ಗೊಮ್ಮಟಗಿರಿ,ನ.24(ಎಂಟಿವೈ)- ಹುಣ ಸೂರು ತಾಲೂಕಿನ ಬೆಟ್ಟದೂರು ಗ್ರಾಮದ ಗೊಮ್ಮಟಗಿರಿಯಲ್ಲಿಯಲ್ಲಿರುವ ಬಾಹು ಬಲಿ ಶ್ರೀ ಗೊಮ್ಮಟೇಶ್ವರ ಮೂರ್ತಿಗೆ ಭಾನುವಾರ 70ನೇ ಮಸ್ತಕಾಭಿಷೇಕ ಅಪಾರ ಸಂಖ್ಯೆ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಶ್ರೀ ಗೊಮ್ಮಟಗಿರಿ ಕ್ಷೇತ್ರ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಮಸ್ತಕಾಭಿಷೇಕ ದಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ಜೈನ ಸಮುದಾಯ ಸೇರಿದಂತೆ ಇನ್ನಿತರ ಧರ್ಮಿ ಯರು ಪಾಲ್ಗೊಂಡು ಶಾಂತ ಹಾಗೂ ವೈರಾಗ್ಯ ಮೂರ್ತಿಗೆ ಜೈಕಾರ ಹಾಕಿ ಭಕ್ತಿ ಭಾವದಿಂದ ನಮಿಸಿದರು. ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ದಿಗಂ ಬರ ಜೈನ…
ಗುರುವನ್ನು ಗೆದ್ದವರು ಗುರಿಯನ್ನೂ ಗೆಲ್ಲುತ್ತಾರೆ
November 25, 2019ಮೈಸೂರು, ನ. 24- ಗುರು ಮೆಚ್ಚುಗೆ ಯನ್ನು ಗಳಿಸಿ ಅರಿವನ್ನು ಪಡೆದು ಗುರುವನ್ನು ಗೆದ್ದವರು ಗುರಿಯನ್ನೂ ಗೆಲ್ಲುತ್ತಾರೆಂದು ಸಾಹಿತಿ ಬನ್ನೂರು ಕೆ. ರಾಜು ಅಭಿಪ್ರಾಯಪಟ್ಟರು.ನಗರದ ಎನ್ಆರ್ ಮೊಹಲ್ಲಾದ ಬಾಲಕಿ ಯರ ಸರ್ಕಾರಿ ಪ್ರೌಢಶಾಲೆ ಮತ್ತು ಕಾವೇರಿ ಬಳಗ ಹಾಗೂ ಹಿರಣ್ಮಯಿ ಪ್ರತಿ ಷ್ಠಾನ ಒಟ್ಟಾಗಿ ರಾಜ್ಯೋತ್ಸವದ ಅಂಗ ವಾಗಿ ಶಾಲೆಯಲ್ಲಿ ಆಯೋಜಿಸಿದ್ದ ಸಾಧಕ ಶಿಕ್ಷಕರಿಗೆ ಸನ್ಮಾನ ಮತ್ತು ನುಡಿ ಸಂಭ್ರಮ ಸಮಾರಂಭವನ್ನು ಗಿಡಕ್ಕೆ ನೀರೆರೆಯುವು ದರ ಮೂಲಕ ಉದ್ಘಾಟಿಸಿ, ಮಾತನಾಡಿದರು. ಇದೊಂದು ವಿಶಿಷ್ಟ ಕಾರ್ಯಕ್ರಮ ವಾಗಿದ್ದು, ನುಡಿ…
ನಿರಂತರ ಅಭ್ಯಾಸ ವ್ಯಕ್ತಿಯನ್ನು ಪರಿಪೂರ್ಣನನ್ನಾಗಿಸುತ್ತದೆ ಎನ್ಎಸ್ಡಿಸಿ ಮಾಜಿ ಸಲಹೆಗಾರ ಎಸ್.ವಿ.ವೆಂಕಟೇಶ್
November 25, 2019ಮೈಸೂರು,ನ.24(ವೈಡಿಎಸ್)-ನಿರಂತರ ಅಭ್ಯಾಸವು ವ್ಯಕ್ತಿಯನ್ನು ಪರಿ ಪೂರ್ಣನನ್ನಾಗಿಸುತ್ತದೆ ಎಂಬುದನ್ನು ವಿದ್ಯಾರ್ಥಿಗಳು ಅರಿತು, ಸತತ ಪ್ರಯತ್ನದಿಂದ ಸಾಧನೆಗೈಯ್ಯಬೇಕು ಎಂದು ಕೇಂದ್ರ ಸರ್ಕಾರದ ಎನ್ಎಸ್ಡಿಸಿಯ ಮಾಜಿ ಸಲಹೆಗಾರ ಎಸ್.ವಿ.ವೆಂಕಟೇಶ್ ಸಲಹೆ ನೀಡಿದರು. ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಕರಾಮುವಿವಿ ಹಾಗೂ ಆರ್ಐಐಐಟಿ ವತಿಯಿಂದ ಆಯೋಜಿಸಿದ್ದ `ಆನ್ ಲರ್ನ್ ಟು ಲೀಡ್’ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಕನಸು ಕಾಣಬೇಕು. ಅದನ್ನು ನನಸಾಗಿಸಲು ಪ್ರಯತ್ನಿಸಬೇಕು. ನಾನು ಏನಾಗಬೇಕೆಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡಿದಾಗ ಮಾತ್ರ ನಮ್ಮ ಸಾಧನೆಯು ನಿರ್ಧಾರವಾಗಿರುತ್ತದೆ. ಈ ರೀತಿಯ…
ಸ್ತ್ರೀವಾದ ಚಿಂತನೆ ಮತ್ತು ಹೋರಾಟ ಕೃತಿ ಬಿಡುಗಡೆ
November 25, 2019ಮೈಸೂರು,ನ.24(ಎಂಟಿವೈ)- ಸ್ತ್ರೀವಾದ ಶಸ್ತ್ರಾಸ್ತ್ರ ಯುದ್ಧವಲ್ಲ. ಶಾಂತಿ, ಕರುಣೆ ಯಿಂದ ರೂಪುಗೊಂಡಿರುವ ಹೋರಾಟ. ಸಮಾಜದಲ್ಲಾಗುವ ಎಲ್ಲಾ ಬೆಳವಣಿಗೆ ಯನ್ನು ನಿರ್ಣಯಿಸುವ ಅರ್ಹತೆಯಲ್ಲಿ ಮಹಿಳೆಯರಿಗೂ ಪಾಲು ಸಿಗುವವರೆಗೂ ಹೋರಾಟ ಮುಂದುವರಿಸುವ ಅಗತ್ಯವಿದೆ ಎಂದು ಹಿರಿಯ ಪತ್ರಕರ್ತೆ ಮತ್ತು ಲೇಖಕಿ ಡಾ.ವಿಜಯಮ್ಮ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಕಲಾಮಂದಿರದ ಮನೆ ಯಂಗಳದಲ್ಲಿ ಅಭಿರುಚಿ ಪ್ರಕಾಶನ ಹಾಗೂ ಸಮತಾ ಅಧ್ಯಯನ ಕೇಂದ್ರದ ವತಿಯಿಂದ ಭಾನುವಾರ ನಡೆದ ಶ್ರೀಮತಿ ಎಚ್.ಎಸ್. ಅವರ `ಸ್ತ್ರೀವಾದ ಚಿಂತನೆ ಮತ್ತು ಹೋರಾಟ’ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಪಿತೃ ಪ್ರಧಾನವಾಗಿರುವ…
ಬಿಬಿಎಂಪಿಯಲ್ಲಿ ನೂರಾರು ಕೋಟಿಯ ಬೃಹತ್ ಭ್ರಷ್ಟಾಚಾರ: 254 ಇಂಜಿನಿಯರ್ಸ್ಗೆ ಹಿಂಬಡ್ತಿ ಆತಂಕ
November 24, 2019ಮೈಸೂರು,ನ.23-ಬೆಂಗಳೂರು ಬೃಹತ್ ನಗರಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯ 3 ವಿಧಾನಸಭಾ ಕ್ಷೇತ್ರಗಳಲ್ಲಿ ದಶಕದ ಹಿಂದೆ ನಡೆದಿದ್ದ ಕಾಮಗಾರಿ ಸಂಬಂಧಿತ ನೂರಾರು ಕೋಟಿ ರೂ. ಭ್ರಷ್ಟಾಚಾರ ಪ್ರಕರಣ ಮತ್ತೆ ಸುದ್ದಿಯಾಗಿದ್ದು, ಇದರಲ್ಲಿ ಭಾಗಿಯಾಗಿ ರುವ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮಕ್ಕೆ ಸರ್ಕಾರ ಆದೇಶಿ ಸಿದೆ. ಈ ಮೂಲಕ ಮೈಸೂರು ನಗರ ಪಾಲಿಕೆ ವ್ಯಾಪ್ತಿಯಲ್ಲೂ ಕೇಳಿಬರುತ್ತಿರುವ ಅಕ್ರಮ ಆರೋಪಕ್ಕೂ ತಾರ್ಕಿಕ ಅಂತ್ಯ ಸಿಗಬಹುದೆಂಬ ನಿರೀಕ್ಷೆ ಗಟ್ಟಿಯಾದಂತಾಗಿದೆ. ಬಿಬಿಎಂಪಿ ವ್ಯಾಪ್ತಿಯ ಮಲ್ಲೇಶ್ವರ, ರಾಜ ರಾಜೇಶ್ವರಿನಗರ ಹಾಗೂ ಗಾಂಧಿನಗರ ಕ್ಷೇತ್ರದಲ್ಲಿ 2008ರಿಂದ 2012ರ…
