ಮೈಸೂರು: ನರ್ಸಿಂಗ್ ಹುದ್ದೆ ಸಾವಿರಾರು ಜೀವಗಳನ್ನು ಉಳಿಸುವ ಜಾಗತಿಕ ಹುದ್ದೆಯಾಗಿದೆ ಎಂದು ಕಾವೇರಿ ಆಸ್ಪತ್ರೆ ನಿರ್ದೇಶಕ ಡಾ.ಚಂದ್ರ ಶೇಖರ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಕುವೆಂಪುನಗರದ ಬಿಜಿಎಸ್ ನರ್ಸಿಂಗ್ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ನಡೆದ `ಅಂತಾರಾಷ್ಟ್ರೀಯ ದಾದಿ ಯರ ದಿನ’ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಜಾಗತಿಕ ಮಟ್ಟದಲ್ಲಿ ನರ್ಸಿಂಗ್ ಹುದ್ದೆಗೆ ತನ್ನದೇ ಆದ ಮನ್ನಣೆ ಹಾಗೂ ಗೌರವವಿದೆ. ಯಾವುದೇ ಆಸ್ಪತ್ರೆ ಉತ್ತಮವಾಗಿ ಕಾರ್ಯನಿರ್ವಹಿಸಬೇಕಾ ದರೆ ದಾದಿಯರು ಆಸ್ಪತ್ರೆಯ ಬೆನ್ನೆಲು ಬಾಗಿ ನಿಂತು ಸೇವೆ ಸಲ್ಲಿಸುತ್ತಾರೆ. ಆರೋಗ್ಯ ಸೇವೆ ಉತ್ತಮವಾಗಿರಬೇಕಾದರೆ…
ವಿವಿಧ ಟಿಬೆಟಿಯನ್ ಸಂಘಟನೆಗಳಿಂದ ಪ್ರತಿಭಟನೆ
May 18, 2019ಮೈಸೂರು: ಟಿಬೆಟಿಯನ್ನರ 11ನೇ ಪಂಚೆನ್ ಲಾಮಾ ಕಾಣೆಯಾಗಿ 24 ವರ್ಷಗಳಾಗಿದ್ದು, ಅವರ ಹಾಗೂ ಇನ್ನಿತರ ಎಲ್ಲಾ ಕೈದಿಗಳ ಇರುವಿಕೆಯ ಬಗ್ಗೆ ಚೀನಾ ಬಹಿರಂಗಪಡಿಸಬೇಕು. ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಬೈಲಕುಪ್ಪೆ, ಹುಣಸೂರು ಮತ್ತು ಕೊಳ್ಳೇಗಾಲದ ಪ್ರಾಂತೀಯ ಟಿಬೆಟಿಯನ್ ಯುವ ಕಾಂಗ್ರೆಸ್ ಮತ್ತು ಪ್ರಾಂತೀಯ ಟಿಬೆಟಿಯನ್ ಮಹಿಳಾ ಸಂಘಟನೆಯ ಸದಸ್ಯರು ಶುಕ್ರವಾರ ಮೈಸೂರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೈಸೂರಿನ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಜಮಾವಣೆಗೊಂಡು ಪಂಚೆನ್ ಲಾಮಾರ ಬಿಡುಗಡೆಗಾಗಿ ಪ್ರಾರ್ಥಿಸಿದರು. ಬಳಿಕ ಸಂಘ ಟನೆಗಳ…
ಜೆ.ಕೆ. ಟೈರ್ಸ್ಗೆ 270 ಕೋಟಿ ರೂ. ಲಾಭ
May 18, 2019ಮೈಸೂರು: ಭಾರತದ ಪ್ರಮುಖ ಟೈರ್ ತಯಾರಕ ಸಂಸ್ಥೆ ಜೆಕೆ ಟೈರ್ ಮತ್ತು ಇಂಡಸ್ಟ್ರೀಸ್ ಲಿಮಿಟೆಡ್ 31 ಮಾರ್ಚ್ 2019ಕ್ಕೆ ಅಂತ್ಯಗೊಂಡಂತೆ ಈ ಆರ್ಥಿಕ ವರ್ಷದ ಫಲಿತಾಂಶ ಗಳನ್ನು ಪ್ರಕಟಿಸಿದೆ. ಈ ವರ್ಷ ಮಾರಾಟವು ರೂ. 10,370 ಕೋಟಿಗಳಿದ್ದು, 24% ಹೆಚ್ಚಳ ಕಂಡಿದೆ. ಈ ವರ್ಷದ ಕಾರ್ಯಾಚರಣೆ ಲಾಭ ರೂ. 1,196 ಕೋಟಿ ಗಳಲ್ಲಿ 35% ಹೆಚ್ಚಳ ಕಂಡಿದೆ. ಸಂಚಿತ ಆಧಾರದ ಮೇಲೆ ವರ್ಷದ ತೆರಿಗೆಗೆ ಮುನ್ನ ಲಾಭ ರೂ. 270 ಕೋಟಿಗಳಿದ್ದು ಕಳೆದ ವರ್ಷದ ತತ್ಸಮಾನ ಅವಧಿಗೆ…
