೆಚ್ಚಾಗುತ್ತಿದೆ. ಸರ್ಕಾರ ಜಾರಿಗೆ ತಂದಿರುವ `ಇ-ಆಡಳಿತ’ ವ್ಯವಸ್ಥೆ ಜಾರಿಗೆ ಎಲ್ಲಾ ಇಲಾಖೆ ಸಿಬ್ಬಂದಿ ಅಗತ್ಯವಾಗಿ ಸೈಬರ್ ಕ್ರೈಮ್ ತಡೆ ಕ್ರಮಗಳ ಬಗ್ಗೆ ತಿಳಿದುಕೊಳ್ಳುವುದು ಅನಿವಾರ್ಯ ಎಂದು ಡಿವೈಎಸ್ಪಿ ಮಾಥ್ಯೂ ಥಾಮಸ್ ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರ ಸರ್ಕಾರದ ಸಾಮಥ್ರ್ಯಾಭಿವೃದ್ಧಿ ಯೋಜನೆಯಡಿ ಮೈಸೂರಿನ ಆಡಳಿತ ಮತ್ತು ತರಬೇತಿ ಸಂಸ್ಥೆಯ ಸಭಾಂಗಣ ದಲ್ಲಿ ಸೋಮವಾರ ಇ-ಆಡಳಿತ ಕೋಶ, ಆಡಳಿತ ತರಬೇತಿ ಸಂಸ್ಥೆ, ಜಿಲ್ಲಾ ತರಬೇತಿ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ `ಸೈಬರ್ ಸೆಕ್ಯೂರಿಟಿ’ ಮತ್ತು `ಇ-ಆಡಳಿತ’ ಕಾರ್ಯಾಗಾರವನ್ನು ಉದ್ಘಾಟಿಸಿ…
ಪೊಲೀಸ್ ಇಲಾಖೆಗೆ ಬೆಲ್ಜಿಯನ್ ಮಾಲಿನೊಯಿಸ್ ತಳಿಯ ಶ್ವಾನ ಕೊಡುಗೆ
March 9, 2021ಮೈಸೂರು,ಮಾ.8(ಆರ್ಕೆ)-ತನಿಖೆಗೆ ಸಹಾಯವಾಗ ಲೆಂದು ಶ್ವಾನ ತರಬೇತುದಾರ ಬಿ.ಸಿ. ಪ್ರಮೋದ್ ಅವರು ಮೈಸೂರು ನಗರ ಪೊಲೀಸ್ ಘಟಕಕ್ಕೆ ಅಪರೂಪದ ಬೆಲ್ಜಿಯನ್ ಮಾಲಿನೊಯಿಸ್ (ಃeಟgiಚಿಟಿ ಒಚಿಟiಟಿois) ತಳಿಯ ಶ್ವಾನವನ್ನು ಉಡುಗೊರೆಯಾಗಿ ನೀಡಿದ್ದಾರೆ. ಮೈಸೂರು ತಾಲೂಕು, ಡಿ. ಸಾಲುಂಡಿ ಬಳಿ ಹೆಚ್.ಡಿ. ಕೋಟೆ ರಸ್ತೆಯಲ್ಲಿ ‘ಆ-ಏ9 Woಡಿಞiಟಿg ಆogs’ ಶ್ವಾನ ತರಬೇತಿ ಕೇಂದ್ರ ನಡೆಸುತ್ತಿರುವ ಪ್ರಮೋದ್ ಅವರು 2 ತಿಂಗಳ ವಿಶೇಷ ಪ್ರತಿಭೆ ಮತ್ತು ಅತ್ಯಂತ ಚುರುಕಿನ ಮನೋಭಾವದ ನಾಯಿ ಮರಿಯನ್ನು ಮೈಸೂರು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರಿಗೆ ಹಸ್ತಾಂತರಿಸಿದರು. ಮೈಸೂರಿನ…
ಲಸಿಕೆಗೆ ಮೈಸೂರಿನ ಪಿಂಕ್ ಬೂತ್ಗಳಲ್ಲಿ ಉತ್ತಮ ಪ್ರತಿಕ್ರಿಯೆ
March 9, 2021ಮೈಸೂರು, ಮಾ. 8(ಆರ್ಕೆ)- ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮೈಸೂರಿನ ಎರಡು ಆಸ್ಪತ್ರೆಗಳಲ್ಲಿ ಮಹಿಳೆಯರಿಗಾಗಿ ಆಯೋಜಿಸಿದ್ದ ಪಿಂಕ್ ಬೂತ್ಗಳಲ್ಲಿ ಕೊರೊನಾ ಲಸಿಕೆಗೆ ಉತ್ತಮ ಸ್ಪಂದನೆ ದೊರೆಯಿತು. ಮೈಸೂರಿನ ಬನ್ನಿಮಂಟಪ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಕೆಆರ್ಎಸ್ ರಸ್ತೆಯ ಜಿಲ್ಲಾ ಆಸ್ಪತ್ರೆಗಳಲ್ಲಿ ಪಿಂಕ್ ಬೂತ್ಗಳನ್ನು ತೆರೆಯಲಾಗಿತ್ತು. ಕೇಂದ್ರಕ್ಕೆ ಪಿಂಕ್ ಬಲೂನುಗಳಿಂದ ಅಲಂಕರಿಸಿ, ಬ್ಯಾನರ್ಗಳನ್ನೂ ಅಳವಡಿಸಲಾಗಿತ್ತಲ್ಲದೆ ಲಸಿಕೆ ನೀಡುವ ಮಹಿಳಾ ಸಿಬ್ಬಂದಿ ಸಹ ಪಿಂಕ್ ಬಣ್ಣದ ಉಡುಪು ಧರಿಸಿದ್ದುದು ವಿಶೇಷವಾಗಿತ್ತು. ಅಲ್ಲಿ ಕೇವಲ ಮಹಿಳಾ ಫಲಾನುಭವಿಗಳಿಗೆ ಮಾತ್ರ ಲಸಿಕೆ ನೀಡಲಾಯಿತು….
