ಮೈಸೂರು

ಮೈಸೂರು ವಿವಿಗೆ NTRF ಪ್ರಶಸ್ತಿ
ಮೈಸೂರು

ಮೈಸೂರು ವಿವಿಗೆ NTRF ಪ್ರಶಸ್ತಿ

June 12, 2020

ಮೈಸೂರು,ಜೂ.11(ಆರ್‍ಕೆ)-ಕೇಂದ್ರದ ಮಾನವ ಸಂಪ ನ್ಮೂಲ ಅಭಿವೃದ್ಧಿ ಸಚಿವಾಲಯ(MHRD)ಕೊಡ ಮಾಡುವ ನ್ಯಾಷನಲ್ ಇನ್‍ಸ್ಟಿಟ್ಯೂಷನಲ್ ರ್ಯಾಂಕಿಂಗ್ ಫ್ರೇಂ(NTRF ) ಪ್ರಶಸ್ತಿಗೆ ಮೈಸೂರು ವಿಶ್ವವಿದ್ಯಾನಿಲಯವು ಭಾಜನವಾಗಿದೆ. ದೇಶಾದ್ಯಂತ ಎಲ್ಲಾ ವಿಶ್ವವಿದ್ಯಾನಿಲಯಗಳ ಬೋಧನೆ, ಸಂಶೋಧನೆ, ಕಲಿಕಾ ಪದ್ಧತಿ, ಗ್ರಾಜುಯೇಷನ್ ಲೆವೆಲ್, ಪರ್ಫೆಕ್ಷನ್ ಸೇರಿದಂತೆ ಹಲವು ಮಾನದಂಡಗಳನ್ನು ಪರಿಗಣಿಸಿ ನೀಡುವ ಪ್ರಶಸ್ತಿಯಲ್ಲಿ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾ ನಿಲಯವು 27ನೇ ಸ್ಥಾನ ಗಳಿಸಿದೆ. ರಾಜ್ಯದಲ್ಲಿ ರ್ಯಾಂಕಿಂಗ್ ಪ್ರಶಸ್ತಿ ಗಳಿಸಿರುವ ಮೈಸೂರು ವಿಶ್ವ ವಿದ್ಯಾನಿಲಯವು ಕಳೆದ ವರ್ಷ ದೇಶದ ಯೂನಿವರ್ಸಿಟಿಗಳ ಪೈಕಿ 54ನೇ ರ್ಯಾಂಕಿಂಗ್‍ನಲ್ಲಿತ್ತು. ಕೇಂದ್ರ ಮಾನವ…

ಕೆಆರ್‍ಎಸ್ ಹಿನ್ನೀರಿನ ಬಳಿ ಹುಟ್ಟುಹಬ್ಬದ ಪಾರ್ಟಿ: 34 ಮಂದಿ ಬಂಧನ ಠಾಣಾ ಜಾಮೀನಿನ ಮೇಲೆ ಬಿಡುಗಡೆ
ಮೈಸೂರು

ಕೆಆರ್‍ಎಸ್ ಹಿನ್ನೀರಿನ ಬಳಿ ಹುಟ್ಟುಹಬ್ಬದ ಪಾರ್ಟಿ: 34 ಮಂದಿ ಬಂಧನ ಠಾಣಾ ಜಾಮೀನಿನ ಮೇಲೆ ಬಿಡುಗಡೆ

