ಮೈಸೂರು

ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ ಸಿಎಂ ಯಡಿಯೂರಪ್ಪ
ಮೈಸೂರು

ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ ಸಿಎಂ ಯಡಿಯೂರಪ್ಪ

December 13, 2019

ಬೆಂಗಳೂರು,ಡಿ.12- ತೀವ್ರ ಹೃದಯ ಸಮಸ್ಯೆಯಿಂದಾಗಿ ಆಂಜಿಯೋಪ್ಲಾಸ್ಟ್ ಶಸ್ತ್ರ ಚಿಕಿತ್ಸೆಗೆ ಒಳಗಾದ ಮಾಜಿ ಸಿಎಂ ಸಿದ್ದ ರಾಮಯ್ಯರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಇಂದು ಸಂಜೆ 7 ಗಂಟೆಗೆ ಮಲ್ಲೇಶ್ವರಂನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ, ಸಿದ್ದರಾಮಯ್ಯರ ಯೋಗ ಕ್ಷೇಮ ವಿಚಾರಿಸಿ ಧೈರ್ಯ ತುಂಬಿದ್ದಾರೆ. ಈ ವೇಳೆ ಸಿಎಂ ಬಿ.ಎಸ್.ಯಡಿಯೂರಪ್ಪ ರೊಂದಿಗೆ ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮತ್ತಿತರರು ಉಪಸ್ಥಿತರಿದ್ದರು. ಕಾವೇರಿ ನಿವಾಸದಲ್ಲಿದ್ದ ಸಿದ್ದರಾಮಯ್ಯ ರಲ್ಲಿ ಬುಧವಾರ ಬೆಳಿಗ್ಗೆ…

ಪೌರತ್ವ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ
ಮೈಸೂರು

ಪೌರತ್ವ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

December 13, 2019

ನವದೆಹಲಿ,ಡಿ.12- ಎನ್‍ಡಿಎ ಸರ್ಕಾರದ ಮಹತ್ವದ ಕ್ರಮಗಳಲ್ಲೊಂ ದಾದ `ಪೌರತ್ವ (ತಿದ್ದುಪಡಿ) ಮಸೂದೆ’ಗೆ ಗುರುವಾರ ರಾತ್ರಿ ರಾಷ್ಟ್ರಪತಿಗಳ ಅಂಕಿ ತವೂ ಬಿದ್ದಿದೆ. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಎನ್‍ಸಿಎಫ್, ಎಡಪಕ್ಷಗಳು ಹಾಗೂ ಈಶಾನ್ಯ ರಾಜ್ಯಗಳಲ್ಲಿನ ಜನರ ತೀವ್ರ ವಿರೋಧದ ನಡುವೆಯೇ ಹೊಸ ಮಸೂದೆಯು ಕಾಯ್ದೆಯಾಗಿ ಜಾರಿಗೆ ಬಂದಿದೆ. ಗೃಹ ಸಚಿವ ಅಮಿತ್ ಷಾ, ಮಹತ್ವದ ಈ ಪೌರತ್ವ ತಿದ್ದುಪಡಿ ವಿಧೇಯಕವನ್ನು ಕಳೆದ ಸೋಮವಾರ ಲೋಕಸಭೆಯಲ್ಲಿ, ಬುಧವಾರ ರಾಜ್ಯ ಸಭೆಯಲ್ಲಿ ಮಂಡಿಸಿ ಎರಡೂ ಸದನಗಳ ಒಪ್ಪಿಗೆ ಪಡೆದಿದ್ದರು. ಇದೀಗ ಗುರುವಾರ ರಾತ್ರಿ…