ಹಲವು ಹಿರಿಯ ರಂಗಕರ್ಮಿಗಳಿಗೆ ವಿವಿಧ ಪ್ರಶಸ್ತಿ ವಿತರಣೆ, ನಾಟಕ ಪ್ರದರ್ಶನ
May 18, 2019ಮೈಸೂರು: ಕನ್ನಡ ರಂಗಭೂಮಿಯ ದಿಗ್ಗಜ, ಕನ್ನಡದ ಮೊದಲ ವಾಕ್ಚಿತ್ರದ ನಾಯಕ ನಟ ಸುಬ್ಬಯ್ಯ ನಾಯ್ಡು ಅವರ ನಾಟಕ ಸಂಸ್ಥೆಯಾದ `ಶ್ರೀ ಸಾಹಿತ್ಯ ಸಾಮ್ರಾಜ್ಯ’ ನಾಟಕ ಮಂಡಳಿ ವತಿಯಿಂದ ಮೇ 19ರಂದು ಸಂಜೆ 5 ಗಂಟೆಗೆ ಮೈಸೂರಿನ ರಾಮಕೃಷ್ಣನಗರದ ನಟನ ರಂಗಮಂದಿರದಲ್ಲಿ ಹಮ್ಮಿಕೊಂಡಿರುವ `ಲೋಕೇಶ್ ನೆನಪು’ 16ನೇ ವರ್ಷದ ಕಾರ್ಯಕ್ರಮದಲ್ಲಿ ವೃತ್ತಿ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ ಹಲವು ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ಮುಖ್ಯಸ್ಥೆ ನಟಿ ಗಿರಿಜಾ ಲೋಕೇಶ್ ಇಂದಿಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ…
ಬೈಕ್ ಡಿಕ್ಕಿ: ವೃದ್ಧ ಸಾವು ಮತ್ತೋರ್ವರಿಗೆ ಗಾಯ
May 18, 2019ಮೈಸೂರು: ಬೈಕೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸಾವನ್ನಪ್ಪಿದ್ದು, ಮತ್ತೋರ್ವ ಗಾಯಗೊಂಡಿರುವ ಘಟನೆ ಮಳವಳ್ಳಿ ಬಳಿ ಬೆಂಡರವಾಡಿ ಗ್ರಾಮದಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ಬನ್ನೂರು-ಮಳವಳ್ಳಿ ರಸ್ತೆಯ ಬೆಂಡರವಾಡಿ ಗ್ರಾಮದ ಮರಯ್ಯ(60) ಸಾವನ್ನಪ್ಪಿದವರು. ತೀವ್ರವಾಗಿ ಗಾಯಗೊಂಡಿರುವ ಮರೀ ಗೌಡ ಎಂಬುವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮರಯ್ಯ ಮತ್ತು ಮರೀಗೌಡ ಅವರು ಗ್ರಾಮದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಜಾಜ್ ಸಿಟಿ-100 ಬೈಕ್ನಲ್ಲಿ ಬಂದ ರವಿ ಎಂಬ ಯುವಕ ಗುರುವಾರ ರಾತ್ರಿ 7 ಗಂಟೆ ವೇಳೆಯಲ್ಲಿ ಡಿಕ್ಕಿ ಹೊಡೆದಿದ್ದಾನೆ….
