ಮೈಸೂರು, ಡಿ.14(ಆರ್ಕೆ)-ಭೂಮಿ ಕಳೆದುಕೊಂಡ ಕುಟುಂ ಬದ 53 ಮಂದಿಗೆ ನಂಜನೂಡು ಬಳಿಯ ಏಷಿಯನ್ ಪೇಂಟ್ಸ್ ಮೂಲ ಸ್ಥಾವರದಲ್ಲೇ ಖಾಯಂ ಉದ್ಯೋಗ ನೀಡಬೇಕೆಂದು ಧರಣಿ ನಡೆಸುತ್ತಿರುವ ರೈತರು, ನಾಳೆ (ಡಿ.15) ಸಂಜೆವರೆಗೆ ಗಡುವು ನೀಡಿದ್ದಾರೆ. ಏಷಿಯನ್ ಪೇಂಟ್ಸ್ ಸ್ಥಾವರ ನಿರ್ಮಿಸಲು ಭೂಸ್ವಾಧೀನ ಮಾಡಿಕೊಳ್ಳುವಾಗ ಭೂಮಿ ನೀಡಿದ 53 ಕುಟುಂಬದ ತಲಾ ಒಬ್ಬೊಬ್ಬರಿಗೆ ಕೆಲಸ ಕೊಡುವುದಾಗಿ ಒಪ್ಪಂದವಾಗಿರುವಂತೆ ನಡೆದು ಕೊಳ್ಳಬೇಕು ಎಂದು ಆಗ್ರಹಿಸಿ ಕಳೆದ 15 ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಹೊಸಕೋಟೆ ಬಸವರಾಜು ನೇತೃತ್ವದ ರೈತ ಮುಖಂ ಡರು, ಇಂದು…
ಜನವರಿ ಬಳಿಕ ಮೈಸೂರಿನ ಅಭಿವೃದ್ಧಿ ಕಾರ್ಯಕ್ಕೆ ರಾಜ್ಯ ಸರ್ಕಾರದ ಅನುದಾನ
December 15, 2020ಮೈಸೂರು,ಡಿ.14(ಪಿಎಂ)- ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಭಿವೃದ್ಧಿ ಕಾರ್ಯಗಳು ಸೇರಿದಂತೆ ಮೈಸೂರಿನ ಅಭಿ ವೃದ್ಧಿ ಕಾರ್ಯಗಳಿಗೆ ಮುಂದಿನ ಜನವರಿ ಬಳಿಕ ರಾಜ್ಯ ಸರ್ಕಾರದಿಂದ ಅಗತ್ಯ ಅನು ದಾನ ಕಲ್ಪಿಸಿಕೊಡಲಾಗುವುದು ಎಂದು ಸಹ ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು. ಮೈಸೂರಿನ ವಿಜಯನಗರದ ಜಿಲ್ಲಾ ಸಾಹಿತ್ಯ ಭವನದ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ವತಿ ಯಿಂದ ಸೋಮವಾರ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರು ಹಾಗೂ ಜಿಲ್ಲಾ-ನಗರ ಕನ್ನಡ ಜಾಗೃತಿ ಸಮಿತಿ ಸದಸ್ಯರಿಗೆ…
ಅರ್ಹರಾದರೂ ದೇಜಗೌ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಲಿಲ್ಲ
December 15, 2020ಮೈಸೂರು,ಡಿ.14(ಪಿಎಂ)-ಮೇರು ಸಾಹಿತಿಯಾದ ದೇಜಗೌ ಅವರಿಗಿಂತ ಚಿಕ್ಕವರು, ಕಡಿಮೆ ಯೋಗ್ಯತೆವುಳ್ಳ ಎಷ್ಟೋ ಮಂದಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂತು. ಆದರೆ ದೇಜಗೌ ಅವರಿಗೇ ಈ ಪ್ರಶಸ್ತಿ ಲಭಿಸಲಿಲ್ಲ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ಬೇಸರ ವ್ಯಕ್ತಪಡಿಸಿದರು. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ಮಾತನಾಡಿದ ಅವರು, ಅರ್ಹರಿಗೆ ಪುರಸ್ಕಾರ ದೊರೆಯದೇ ಇರುವುದು ಶೋಚನೀಯ ಸಂಗತಿ. ಈ ಬಗ್ಗೆ ಚಿಂತಿಸುವ ಅಗತ್ಯವಿದೆ ಎಂದರು. ದೇಜಗೌ (ದೇ.ಜವರೇಗೌಡ) ಹೆಸರು ಯಾರೂ ತಾನೆ ಕೇಳಿಲ್ಲ. ಅವರೊಬ್ಬ ಮೇರು…