ದೆಹಲಿಯಿಂದ ಬಂದ ನಂತರ ಸಂಪುಟ ವಿಸ್ತರಣೆ: ಬಿಎಸ್‍ವೈ
ಮೈಸೂರು

ದೆಹಲಿಯಿಂದ ಬಂದ ನಂತರ ಸಂಪುಟ ವಿಸ್ತರಣೆ: ಬಿಎಸ್‍ವೈ

December 13, 2019

ತುಮಕೂರು,ಡಿ.12-ಸಚಿವ ಸಂಪುಟ ವಿಸ್ತರಣೆ ಬಗ್ಗೆ ದೆಹಲಿಗೆ ಹೋಗಿ ಬಂದ ಮೇಲೆ ನಿರ್ಧಾರ ಮಾಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದು, ಎಂಟು ದಿನಗಳ ನಂತರ ಸಂಪುಟ ವಿಸ್ತರಣೆಯಾಗಲಿದೆ ಎಂದು ಗಡುವನ್ನೂ ನೀಡಿದ್ಧಾರೆ. ಕುಪ್ಪೂರು ಮಠದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಉಪ ಚುನಾ ವಣೆಯಲ್ಲಿ ಸೋತವರಿಗೆ ಅವಕಾಶ ನೀಡುವ ವಿಚಾರವಾಗಿ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಸ್ಪಷ್ಟ ಪಡಿಸಿದರು. ಇದೇ ವೇಳೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಡಿಸೆಂಬರ್ 20ರ ನಂತರ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ…

ಸರ್ಕಾರಿ ನೌಕರರ 4ನೇ ಶನಿವಾರ ರಜೆ ರದ್ದು
ಮೈಸೂರು

ಸರ್ಕಾರಿ ನೌಕರರ 4ನೇ ಶನಿವಾರ ರಜೆ ರದ್ದು

December 13, 2019

ಸಂಪುಟ ಸಭೆ ನಿರ್ಧಾರ ಜ.20ರಿಂದ 10 ದಿನ ಅಧಿವೇಶನ ಬೆಂಗಳೂರು, ಡಿ.12-ಸರ್ಕಾರಿ ನೌಕರರ 4ನೇ ಶನಿವಾರದ ರಜೆಯನ್ನು ರದ್ದುಪಡಿ ಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಸಂಪುಟ ಸಭೆ ತೀರ್ಮಾನಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರಿ ಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಅವರು, ರಾಜ್ಯದ ಎಲ್ಲಾ ಕೋರ್ಟ್‍ಗಳಲ್ಲಿನ ಪ್ರಕರಣಗಳ ಸಮನ್ವಯ ಸಾಧಿಸಲು ಭಾಗಿಯಾಗುವ ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ 4ನೇ ಶನಿವಾರದ ರಜೆ ರದ್ದುಪಡಿಸಲಾಗಿದ್ದು, ಅದಕ್ಕಾಗಿ 2019ರ ಜುಲೈ 13ರ…

ಭಾರೀ ಮಳೆಯಿಂದ ಕುಸಿದಿದ್ದ ಚಾ.ಬೆಟ್ಟದ ರಸ್ತೆಗೆ ತಡೆಗೋಡೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿ
ಮೈಸೂರು

ಭಾರೀ ಮಳೆಯಿಂದ ಕುಸಿದಿದ್ದ ಚಾ.ಬೆಟ್ಟದ ರಸ್ತೆಗೆ ತಡೆಗೋಡೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿ

December 13, 2019

ಮೈಸೂರು, ಡಿ.12(ಆರ್‍ಕೆ)- ಭಾರೀ ಮಳೆಯಿಂದಾಗಿ ಕುಸಿದಿದ್ದ ಮೈಸೂರಿನ ಚಾಮುಂಡಿಬೆಟ್ಟದ ವ್ಯೂ ಪಾಯಿಂಟ್ ಮತ್ತು ನಂದಿ ವಿಗ್ರಹ ನಡುವಿನ ರಸ್ತೆಗೆ ತಡೆ ಗೋಡೆ ನಿರ್ಮಾಣ ಕಾಮಗಾರಿ ತ್ವರಿತಗತಿ ಯಲ್ಲಿ ನಡೆಯುತ್ತಿದೆ. ಅಕ್ಟೋಬರ್ ಮಾಹೆ ಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬೆಟ್ಟ ದಿಂದ ಅಧಿಕ ಪ್ರಮಾಣದ ನೀರು ಹರಿದು ಬಂದ ಪರಿಣಾಮ ನಂದಿ ಪ್ರತಿಮೆ ಸಮೀಪ ಸುಮಾರು 40 ಅಡಿ ಅಗಲದ ರಸ್ತೆ ಕುಸಿ ದಿದ್ದರಿಂದ ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ…

