ಮೈಸೂರು, ಡಿ.22- ವಿಶ್ವ ಉದಯವಾದಂದಿ ನಿಂದಲೂ ಅದರೊಟ್ಟಿಗೆ ಗಣಿತವೂ ಸಾಗಿ ಬಂದಿದೆ. ಪ್ರತಿಯೊಂದಕ್ಕೂ ಗಣಿತದ ಲೆಕ್ಕಾಚಾರ ಬೇಕೇ ಬೇಕು. ಆದ್ದರಿಂದ ವಿದ್ಯಾರ್ಥಿಗಳು ಗಣಿತದ ಬಗ್ಗೆ ಹೆಚ್ಚು ಒಲ ವಿಟ್ಟುಕೊಂಡು ಕಲಿತು ಅದರ ಒಡನಾಟವಿಟ್ಟುಕೊಳ್ಳ ಬೇಕೆಂದು ಸಾಹಿತಿ ಬನ್ನೂರು ಕೆ ರಾಜು ತಿಳಿಸಿದರು. ನಗರದ ಒಂಟಿಕೊಪ್ಪಲಿನ (ಯಾದವಗಿರಿ) ಸರ್ಕಾರಿ ಪ್ರೌಢಶಾಲೆ ಮತ್ತು ಹಿರಣ್ಮಯಿ ಪ್ರತಿಷ್ಠಾನ ಹಾಗೂ ಕಾವೇರಿ ಬಳಗದ ಸಂಯುಕ್ತ ಆಶ್ರಯದಲ್ಲಿ ಶಾಲಾ ಆವರಣದಲ್ಲಿ ಜಗದ್ವಿಖ್ಯಾತ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಜಯಂತಿ ಅಂಗವಾಗಿ ಆಯೋಜಿ ಸಿದ್ದ ರಾಷ್ಟ್ರೀಯ ಗಣಿತ…
ಮಾನವ ಕಳ್ಳ ಸಾಗಾಣಿಕೆ ತಡೆ ಸಂಬಂಧ ತರಬೇತಿ ಕಾರ್ಯಾಗಾರ
December 23, 2020ಮೈಸೂರು,ಡಿ.22(ಎಸ್ಬಿಡಿ)-ಮೈಸೂರು ನಗರ ಪೊಲೀಸ್ ದೇವರಾಜ ವಿಭಾಗದ ವತಿಯಿಂದ `ಅಪರಾಧ ತಡೆ ಮಾಸಾ ಚರಣೆ’ ಅಂಗವಾಗಿ ಮಾನವ ಕಳ್ಳ ಸಾಗಾಣಿಕೆ ತಡೆ ಕುರಿತ ತರಬೇತಿ ಕಾರ್ಯಾಗಾರವನ್ನು ಮಂಗಳವಾರ ಏರ್ಪಡಿಸಲಾಗಿತ್ತು. ನಗರದ ಜೆ.ಕೆ.ಮೈದಾನದಲ್ಲಿರುವ ವೈದ್ಯಕೀಯ ಕಾಲೇಜಿನ ಅಮೃತೋತ್ಸವ ಭವನದಲ್ಲಿ ಆಯೋಜಿಸಿದ್ದ ಕಾರ್ಯಾಗಾರವನ್ನು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಉದ್ಘಾಟಿಸಿ, ಮಾನವ ಕಳ್ಳ ಸಾಗಾಣಿಕೆಯನ್ನು ತಡೆಗಟ್ಟುವಿಕೆ, ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವುದು, ಅವರ ಸಬಲೀಕರಣ ಹಾಗೂ ಸಂಬಂಧಿತ ಕಾಯ್ದೆ, ಕಾನೂನುಗಳ ಬಗ್ಗೆ ತಿಳಿಸಿಕೊಟ್ಟರು. ನಂತರ ಜೆಎಸ್ಎಸ್ ಕಾನೂನು ಕಾಲೇಜಿನ ಪ್ರೊಫೆಸರ್ ಸಾವಂತ್ ಅವರು,…
ನೈರುತ್ಯ ರೈಲ್ವೆಯಿಂದ ‘ರಾಷ್ಟ್ರೀಯ ಇಂಧನ ಸಂರಕ್ಷಣಾ ಸಪ್ತಾಹ’ ಆಚರಣೆ
December 23, 2020ಮೈಸೂರು, ಡಿ.22(ಎಂಕೆ)- ನೈಋತ್ಯ ರೈಲ್ವೆ ಮೈಸೂರಿಂದ ಇಂಧನ ದಕ್ಷತೆ ಮತ್ತು ಸಂರಕ್ಷಣೆಯ ಮಹತ್ವ, ಜಾಗತಿಕ ತಾಪ ಮಾನ ಏರಿಕೆ ತಡೆಯುವ ರಾಷ್ಟ್ರದ ಪ್ರಯತ್ನಗಳ ಕುರಿತು ಮಾಹಿತಿ ನೀಡುವ ಸಲುವಾಗಿ ‘ರಾಷ್ಟ್ರೀಯ ಇಂಧನ ಸಂರಕ್ಷಣಾ ಸಪ್ತಾಹ’ ಆಚರಿಸಲಾಯಿತು. ಡಿ.14-21ರವರೆಗೆ ನಡೆದ ಕಾರ್ಯ ಕ್ರಮದಲ್ಲಿ ಇಂಧನ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬ್ಯಾನರ್ ಪ್ರದ ರ್ಶನ, ಕರಪತ್ರಗಳ ವಿತರಣೆ, ಸೆಮಿನಾರ್, ಬೈಸಿಕಲ್ ರ್ಯಾಲಿ ಮತ್ತು ಸಿಬ್ಬಂದಿಗೆ ಚಿತ್ರಕಲೆ ಸ್ಪರ್ಧೆ ನಡೆಸಲಾಯಿತು. ಕಡೆದಿನವಾದ ಇಂದು ಇಂಧನ ಸಂರ ಕ್ಷಣೆ ಕುರಿತು…
ಸರ್ಕಾರಿ ವೈದ್ಯರ ವೇತನದಲ್ಲಿ ಭಾರೀ ಹೆಚ್ಚಳ
December 23, 2020ಬೆಂಗಳೂರು,ಡಿ.22(ಕೆಎಂಶಿ)-ಸರ್ಕಾರಿ ವೈದ್ಯರಿಗೆ ಬಂಪರ್ ಕೊಡುಗೆ ನೀಡಿರುವ ರಾಜ್ಯ ಸರ್ಕಾರ, ಅವರ ವೇತನವನ್ನು ಮಾಸಿಕ 9,500 ರೂ.ಗಳಿಂದ ಗರಿಷ್ಠ 55,100 ರೂ. ವರೆಗೆ ಹೆಚ್ಚಳ ಮಾಡಿದೆ. ವೈದ್ಯರ ಸೇವೆ ಮತ್ತು ವಿದ್ಯಾರ್ಹತೆಯನ್ನು ಪರಿಗಣಿಸಿ ವಿವಿಧ ಹಂತಗಳಲ್ಲಿ ವೇತನ ಹೆಚ್ಚಿಸಿರುವುದಲ್ಲದೆ, ಸೆಪ್ಟೆಂಬರ್ 1ರಿಂದಲೇ ಪೂರ್ವಾನ್ವಯ ವಾಗಿ ಹೊಸ ವೇತನ ಜಾರಿಗೆ ಬರಲಿದೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಕೋವಿಡ್ ಸಂದರ್ಭದಲ್ಲಿ ವೈದ್ಯರ ಸೇವೆ ಪರಿಗಣಿಸು ವುದರೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಯುವ ವೈದ್ಯರ ಸೇವೆ ಪ್ರೋತ್ಸಾಹಿಸಲು ಈ ನಿರ್ಧಾರ…
ಕುರಿಮಂಡಿ ವ್ಯಕ್ತಿ ಕೊಲೆ ಪ್ರಕರಣ; ಆರೋಪಿಗಳಿಬ್ಬರ ಸೆರೆ
December 23, 2020ಎನ್ಆರ್ ಠಾಣೆ ಪೊಲೀಸರ ಕಾರ್ಯಾಚರಣೆ ಮುಖ್ಯ ಆರೋಪಿಗಾಗಿ ಮುಂದುವರಿದ ಶೋಧ ಮೈಸೂರು,ಡಿ.22(ಎಸ್ಪಿಎನ್)-ಹಣಕಾಸಿನ ವಿಚಾರವಾಗಿ ಸ್ನೇಹಿತನನ್ನೇ ಕೊಲೆ ಮಾಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಎನ್.ಆರ್.ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಮೈಸೂರಿನ ಕೆಸರೆ `ಎ’ ಬ್ಲಾಕ್ನ ಕುರಿಮಂಡಿ ನಿವಾಸಿ ನಿಖಿಲ್ ಅಲಿಯಾಸ್ ಮಾದ(20), ಎಂ.ಅಪ್ಪು(18) ಬಂಧಿತರು. ಡಿ.14ರ ರಾತ್ರಿ ಕುರಿಮಂಡಿಯಲ್ಲಿರುವ ನರ್ಮ್ ಯೋಜನೆಯ ವಸತಿ ಸಂಕೀರ್ಣ ಕಟ್ಟಡದ ಮೊದಲ ಮಹಡಿಯಲ್ಲಿ ರವಿ ಅಲಿಯಾಸ್ ಬಚ್ಚ(27) ಎಂಬಾತನ ಕೊಲೆಯಾಗಿತ್ತು. ನರಸಿಂಹರಾಜ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸಿ ಆರೋಪಿ…