June 12, 2020

ಮೈಸೂರು,ಜೂ.11-ಕೊರೊನಾ ಲಾಕ್‍ಡೌನ್ ನಿಯಮ ಉಲ್ಲಂಘಿಸಿ ರಾತ್ರಿ ವೇಳೆ ಕೆಆರ್‍ಎಸ್ ಹಿನ್ನೀರಿನ ಬಳಿ ಫಾರ್ಮ್ ಹೌಸ್‍ನಲ್ಲಿ ಹುಟ್ಟುಹಬ್ಬದ ಅಂಗವಾಗಿ ಪಾರ್ಟಿ ಮಾಡುತ್ತಿದ್ದ 34 ಮಂದಿ ಯನ್ನು ಬಂಧಿಸಿರುವ ಕೆಆರ್‍ಎಸ್ ಠಾಣೆ ಪೊಲೀಸರು, ಪ್ರಕರಣ ದಾಖಲಿಸಿ ದ್ದಾರೆ. ಶೇಖರ್ ಎಂಬುವರಿಗೆ ಸೇರಿದ ಫಾರ್ಮ್ ಹೌಸ್‍ನಲ್ಲಿ ಬುಧವಾರ ರಾತ್ರಿ ವೇದಿಕೆ ನಿರ್ಮಿಸಿ ಹಾಡುಗಾರಿಕೆಯೊಂದಿಗೆ ನೃತ್ಯ ಮಾಡುತ್ತಾ ದಾಸಪ್ಪ ಅಲಿಯಾಸ್ ದಾಸ ಎಂಬುವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದರು. ಲಾಕ್‍ಡೌನ್ ಸಂದರ್ಭದಲ್ಲಿ ರಾತ್ರಿ ವೇಳೆ ಫಾರ್ಮ್ ಹೌಸ್‍ನಲ್ಲಿ ಮೋಜು ಮಸ್ತಿ ನಡೆಯುತ್ತಿದೆ ಎಂದು ಸ್ಥಳೀಯರು…

ರಾಜಮನೆತನ ವಿರುದ್ಧ  ಪ್ರೊ.ನಂಜರಾಜ ಅರಸ್ ಹೇಳಿಕೆಗೆ ಪ್ರಮೋದಾದೇವಿ ಒಡೆಯರ್ ಅಭಿಮಾನಿ ಬಳಗದ ಖಂಡನೆ
ಮೈಸೂರು

ರಾಜಮನೆತನ ವಿರುದ್ಧ  ಪ್ರೊ.ನಂಜರಾಜ ಅರಸ್ ಹೇಳಿಕೆಗೆ ಪ್ರಮೋದಾದೇವಿ ಒಡೆಯರ್ ಅಭಿಮಾನಿ ಬಳಗದ ಖಂಡನೆ

June 12, 2020

ಮೈಸೂರು, ಜೂ.11(ಆರ್‍ಕೆಬಿ)- ಕೆಆರ್‍ಎಸ್‍ನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ.ವಿಶ್ವೇಶ್ವರಯ್ಯ ಅವರ ಪ್ರತಿಮೆ ಸ್ಥಾಪನೆ ವಿಚಾರದಲ್ಲಿ ಇತಿಹಾಸ ತಜ್ಞ ಪ್ರೊ. ಪಿ.ವಿ.ನಂಜರಾಜ ಅರಸ್ ಅವರು ಅನಗತ್ಯವಾಗಿ ರಾಜವಂಶಸ್ಥರ ಹೆಸ ರನ್ನು ತಂದು ರಾಜಮನೆತನಕ್ಕೆ ಅಪಮಾನವಾಗುವಂತೆ ಹೇಳಿಕೆ ನೀಡಿದ್ದಾರೆ ಎಂದು ಪ್ರಮೋದಾದೇವಿ ಒಡೆಯರ್ ಅಭಿಮಾನಿಗಳ ಬಳಗ ಖಂಡಿಸಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬಳಗದ ಅಧ್ಯಕ್ಷ ಜೆ.ಜಯಶಂಕರ್ ಗುರು ವಾರ ಸುದ್ದಿಗೋಷ್ಠಿ ನಡೆಸಿ, ನಾಲ್ವಡಿ ಅವರ ಪ್ರತಿಮೆಯೊಂದಿಗೆ ಸರ್ ಎಂವಿ ಪ್ರತಿಮೆ ಸ್ಥಾಪಿಸುವುದನ್ನು ವಿರೋಧಿಸುವ ನಂಜರಾಜ ಅರಸು…