ಕೇಂದ್ರ ಸರ್ಕಾರಿ ನೌಕರರ ಪ್ರವರ್ಗದಡಿ ಒಬ್ಬ ವ್ಯಕ್ತಿಗೇ ಮುಡಾದಿಂದ 3 ನಿವೇಶನ ಮಂಜೂರು!
ಮೈಸೂರು

ಕೇಂದ್ರ ಸರ್ಕಾರಿ ನೌಕರರ ಪ್ರವರ್ಗದಡಿ ಒಬ್ಬ ವ್ಯಕ್ತಿಗೇ ಮುಡಾದಿಂದ 3 ನಿವೇಶನ ಮಂಜೂರು!

December 13, 2019

ಜೇಷ್ಠತೆ ಇಲ್ಲದೆ 20 ವರ್ಷಗಳಿಂದ ಅರ್ಜಿ ಸಲ್ಲಿಸಿ ಸುಮಾರು 1 ಲಕ್ಷಕ್ಕೂ ಹೆಚ್ಚು ಮಂದಿ ನಿವೇಶನಕ್ಕಾಗಿ ಕಾಯುತ್ತಿರುವಾಗ ಒಬ್ಬನೇ ವ್ಯಕ್ತಿಗೆ ಬರೋಬ್ಬರಿ 3 ನಿವೇಶನ ಮಂಜೂರು ಮಾಡಿರುವ ಮುಡಾ ನಡೆಗೆ ನಾಗರಿಕರ ತೀವ್ರ ಆಕ್ರೋಶ = ಎಸ್.ಟಿ.ರವಿಕುಮಾರ್ ಮೈಸೂರು, ಡಿ.12- ಮೈಸೂರು ನಗರದಲ್ಲಿ ಮುಡಾದಿಂದ ಒಂದು ನಿವೇ ಶನಕ್ಕೂ ದುಸ್ಸಾಹಸ ಮಾಡಬೇಕಲ್ಲದೆ, ಕನಿಷ್ಠ 20ರಿಂದ 25 ವರ್ಷ ಕಾಯಬೇಕು. ಆದರೆ ಇಲ್ಲೊಬ್ಬ ಮಹಾಶಯರಿಗೆ ಒಂದಲ್ಲ, ಎರಡಲ್ಲಾ ಬರೋಬ್ಬರಿ 3 ನಿವೇಶನ ಗಳನ್ನು ಮುಡಾ ಮಂಜೂರು ಮಾಡಿದೆ. ಅಚ್ಚರಿ…

