ಮೈಸೂರು, ಜೂ.12(ಎಂಟಿವೈ)- ಕೇರಳದಲ್ಲಿ ಗರ್ಭಿಣಿ ಆನೆಗೆ ಸ್ಫೋಟಕವಿಟ್ಟ ಅನಾನಸ್ ನೀಡಿ ಹತ್ಯೆ ಮಾಡಿದ ಪ್ರಕರಣದ ನೆನಪಿನ್ನೂ ಮಾಸಿಲ್ಲ. ಅಷ್ಟರಲ್ಲಾಗಲೇ ಮೈಸೂರಲ್ಲಿ ದುರುಳರು ವಿಷವಿಕ್ಕಿ 5 ಬೀದಿನಾಯಿಗಳನ್ನು ಕೊಂದಿದ್ದಾರೆ. 10ಕ್ಕೂ ಹೆಚ್ಚು ಬೀದಿನಾಯಿಗಳ ಸಾವು ಬದುಕಿನ ನಡುವೆ ಹರಾಡುತ್ತಿವೆ. ಮೈಸೂರಿನ ಟಿ.ಕೆ.ಲೇಔಟ್ನ ಕವಿತಾ ಬೇಕರಿ ಹಾಗೂ ಸುತ್ತಲಿನ ರಸ್ತೆಗಳಲ್ಲಿದ್ದ 15ಕ್ಕೂ ಹೆಚ್ಚು ಬೀದಿನಾಯಿಗಳಿಗೆ ಗುರುವಾರ ಮಧ್ಯಾಹ್ನ ವಿಷಪೂರಿತ ಆಹಾರ ನೀಡಿದ್ದಾರೆ. ವಿಷಾಹಾರ ಸೇವಿಸಿದ ನಾಯಿಗಳು ಕೆಲ ಹೊತ್ತಲ್ಲೇ ರಸ್ತೆಯಂಚಲ್ಲಿ, ಪಾದಚಾರಿ ಮಾರ್ಗದಲ್ಲಿ ನರಳುತ್ತಾ ಬಿದ್ದಿವೆ. ಮೊದಲಿಗೆ ನಾಯಿಗಳ ಸ್ಥಿತಿಯನ್ನು…
ಕರ್ನಾಟಕ ಒನ್ ಕೇಂದ್ರಗಳ ಮೂಲಕ ಆಸ್ತಿ ತೆರಿಗೆ ಪಾವತಿಸಲು ಸೇವೆ ಆರಂಭ
June 13, 2020ಮೈಸೂರು, ಜೂ.12-ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಆಸ್ತಿ ತೆರಿಗೆಯನ್ನು ಕರ್ನಾಟಕ ಒನ್ ಕೇಂದ್ರಗಳಲ್ಲಿ ಅಥವಾ ವೈಬ್ ಸೈಟ್ ಮೂಲಕ ಆಸ್ತಿ ತೆರಿಗೆ ಪಾವತಿಸಲು ಸೇವೆ ಆರಂಭವಾಗಿದೆ. ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರುವ ಗೋಕುಲಂ, ರಾಮಕೃಷ್ಣನಗರ, ನ್ಯೂ ಶೇಷಾದ್ರಿ ಐಯ್ಯರ್ ರೋಡ್, ಜಯನಗರ( ಕೃಷ್ಣಮೂರ್ತಿಪುರಂ) ಹಾಗೂ ಸಿದ್ದಾರ್ಥ ಬಡಾವಣೆಯಲ್ಲಿ ಕರ್ನಾಟಕ ಒನ್ ಕೇಂದ್ರ ಗಳಲ್ಲಿ ಆಸ್ತಿ ತೆರಿಗೆ ಪಾವತಿಸುವ (ಆಸ್ತಿ ತೆರಿಗೆ ವಿವರ ಪಟ್ಟಿ, ಸ್ಯಾಸ್ ಫಾರ್ಮ-1 ಮುದ್ರಿಸುವ ಸೇವೆಯನ್ನು ಒಳಗೊಂಡಂತೆ) ಸೇವೆಯನ್ನು…
ಬಿಪಿಎಲ್ ಕಾರ್ಡ್ ಹೊಂದಿರುವ ಸರ್ಕಾರಿ ನೌಕರರಿಗೆ ಎಚ್ಚರಿಕೆ
June 13, 2020ಬೆಂಗಳೂರು, ಜೂ. 12- ಸರ್ಕಾರಿ ಅಧಿಕಾರಿಗಳು, ನೌಕರರು ಮತ್ತು ಅವರ ಅವಲಂಬಿತರು ಪಡೆ ದಿರುವ ಬಿಪಿಎಲ್ ಕಾರ್ಡ್ಗಳನ್ನು ಒಂದು ತಿಂಗಳೊಳಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಗಳ ಇಲಾಖೆಗೆ ಹಿಂದಿರುಗಿಸದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದರ ಜೊತೆಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಸರ್ಕಾರದ ಮುಖ್ಯ ಕಾರ್ಯ ದರ್ಶಿ ಟಿ.