ಮೈಸೂರು ಜಿಲ್ಲೆಯ 225 ಕೇಂದ್ರಗಳಲ್ಲಿ ಲಸಿಕೆ ಸೌಲಭ್ಯ
March 9, 2021ಮೈಸೂರು, ಮಾ.8(ಆರ್ಕೆ)- ಮೈಸೂ ರಿನ 23 ಖಾಸಗಿ ಆಸ್ಪತ್ರೆ ಸೇರಿದಂತೆ ಜಿಲ್ಲೆ ಯಾದ್ಯಂತ 225 ಆರೋಗ್ಯ ಕೇಂದ್ರಗಳಲ್ಲಿ ಇಂದಿನಿಂದ 3ನೇ ಹಂತದ ಕೋವಿಡ್-19 ಲಸಿಕೆ ನೀಡುವ ಸಾಮೂಹಿಕ ಅಭಿ ಯಾನ ಆರಂಭವಾಗಿದೆ. ಕೊರೊನಾ ಲಸಿಕೆ ಅಭಿಯಾನದ ವೇಗ ಹೆಚ್ಚಿಸಿ, ಹೆಚ್ಚಿನ ಸಂಖ್ಯೆಯ ಹಿರಿಯ ನಾಗರಿಕರಿಗೆ ಲಸಿಕೆ ನೀಡುವ ಉದ್ದೇಶ ದಿಂದ ಸರ್ಕಾರದ ನಿರ್ದೇಶನದಂತೆ ಮೈಸೂರಿನ 23 ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲು ಅವಕಾಶ ನೀಡಲಾಗಿದ್ದು, ಸೋಮವಾರ ಬೆಳಗ್ಗೆಯಿಂದ ಸಾಮೂ ಹಿಕವಾಗಿ ಈ ಪ್ರಕ್ರಿಯೆ ನಡೆಯುತ್ತಿದೆ ಎಂದು ಜಿಲ್ಲಾ…
ಮೈಸೂರು ಜನತೆಗೆ ಸಿಹಿ ಸುದ್ದಿ
March 9, 2021ಬೆಂಗಳೂರು, ಮೈಸೂರು, ಬಳ್ಳಾರಿ ಮತ್ತು ಹುಬ್ಬಳ್ಳಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಒಟ್ಟು 5 ಕೋಟಿ ರೂಪಾಯಿ ವೆಚ್ಚದಲ್ಲಿ ತುರ್ತು ಚಿಕಿತ್ಸಾ ವಿಭಾಗವನ್ನು ಪ್ರಾರಂಭಿಸಲಾಗುತ್ತಿದೆ. ಅಲ್ಲದೆ ಮೈಸೂರು ವಿಜ್ಞಾನ ಸಂಸ್ಥೆಯಲ್ಲಿ ಟ್ರಾಮಾ ಕೇರ್ ಕೇಂದ್ರ ಪ್ರಾರಂಭ ಮಾಡುತ್ತಿದೆ. ಶಿವಮೊಗ್ಗ ಹಾಗೂ ಮೈಸೂರಿನಲ್ಲಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಾದೇಶಿಕ ಚಿಕಿತ್ಸಾ ಕೇಂದ್ರ ಪ್ರಾರಂಭ ಮಾಡುವ ಘೋಷಣೆ ಮಾಡಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಮೈಸೂರು ಭಾಗದ ಬಹುವರ್ಷಗಳ ಬೇಡಿಕೆಯನ್ನು ಮುಖ್ಯಮಂತ್ರಿಗಳು ಈಡೇರಿಸಿರುವ ಮುಖ್ಯಮಂತ್ರಿ ಗಳನ್ನು ಮೈಸೂರು ಜನತೆಯ ಪರವಾಗಿ ಅಭಿನಂದಿಸುವುದಾಗಿ ಸಚಿವ…
ಜನಪರ, ರೈತಪರ ಬಜೆಟ್
March 9, 2021ಮೈಸೂರು, ಮಾ.8(ಆರ್ಕೆಬಿ)- ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸಿರುವ 8ನೇ ಬಜೆಟ್ ಜನಪರ ಹಾಗೂ ರೈತಪರವಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಬಣ್ಣಿಸಿದ್ದಾರೆ. ಮಾಧ್ಯಮಗಳಿಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ಕೊರೊನಾ ಸಂಕಷ್ಟ ಕಾಲದಲ್ಲೂ ಆರ್ಥಿಕವಾಗಿ ಚೇತರಿಕೆ ಸಿಗುವಂತಹ ಬಜೆಟ್ ಮಂಡಿಸುವ ಮೂಲಕ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದಾರೆ. ಸಹಕಾರಿ ವಲಯದ ಮೂಲಕವೂ ಅನೇಕ ಯೋಜನೆಗಳನ್ನು ಘೋಷಣೆ ಮಾಡಿದ್ದು, ರೈತರಿಗೆ ಹಾಗೂ ನಾಗರಿಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಿದ್ದಾರೆ. ಇದಕ್ಕಾಗಿ ರಾಜ್ಯದ ಜನತೆ ಪರವಾಗಿ ಹಾಗೂ ವೈಯಕ್ತಿಕವಾಗಿ ಮುಖ್ಯಮಂತ್ರಿಗಳಿಗೆ…