ಕೋಟಿ ವೃಕ್ಷ ಪ್ರತಿಷ್ಠಾನದಿಂದ ಸಸಿಗಳ ಉಚಿತ ಕೊಡುಗೆ
ಮೈಸೂರು

ಕೋಟಿ ವೃಕ್ಷ ಪ್ರತಿಷ್ಠಾನದಿಂದ ಸಸಿಗಳ ಉಚಿತ ಕೊಡುಗೆ

June 12, 2020

ಮೈಸೂರು, ಜೂ.11(ಆರ್‍ಕೆಬಿ)- ಮೈಸೂರನ್ನು ಹಸಿರು ವಲಯವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಒಂದು ಕೋಟಿ ಗಿಡ, ಮರಗಳನ್ನು ಬೆಳೆಸುವ ಉದ್ದೇಶ ಹೊಂದಿರುವ ಕೋಟಿ ವೃಕ್ಷ ಪ್ರತಿಷ್ಠಾನ, ಆಸಕ್ತ ಪರಿಸರ ಪ್ರೇಮಿಗಳು, ಸಾರ್ವಜನಿಕರು, ರೈತರಿಗೆ ಉಚಿತವಾಗಿ ಗಿಡಗಳನ್ನು ನೀಡಲಿದೆ. ಆಸಕ್ತರು ಗಿಡಗಳನ್ನು ಪಡೆದು ಬೆಳೆಸಿ, ರಕ್ಷಿಸುವಂತೆ ಪ್ರತಿಷ್ಠಾನದ ಅಧ್ಯಕ್ಷ ಶ್ರೀಕಾಂತ್ ಭಟ್ ಹೇಳಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿಷ್ಠಾನದಿಂದ 55 ಸಾವಿರ ಸಸಿಗಳನ್ನು ನೆಡಲಾಗಿದೆ. ಈಗ ನಮ್ಮ ಬಳಿ ಅರಳಿ, ಬೇವು, ಮಾವು, ಹಲಸು, ನೇರಳೆ, ಬಿಲ್ವ,…

ವಿವಿ ಧನ ಸಹಾಯ ಆಯೋಗದ ಪಟ್ಟಿಯಲ್ಲಿ ಜೆಎಸ್‍ಎಸ್ ವಿವಿಗೆ ಸ್ಥಾನ
ಮೈಸೂರು

ವಿವಿ ಧನ ಸಹಾಯ ಆಯೋಗದ ಪಟ್ಟಿಯಲ್ಲಿ ಜೆಎಸ್‍ಎಸ್ ವಿವಿಗೆ ಸ್ಥಾನ

June 12, 2020

ಮೈಸೂರು,ಜೂ.11-2008ರಲ್ಲಿ ಸ್ಥಾಪಿಸಲಾದ ಜಗ ದ್ಗುರು ಶ್ರೀ ಶಿವರಾತ್ರೀಶ್ವರ ವಿಶ್ವವಿದ್ಯಾನಿಲಯವನ್ನು ವಿಶ್ವವಿದ್ಯಾನಿಲಯ ಧನ ಸಹಾಯ ಆಯೋ ಗವು ಪರಿಗಣಿತ ವಿಶ್ವವಿದ್ಯಾನಿಲಯಗಳಡಿ ಯಲ್ಲಿನ ಸಂಸ್ಥೆಯಲ್ಲಿ ದರ್ಜೆ-2 ಎಂದು ವರ್ಗೀಕರಿಸಿದೆ. ಪ್ರಸ್ತುತ, ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ತನ್ನ 5ನೇ ಆವೃತ್ತಿಯ 2020ನೇ ಸಾಲಿನ ರ್ಯಾಂಕಿಂಗ್ ಪಟ್ಟಿಯನ್ನು ಗುರುವಾರ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೊಕ್ರಿಯಾಲ್ ನಿಶಾಂಕ್, ದೆಹಲಿಯಲ್ಲಿ ಬಿಡುಗಡೆ ಮಾಡಿದ್ದು, ಅದರಲ್ಲಿ ಜೆಎಸ್‍ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್, ಮೈಸೂರು,…