ರೈತರ ಹೋರಾಟಕ್ಕೆ ಪ್ರಜಾಪಾರ್ಟಿ ಬೆಂಬಲ
December 15, 2020ಬೆಂಗಳೂರು, ಡಿ.14- ಕರ್ನಾಟಕ ಪ್ರಜಾಪಾರ್ಟಿ(ರೈತಪರ್ವ) ವತಿಯಿಂದ ಬೆಂಗ ಳೂರಿನ ಫ್ರೀಡಂಪಾರ್ಕ್ನಲ್ಲಿ ಸೋಮವಾರ ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಲಾಯಿತು. ಪಾರ್ಟಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಬಿ.ಶಿವಣ್ಣ ಮಾತನಾಡಿ, ಕೃಷಿ ಕಾಯ್ದೆ (ತಿದ್ದುಪಡಿ)ಗಳನ್ನು ವಿರೋಧಿಸಿ ನವದೆಹಲಿಯಲ್ಲಿ ರೈತರು ಅನಿರ್ಧಾಷ್ಟಾವದಿ ಮುಷ್ಕರ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯುವ ಮೂಲಕ ರೈತಾಪಿ ವರ್ಗವನ್ನು ಗೌರವಿಸಬೇಕೆಂದು ಆಗ್ರಹಿಸಿದರು. ಪಾರ್ಟಿಯ ರಾಜ್ಯ ಮಾಧ್ಯಮ ವಕ್ತಾರ ಶ್ರೀನಿವಾಸಗೌಡ, ರಾಜ್ಯ ಜಂಟಿ ಕಾರ್ಯದರ್ಶಿ ಬಿ.ಆರ್.ಲೋಕೇಶ್, ಖಜಾಂಚಿ ಬಿ.ಆದರ್ಶ್…
ಮೈಸೂರಲ್ಲಿ ನಗರ ಪಾಲಿಕೆ ಒಳಚರಂಡಿ ಸಹಾಯಕರು, ಪೌರಕಾರ್ಮಿಕರ ಪ್ರತಿಭಟನೆ
December 15, 2020ಮೈಸೂರು,ಡಿ.14(ಆರ್ಕೆಬಿ)- ಮೈಸೂರು ಮಹಾನಗರಪಾಲಿಕೆಯಲ್ಲಿ ಕಾರ್ಯ ನಿರ್ವ ಹಿಸುತ್ತಿರುವ 231 ಮಂದಿ ಒಳಚರಂಡಿ ಕಾರ್ಮಿಕರನ್ನು (ಸಹಾಯಕ) ಖಾಯಂ ಮಾಡಬೇಕು. ಅವರಿಗೂ ಬೆಳಗಿನ ಉಪಾ ಹಾರ ಭತ್ಯೆ ನೀಡಬೇಕು ಎಂದು ಆಗ್ರಹಿಸಿ ಮೈಸೂರು ಮಹಾನಗರಪಾಲಿಕೆ ಒಳಚರಂಡಿ ಸಹಾಯಕರು ಹಾಗೂ ಪೌರ ಕಾರ್ಮಿಕರು ಸೋಮವಾರ ಮೈಸೂರು ಮಹಾನಗರಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಒಳ ಚರಂಡಿ ಕಾರ್ಮಿಕರಿಗೆ ಬೆಳಗಿನ ಉಪಾಹಾರ ಹಣ ಮಂಜೂರಾಗಿದ್ದರೂ, ಅದು ಬಿಡುಗಡೆ ಆಗಿಲ್ಲ. ಹಾಗಾಗಿ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು ಪತ್ರ ಬರೆದಿದ್ದಾರೆ. ಕೂಡಲೇ…
ಏಕಲವ್ಯನಗರದಲ್ಲಿ ಕುಂದು-ಕೊರತೆ ಆಲಿಸಿದ ಪೊಲೀಸರು
