ಮೈಸೂರು

ಮೈಸೂರು ಜಿಲ್ಲೆಯಲ್ಲಿ ಶೇ.81.17ರಷ್ಟು ಮತದಾನ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಶೇ.81.17ರಷ್ಟು ಮತದಾನ

December 28, 2020

ಮೈಸೂರು,ಡಿ.27(ಆರ್‍ಕೆಬಿ, ವೈಡಿಎಸ್) -ಮೈಸೂರು ಜಿಲ್ಲೆಯಲ್ಲಿ ಭಾನುವಾರ ನಡೆದ ಎರಡನೇ ಹಂತದ ಚುನಾವಣೆ ಯಾವುದೇ ಗಲಾಟೆ-ಘರ್ಷಣೆಗಳಿಲ್ಲದೆ ಶಾಂತಿಯುತವಾಗಿ ನಡೆದಿದ್ದು, ಜಿಲ್ಲೆಯಲ್ಲಿ ಶೇ.81.17ರಷ್ಟು ಮತದಾನವಾಗಿದೆ. ಜಿಲ್ಲೆಯ ಮೂರು ತಾಲೂಕುಗಳಲ್ಲಿ ಭಾನು ವಾರ ಎರಡನೇ ಹಂತದ ಚುನಾವಣೆ ನಡೆ ದಿದ್ದು, ಮೈಸೂರು ತಾಲೂಕಿನ 23 ಗ್ರಾಮ ಪಂಚಾಯಿತಿಗಳ 475 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 1,299 ಮಂದಿ ಕಣದಲ್ಲಿ ದ್ದರು. ನಂಜನಗೂಡು ತಾಲೂಕಿನ 43 ಗ್ರಾಮ ಪಂಚಾಯಿತಿಗಳ 781 ಸ್ಥಾನಗಳಿಗೆ 2,204 ಮಂದಿ, ತಿ.ನರಸೀಪುರ ತಾಲೂ ಕಿನ 36 ಗ್ರಾಮ ಪಂಚಾಯಿತಿಗಳ 577…

ರಾಜ್ಯದಲ್ಲಿ ಶೇ.80.71ರಷ್ಟು ಶಾಂತಿಯುತ ಮತದಾನ
ಮೈಸೂರು

ರಾಜ್ಯದಲ್ಲಿ ಶೇ.80.71ರಷ್ಟು ಶಾಂತಿಯುತ ಮತದಾನ

December 28, 2020

ಬೆಂಗಳೂರು: ಗ್ರಾಮ ಪಂಚಾಯತಿ ಚುನಾವಣೆಯ 2ನೇ ಹಂತದ ಮತದಾನ ಭಾನು ವಾರ ಬಹುತೇಕ ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ರಾಜ್ಯಾದ್ಯಂತ ಶೇ.80.71 ಮತದಾರರು ಹಕ್ಕು ಚಲಾ ಯಿಸಿದ್ದಾರೆ. ಡಿ.22ರಂದು ಮೊದಲ ಹಂತದಲ್ಲಿ ಶೇ.82.13 ಮತದಾನ ಆಗಿತ್ತು. ಎರಡೂ ಹಂತದ ಮತದಾನ ಮುಗಿದಿದ್ದು, ಇದೀಗ ಎಲ್ಲರ ದೃಷ್ಟಿ ಡಿ.30ರಂದು ನಡೆಯುವ ಫಲಿತಾಂಶದ ಮೇಲೆ ನೆಟ್ಟಿದೆ. ಬೆಳಗಾವಿಯ ಒಂದು ಮತಗಟ್ಟೆಯಲ್ಲಿ ಮತ ಪತ್ರ ಬದಲಾಗಿದ್ದರಿಂದ ಮತದಾನವನ್ನು ಡಿ.29ಕ್ಕೆ ಮುಂದೂಡಲಾಗಿದೆ. ರಾಯಚೂರಿನ ಬನ್ನಿಗನೂರು ಮತಗಟ್ಟೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರ ಲಾಗುತ್ತಿದೆ ಎಂಬ ಬಗ್ಗೆ…