ಲಕ್ಷ್ಮೀಪುರಂ ಪೊಲೀಸ್ರಿಂದ ಅಪರಾಧ ತಡೆ ಮಾಸ ಆಚರಣೆ
December 23, 2020ಮೈಸೂರು, ಡಿ.22(ಎಂಕೆ)- ಮೈಸೂರಿನ ಕೃಷ್ಣ ಮೂರ್ತಿಪುರಂನಲ್ಲಿರುವ ಶ್ರೀ ರಾಮ ಮಂದಿರ ದಲ್ಲಿ ಮೈಸೂರು ನಗರ ಪೊಲೀಸ್ ಮತ್ತು ಲಕ್ಷ್ಮೀ ಪುರಂ ಪೊಲೀಸ್ ಠಾಣೆಯಿಂದ `ಅಪರಾಧ ತಡೆ ಮಾಸ’ ಆಚರಣೆ ಅಂಗವಾಗಿ ಠಾಣೆ ವ್ಯಾಪ್ತಿಯ ಸಾರ್ವಜನಿಕರೊಂದಿಗೆ ಸಭೆ ನಡೆಸಿ ಅಪರಾಧ ಪ್ರಕರಣಗಳು ನಡೆಯದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಜಾಗೃತಿ ಮೂಡಿ ಸಲಾಯಿತು. ಎಸಿಪಿ ಪೂರ್ಣಚಂದ್ರ ತೇಜಸ್ವಿ ಮಾತನಾಡಿ, ಸಾರ್ವಜನಿಕರು ಸರಗಳವು ನಡೆಯ ದಂತೆ ಎಚ್ಚರ ವಹಿಸುವುದು ಅಗತ್ಯ. ಸರಗಳವು ನಡೆದಾಗ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬ ಬಗೆಗೂ…
ಜ.9ರಂದು ರಾಜ್ಯದಲ್ಲಿ ರೈಲು ತಡೆ, ಜೈಲ್ ಭರೋ ಚಳವಳಿ
December 23, 2020ಮೈಸೂರು, ಡಿ.22(ಪಿಎಂ)- ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ನಿಗಮದ ಆದೇಶ ಹಿಂಪಡೆಯ ಬೇಕೆಂದು ಆಗ್ರಹಿಸಿ ಜ.9ರಂದು ರಾಜ್ಯಾದ್ಯಂತ ರೈಲು ತಡೆ ಹಾಗೂ ಜೈಲ್ ಭರೋ ಚಳವಳಿ ನಡೆಸ ಲಾಗುವುದು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದರು. ಸಿದ್ಧಗಂಗಾ ಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ `ಭಾರತ ರತ್ನ’ ನೀಡಬೇ ಕೆಂದು ಹಾಗೂ ಮರಾಠ ಅಭಿವೃದ್ಧಿ ನಿಗಮದ ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿ ಮೈಸೂರು ರೈಲ್ವೆ ನಿಲ್ದಾಣದ ಎದುರು ಮಂಗಳವಾರ ಬೆಂಬಲಿ ಗರೊಂದಿಗೆ…
ಸಂವಿಧಾನದ ಆಶಯದಂತೆ ಸಮಾಜದಲ್ಲಿರುವ ಮೌಢ್ಯ ತೊಲಗಿಸಲು ಕಾರ್ಯಪ್ರವೃತ್ತರಾಗಬೇಕು