December 15, 2020ಮೈಸೂರು,ಡಿ.14(ಆರ್ಕೆ)-ಮೇಟಗಳ್ಳಿ ಠಾಣೆ ಪೊಲೀಸರು ಏಕಲವ್ಯನಗರದ ನರ್ಮ್ ಯೋಜನೆ ವಸತಿ ಸಮುಚ್ಛಯದಲ್ಲಿ ವಾಸಿಸುತ್ತಿರುವ ನಿವಾಸಿಗಳ ಕುಂದು-ಕೊರತೆ ವಿಚಾರಿಸಿದರು. ಕಸ ವಿಲೇವಾರಿ ಮಾಡದಿರುವುದರಿಂದ ಸಮುಚ್ಛಯದ ಸುತ್ತ ಕಸದ ರಾಶಿ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವು ತೊಂದರೆ ಅನುಭವಿಸುತ್ತಿದ್ದೇ ವಲ್ಲದೆ, ಅಂಗನವಾಡಿ ಕೇಂದ್ರ, ನ್ಯಾಯಬೆಲೆ ಅಂಗಡಿ, ದನಕರುಗಳಿಗೆ ನೀರಿನ ತೊಟ್ಟಿ ಅಗತ್ಯವಿದೆ. ತಾವು ವಾಸಿಸುತ್ತಿರುವ ಮನೆಗಳಿಗೆ ಹಕ್ಕು ಪತ್ರ ನೀಡಿಲ್ಲ ಎಂಬಿತ್ಯಾದಿ ದೂರುಗಳನ್ನು ನಿವಾಸಿಗಳು ಹೇಳಿದರು. ಕುಡಿತ, ಜೂಜು, ಗಾಂಜಾ, ಅಪೀಮಿನಂತಹ ದುಶ್ಚಟಗಳಿಗೆ ದಾಸರಾಗದೆ, ನಿಮ್ಮ ವೃತ್ತಿಗಳನ್ನು ಮಾಡಿಕೊಂಡು ಗೌರವಯುತವಾಗಿ…
ಮಹಿಳೆಯರು ಬಳಸುವ ಸ್ಯಾನಿಟರಿ ಪ್ಯಾಡ್ ವಿತರಣೆ ಸ್ಥಗಿತಗೊಳಿಸಿದ ಸರ್ಕಾರ ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ.ಪುಷ್ಪಾ ಅಮರ್ನಾಥ್ ಅಸಮಾಧಾನ
December 15, 2020ಮೈಸೂರು, ಡಿ.14(ಆರ್ಕೆಬಿ)- ಕೋವಿಡ್-19 ನೆಪ ಹೇಳಿ ಮಹಿಳೆಯರು ಬಳಸುವ ಸ್ಯಾನಿಟರಿ ಪ್ಯಾಡ್ ನೀಡುವುದನ್ನು ಸ್ಥಗಿತಗೊಳಿಸಿರುವ ರಾಜ್ಯ ಸರ್ಕಾರದ ವಿರುದ್ಧ ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಅಸಮಾಧಾನ ವ್ಯಕ್ತಪಡಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶುಚಿ ಯೋಜನೆಯಡಿ ಸರ್ಕಾರ ರಿಯಾಯಿತಿ ದರದಲ್ಲಿ ನೀಡುವ ಮಹಿಳೆಯರ ಸ್ಯಾನಿಟರ್ ಪ್ಯಾಡ್ ವಿಚಾರದಲ್ಲಿ ಸರ್ಕಾರದ ಧೋರಣೆ ಸರಿಯಲ್ಲ. ಕೋವಿಡ್ ಹಾವಳಿ ಇದೆ ಯೆಂದು ಋತುಸ್ರಾವ ನಿಲ್ಲುವುದಿಲ್ಲ. ಶೇ.12ರಷ್ಟಿರುವ ಉಳ್ಳವರಷ್ಟೇ ದುಬಾರಿ ಹಣ ನೀಡಿ ಖರೀದಿಸಬಹುದು. ಆದರೆ ಶೇ.82ರಷ್ಟಿರುವ…
ಸಾರಿಗೆ ನೌಕರರ ಮುಷ್ಕರ: ಬಹುತೇಕ ಬೇಡಿಕೆಗಳಿಗೆ ಸರ್ಕಾರ ಒಪ್ಪಿದರೂ ಸಂಧಾನ ವಿಫಲ
December 14, 2020ಬೆಂಗಳೂರು,ಡಿ.13-ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂಬ ಬೇಡಿಕೆ ಹೊರತು ಪಡಿಸಿ, ಉಳಿದೆಲ್ಲಾ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಆದರೆ ಪ್ರಮುಖ ಬೇಡಿಕೆ ಈಡೇರದ ಕಾರಣ ಸಂಧಾನ ವಿಫಲವಾಗಿದ್ದು, ಮುಷ್ಕರ ಮುಂದುವರೆಸು ವುದಾಗಿ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದ ಸಾರಿಗೆ ನೌಕರರ ಒಕ್ಕೂಟ ಘೋಷಿಸಿದೆ. ಸಾರಿಗೆ ಸಚಿವ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಕಂದಾಯ ಸಚಿವ ಆರ್.