ಮನ್ ಕಿ ಬಾತ್‍ನಲ್ಲಿ ಯುವ ಬ್ರಿಗೇಡ್ ಪ್ರಶಂಸಿಸಿದ ಮೋದಿ
ಮೈಸೂರು

ಮನ್ ಕಿ ಬಾತ್‍ನಲ್ಲಿ ಯುವ ಬ್ರಿಗೇಡ್ ಪ್ರಶಂಸಿಸಿದ ಮೋದಿ

December 28, 2020

ನವದೆಹಲಿ,ಡಿ.27-ಪ್ರಧಾನಿ ನರೇಂದ್ರ ಮೋದಿ ಭಾನು ವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿರುವ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕರ್ನಾಟಕದ ಯುವ ಬ್ರಿಗೇಡ್ ಬಗ್ಗೆಯೂ ಮಾತ ನಾಡಿದ್ದಾರೆ. ಇತ್ತೀಚೆಗಷ್ಟೇ ಶ್ರೀರಂಗಪಟ್ಟಣದಲ್ಲಿ ಚಕ್ರ ವರ್ತಿ ಸೂಲಿಬೆಲೆ ನೇತೃತ್ವದ ಯುವ ಬ್ರಿಗೇಡ್ ತಂಡ ಶಿಥಿಲ ಗೊಂಡಿದ್ದ, ಅವ್ಯವಸ್ಥೆಗೀಡಾಗಿದ್ದ ವೀರಭದ್ರಸ್ವಾಮಿ ದೇವಾ ಲಯದ ಜೀರ್ಣೋದ್ಧಾರ ಮಾಡಿತ್ತು. ಈ ಜೀರ್ಣೋದ್ಧಾರ ಕಾಮಗಾರಿಯ ಫೆÇೀಟೋಗಳು ಸಹ ವೈರಲ್ ಆಗಿತ್ತು. ಅದೇ ಫೆÇೀಟೋಗಳ ಬಗ್ಗೆ ಪ್ರಧಾನಿ ಮನ್ ಕಿ ಬಾತ್ ಕಾರ್ಯ ಕ್ರಮದಲ್ಲಿ ಮುಕ್ತ ಕಂಠದಿಂದ ಶ್ಲಾಘಿಸಿದ್ದು, ಇಚ್ಛಾಶಕ್ತಿ, ಬದ್ಧತೆ…

ದೇಶದ ಮೊಟ್ಟ ಮೊದಲ ಚಾಲಕ ರಹಿತ ಮೆಟ್ರೋ ಸೇವೆಗೆ ಇಂದು ಮೋದಿ ಚಾಲನೆ
ಮೈಸೂರು

ದೇಶದ ಮೊಟ್ಟ ಮೊದಲ ಚಾಲಕ ರಹಿತ ಮೆಟ್ರೋ ಸೇವೆಗೆ ಇಂದು ಮೋದಿ ಚಾಲನೆ

December 28, 2020

ನವದೆಹಲಿ,ಡಿ.27-ದೇಶದ ಮೊದಲ ಚಾಲಕ ರಹಿತ ಮೆಟ್ರೋ ರೈಲು ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ (ನಾಳೆ) ಸೋಮವಾರ ಲೋಕಾರ್ಪಣೆ ಮಾಡಲಿದ್ದಾರೆ. ದೆಹಲಿ ಮೆಟ್ರೋದ 37 ಕಿ.ಮೀ ಉದ್ದದ ಮೆಜೆಂಟಾ ಲೈನ್ (ಜನಕಪುರಿ ವೆಸ್ಟ್‍ನಿಂದ ಬೊಟಾನಿ ಕಲ್ ಗಾರ್ಡನ್) ದೇಶದ ಮೊದಲ ಸಂಪೂರ್ಣ ಸ್ವಯಂಚಾಲಿತ ಚಾಲಕ ರಹಿತ ರೈಲು ಸೇವೆಗೆ ಅವರು ಚಾಲನೆ ನೀಡಲಿದ್ದಾರೆ. ಇದರ ಜೊತೆಗೆ, ಮೋದಿ ಅವರು ಏರ್‍ಪೆÇೀರ್ಟ್ ಎಕ್ಸ್‍ಪ್ರೆಸ್ ಲೈನ್‍ನಲ್ಲಿ ಪ್ರಯಾಣಿಸಲು ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಸಾಮಾನ್ಯ ಮೊಬಿ ಲಿಟಿ ಕಾರ್ಡ್‍ಅನ್ನು ಕೂಡ ಅದೇ ದಿನ…