ಎಂ. ವಿಜಯಭಾಸ್ಕರ್ ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಸುತ್ತೋಲೆ ಹೊರಡಿಸಿ ರುವ ಅವರು, ನಿಗಮ, ಮಂಡಳಿ, ಪ್ರಾಧಿ ಕಾರ, ವಿಶ್ವವಿದ್ಯಾನಿಲಯ ಸೇರಿದಂತೆ ಸಂಸ್ಥೆಗಳ ಅಧಿಕಾರಿಗಳು, ನೌಕರರು…
ವಕೀಲರಾದ ಸಂಸದ ತೇಜಸ್ವಿ ಸೂರ್ಯ; ಹೈಕೋರ್ಟ್ನಲ್ಲಿ ವಾದ ಮಂಡನೆ
June 13, 2020ಬೆಂಗಳೂರು: ಸಂಸದರಾದ ನಂತರ ಇದೇ ಮೊದಲ ಬಾರಿಗೆ ತೇಜಸ್ವಿ ಸೂರ್ಯ ಹೈಕೋರ್ಟ್ನಲ್ಲಿ ವಾದ ಮಂಡಿಸಿದರು. ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ನ ಸುಮಾರು 45,000 ಠೇವಣಿದಾರರ ಪರವಾಗಿ ಶುಕ್ರವಾರ ತೇಜಸ್ವಿ ಸೂರ್ಯ ವಾದ ಮಂಡಿಸಿದರು. ಅವರು ಕೇಂದ್ರ ಸರ್ಕಾರದ ನಿವೃತ್ತ ಉದ್ಯೋಗಿಯಾಗಿರುವ ಅರ್ಜಿದಾರ ಡಾ.ಎನ್.ಆರ್.ರವಿ ಪರವಾಗಿ ನ್ಯಾಯಾ ಲಯಕ್ಕೆ ಹಾಜರಾಗಿದ್ದರು. ಬ್ಯಾಂಕ್ನ ನಿರ್ದೇಶಕರು ಠೇವಣಿದಾರರ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ನಾಳೆ ಬಿಜೆಪಿಯಿಂದ ವರ್ಚುವಲ್ ರ್ಯಾಲಿ: ಜೆಪಿ ನಡ್ಡಾರಿಂದ ಭಾಷಣ
June 13, 2020ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಆಡಳಿತಾರೂಢ ಎನ್ಡಿಎ ಸರ್ಕಾರವು 2ನೇ ಅವಧಿಯ ಮೊದಲ ವರ್ಷವನ್ನು ಪೂರೈಸಿರುವ ಹಿನ್ನೆಲೆ ಯಲ್ಲಿ ನಗರದಲ್ಲಿ ರಾಜ್ಯ ಬಿಜೆಪಿಯು ವರ್ಚುವಲ್ ರ್ಯಾಲಿ ಯೊಂದನ್ನು ಇದೇ ಭಾನುವಾರ ನಡೆಸುತ್ತಿದ್ದು, ರ್ಯಾಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರು ಭಾಷಣ ಮಾಡಲಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ರಾಜ್ಯ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಅವರು, ರ್ಯಾಲಿ ಯಲ್ಲಿ ಪಕ್ಷದ ರಾಷ್ಟ್ರಾಧ್ಯಕ್ಷರು ಆತ್ಮ ನಿರ್ಭರ ಭಾರತ ಕುರಿತು ಮಾತನಾಡಲಿದ್ದಾರೆ. ಭಾನುವಾರ ಸಂಜೆ 6…