December 23, 2020ಮೈಸೂರು, ಡಿ.22(ಪಿಎಂ)- ಸಂವಿ ಧಾನದಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿ ಕೊಳ್ಳುವುದು ಪ್ರತಿ ಪ್ರಜೆಯ ಮೂಲಭೂತ ಕರ್ತವ್ಯಗಳಲ್ಲಿ ಪ್ರಮುಖವೆಂದು ಹೇಳ ಲಾಗಿದ್ದು, ಈ ಬಗ್ಗೆ ಪ್ರತಿಯೊಬ್ಬರು ವಿಚಾರ ಮಾಡಿ ಮೌಢ್ಯ ತೊಲಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ದೇವಮಾನೆ ಹೇಳಿದರು. ಮೈಸೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಆಯುರ್ವೇದ ವೈದ್ಯಕೀಯ ಕಾಲೇಜಿನ…
ತಿಮ್ಮಯ್ಯ ನಾಪಂಡ `ಅತ್ಯಂತ ಭರವಸೆಯ ಬಿಸಿನೆಸ್ ಲೀಡರ್’
December 23, 2020ಮೈಸೂರು, ಡಿ.22- ಇಕನಾಮಿಕ್ ಟೈಮ್ಸ್ನ ಎಡ್ಜ್ ವತಿಯಿಂದ ಕೊಡಮಾಡುವ `ಅತ್ಯಂತ ಭರವಸೆಯ ಬಿಸಿನೆಸ್ ಲೀಡರ್ 2020-21’ ಬಿರುದಿಗೆ ಮೆರಿಟರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮೆರಿಟರ್ ಇಂಕ್ನ ಇಂಡಿಯಾ ಮತ್ತು ಆಸ್ಟ್ರೇಲಿಯಾದ ಉಪಾಧ್ಯಕ್ಷ ತಿಮ್ಮಯ್ಯ ನಾಪಂಡ ಪಾತ್ರರಾಗಿ ದ್ದಾರೆ. ವಿಶೇಷವಾಗಿ ಉತ್ಪನ್ನ ವಲಯ ಹಾಗೂ ಕಾಪೆರ್Çರೇಟ್ ವಲಯಕ್ಕೆ ತಿಮ್ಮಯ್ಯ ನೀಡಿರುವ ಕೊಡುಗೆ ಹಾಗೂ ಸಾಧನೆ ಪರಿಗಣಿಸಿ ಅವರನ್ನು ಗೌರವಿಸಿದ್ದು, ಇತ್ತೀಚೆಗೆ ನಡೆದ ವರ್ಚು ವಲ್ ಕಾರ್ಯಕ್ರಮದಲ್ಲಿ ಘೋಷಿಸಲಾಗಿದೆ. ದೂರದೃಷ್ಟಿಯಿಂದ ವ್ಯವಹಾರ ವಿಸ್ತರಣೆಗೆ ಅವರು…
`ಮೈಸೂರು ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಲು ಹಲವು ಹಂತದ ಕಾಮಗಾರಿ’
December 23, 2020‘ಅಂತಾರಾಷ್ಟ್ರೀಯ ವಾಯುಯಾನ ತಾಣವಾಗಿ ಮೈಸೂರು-ಮಾರ್ಗಸೂಚಿ’ ಸಂವಾದದಲ್ಲಿ ಮಂಜುನಾಥ್ ಮೈಸೂರು, ಡಿ.22(ಎಂಕೆ)- ಮಂಡಕಳ್ಳಿ ಬಳಿ ಇರುವ ಮೈಸೂರು ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾಮಗಾರಿಗಳು ಹಂತ ಹಂತವಾಗಿ ನಡೆಯುತ್ತಿವೆ ಎಂದು ಮೈಸೂರು ವಿಮಾನ ನಿಲ್ದಾಣ ನಿರ್ದೇಶಕ ಆರ್.ಮಂಜುನಾಥ್ ಹೇಳಿದರು. ನಗರದ ಖಾಸಗಿ ಹೋಟೆಲ್ನಲ್ಲಿ ನ್ಯಾಷನಲ್ ರಿಯಲ್ ಎಸ್ಟೇಟ್ ಡೆವಲಪ್ಮೆಂಟ್ ಕೌನ್ಸಿಲ್(ನರೆಡ್ಕೊ)ದಿಂದ ನಡೆದ ‘ಅಂತಾರಾಷ್ಟ್ರೀಯ ವಾಯುಯಾನ ತಾಣವಾಗಿ ಮೈಸೂರು-ಮಾರ್ಗಸೂಚಿ’ ಸಂವಾದದಲ್ಲಿ ಭಾಗವಹಿಸಿದ್ದ ಅವರು, ವಿಮಾನ ನಿಲ್ದಾಣ ಅಭಿವೃದ್ಧಿ ನಿಟ್ಟಿನಲ್ಲಿ ಮುಂದಿನ 30 ವರ್ಷದ ಯೋಜನೆ ಸಿದ್ಧಪಡಿಸಲಾಗಿದೆ…