ಸರ್ಕಾರಿ ಶಾಲಾ ಮಕ್ಕಳಿಗೆ ಸ್ಮಾರ್ಟ್ ತರಗತಿ ಆರಂಭಿಸಲು ಚಿಂತನೆ
ಮೈಸೂರು

ಸರ್ಕಾರಿ ಶಾಲಾ ಮಕ್ಕಳಿಗೆ ಸ್ಮಾರ್ಟ್ ತರಗತಿ ಆರಂಭಿಸಲು ಚಿಂತನೆ

December 28, 2020

ಶಿವಮೊಗ್ಗ, ಡಿ. 27- ಕೊರೊನಾ ಆತಂಕದ ನಡುವೆ ಶಾಲೆಗಳು ಇನ್ನೂ ಮಕ್ಕಳಿಗೆ ಆರಂಭ ವಾಗದಿರುವ ಸಂದರ್ಭ ದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ರಾಜ್ಯದ ಎಲ್ಲಾ ಸರ್ಕಾರಿ ಶಾಲೆ ಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿದ ಸ್ಮಾರ್ಟ್ ಕ್ಲಾಸ್‍ಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ಶಿವಮೊಗ್ಗ ನಗರದ ಪಾರ್ಕ್ ಬಡಾ ವಣೆಯ ಸರ್ಕಾರಿ ಆಂಗ್ಲ ಮತ್ತು ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಸ್ಮಾರ್ಟ್ ತರಗತಿಗಳನ್ನು…

ಇಂದಿನಿಂದ ಮೈಸೂರು-ಹೈದರಾಬಾದ್ ಮತ್ತೊಂದು ವಿಮಾನ ಹಾರಾಟ
ಮೈಸೂರು

ಇಂದಿನಿಂದ ಮೈಸೂರು-ಹೈದರಾಬಾದ್ ಮತ್ತೊಂದು ವಿಮಾನ ಹಾರಾಟ

December 28, 2020

ಮೈಸೂರು, ಡಿ.27- ಮೈಸೂರಿನಿಂದ ಹೈದರಾಬಾದ್‍ಗೆ ವಾಯುಮಾರ್ಗದಲ್ಲಿ ಸಂಚರಿಸುವವರಿಗೆ ಸಿಹಿ ಸುದ್ದಿ. ಎರಡೂ ಮಹಾನಗರಗಳ ನಡುವೆ ನಿತ್ಯ ಸಂಚರಿಸಲು ಪ್ರಯಾಣಿಕರಿಗೆ ಮತ್ತೊಂದು ವಿಮಾನ ದೊರೆಯುತ್ತಿದೆ. ಪ್ರಸ್ತುತ ಏರ್ ಇಂಡಿಯಾದ ಅಂಗಸಂಸ್ಥೆ ಅಲಯನ್ಸ್ ಏರ್‍ನ 1 ವಿಮಾನ ಈ ಮಾರ್ಗದಲ್ಲಿ ನಿತ್ಯವೂ ಹಾರಾಟ ನಡೆಸುತ್ತಿದೆ. ಇಂಡಿಗೊ ಏರ್‍ಲೈನ್ಸ್ ವಿಮಾನ ಮೈಸೂರಿನಿಂದ ನಿತ್ಯ ಬೆಳಗ್ಗೆ 10.50ಕ್ಕೆ (ವಿಮಾನ ಸಂಖ್ಯೆ 6ಇ7956) ಹಾರಾಟ ಆರಂಭಿಸಿ, ಹೈದರಾಬಾದ್ ನಗರವನ್ನು ಮಧ್ಯಾಹ್ನ 12.50ಕ್ಕೆ (2 ಗಂಟೆ ಪ್ರಯಾಣ) ಮುಟ್ಟಲಿದೆ. ಹೈದರಾಬಾದ್‍ನಿಂದ ಬೆಳಗ್ಗೆ 8.35ಕ್ಕೆ ಹೊರಡುವ (6ಇ7955)…

