ಮೈಸೂರು, ಅ. 28(ಆರ್ಕೆ)- ಮೈಸೂರು-ಹೈದರಾಬಾದ್ ನಡುವೆ ನಿತ್ಯ ಮೂರನೇ ವಿಮಾನ ಭಾನುವಾರದಿಂದ ಸೇವೆ ಆರಂಭಿಸಿದೆ. ಇಂಡಿಗೋ ಏರ್ಲೈನ್ಸ್ ಸಂಸ್ಥೆಯು ಮೈಸೂರಿನಿಂದ ಹೈದರಾಬಾದ್ಗೆ ನಿತ್ಯ ನೇರ ವಿಮಾನ ಹಾರಾಟ ಸೇವೆ ಆರಂಭಿಸಿದ್ದು, ಭಾನುವಾರ ಸಂಜೆ ಸಂಸದ ಪ್ರತಾಪ್ ಸಿಂಹ ಅವರು ಹಸಿರು ನಿಶಾನೆ ತೋರುವ ಮೂಲಕ ವಿಮಾನ ಹಾರಾಟಕ್ಕೆ ಚಾಲನೆ ನೀಡಿದರು. ಈಗಾಗಲೇ ಚೆನ್ನೈ ಮಾರ್ಗವಾಗಿ ಒಂದು ಹಾಗೂ ನೇರವಾಗಿ ಮತ್ತೊಂದು ಮೈಸೂರು-ಹೈದರಾಬಾದ್ ನಡುವೆ ಎರಡು ವಿಮಾನಗಳು ಹಾರಾಡುತ್ತಿದ್ದು, ಅವುಗಳ ಜೊತೆಗೆ ಇಂಡಿಗೋ ಮೂರನೇ ವಿಮಾನ ಸೇರ್ಪಡೆಯಾಗಿದೆ. 72…
ಈ ಬಾರಿ 64 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ
October 29, 2019ಬೆಂಗಳೂರು,ಅ.28(ಕೆಎಂಶಿ)- ಮೈಸೂ ರಿನ ಶಿಕ್ಷಣದಲ್ಲಿ ಡಾ. ಚಿದಾನಂದಗೌಡ, ಶಿಲ್ಪಕಲೆ ವಿ.ಎ.ದೇಶಪಾಂಡೆ, ಯೋಗ ಪಟು ಖುಷಿ, ರಂಗಭೂಮಿ ಡಾ. ಹೆಚ್.ಕೆ. ರಾಮನಾಥ್, ಚಾಮರಾಜನಗರ ಜಾನ ಪದ ದೊಡ್ಡಗವಿ ಬಸಪ್ಪ, ಕೊಡಗಿನ ಕ್ರೀಡೆ ಯಲ್ಲಿ ಚೇನಂಡ ಎ. ಕುಟ್ಟಪ್ಪ, ಸಂಕೀರ್ಣ ದಲ್ಲಿ ಲೆ.ಜ. ವಿ.ಎನ್. ಪ್ರಸಾದ್, ನ್ಯಾಯ ಮೂರ್ತಿ ಎನ್. ಕುಮಾರ್, ಪ್ರೊಫೆಸರ್ ಟಿ.ಶಿವಣ್ಣ, ಡಾ.ಮುದ್ದುಮೋಹನ್, ಭಾರ್ಗವಿ ನಾರಾಯಣ್, ಪ್ರೊಫೆಸರ್ ಬಿ. ರಾಜಶೇಖರಪ್ಪ, ಸಾಲುಮರದ ವೀರಾ ಚಾರ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 64 ಗಣ್ಯರು ಮತ್ತು…
3.30 ಕೋಟಿ ರೂ. ವೆಚ್ಚದಲ್ಲಿ ಪುನರುಜ್ಜೀವನಗೊಳ್ಳುತ್ತಿದೆ ತಿ.ನ.ಪುರದ ಪುರಾತನ ಶ್ರೀ ಅಗಸ್ತ್ಯೇಶ್ವರ ದೇವಾಲಯ
October 29, 2019ಮೈಸೂರು, ಅ.28-ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಹಲವು ಪುರಾತನ ದೇವಾಲಯ, ಪ್ರವಾಸಿ ತಾಣ ಹಾಗೂ ಪಾರಂಪರಿಕ ಕಟ್ಟಡ ಮತ್ತು ಸ್ಮಾರಕಗಳು ದೇಶ-ವಿದೇಶಗಳ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಅವುಗಳನ್ನು ಸಂರಕ್ಷಿಸಿ ನಿರ್ವಹಣೆ ಮಾಡುವ ಜತೆಗೆ ಅಭಿವೃದ್ಧಿಗೊಳಿಸುವುದು ಜಿಲ್ಲಾಡಳಿ ತಕ್ಕೆ ಸವಾಲಾಗಿದೆ. ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪಾರಂಪರಿಕ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಗಳು ಜಂಟಿಯಾಗಿ ಮೂಲ ಸ್ವರೂಪಕ್ಕೆ ಧಕ್ಕೆ ಯಾಗದಂತೆ ಈ ಪುರಾತನ ಸ್ಮಾರಕಗಳನ್ನು ಪುನರು ಜ್ಜೀವನಗೊಳಿಸಿ ಸಂರಕ್ಷಿಸಲು ಮುಂದಾಗಿವೆ. ಮೈಸೂರು ಜಿಲ್ಲೆಯ ತಿ.ನರಸೀಪುರವೆಂದು ಕರೆ ಯುವ ತಿರಮಕೂಡಲು ನರಸೀಪುರವು…
ದೀಪಾವಳಿ ಪ್ರಯುಕ್ತ 10 ಲಕ್ಷ ರೂ. ನೋಟುಗಳಿಂದ ಬಾಲ ತ್ರಿಪುರಸುಂದರಿ ಅಮ್ಮನಿಗೆ ಅಲಂಕಾರ
October 29, 2019ಮೈಸೂರು, ಅ.28(ಆರ್ಕೆಬಿ)- ಬೆಳಕಿನ ಹಬ್ಬ ದೀಪಾ ವಳಿ ಅಂಗವಾಗಿ ಮೈಸೂರಿನ ದೇವರಾಜ ಮೊಹಲ್ಲಾದ ದಿವಾನ್ಸ್ ರಸ್ತೆಯ ಅಮೃತೇಶ್ವರ ದೇವಸ್ಥಾನದಲ್ಲಿ ಬಾಲ ತ್ರಿಪುರ ಸುಂದರಿ ಅಮ್ಮನವರಿಗೆ ಕರೆನ್ಸಿ ನೋಟುಗಳಿಂದ ಅಲಂಕರಿಸಲಾಗಿದ್ದು, ಇದಕ್ಕಾಗಿ 10 ಲಕ್ಷ ರೂ.ಗಳ ನೋಟುಗಳನ್ನು ಬಳಸಲಾಗಿದೆ. ಪ್ರತಿ ದೀಪಾವಳಿ ಸಂದರ್ಭದಲ್ಲಿ ತ್ರಿಪುರಸುಂದರಿ ಅಮ್ಮ ನವರಿಗೆ ಹಣದಿಂದ ಅಲಂಕಾರ ಮಾಡುವುದು ಹಿಂದಿ ನಿಂದ ಬಂದಿರುವ ಸಂಪ್ರದಾಯ. ಭಕ್ತರು ನೀಡಿದ ಹಣದಲ್ಲಿ ದೇವಿಯನ್ನು ಅಲಂಕರಿಸಲಾಗುತ್ತದೆ. ಅಂತೆಯೇ ಈ ಬಾರಿಯೂ ತ್ರಿಪುರಸುಂದರಿ ದೇವಿಯನ್ನು 10 ಲಕ್ಷ ರೂ. ಕರೆನ್ಸಿ ನೋಟುಗಳಿಂದ…
ಮೈಸೂರು ನೈರುತ್ಯ ರೈಲ್ವೆಯಲ್ಲಿ ಜಾಗೃತಿ ಅರಿವು ಸಪ್ತಾಹಕ್ಕೆ ಚಾಲನೆ
October 29, 2019ಮೈಸೂರು, ಅ.28(ಪಿಎಂ)- ಕೇಂದ್ರೀಯ ಜಾಗೃತ ಆಯೋಗದ (ಸಿವಿಸಿ) ನಿರ್ದೇ ಶನದಂತೆ ನೈರುತ್ಯ ರೈಲ್ವೆಯ ಮೈಸೂರು ವಿಭಾಗದಲ್ಲಿ ಇಂದಿನಿಂದ ನ.2ರವರೆಗೆ `ಜಾಗೃತಿ ಅರಿವು ಸಪ್ತಾಹ-2019’ ಆಚರಿ ಸಲಾಗುತ್ತಿದೆ. ಆಯೋಗವು `ಪ್ರಾಮಾಣಿ ಕತೆ: ಜೀವನದ ಒಂದು ಮಾರ್ಗ’ ವಿಷಯ ಕುರಿತಂತೆ ಅ.28ರಿಂದ ನ.2ರವರೆಗೆ ಜಾಗೃತಿ ಸಪ್ತಾಹ ಆಚರಿಸುತ್ತಿದೆ. ಇದನ್ನು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನ (ಅ.31) ಬರುವ ವಾರದಲ್ಲಿ ಪ್ರತಿ ವರ್ಷ ಆಚರಿಸಲಾಗುವುದು ವಿಶೇಷ. ಮೈಸೂರಿನ ಇರ್ವಿನ್ ರಸ್ತೆಯ ರೈಲ್ವೆ ವಿಭಾಗೀಯ ಕಚೇರಿ ಹೊರಾಂಗಣದಲ್ಲಿ ಎಲ್ಲಾ ಅಧಿಕಾರಿಗಳು ಮತ್ತು…