ಅಶೋಕ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಭಾನುವಾರ ಕೆಎಸ್ಆರ್ಟಿಸಿ ನೌಕರರ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್ ಮತ್ತಿತರರು ಸಂಧಾನದ ಮಾತುಕತೆ ನಡೆಸಿದರು. ಸಂಧಾನ ಸಭೆ…
ಮುಷ್ಕರ ಕೈಬಿಡಲು ಸಿಎಂ ಬಿಎಸ್ವೈ ಕರೆ
December 14, 2020ಬೆಂಗಳೂರು,ಡಿ.13-ಮುಷ್ಕರ ನಿರತ ರಾಜ್ಯ ಸಾರಿಗೆ ಸಂಸ್ಥೆ ನೌಕ ರರು ಮುಷ್ಕರವನ್ನು ಕೈ ಬಿಡಬೇಕೆಂದು ಮುಖ್ಯ ಮಂತ್ರಿ ಯಡಿಯೂರಪ್ಪ ಕರೆ ನೀಡಿದ್ದಾರೆ. ಸಾರಿಗೆ ಸಚಿವ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ನಡೆಸಿದ ಚರ್ಚೆ ಯಲ್ಲಿ ನೌಕರರ ಸಮಸ್ಯೆಗಳನ್ನು ಪರಿಹರಿ ಸಲು ಪ್ರಾಮಾಣಿಕ ಪ್ರಯತ್ನ ಮಾಡಲಾ ಯಿತು. ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕೆನ್ನುವ ಬೇಡಿಕೆ ಹೊರತುಪಡಿಸಿ ವೇತನ ತಾರತಮ್ಯ, ಕೋವಿಡ್-19ರಿಂದ ಮೃತರಾದ ನೌಕರರ ಕುಟುಂಬಗಳಿಗೆ 30 ಲಕ್ಷ ರೂ.ಗಳ ಪರಿಹಾರ, ಮೇಲಧಿಕಾರಿಗಳ ಕಿರುಕುಳ ತಪ್ಪಿಸಲು…
ಕೋಡಿಹಳ್ಳಿ ಚಂದ್ರಶೇಖರ್ರಿಂದ ಬ್ಲಾಕ್ಮೇಲ್ ತಂತ್ರ
December 14, 2020ಅವರ ಮಾತು ಕೇಳಿ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ `ಎಸ್ಮಾ’ ಜಾರಿ ಮಾಡಲು ಹಿಂಜರಿಯಲ್ಲ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಎಚ್ಚರಿಕೆ ಬೆಂಗಳೂರು,ಡಿ.13-ಸಾರಿಗೆ ನೌಕರರ ಮುಷ್ಕರದ ಮುಂದಾಳತ್ವ ವಹಿಸಿ ರುವ ಕೋಡಿಹಳ್ಳಿ ಚಂದ್ರಶೇಖರ್ ಬ್ಲಾಕ್ಮೇಲ್ ತಂತ್ರ ಅನುಸರಿಸುತ್ತಿದ್ದಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಆರೋಪಿಸಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ರಂತಹವರ ಮಾತು ಕೇಳಿ ಭವಿಷ್ಯ ಹಾಳು ಮಾಡಿಕೊಳ್ಳ ಬೇಡಿ ಎಂದು ನೌಕರರಿಗೆ ಕಿವಿಮಾತು ಹೇಳಿದ ಗೃಹ ಸಚಿ ವರು, ಮುಷ್ಕರ ಮುಂದುವರೆದರೆ ಎಸ್ಮಾ ಜಾರಿ ಮಾಡಲು ಹಿಂಜರಿಯುವುದಿಲ್ಲ ಎಂದು…