ವಿಳಂಬವಾಗಿ ಜಿಎಸ್ಟಿ ಸಲ್ಲಿಸುವವರ ಮೇಲಿನ ಬಡ್ಡಿ ದರ ಶೇ.50ರಷ್ಟು ಇಳಿಸಿದ ಕೇಂದ್ರ ಸರ್ಕಾರ
June 13, 2020ನವದೆಹಲಿ, ಜೂ. 12-ಜುಲೈ 2017 ಮತ್ತು ಜನವರಿ 2020ರ ನಡುವೆ ಜಿಎಸ್ಟಿ ತೆರಿಗೆ ಬಾಕಿಯನ್ನು ತಡವಾಗಿ ಸಲ್ಲಿಸಿದವರಿಗೆ ಯಾವುದೇ ಹೆಚ್ಚುವರಿ ದಂಡ ಶುಲ್ಕವನ್ನು ವಿಧಿಸಲಾಗುವುದಿಲ್ಲ ಮತ್ತು ಬಾಕಿ ಹಣದ ಮೇಲಿನ ಬಡ್ಡಿಯನ್ನೂ ಶೇ.50ರಷ್ಟು ಇಳಿಸ ಲಾಗಿದೆ ಎಂದು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಅನುಸರಣೆ ಮಾನದಂಡಗಳ ಕುರಿತು ಶುಕ್ರವಾರ ನಡೆದ ಸಭೆಯ ಬಳಿಕ ಕೇಂದ್ರ ಸರ್ಕಾರ ಪ್ರಕಟಣೆ ಹೊರಡಿಸಿದೆ. ಕೊರೊನಾ ವೈರಸ್ ಸಾಮುದಾಯಿಕವಾಗಿ ಹರಡುವು ದನ್ನು ತಡೆಗಟ್ಟುವ ಸಲುವಾಗಿ ದೇಶದಾದ್ಯಂತ ಲಾಕ್ಡೌನ್ ಜಾರಿಗೆ ತರಲಾಗಿದೆ. ಇಂತಹ…
ದೇಶದಲ್ಲಿ ಒಂದೇ ದಿನ 10,956 ಮಂದಿಗೆ ಕೊರೊನಾ ಸೋಂಕು
June 13, 2020ನವದೆಹಲಿ, ಜೂ.12- ದೇಶದಲ್ಲಿ ಕೊರೊನಾ ಸ್ಫೋಟಗೊಂಡಿದ್ದು, ಒಂದೇ ದಿನ ಬರೋಬ್ಬರಿ 10,956 ಮಂದಿಯಲ್ಲಿ ವೈರಸ್ ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2.97 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ಮಾಹಿತಿ ನೀಡಿದೆ. ಲಾಕ್ಡೌನ್ ಸಡಿಲಗೊಳಿಸಿದ ಬೆನ್ನಲ್ಲೇ ದೇಶದಲ್ಲಿ ಸೋಂಕಿತರ ಸಂಖ್ಯೆ ದಿನ ದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ನಿನ್ನೆ ಒಂದೇ ದಿನ ಬರೋಬ್ಬರಿ 10,956 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 297535ಕ್ಕೆ…
ಕೊರೊನಾ ಹಾವಳಿ: ಜನರಲ್ಲಿ ಆತ್ಮವಿಶ್ವಾಸ ತುಂಬಲು ಸಂಗೀತಗುಚ್ಛ
June 13, 2020ಮೈಸೂರು,ಜೂ.12(ವೈಡಿಎಸ್)-ಮಹಾಮಾರಿ ಕೊರೊನಾದಿಂದ ಜನರು ಸಂಕಷ್ಟಕ್ಕೆ ಒಳಗಾಗಿದ್ದು, ಉತ್ಸಾಹ ಕುಗ್ಗಿದೆ. ಇವರಲ್ಲಿ ಮತ್ತೆ ಆತ್ಮವಿಶ್ವಾಸ ತುಂಬುವ ಸಂದೇಶ ಹೊಂದಿರುವ ಸಂಗೀತ ವೀಡಿಯೊ ಶನಿವಾರ ಸಂಜೆ ಬಿಡುಗಡೆಯಾಗಲಿದೆ. ಈ ವೀಡಿಯೋವನ್ನು ಕೇಂದ್ರ ಸರ್ಕಾರದ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್ (ಐಸಿಸಿಆರ್) ಶನಿವಾರ ಸಂಜೆ 4 ಗಂಟೆಗೆ ಬಿಡುಗಡೆ ಮಾಡಲಿದ್ದು, ಪ್ರಪಂಚದ 30 ದೇಶಗಳಲ್ಲೂ ಬಿಡುಗಡೆಯಾಗಲಿದೆ. ಲೈಫ್ ಎಗೇನ್ ಎಂಬ ಸಂಗೀತ ವಿಡಿಯೊವನ್ನು ಸಂಗೀತ ಗಾರ, ಪಿಟೀಲು ವಾದಕ ಡಾ.