ಮೈಸೂರು,ಜೂ.1(ಆರ್ಕೆ)-ಕುಡಿದ ಮತ್ತಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆಸಿದ ಮೂವರು ಯುವಕರನ್ನು ಮೈಸೂರಿನ ಸರಸ್ವತಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಕೆ.ಜಿ.ಕೊಪ್ಪಲು ನಿವಾಸಿ ಲೇಟ್ ರಾಮಣ್ಣ ಅವರ ಮಗ ಆರ್.ಮಹೇಶ್ಗೌಡ, ಶ್ರೀರಾಂಪುರದ ಜಯರಾಂ ಅವರ ಮಗ ದರ್ಶನ್ ಹಾಗೂ ಜಯನಗರ ನಿವಾಸಿ ಶಿವಣ್ಣ ಕೆ.ಗೌಡ ಅವರ ಮಗ ಹೇಮಕುಮಾರ್ಗೌಡ ಬಂಧಿತ ಆರೋಪಿಗಳಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಸರಸ್ವತಿಪುರಂ ಠಾಣೆ ಇನ್ಸ್ಪೆಕ್ಟರ್ ವಿಜಯಕುಮಾರ್ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಶನಿವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ…
ಬೈಕ್ಗೆ ಮಿನಿಲಾರಿ ಡಿಕ್ಕಿ: ಜಂಗಲ್ ಲಾಡ್ಜ್ ಸಫಾರಿ ವಾಹನ ಚಾಲಕ ಸಾವು
June 2, 2020ಮೈಸೂರು, ಜೂ.1(ಎಂಟಿವೈ)-ಮೈಸೂರಿಂದ ಕೇರಳಕ್ಕೆ ತರಕಾರಿ ಸಾಗಿಸುತ್ತಿದ್ದ ಮಿನಿ ಲಾರಿಯೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ ಸಫಾರಿ ವಾಹನದ ಚಾಲಕ ಮೃತಪಟ್ಟಿರುವ ಘಟನೆ ನಾಗರಹೊಳೆ ಅಭಯಾರಣ್ಯದ ಅಂತರಸಂತೆ ವಲಯದಲ್ಲಿ ಭಾನುವಾರ ಸಂಜೆ ನಡೆದಿದೆ. ಹೆಚ್.ಡಿ.ಕೋಟೆ ತಾಲೂಕು ಕಾರಾಪುರದಲ್ಲಿರುವ ಪ್ರವಾಸೋದ್ಯಮ ಇಲಾಖೆ ಜಂಗಲ್ ಲಾಡ್ಜ್ ಅಂಡ್ ರೆಸಾರ್ಟ್ನ ಸಫಾರಿ ವಾಹನದ ಚಾಲಕ, ಕಾರಾಪುರ ನಿವಾಸಿ ಚೋಟು(35) ಮೃತಪಟ್ಟವರು. ಭಾನುವಾರ ಸಂಜೆ ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ನಿಂದ ಬೈಕ್ನಲ್ಲಿ ಅಂತರಸಂತೆ ಕಡೆಗೆ ಚೋಟು ತೆರಳುತ್ತಿದ್ದಾಗ, ಮೈಸೂರಿಂದ…
ಗೋಡೆಗಳ ಮೇಲೆ ಜಾಹೀರಾತು ಬರಹ ಸ್ಟೀಲ್ಸ್ ಅಂಗಡಿ ವಿರುದ್ಧ ನಗರ ಪಾಲಿಕೆ ದೂರು