`ಅಚ್ಚ ಕನ್ನಡ’ದಲ್ಲೇ ಮಾತನಾಡುತ್ತಾ ಭಾಷೆ ಬೆಳೆಸಿರಿ: ಶ್ರವಣಬೆಳಗೊಳ ಶ್ರೀಗಳ ಕರೆ
ಮೈಸೂರು

`ಅಚ್ಚ ಕನ್ನಡ’ದಲ್ಲೇ ಮಾತನಾಡುತ್ತಾ ಭಾಷೆ ಬೆಳೆಸಿರಿ: ಶ್ರವಣಬೆಳಗೊಳ ಶ್ರೀಗಳ ಕರೆ

December 13, 2019

ಮೈಸೂರು, ಡಿ.12(ಎಸ್‍ಬಿಡಿ)- ಅಚ್ಚ ಕನ್ನಡದಲ್ಲಿಯೇ ಮಾತನಾಡುತ್ತಾ ಭಾಷೆ ಬೆಳೆಸಬೇಕು ಎಂದು ಶ್ರವಣಬೆಳಗೊಳದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಮೈಸೂರು ವಿವಿ, ಹಂಪಿ ಕನ್ನಡ ವಿವಿ, ನವದೆಹಲಿ ಸಾಹಿತ್ಯ ಅಕಾಡೆಮಿ ಹಾಗೂ ಶ್ರವಣಬೆಳಗೊಳದ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ಸಹಯೋಗದಲ್ಲಿ, ಮೈಸೂರಿನ ಮಾನಸ ಗಂಗೋತ್ರಿ ಸೆನೆಟ್ ಭವನದಲ್ಲಿ ಏರ್ಪಡಿ ಸಿರುವ 2 ದಿನಗಳ `ಅಂತಾರಾಷ್ಟ್ರೀಯ ಪ್ರಾಕೃತ ಸಮಾವೇಶ’ದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ, ಅವರು ಮಾತನಾಡಿದರು. ಇಂಗ್ಲೀಷ್ ಪ್ರಭಾವದಿಂದ ಜನ ಕನ್ನಡ ಭಾಷೆಯನ್ನೇ ಮರೆತು…

ದಸರಾ ಕ್ರೀಡಾಕೂಟದ ವಿಜೇತರಿಗೆ ಶೀಘ್ರ ನಗದು ಬಹುಮಾನ ನೀಡಲು ಮುಂದಾದ ಇಲಾಖೆ
ಮೈಸೂರು

ದಸರಾ ಕ್ರೀಡಾಕೂಟದ ವಿಜೇತರಿಗೆ ಶೀಘ್ರ ನಗದು ಬಹುಮಾನ ನೀಡಲು ಮುಂದಾದ ಇಲಾಖೆ

December 13, 2019

ಕ್ರೀಡಾ ಪ್ರಾಧಿಕಾರದ ಹಣದಿಂದ ಬಹುಮಾನದ ಮೊತ್ತ ವಿತರಣೆಗೆ ನಿರ್ಧಾರ ಎರಡು ತಿಂಗಳಿಂದ ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದ ಕ್ರೀಡಾ ಇಲಾಖೆ ಮೈಸೂರು, ಡಿ.12(ಎಂಟಿವೈ)- ದಸರಾ ಕ್ರೀಡಾಕೂಟ ಮುಗಿದು ಎರಡು ತಿಂಗಳಾದರೂ ವಿಜೇತರಿಗೆ ನಗದು ಬಹುಮಾನ ನೀಡದೆ ನಿರ್ಲಕ್ಷಿಸಿದ್ದ ಯುವ ಸಬಲೀಕರಣ ಕ್ರೀಡಾ ಇಲಾಖೆ `ಮೈಸೂರು ಮಿತ್ರ’ನಲ್ಲಿ ಪ್ರಕಟವಾದ ಸುದ್ದಿಯಿಂದ ಕೊನೆಗೂ ಎಚ್ಚೆತ್ತುಕೊಂಡು, ಪರ್ಯಾಯ ಮಾರ್ಗದಲ್ಲಿ ಬಹುಮಾನದ ಮೊತ್ತ ವಿತರಿಸಲು ಮುಂದಾಗಿದೆ. ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅ.1ರಿಂದ 6ರವರೆಗೆ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂ ಗಣ ಸೇರಿದಂತೆ ವಿವಿಧೆಡೆ…