ಮೈಸೂರು ಮಂಜುನಾಥ್ ಅವರು ಸಂಯೋಜನೆ ಮಾಡಿದ್ದು, ವಿವಿಧ ದೇಶಗಳ 20…
ಮಂಜುನಾಥಪುರದಲ್ಲಿ ಕಾಮಗಾರಿಗೆ ಶಾಸಕ ನಾಗೇಂದ್ರ ಗುದ್ದಲಿಪೂಜೆ
June 13, 2020ಮೈಸೂರು, ಜೂ.12(ಆರ್ಕೆಬಿ)- ಮೈಸೂರು ಮಹಾನಗರ ಪಾಲಿಕೆಯ 18ನೇ ವಾರ್ಡ್ ವ್ಯಾಪ್ತಿಯ ಮಂಜುನಾಥಪುರದ ಚಾಮುಂಡೇಶ್ವರಿ ದೇವಸ್ಥಾನದ ಬಳಿ 54 ಲಕ್ಷ ರೂ. ಅಂದಾಜಿನ ವಿವಿಧ ಅಭಿವೃದ್ಧಿ ಕಾಮ ಗಾರಿಗಳಿಗೆ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಚಾಲನೆ ನೀಡಿದರು. ಮಂಜುನಾಥಪುರದ ಮುಖ್ಯರಸ್ತೆ ಅಭಿ ವೃದ್ಧಿ (15 ಲಕ್ಷ ರೂ.), ಚರಂಡಿ ನಿರ್ಮಾಣ (20 ಲಕ್ಷ ರೂ.), ನಾಯಕರ ಬೀದಿಯ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಶೀಟ್ ಅಳವಡಿಕೆ(2 ಲಕ್ಷ ರೂ.), ದೇವಸ್ಥಾನ ರಸ್ತೆ ಮತ್ತು ಯಾದವಗಿರಿಯಲ್ಲಿ ಕುಸಿದಿ ರುವ ಒಳಚರಂಡಿ ಅಭಿವೃದ್ಧಿ (17…
ಜೂ.16ರಂದು ಜನ ಸಂಪರ್ಕ ಸಭೆ
June 13, 2020ಮೈಸೂರು, ಜೂ.12- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯ ಮಿತದ ಹೂಟಗಳ್ಳಿ ಉಪ-ವಿಭಾಗದ ಸಹಾ ಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಯಲ್ಲಿ ಜೂ.16ರಂದು ಬೆಳಗ್ಗೆ 11 ಗಂಟೆಗೆ ಅಧೀಕ್ಷಕ ಇಂಜಿನಿಯರ್, ಕಾರ್ಯ ನಿರ್ವಾಹಕ ಇಂಜಿನಿಯರ್ ಹಾಗೂ ವಿ.ವಿ. ಮೊಹಲ್ಲಾ ವಿಭಾಗ ಇವರ ಅಧ್ಯಕ್ಷತೆ ಯಲ್ಲಿ ಗ್ರಾಹಕರ ಕುಂದು ಕೊರತೆಗಳ ಬಗ್ಗೆ ಜನ ಸಂಪರ್ಕ ಸಭೆ ಆಯೋಜಿಸಲಾಗಿದೆ. ಅಂದೇ ಮಧ್ಯಾಹ್ನ 3 ಗಂಟೆಗೆ ವಿ.ವಿ. ಮೊಹಲ್ಲಾ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿ ಯಲ್ಲಿ ವಿ.ವಿ.ಮೊಹಲ್ಲಾ ಉಪ-ವಿಭಾಗ ವ್ಯಾಪ್ತಿಯಲ್ಲಿನ ಗ್ರಾಹಕರ…