June 2, 2020ಮೈಸೂರು, ಜೂ.1 (ಆರ್ಕೆ)- ಅನಧಿ ಕೃತವಾಗಿ ಗೋಡೆಗಳ ಮೇಲೆ ಜಾಹೀ ರಾತು ಬರೆದಿರುವ ಸ್ಟೀಲ್ಸ್ ಅಂಗಡಿ ಮಾಲೀಕರ ವಿರುದ್ಧ ಮೈಸೂರು ಮಹಾ ನಗರ ಪಾಲಿಕೆ ಅಧಿಕಾರಿಗಳು ಕುವೆಂಪು ನಗರ ಠಾಣೆಗೆ ದೂರು ನೀಡಿದ್ದಾರೆ. ಮೈಸೂರಿನ ರಾಮಕೃಷ್ಣನಗರದ ಚದ ರುಂಗ ರಸ್ತೆ 1ನೇ ಬ್ಲಾಕ್ನಲ್ಲಿರುವ ಸುಮಿತ್ರ ಸ್ಟೀಲ್ಸ್ ಅಂಗಡಿ ಮಾಲೀಕ ಕೃಷ್ಣಕುಮಾರ್ ಸಾಗರ್ ಎಂಬುವರ ವಿರುದ್ಧ ಮೇ 5ರಂದು ಪಾಲಿಕೆ ಉಪ ಆಯುಕ್ತ (ಕಂದಾಯ) ಕುಮಾರ್ ನಾಯಕ್ ದೂರು ನೀಡಿದ್ದಾರೆ. ಸ್ಟೀಲ್ ಅಂಡ್ ಸಿಮೆಂಟ್ ವ್ಯಾಪಾರ ನಡೆಸುತ್ತಿರುವ ಸಾಗರ್,…
ಖಾಸಗಿ ಬಸ್ ಸಂಚಾರ: ಸರ್ಕಾರಿ ದರದಲ್ಲೇ ಟಿಕೆಟ್
June 2, 2020ಮೈಸೂರು, ಜೂ.1- ಜಿಲ್ಲೆಯಲ್ಲಿ ಸೋಮವಾರದಿಂದ ಖಾಸಗಿ ಬಸ್ ಸಂಚಾರ ಆರಂಭವಾಯಿತು. ಮೈಸೂರಿನಿಂದ ಕೊಳ್ಳೇ ಗಾಲ, ಚಾಮರಾಜನಗರ ಮುಂತಾದೆಡೆಗೆ ಸುಮಾರು 30 ಬಸ್ಗಳು ಸಂಚರಿಸಿದವು. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ರಾಜ್ಯ ಖಾಸಗಿ ಬಸ್ ಮಾಲೀಕರ ಒಕ್ಕೂಟದ ಉಪಾ ಧ್ಯಕ್ಷರೂ ಆದ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಗೌರವ ಕಾರ್ಯದರ್ಶಿ ತಾಯೂರು ವಿಠಲಮೂರ್ತಿ, ಕೊರೊನಾ ನಿಯಂತ್ರಣ ಮುಂಜಾಗ್ರತಾ ಕ್ರಮಗಳೊಂದಿಗೆ ಬಸ್ಗಳು ಸಂಚರಿಸಿವೆ. ಈ ಸಂಬಂಧ ಖಾಸಗಿ ಬಸ್ ಮಾಲೀಕರ ಸಭೆ ನಡೆಸಿದ್ದ ಅಧಿಕಾರಿ ಗಳು, ಸಂಚಾರ…
ಲಾಕ್ಡೌನ್ ಸಡಿಲಿಸಿದೆ, ಮತ್ತಷ್ಟು ಎಚ್ಚರಿಕೆ ಅಗತ್ಯ
June 1, 2020ನವದೆಹಲಿ, ಮೇ 31- ದೇಶದಲ್ಲಿ ಲಾಕ್ಡೌನ್ನ್ನು ಸಡಿಲಗೊಳಿಸಲಾಗಿದ್ದು, ಜನರು ಮತ್ತಷ್ಟು ಎಚ್ಚರಿಕೆ ಯಿಂದಿರಬೇಕಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು `ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ಭಾನುವಾರ ಹೇಳಿದ್ದಾರೆ. ಕಳೆದ ಬಾರಿ ನಾನು ನಿಮ್ಮೊಂದಿಗೆ ಮಾತನಾಡಿದ ಸಂದರ್ಭದಲ್ಲಿ ದೇಶದಲ್ಲಿ ರೈಲು, ಬಸ್ ಹಾಗೂ ವಿಮಾನ ಸಂಚಾರಗಳು ಬಂದ್ ಆಗಿದ್ದವು. ಆದರೆ, ಈ ಬಾರಿ ಲಾಕ್ ಡೌನ್ ಸಡಿಲಗೊಳಿಸಲಾಗಿದ್ದು, ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿದೆ. ಸಾಕಷ್ಟು ಮುಂಜಾಗ್ರತಾ ಕ್ರಮಗಳೊಂ ದಿಗೆ ಶ್ರಮಿಕ್ ವಿಶೇಷ ರೈಲು, ಇತರೆ ವಿಶೇಷ ರೈಲು…
ಕಫ್ರ್ಯೂ ರದ್ದಾದರೂ ಬಿಕೋ ಎನ್ನುತ್ತಿದ್ದ ರಸ್ತೆಗಳು