ಕುಂಬಾರಕೊಪ್ಪಲಿನ ಸಾವಿರ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ
ಮೈಸೂರು

ಕುಂಬಾರಕೊಪ್ಪಲಿನ ಸಾವಿರ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ

June 12, 2020

ಮೈಸೂರು, ಜೂ.11(ಎಂಟಿವೈ)- ಲಾಕ್ ಡೌನ್ ವೇಳೆ ಸಂತ್ರಸ್ತರಾಗಿದ್ದ ಚಾಮರಾಜ ಕ್ಷೇತ್ರದ ಕುಂಬಾರಕೊಪ್ಪಲಿನ ಒಂದು ಸಾವಿರ ಬಡ ಕುಟುಂಬಗಳಿಗೆ ಪಾಲಿಕೆ ಮಾಜಿ ಸದಸ್ಯ ಶಿವಮಾದು ಅವರ ವತಿ ಯಿಂದ ನೀಡಲಾದ ದಿನಸಿ ಕಿಟ್ ವಿತರಿ ಸುವ ಕಾರ್ಯಕ್ರಮಕ್ಕೆ ಮಾಜಿ ಶಾಸಕ ವಾಸು ಚಾಲನೆ ನೀಡಿದರು. ಕುಂಬಾರಕೊಪ್ಪಲಿನ ಮಹಾದೇಶ್ವರ ದೇವಾಲಯದ ಆವರಣದಲ್ಲಿ ಗುರುವಾರ ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಬಡಾ ವಣೆಯಲ್ಲಿನ ಒಂದು ಸಾವಿರ ಬಡಕುಟುಂಬ ಗಳಿಗೆ ಅಕ್ಕಿ, ಬೇಳೆ, ರಾಗಿಹಿಟ್ಟು ಸೇರಿದಂತೆ ಅಗತ್ಯ ವಸ್ತುಗಳುಳ್ಳ ಕಿಟ್ ವಿತರಿಸಿದರು. ಬಳಿಕ ಮಾಜಿ…

ನಾಯಕ ಮುಖಂಡ ರಾಮಚಂದ್ರರಿಗೆ ಪರಿಷತ್ ಸದಸ್ಯ ಸ್ಥಾನಕ್ಕೆ ಆಗ್ರಹ
ಮೈಸೂರು

ನಾಯಕ ಮುಖಂಡ ರಾಮಚಂದ್ರರಿಗೆ ಪರಿಷತ್ ಸದಸ್ಯ ಸ್ಥಾನಕ್ಕೆ ಆಗ್ರಹ

June 12, 2020

ಮೈಸೂರು, ಜೂ.11-ಮೈಸೂರು ಮತ್ತು ಚಾಮರಾಜ ನಗರ ಅವಿಭಜಿತ ಜಿಲ್ಲೆಯ ನಾಯಕ ಜನಾಂಗದ ಪ್ರಭಾವಿ ಮುಖಂಡ, ಚಾಮ ರಾಜನಗರ ನಗರಸಭೆ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ ಅವರನ್ನು ವಿಧಾನ ಪರಿ ಷತ್ ಸದಸ್ಯರಾಗಿ ನೇಮಕ ಮಾಡಬೇಕೆಂದು ಮೈಸೂರು (ರಾಜ ಪರಿವಾರ) ನಾಯಕರ ಪಡೆ ಆಗ್ರಹಿಸಿದೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಮೈಸೂರು ಕೋ-ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ಹಾಗೂ ವಕೀಲ ಪಡುವಾರಹಳ್ಳಿ ಎಂ.ರಾಮಕೃಷ್ಣ, ಟೆನ್ನಿಸ್ ಗೋಪಿ, ಇಲವಾಲ ಕೃಷ್ಣ ಮುಂತಾದವರು, ನಾಯಕ ಜನಾಂಗದ ಮುಖಂಡರಾದ ಎಂ.ರಾಮಚಂದ್ರ ಚಾಮರಾಜನಗರ ನಗರಸಭೆಯ…

ಗುರುವಾರ ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿ ಸೇರಿ 204 ಮಂದಿಗೆ ಸೋಂಕು
ಮೈಸೂರು

ಗುರುವಾರ ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿ ಸೇರಿ 204 ಮಂದಿಗೆ ಸೋಂಕು

June 12, 2020

ಬೆಂಗಳೂರು, ಜೂ.11-ಮೈಸೂರಿನಲ್ಲಿ ಐವರು, ಹಾಸನದಲ್ಲಿ ಇಬ್ಬರು ಸೇರಿದಂತೆ ರಾಜ್ಯದಲ್ಲಿ ಗುರು ವಾರ ಎಸ್‍ಎಸ್ ಎಲ್‍ಸಿ ವಿದ್ಯಾರ್ಥಿ ಸೇರಿ 204 ಮಂದಿಗೆ ಕೊರೊನಾ ಸೋಂಕು ದೃಢ ಪಟ್ಟಿದ್ದು, ಸೋಂಕಿತರ ಸಂಖ್ಯೆ 6245ಕ್ಕೆ ಏರಿದೆ. ಇಂದು ಸೋಂಕು ಪತ್ತೆಯಾದವ ರಲ್ಲಿ 157 ಮಂದಿ ಹೊರ ರಾಜ್ಯದಿಂದ ಬಂದವರು. ಹಾಸನದಲ್ಲಿ 10 ಮತ್ತು ಮಂಡ್ಯದಲ್ಲಿ 8 ಮಂದಿ ಸೇರಿದಂತೆ ಇಂದು ರಾಜ್ಯದಲ್ಲಿ 114 ಮಂದಿ ಗುಣಮುಖ ರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 2,976ಕ್ಕೆ ಏರಿದ್ದು, ಬೆಂಗಳೂರಿನಲ್ಲಿ 35 ಮತ್ತು 60 ವರ್ಷದ…