ನಿಷ್ಪಕ್ಷಪಾತ ತನಿಖೆಗೆ ಎಸ್ಡಿಪಿಐ ಆಗ್ರಹ
November 24, 2019ಮೈಸೂರು,ನ.23(ಪಿಎಂ)-ಎನ್ಆರ್ ಕ್ಷೇತ್ರದ ಶಾಸಕ ತನ್ವೀರ್ಸೇಠ್ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಸಂಬಂಧ ನಿಷ್ಪಕ್ಷಪಾತ ತನಿಖೆಯಾಗಬೇಕು. ಆದರೆ ಈ ಘಟನೆ ಯನ್ನು ಎಸ್ಡಿಪಿಐ ಪಕ್ಷದೊಂದಿಗೆ ತಳುಕು ಹಾಕಿ ಲಾಭ ಪಡೆಯುವ ಷಡ್ಯಂತರ ನಡೆಯುತ್ತಿದೆ ಎಂದು ಎಸ್ಡಿಪಿಐ (ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಡಿಪಿಐಗೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲ. ಆದರೆ ಸ್ಥಾಪಿತ ಹಿತಾಸಕ್ತಿಗಳು ಈ ಪ್ರಕರಣದ ಸತ್ಯವನ್ನು ಮುಚ್ಚಿಟ್ಟು…
ಜೆಎನ್ಯು ವಿದ್ಯಾರ್ಥಿಗಳ ಮೇಲೆ ಪೊಲೀಸರ ದೌರ್ಜನ್ಯ ಖಂಡಿಸಿ ಮೈಸೂರಲ್ಲಿ ಪ್ರತಿಭಟನೆ
November 24, 2019ಮೈಸೂರು,ನ.23(ಎಂಟಿವೈ)- ದೆಹಲಿಯ ಜೆಎನ್ಯು ವಿದ್ಯಾರ್ಥಿಗಳ ಮೇಲೆ ಪೆÇಲೀಸರು ನಡೆಸಿರುವ ದೌರ್ಜನ್ಯ ಖಂಡಿಸಿ ಮೈಸೂರು ವಿಶ್ವ ವಿದ್ಯಾನಿಲಯ ಸಂಶೋಧಕರ ಸಂಘ ದಲಿತ ವಿದ್ಯಾರ್ಥಿ ಒಕ್ಕೂಟದ ಸದಸ್ಯರು ಶನಿವಾರ ಪ್ರತಿಭಟನೆ ನಡೆಸಿದರು.ಮೈಸೂರು ವಿಶ್ವವಿದ್ಯಾನಿಲಯದ ಗ್ರಂಥಾಲಯದ ಮುಂಭಾಗವಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಧರಣಿ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಸರ್ಕಾರ ಎಲ್ಲೆಡೆ ವಿದ್ಯಾರ್ಥಿ ಗಳ ಭವಿಷ್ಯ ಹಾಳು ಮಾಡುವತ್ತ ಮುಂದಾ ಗಿದೆ. ಕೇಂದ್ರ ಸರ್ಕಾರ ಜೆಎನ್ಯು ವಿದ್ಯಾರ್ಥಿಗಳ ಮೇಲೆ ಪೂರ್ವಾಗ್ರಹ ಪೀಡಿತವಾಗಿ ದೌರ್ಜನ್ಯ ನಡೆಸುತ್ತಿದೆ. ಉದ್ದೇಶಪೂರ್ವಕವಾಗಿ ಅಲ್ಲಿನ ವಿದ್ಯಾರ್ಥಿ ಗಳನ್ನೇ ಗುರಿಯಾಗಿಸಿಕೊಂಡು…
ಕಲುಷಿತ ನೀರು ಪೂರೈಕೆ: ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ
November 24, 2019ಮೈಸೂರು, ನ.23- ಕಲುಷಿತ ನೀರು ಸೇವಿಸಿ, ಹಲವರು ಅಸ್ವಸ್ಥಗೊಂಡಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರುಣಾ ಹೋಬಳಿ ಹಡಜನ ಗ್ರಾಮಸ್ಥರು ಆರೋಪಿಸಿದ್ದಾರೆ. ಗಂಭೀರ ಸಮಸ್ಯೆ ಬಗ್ಗೆ ಪತ್ರಿಕಾ ಪ್ರಕ ಟಣೆ ಮೂಲಕ ಆತಂಕ ವ್ಯಕ್ತಪಡಿಸಿರುವ ಗ್ರಾಮಸ್ಥರು, ಅಸಮರ್ಪಕ ನಿರ್ವಹಣೆ ಯಿಂದಾಗಿ ಹಡಜನ ಗ್ರಾಮಕ್ಕೆ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಪರಿಣಾಮ ಮಕ್ಕಳು ಸೇರಿದಂತೆ 50ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡು, ಚಿಕಿತ್ಸೆ ಪಡೆದಿದ್ದಾರೆ. ಇವ ರಲ್ಲಿ ಕೆಲವರು ಮೈಸೂರಿನ ಕೆ.ಆರ್.ಆಸ್ಪ ತ್ರೆಗೆ ದಾಖಲಾಗಿ, ಚೇತರಿಸಿಕೊಂಡಿದ್ದಾರೆ. ಕಲುಷಿತ ನೀರು…
ಸಾವಯವ ಕೃಷಿ ಮಹತ್ವ ತಿಳಿಸಿದ ಬ್ಯಾತಹಳ್ಳಿ ಮಾದಪ್ಪ
November 24, 2019ಮೈಸೂರು,ನ.23(ಪಿಎಂ)-ಮೈಸೂರಿನ ಜೆಪಿ ನಗ ರದ ಸಿದ್ಧಲಿಂಗೇಶ್ವರ ಬಡಾವಣೆ ನಿವಾಸಿ ಬ್ಯಾತಹಳ್ಳಿ ಮಾದಪ್ಪ ತಮ್ಮ 1 ಎಕರೆ ಜಮೀನಿನಲ್ಲಿ ಹಣ್ಣು, ತರಕಾರಿ ಬೆಳೆದು ಯಶಸ್ವಿಯಾಗಿ ದ್ದಾರೆ ಎಂದು ನಾಗನಹಳ್ಳಿ ಸಾವ ಯವ ಕೃಷಿ ಸಂಶೋಧನಾ ಕೇಂದ್ರದ ಡಾ.ಹೆಚ್.ಸಿ.ಗೋವಿಂದರಾಜು ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ತಾಲೂಕಿನ ಬ್ಯಾತಹಳ್ಳಿಯಲ್ಲಿ 6 ಎಕರೆ ಜಮೀನು ಹೊಂದಿ ರುವ ಮಾದಪ್ಪ 1 ಎಕರೆಯಲ್ಲಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಬಾಳೆ, ತೆಂಗು, ಗಜನಿಂಬೆ, ಚಕ್ಕೊತ, ಸಪೋಟ ಸೇರಿದಂತೆ…
ಹೊಸಕೋಟೆ ಕೈ ಅಭ್ಯರ್ಥಿ ಟೀಕಿಸಿದ ಎಂಟಿಬಿ ನಾಗರಾಜ್ ಕ್ಷಮೆಗೆ ಕೆಪಿಸಿಸಿ ಮಹಿಳಾ ಅಧ್ಯಕ್ಷರ ಆಗ್ರಹ
November 24, 2019ಮೈಸೂರು, ನ.23(ಪಿಎಂ)-ಹೊಸಕೋಟೆ ವಿಧಾನಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಅವರ ಬಗ್ಗೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಲಘುವಾಗಿ ಮಾತ ನಾಡಿದ್ದಾರೆ ಎಂದು ಖಂಡಿಸಿದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಎಂಟಿಬಿ ನಾಗರಾಜ್ ಅವರು ಕೂಡಲೇ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ಚುನಾವಣಾ ಪ್ರಚಾರ ಮಾಡುತ್ತಿದ್ದ ಎಂಟಿಬಿ ನಾಗರಾಜ್ `ಮಹಿಳೆಯಿಂದ ಏನು ಅಭಿವೃದ್ಧಿ ಮಾಡಲು ಸಾಧ್ಯ’ ಎಂದು ಕಾಂಗ್ರೆಸ್…