June 1, 2020ಮೈಸೂರು, ಮೇ 31(ಆರ್ಕೆಬಿ)- ರಾಜ್ಯ ಸರ್ಕಾರ ಭಾನುವಾರದ ಕಫ್ರ್ಯೂ ಹಿಂತೆಗೆದುಕೊಂಡು ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಎಲ್ಲಾ ರೀತಿಯ ಚಟುವಟಿಕೆ ಗಳಿಗೆ ಅನುಮತಿ ನೀಡಿದ್ದರೂ ಮೈಸೂರಿನಲ್ಲಿ ಜನ-ವಾಹನ ಸಂಚಾರ ತೀರಾ ಕಡಿಮೆ ಇತ್ತು. ಮೈಸೂರು ನಗರ ಬಸ್ ನಿಲ್ದಾಣದಲ್ಲಿ ಪ್ರಯಾಣಿ ಕರ ಸಂಖ್ಯೆಯೂ ಬಹಳ ಕಡಿಮೆ ಇತ್ತು. ಮೈಸೂರಿನ ವಿವಿಧ ರಸ್ತೆಗಳಲ್ಲಿ ಅಂಗಡಿಗಳು ಬಾಗಿಲು ತೆರೆದು ಗ್ರಾಹಕರ ನಿರೀಕ್ಷೆಯಲ್ಲಿದ್ದವು. ಆದರೆ, ರಸ್ತೆಗಳೆಲ್ಲಾ ಬಿಕೋ ಎನ್ನುತ್ತಿರುವುದನ್ನು ನೋಡಿ ಕೆಲ ವರ್ತಕರು ಮಧ್ಯಾಹ್ನದ ವೇಳೆಗೆ ಅಂಗಡಿಗಳನ್ನು ಸ್ವತಃ ತಾವೇ ಬಂದ್…
ನಿವೃತ್ತ ಸುಪ್ರೀಂ ನ್ಯಾಯಮೂರ್ತಿಗಳಿಂದ ಪ್ರಧಾನಿ ಮೋದಿಯವರ ಜೀವನ ಚರಿತ್ರೆ ಕೃತಿ ಬಿಡುಗಡೆ
June 1, 2020ನವದೆಹಲಿ, ಮೇ 31- ಪ್ರಧಾನಿ ನರೇಂದ್ರ ಮೋದಿಯವರ ಬಾಲ್ಯದ ಅಪರೂಪದ ಸಂಗ್ರಾಹ್ಯ ಚಿತ್ರಗಳು, ಹೆಚ್ಚು ಪ್ರಸಿದ್ಧವಲ್ಲದ ಉಪಾಖ್ಯಾನಗಳಿಂದ ಕೂಡಿರುವ ಪ್ರಧಾನಿ ನರೇಂದ್ರ ಮೋದಿಯವರ ಹೊಸ ಜೀವನ ಚರಿತ್ರೆ ಬಿಡುಗಡೆಯಾಗಿದೆ. “Narendra Modi-Harbinger of Prosperity & Apostle of World Peace” ಎನ್ನುವ ಹೆಸರಿನ ಪುಸ್ತಕ ವನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಬಿಡುಗಡೆ ಮಾಡಿದ್ದಾರೆ. ಲಾಕ್ಡೌನ್ ಮಧ್ಯೆ, ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಶುಕ್ರವಾರ ಅಂತರ್ಜಾಲದಲ್ಲಿ ಆಯೋಜಿಸಲಾಗಿದ್ದು, ಭಾರತ ಮತ್ತು ಯುಎಸ್ ಎರಡೂ ರಾಷ್ಟ್ರಗಳಲ್ಲಿನ ಗಣ್ಯರು…
ಭಾನುವಾರ 299 ಮಂದಿಗೆ ಸೋಂಕು, ಇಬ್ಬರ ಸಾವು
June 1, 2020ಮೈಸೂರು, ಮೇ 31-ರಾಜ್ಯದಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿದ್ದು, ಭಾನುವಾರ ಹೊಸದಾಗಿ 299 ಮಂದಿಗೆ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 3221ಕ್ಕೆ ಏರಿದೆ. ಇಂದು ಪತ್ತೆಯಾದ ಪ್ರಕರಣಗಳಲ್ಲಿ 255 ಮಂದಿ ಹೊರ ರಾಜ್ಯದವರಾಗಿದ್ದು, 7 ಮಂದಿ ವಿದೇಶದಿಂದ ಬಂದವರು. ಸೋಂಕಿತರ ಸಂಖ್ಯೆ ಹೆಚ್ಚಾ ಗುತ್ತಿರುವ ಅದೇ ವೇಳೆ ಗುಣಮುಖರಾಗುತ್ತಿರುವ ಸಂಖ್ಯೆಯೂ ಕೂಡ ಹೆಚ್ಚುತ್ತಿದೆ. ಇಂದು ಬೆಂಗಳೂರಿನಲ್ಲಿ 59, ಉಡುಪಿಯಲ್ಲಿ 57, ಮಂಡ್ಯದಲ್ಲಿ 28, ಚಿಕ್ಕಬಳ್ಳಾಪುರದಲ್ಲಿ 18, ದಾವಣಗೆರೆ ಮತ್ತು ಶಿವಮೊಗ್ಗದಲ್ಲಿ ತಲಾ 17 ಮಂದಿ ಸೇರಿದಂತೆ 221 ಮಂದಿ…
ಕೇಂದ್ರದ ಮಾರ್ಗಸೂಚಿ ಬಳಿಕ ನೂತನ ಶೈಕ್ಷಣಿಕ ವರ್ಷದ ಕ್ಯಾಲೆಂಡರ್ ಪ್ರಕಟ
June 1, 2020ಬೆಂಗಳೂರು, ಮೇ 31- ಕೇಂದ್ರದ ಮಾನವ ಸಂಪನ್ಮೂಲ ಸಚಿವಾಲಯ ಮಾರ್ಗಸೂಚಿಗಳನ್ನು ನೀಡಿದ ಬಳಿಕ ನೂತನ ಶೈಕ್ಷಣಿಕ ವರ್ಷದ ಕ್ಯಾಲೆಂಡರ್ಅನ್ನು ಪ್ರಕಟಗೊಳಿಸಲಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ಕುಮಾರ್ ಶನಿವಾರ ಹೇಳಿದ್ದಾರೆ. ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮಾರ್ಗ ಸೂಚಿ ಹೊರಡಿಸುತ್ತಿದ್ದಂತೆಯೇ ನೂತನ ಶೈಕ್ಷಣಿಕ ವರ್ಷದ ಕ್ಯಾಲೆಂಡರ್ನ್ನು ಬಿಡುಗಡೆ ಮಾಡಲಾಗುತ್ತದೆ ಎಂದಿದ್ದಾರೆ. ಇದೇ ವೇಳೆ ಶಾಲೆಗಳು ಯಾವಾಗ ಪುನ ರಾರಂಭಗೊಳ್ಳುತ್ತದೆ ಎಂಬ ಪ್ರಶ್ನೆಗೆ ಮೌನತಾಳಿದ್ದಾರೆ. ಪಠ್ಯಕ್ರಮಗಳ ಗಾತ್ರ…
ಅಲ್ಪಸಂಖ್ಯಾತ ಪ್ರಾರ್ಥನಾ ಮಂದಿರಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಆಯೋಗ
June 1, 2020ಬೆಂಗಳೂರು, ಮೇ 31- ಕೊರೊನಾ ವೈರಸ್ ಲಾಕ್ಡೌನ್ 5.0 ಜಾರಿಯಾಗು ತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಅಲ್ಪಸಂಖ್ಯಾ ತರ ಪ್ರಾರ್ಥನಾ ಮಂದಿರಗಳನ್ನು ತೆರೆ ಯಲು ಅನುಮತಿ ನೀಡಿದ ಬೆನ್ನಲ್ಲೇ ರಾಜ್ಯ ಅಲ್ಪಸಂಖ್ಯಾತರ ಆಯೋಗ ಹೊಸ ಮಾರ್ಗ ಸೂಚಿ ಬಿಡುಗಡೆ ಮಾಡಿದೆ. ಜೂ. 8ರಿಂದ ಮಸೀದಿ, ದರ್ಗಾ ತೆರೆಯಲು ಅನುಮತಿ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಅಲ್ಪಸಂಖ್ಯಾತ ಆಯೋಗದಿಂದ ಮಾರ್ಗ ಸೂಚಿ ಬಿಡುಗಡೆ ಮಾಡಿದೆ. ಮಾರ್ಗಸೂಚಿಯಲ್ಲಿನ ಪ್ರಮುಖಾಂಶ ಗಳು: ಎಲ್ಲರೂ ಮನೆಯಲ್ಲೇ ಸ್ವಚ್ಛತೆ ಮಾಡಿ ಕೊಂಡು ಬರಬೇಕು, ಮಸೀದಿ ಆವರಣದಲ್ಲಿ…