ರಂಗಾಯಣ ನಿರ್ದೇಶಕರಿಲ್ಲದಿದ್ದರೂ `ಬಹುರೂಪಿ’ಗೆ ಭರ್ಜರಿ ತಯಾರಿ
ಮೈಸೂರು

ರಂಗಾಯಣ ನಿರ್ದೇಶಕರಿಲ್ಲದಿದ್ದರೂ `ಬಹುರೂಪಿ’ಗೆ ಭರ್ಜರಿ ತಯಾರಿ

December 13, 2019

ನಾಟಕ ಪ್ರದರ್ಶನಕ್ಕಾಗಿ ಅರ್ಜಿ ಸಲ್ಲಿಸಿರುವ 60 ತಂಡಗಳು 2 ಕನ್ನಡ ಸಿನಿಮಾ ಸೇರಿದಂತೆ 16 ಚಲನಚಿತ್ರಗಳ ಪ್ರದರ್ಶನ ಮೈಸೂರು: ರಂಗಾಯಣದ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಒಂದಾದ `ಬಹುರೂಪಿ’ ರಾಷ್ಟ್ರೀಯ ನಾಟಕೋತ್ಸವಕ್ಕೆ ಒಂದು ತಿಂಗಳು ಮಾತ್ರ ಬಾಕಿಯಿದ್ದು, ರಂಗಾ ಯಣ ನಿರ್ದೇಶಕರ ಅನುಪಸ್ಥಿತಿ ನಡುವೆಯೂ ಭರ್ಜರಿ ತಯಾರಿ ಮಾಡಿ ಕೊಳ್ಳಲಾಗು ತ್ತಿದೆ. ನಿರ್ದೇಶಕರು ನೇಮಕಗೊಂಡ ನಂತರ ವಷ್ಟೇ ಪ್ರದರ್ಶನಗೊಳ್ಳಲಿರುವ ನಾಟಕ ಗಳ ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ. ಬಿಜೆಪಿ ಸರ್ಕಾರ ಆರಂಭದಲ್ಲೇ ಮೈಸೂರು, ಧಾರವಾಡ, ಕಲಬುರಗಿ, ಶಿವಮೊಗ್ಗ ರಂಗಾ ಯಣದ ನಿರ್ದೇಶಕರನ್ನು…

ಕ್ಯಾನ್ಸರ್‍ಗೆ ಬದಲಾದ ಜೀವನ ಶೈಲಿಯೂ ಕಾರಣ
ಮೈಸೂರು

ಕ್ಯಾನ್ಸರ್‍ಗೆ ಬದಲಾದ ಜೀವನ ಶೈಲಿಯೂ ಕಾರಣ

December 13, 2019

ಮೈಸೂರು, ಡಿ.12(ಪಿಎಂ)- ಕ್ಯಾನ್ಸರ್ ಸೇರಿದಂತೆ ಸಾಂಕ್ರಾಮಿಕವಲ್ಲದ ಮಾರಕ ಕಾಯಿಲೆಗಳ ಹೆಚ್ಚಳಕ್ಕೆ ಬದಲಾಗುತ್ತಿರುವ ಜೀವನ ಶೈಲಿಯೂ ಪ್ರಮುಖ ಕಾರಣ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್‍ಕುಮಾರ್ ಅಭಿಪ್ರಾಯಪಟ್ಟರು. ಮೈಸೂರು ವಿವಿ ಮಾನಸ ಗಂಗೋ ತ್ರಿಯ ವಿಜ್ಞಾನ ಭವನದಲ್ಲಿ ವಿವಿಯ ಎನ್‍ಎಸ್‍ಎಸ್ ಘಟಕ, ಯುವ ಸಬಲೀ ಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂ ರಿನ ಯೆನೆಪೋಯ ವಿವಿ ಸಂಯುಕ್ತಾಶ್ರಯ ದಲ್ಲಿ ಸಮಾಜದಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಮೈಸೂರು ವಿವಿ ವ್ಯಾಪ್ತಿಯ ಕಾಲೇಜುಗಳ ಎನ್‍ಎಸ್‍ಎಸ್ ಅಧಿಕಾರಿಗಳಿಗೆ ಗುರುವಾರ…

1 754 755 756 757 758 1,611
Translate »