ರಸ್ತೆ ನಿಯಮ ಉಲ್ಲಂಘಿಸಿದ ವಾಹನಗಳಿಗೆ ಲಾಕ್
ಮೈಸೂರು

ರಸ್ತೆ ನಿಯಮ ಉಲ್ಲಂಘಿಸಿದ ವಾಹನಗಳಿಗೆ ಲಾಕ್

December 28, 2020

ಮೈಸೂರು,ಡಿ.27(ಎಂಟಿವೈ)- ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ ಓಡಾಡುತ್ತಿದ್ದ ವಾಹನ ಸವಾರರಿಗೆ ಇನ್ನು ಮುಂದೆ ಸಂಕಷ್ಟದ ಸ್ಥಿತಿ ಎದುರಾಗಲಿದ್ದು, ನಿಯಮ ಉಲ್ಲಂಘಿಸಿ ದಂಡ ಪಾವತಿಸದ ವಾಹನಗಳು ನಿಂತರೂ, ಚಲಿಸುತ್ತಿದ್ದರೂ ಸಂಚಾರಿ ಪೊಲೀಸರು ಬೆನ್ನತ್ತಲಿದ್ದಾರೆ. ನಿಯಮ ಉಲ್ಲಂಘಿಸುವುದನ್ನೇ ಪರಿಪಾಠ ವಾಗಿಸಿಕೊಂಡಿರುವ ವಾಹನ ಸವಾರರಿಗೆ ಬಿಸಿಮುಟ್ಟಿಸಲು ಸಂಚಾರ ಪೊಲೀಸರು ಹೊಸ ಹೊಸ ಮಾರ್ಗ ಹುಡುಕುತ್ತಿದ್ದು, ಇದೀಗ ಪಾರ್ಕಿಂಗ್ ಸ್ಥಳದಲ್ಲಿ ನಿಂತಿರುವ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಒಂದೆಡೆ ವಿವಿಧೆಡೆ ನಾಕಾಬಂಧಿ ಹಾಕಿ ವಾಹನ ತಪಾಸಣೆಯಲ್ಲಿ ತೊಡಗಿದ್ದರೆ, ಮತ್ತೊಂದೆಡೆ ರಸ್ತೆ ಬದಿ ಪಾರ್ಕಿಂಗ್…

ಆರ್‍ಎಸ್‍ಎಸ್ ಅಂದರೆ ಮೈಲಿಗೆ ಏಕೆ?; ಎಂಎಲ್‍ಸಿ ವಿಶ್ವನಾಥ್
ಮೈಸೂರು

ಆರ್‍ಎಸ್‍ಎಸ್ ಅಂದರೆ ಮೈಲಿಗೆ ಏಕೆ?; ಎಂಎಲ್‍ಸಿ ವಿಶ್ವನಾಥ್

December 28, 2020

ಮೈಸೂರು, ಡಿ.27(ಪಿಎಂ)- ಪರಿಶಿಷ್ಟ ಪಂಗಡಕ್ಕೆ (ಎಸ್‍ಟಿ) ಕುರುಬ ಸಮುದಾಯ ಸೇರ್ಪಡೆ ಮಾಡಬೇಕೆಂಬ ಹೋರಾಟಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ವಿರೋಧ ವಿಲ್ಲ ಎಂದು ತಿಳಿಸಿದ ವಿಧಾನ ಪರಿಷತ್ ಸದಸ್ಯರೂ ಆದ ಸಮುದಾಯದ ಮುಖಂಡ ಎ.ಹೆಚ್.ವಿಶ್ವನಾಥ್, ನಮ್ಮ ಈ ಹೋರಾಟಕ್ಕೆ ಎಲ್ಲಾ ಸಮುದಾಯ, ಸಂಘಟನೆ ಹಾಗೂ ಪಕ್ಷಗಳ ಬೆಂಬಲವೂ ಬೇಕು. ಹೀಗಾಗಿ ಆರ್‍ಎಸ್‍ಎಸ್ ಅಂದರೆ ಮೈಲಿಗೆ ಏಕೆ? ಎಂದು ಪ್ರಶ್ನಿಸಿದರು. ಮೈಸೂರಿನ ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಭಾನುವಾರ ಕುರುಬ ಎಸ್‍ಟಿ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯಲ್ಲಿ…

ಎಸ್‍ಟಿಗೆ ಕುರುಬ ಸಮುದಾಯ ಸೇರ್ಪಡೆ ವಿಚಾರ ಹೋರಾಟಕ್ಕೆ ಬದಲು ಕುಲಶಾಸ್ತ್ರೀಯ ಅಧ್ಯಯನ ವರದಿ ಪಡೆದು ಕೇಂದ್ರಕ್ಕೆ ಶಿಫಾರಸ್ಸು ಮಾಡಲಿ
ಮೈಸೂರು