ಚಾಮುಂಡಿಬೆಟ್ಟದ ಮಹಿಷನ ಪ್ರತಿಮೆಗೆ ಪುಷ್ಪ ನಮನ
October 29, 2019ಮೈಸೂರು, ಅ.28(ಪಿಎಂ)- ಮಹಿಷ ಮಂಡಲ ಇಂಟರ್ನ್ಯಾಷನಲ್ ಬುದ್ಧಿಸ್ಟ್ ಕಲ್ಚರಲ್ ಟ್ರಸ್ಟ್, ದಲಿತ ವೆಲ್ಫೇರ್ ಟ್ರಸ್ಟ್ ವತಿಯಿಂದ ಮೈಸೂರಿನ ಚಾಮುಂಡಿಬೆಟ್ಟದ ಮಹಿಷನ ಪ್ರತಿಮೆಗೆ ಭಾನುವಾರ ಪುಷ್ಪ ನಮನ ಸಲ್ಲಿಸಲಾಯಿತು. ಆ ಮೂಲಕ ಪ್ರತಿ ತಿಂಗಳ ಅಮಾವಾಸ್ಯೆಯ ಹಿಂದಿನ ದಿನ ಮಹಿಷನ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ವೇಳೆ ಮಾತನಾಡಿದ ಪ್ರಗತಿಪರ ಚಿಂತಕ ಪ್ರೊ.ಬಿ.ಪಿ. ಮಹೇಶ್ ಚಂದ್ರಗುರು, ಮಹಿಷ ಮಂಡಲದ ಇತಿ ಹಾಸದಲ್ಲಿ ಮಾತ್ರವಲ್ಲದೆ, ಬೌದ್ಧ ಧರ್ಮದ ಇತಿಹಾಸ ಹಾಗೂ ಇಡೀ ಭರತಖಂಡದ ಇತಿಹಾಸದಲ್ಲಿ ಮಹಿಷ…
ನ.2, `ಡಾ.ಮತ್ತೂರು ಕೃಷ್ಣಮೂರ್ತಿ ಸಮಾಜ ಸೇವಾ, `ಶ್ರೀ ವನಮಾಲಿ ಸಂಸ್ಕøತಿ ಸೇವಾ’ ಪ್ರಶಸ್ತಿ ಪ್ರದಾನ
October 29, 2019ಮೈಸೂರು, ಅ.28-ಮೈಸೂರಿನ ಶ್ರೀ ವನಮಾಲಿ ಚಾರಿಟಬಲ್ ಟ್ರಸ್ಟ್ ತನ್ನ ಪ್ರತಿಷ್ಠಾನದ 2019ನೇ ಸಾಲಿನ `ಶ್ರೀ ವನಮಾಲಿ ಸಂಸ್ಕøತಿ ಸೇವಾ ಪ್ರಶಸ್ತಿ’ ಹಾಗೂ ಪದ್ಮಶ್ರೀ ಡಾ. ಮತ್ತೂರು ಕೃಷ್ಣಮೂರ್ತಿ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನವೆಂಬರ್ 2ರಂದು ಸಂಜೆ 5 ಗಂಟೆಗೆ ಕುವೆಂಪು ನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ಗಾನ ಭಾರತಿ ವೀಣೆ ಶೇಷಣ್ಣ ಭವನದಲ್ಲಿ ಏರ್ಪಡಿಸಲಾಗಿದೆ. ಶ್ರೀ ವನಮಾಲಿ ಸಂಸ್ಕøತಿ ಸೇವಾ ಪ್ರಶಸ್ತಿಯನ್ನು ಖ್ಯಾತ ಆಂಗ್ಲ ಭಾಷಾ ತಜ್ಞ, ವಾಕ್ಯಾರ್ಥ ವಿಶೇಷಜ್ಞ ಡಾ.ಟಿ.ಆರ್.ಎಸ್. ಶರ್ಮಾ ಅವರಿಗೆ ಮತ್ತು…
ಪರಿಸರ ಸ್ನೇಹಿ ದೀಪಾವಳಿ ಆಚರಿಸಲು ಸಲಹೆ
October 29, 2019ಮೈಸೂರು ಅ.28- ಪರಿಸರ ಸ್ನೇಹಿ ದೀಪಾವಳಿ ಹಬ್ಬವನ್ನು ಆಚರಿಸುವ ಸಲುವಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಭಾರತ ಸರ್ಕಾರವು ಪರಿಸರ ಸಂರಕ್ಷಣೆ ಕಾಯ್ದೆಯಡಿಯಲ್ಲಿ 1986 ತಿದ್ದುಪಡಿ, 1999 ಮತ್ತು 2000 ರನ್ವಯ ದೀಪಾವಳಿ ಹಬ್ಬದ ಸಂದರ್ಭ ದಲ್ಲಿ ಪಟಾಕಿ ಸಿಡಿತದಿಂದ ಉಂಟಾ ಗುವ ಶಬ್ದ ಹಾಗೂ ವಾಯುಮಾಲಿನ್ಯ ನಿಯಂತ್ರಣ ದಲ್ಲಿಡಲು ಕ್ರಮಗಳನ್ನು ಅನುಸರಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪಟಾಕಿಗಳು ಸಿಡಿಯುವ ಜಾಗದಿಂದ 4 ಮೀಟರ್ ದೂರದಲ್ಲಿ 125…
ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸ್ಫೋಟ: ಇಬ್ಬರ ಅಮಾನತು
October 29, 2019ಹುಬ್ಬಳ್ಳಿ,ಅ.28-ಹುಬ್ಬಳ್ಳಿ ರೈಲ್ವೆ ನಿಲ್ದಾಣ ದಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂ ಧಿಸಿದಂತೆ ಇಬ್ಬರನ್ನು ಅಮಾನತು ಮಾಡ ಲಾಗಿದೆ. ಅ.21ರಂದು ನಡೆದ ಲಘು ಸ್ಫೋಟ ದಲ್ಲಿ ಒಬ್ಬ ಪ್ರಯಾಣಿಕ ಗಾಯಗೊಂಡಿದ್ದ. ರೈಲ್ವೆ ನಿಲ್ದಾಣದ ಭದ್ರತೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ನೈಋತ್ಯ ರೈಲ್ವೆಯ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಆರ್ಪಿಎಫ್ನ ಸಹಾಯಕ ಸಬ್ ಇನ್ಸ್ ಪೆಕ್ಟರ್ ಮಂಜುನಾಥ್, ಸ್ಟೇಷನ್ ಮಾಸ್ಟರ್ ವರುಣ್ ಕುಮಾರ್ ದಾಸ್ ಅಮಾನತು ಆದವರು. “ರೈಲ್ವೆ ನಿಲ್ದಾಣದಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಏನೂ ಹೇಳಲು ಸಾಧ್ಯವಿಲ್ಲ. ತನಿಖೆ ನಡೆಸುತ್ತಿರುವ…
ಬೆಳೆ ಪರಿಹಾರದ ಹಣ ಸಾಲಕ್ಕೆ ಮುಟ್ಟುಗೋಲು ಹಾಕಿಕೊಂಡರೆ ಬ್ಯಾಂಕ್ಗಳಿಗೆ ನೋಟಿಸ್ಸರ್ಕಾರದ ಎಚ್ಚರಿಕೆ
October 29, 2019ಬೆಂಗಳೂರು, ಅ.28(ಕೆಎಂಶಿ)- ಬೆಳೆ ಪರಿಹಾರಕ್ಕೆ ನೀಡಿದ ಹಣವನ್ನು ರಾಷ್ಟ್ರೀಕೃತ ಬ್ಯಾಂಕುಗಳು ರೈತರ ಸಾಲ ಮನ್ನಾಕ್ಕೆ ಮುಟ್ಟುಗೋಲು ಹಾಕಿಕೊಂಡರೆ ಅಂತಹ ಆಡಳಿತ ಮಂಡಳಿಗಳಿಗೆ ಸರ್ಕಾರ ನೋಟಿಸ್ ನೀಡಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹ ಪರಿಹಾರ ಧನವನ್ನು ಯಾವುದೇ ಸಾಲಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿಲ್ಲ. ಈ ಸಂಬಂಧ ಎಲ್ಲಾ ಬ್ಯಾಂಕ್ಗಳಿಗೆ ನೋಟಿಸ್ ನೀಡಲು ಡಿಸಿಗಳಿಗೆ ಸೂಚಿಸಲಾಗಿದೆ. ಬೆಳೆ ಪರಿಹಾರ ಧನವನ್ನು ಬ್ಯಾಂಕ್ಗಳು ಸಾಲದ ಬಾಕಿ ಹಣಕ್ಕೆ ಮುಟ್ಟುಗೋಲು ಹಾಕಿಕೊಳ್ಳುತ್ತಿವೆ ಎಂಬ ದೂರುಗಳು…