ಇಂದಿನಿಂದ ಕೊಡಗಿನಲ್ಲಿ ಭಾರೀ ಮಳೆ ಸಾಧ್ಯತೆ
ಮೈಸೂರು

ಇಂದಿನಿಂದ ಕೊಡಗಿನಲ್ಲಿ ಭಾರೀ ಮಳೆ ಸಾಧ್ಯತೆ

June 12, 2020

ಮಡಿಕೇರಿ, ಜೂ.11- ಕೊಡಗು ಜಿಲ್ಲೆ ಯಲ್ಲಿ ಶುಕ್ರವಾರದಿಂದ ಭಾನುವಾರ ದವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಹಳದಿ ಮತ್ತು ಕಿತ್ತಳೆ ಎಚ್ಚರಿಕೆ ನೀಡಿದೆ. ಕೊಡಗು ಜಿಲ್ಲೆಯಲ್ಲಿ ಶುಕ್ರವಾರದಿಂದ ಭಾನುವಾರದವರೆಗೆ ಐಎಂಡಿ ಮುನ್ಸೂ ಚನೆ ನೀಡಿದ್ದರಿಂದ ಹಳದಿ ಮತ್ತು ಕಿತ್ತಳೆ ಎಚ್ಚರಿಕೆ ಸದ್ದು ಮಾಡಿದೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮುಂಗಾರು ಮಳೆ ಜಿಲ್ಲೆಯಲ್ಲಿ ಗುರುವಾರದಿಂದಲೇ ಸುರಿ ಯಲಾರಂಭಿಸಿದ್ದು, ಮುಂದಿನ 3 ದಿನ ಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಜೂ.12ರಂದು ಸುಮಾರು 64 ಮಿ.ಮೀ.ನಿಂದ…

ರಾಜ್ಯದಲ್ಲಿ 7ನೇ ತರಗತಿವರೆಗೂ ಆನ್‍ಲೈನ್ ಶಿಕ್ಷಣ ರದ್ದು ಮಾಡಲು ಸರ್ಕಾರ ಚಿಂತನೆ
ಮೈಸೂರು

ರಾಜ್ಯದಲ್ಲಿ 7ನೇ ತರಗತಿವರೆಗೂ ಆನ್‍ಲೈನ್ ಶಿಕ್ಷಣ ರದ್ದು ಮಾಡಲು ಸರ್ಕಾರ ಚಿಂತನೆ

June 12, 2020

ಬೆಂಗಳೂರು, ಜೂ.11- ರಾಜ್ಯದಲ್ಲಿ ಪುಟ್ಟ ಮಕ್ಕಳ ಆನ್‍ಲೈನ್ ಶಿಕ್ಷಣಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈಗಾಗಲೇ ಎಲ್‍ಕೆಜಿ, ಯುಕೆಜಿ ಹಾಗೂ ಪ್ರಾಥಮಿಕ ಹಂತದ 5ನೇ ತರಗತಿವರೆಗೆ ಆನ್‍ಲೈನ್ ಶಿಕ್ಷಣವನ್ನು ರದ್ದುಗೊಳಿಸಿದ್ದು, ಅದನ್ನು 7ನೇ ತರಗತಿವರೆಗೂ ವಿಸ್ತರಿಸಲು ಮುಂದಾಗಿದೆ. ಗುರುವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದ ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಅವರು, ಆನ್ ಲೈನ್ ಶಿಕ್ಷಣದ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಆನ್…

1 536 537 538 539 540 1,611
Translate »