ಎಸ್‍ಟಿಗೆ ಕುರುಬ ಸಮುದಾಯ ಸೇರ್ಪಡೆ ವಿಚಾರ ಹೋರಾಟಕ್ಕೆ ಬದಲು ಕುಲಶಾಸ್ತ್ರೀಯ ಅಧ್ಯಯನ ವರದಿ ಪಡೆದು ಕೇಂದ್ರಕ್ಕೆ ಶಿಫಾರಸ್ಸು ಮಾಡಲಿ

December 28, 2020

ಮೈಸೂರು, ಡಿ.27(ಪಿಎಂ)- ಪರಿಶಿಷ್ಟ ಪಂಗಡಕ್ಕೆ (ಎಸ್‍ಟಿ) ಕುರುಬ ಸಮುದಾಯ ಸೇರ್ಪಡೆಗೊಳಿಸುವ ಕುಲಶಾಸ್ತ್ರೀಯ ಅಧ್ಯಯನದ ವರದಿ ಪಡೆದು ಸಚಿವ ಸಂಪುಟದ ಮೂಲಕ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಅವಕಾಶವಿದೆ. ಆದರೂ ಬಿಜೆಪಿಯಲ್ಲಿರುವ ಸಮುದಾಯದ ನಾಯಕರು ಬೀದಿಗಿಳಿದು ಹೋರಾಟ ನಡೆಸುತ್ತಿರುವುದು ಏಕೆ? ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಪ್ರಶ್ನಿಸಿದರು. Éುೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಪಂಗಡಕ್ಕೆ (ಎಸ್‍ಟಿ) ಕುರುಬ ಸಮುದಾಯ ಸೇರ್ಪಡೆ ಗೊಳಿಸುವ ಸಂಬಂಧ ಈಗಾಗಲೇ ಕುಲ ಶಾಸ್ತ್ರೀಯ ಅಧ್ಯಯನ ನಡೆಯುತ್ತಿದೆ. ಜೊತೆಗೆ ಇದು…

ಗೆಳೆಯನ ಮನೆಯಲ್ಲಿ ಬಾಡೂಟ, ಹಾಸ್ಯ ಚಟಾಕಿ ಹನುಮ ಜಯಂತಿ ದಿನಾಂಕ ಗೊತ್ತಾ… ಗೊತ್ತಿಲ್ಲದಿದ್ದರೆ ಸುಮ್ಮನೆ ತಿನ್ನು…
ಮೈಸೂರು

ಗೆಳೆಯನ ಮನೆಯಲ್ಲಿ ಬಾಡೂಟ, ಹಾಸ್ಯ ಚಟಾಕಿ ಹನುಮ ಜಯಂತಿ ದಿನಾಂಕ ಗೊತ್ತಾ… ಗೊತ್ತಿಲ್ಲದಿದ್ದರೆ ಸುಮ್ಮನೆ ತಿನ್ನು…

December 28, 2020

ಮೈಸೂರು, ಡಿ.27(ಆರ್‍ಕೆಬಿ)- ಮಾಜಿ ಮುಖ್ಯಮಂತ್ರಿಯೂ ಆಗಿರುವ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಸ್ವಗ್ರಾಮ ಸಿದ್ದರಾಮನಹುಂಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು. ಸಿದ್ದರಾಮಯ್ಯನವರು ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಅವರನ್ನು ಕಾಣಲು ಗ್ರಾಮಸ್ಥರು ಮುಗಿ ಬಿದ್ದರು. ಅವರು ಮತದಾನ ಮಾಡಿ ಬರುವವರೆಗೆ ಮತಗಟ್ಟೆಯ ಹೊರಗೆ ಕಾದಿದ್ದ ಜನರು, ಅವರು ಮತ ಚಲಾಯಿಸಿ ಮತಗಟ್ಟೆ ಯಿಂದ ದೂರ ಬರುತ್ತಿದ್ದಂತೆ ಅವರನ್ನು ಕಂಡು ಪ್ರೀತಿಯಿಂದ ಮಾತನಾಡಿಸಲು ಮುಂದಾದರು, ಸಂಭ್ರಮಿಸಿದರು. ಮತದಾನದ ಬಳಿಕ ಸಿದ್ದರಾಮಯ್ಯ ರಾಜಕೀಯ ಬಿಟ್ಟು…

1 334 335 336 337 338 1,611
Translate »