ಮೇ 20ರಂದು ಜೆಎಸ್ಎಸ್ನ ಸುವರ್ಣ ಮಹೋತ್ಸವ ದತ್ತಿ ಉಪನ್ಯಾಸ, ಕೃತಿ ಲೋಕಾರ್ಪಣೆ
May 18, 2019ಮೈಸೂರು: ಜೆಎಸ್ಎಸ್ ಮಹಾವಿದ್ಯಾಪೀಠದ ಸುವರ್ಣ ಮಹೋತ್ಸವ ದತ್ತಿ ಉಪನ್ಯಾಸವನ್ನು ಮೇ 20ರಂದು ಬೆಳಿಗ್ಗೆ 10.30ಕ್ಕೆ ಮೈಸೂರಿನ ಜೆಎಸ್ಎಸ್ ಆಸ್ಪತ್ರೆ ಆವರಣದಲ್ಲಿರುವ ಶ್ರೀ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಅಮೆರಿಕದ ವಾಷಿಂಗ್ ಟನ್ನಲ್ಲಿರುವ ಐಎಂಎಫ್ನ ಸಂಶೋಧನಾ ವಿಭಾಗದ ಆರ್ಥಿಕ ಸಲಹೆಗಾರರು ಮತ್ತು ನಿರ್ದೇಶಕರಾದ ಡಾ. ಗೀತಾ ಗೋಪಿನಾಥ್ ಅವರು `ಜಾಗತೀಕರಣ-ಸವಾಲುಗಳು ಮತ್ತು ಸಹಕಾರದ ಅಗತ್ಯ’ ವಿಷಯ ಕುರಿತು ಮಾತನಾಡಲಿದ್ದಾರೆ. ಇದೇ ಸಂದರ್ಭ ದಲ್ಲಿ ಹಿಂದಿನ ದತ್ತಿ ಉಪನ್ಯಾಸ ನೀಡಿದ ಹೆಸರಾಂತ ಲೆಕ್ಕ ಪರಿ ಶೋಧಕರು, ಅಂಕಣಕಾರರು ಹಾಗೂ ಆರ್ಬಿಐಜನ…
ಮೈಸೂರಲ್ಲಿ ಶೂಟೌಟ್: ಗ್ಯಾಂಗ್ಸ್ಟರ್ ಬಲಿ
May 17, 2019ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆರ್ಥಿಕ ಅಪರಾಧ ಕೃತ್ಯದಲ್ಲಿ ತೊಡಗಿದ್ದ ಉತ್ತರ ಭಾರತದ ಗ್ಯಾಂಗ್ಸ್ಟರ್ ಓರ್ವ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಆತನ ಜೊತೆಗಿದ್ದ ಮತ್ತಿ ಬ್ಬರು ಶಸ್ತ್ರಸಜ್ಜಿತ ಗ್ಯಾಂಗ್ಸ್ಟರ್ಗಳು ಪರಾರಿ ಯಾಗಿದ್ದು, ಅವರ ಸೆರೆಗಾಗಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಹೆಬ್ಬಾಳು ರಿಂಗ್ ರಸ್ತೆ ಬಳಿ ಉತ್ತರ ಭಾರತದ ಗ್ಯಾಂಗ್ಸ್ಟರ್ಗಳನ್ನು ವಿಜಯ ನಗರ ಠಾಣೆ ಇನ್ಸ್ಪೆಕ್ಟರ್ ಬಿ.ಜಿ.ಕುಮಾರ್ ಮತ್ತು ಸಿಬ್ಬಂದಿ ಬಂಧಿಸಲು ಮುಂದಾ ದಾಗ ಪೊಲೀಸರ ಮೇಲೆಯೇ ಪಿಸ್ತೂಲ್ ನಿಂದ ಗುಂಡು ಹಾರಿಸಲು ಮುಂದಾದ ಗ್ಯಾಂಗ್ಸ್ಟರ್ವೊಬ್ಬನನ್ನು ಇನ್ಸ್ಪೆಕ್ಟರ್ ಬಿ.ಜಿ.ಕುಮಾರ್…
ಅನಧಿಕೃತ ಲೋಡ್ ಶೆಡ್ಡಿಂಗ್ಗೆ ಸರ್ಕಾರ ನಿರ್ಧಾರ
May 17, 2019ಬೆಂಗಳೂರು: ಬೇಸಿಗೆ ಹಾಗೂ ಬರದ ಛಾಯೆ ವಿದ್ಯುತ್ ಬೇಡಿಕೆ ಹೆಚ್ಚಿಸಿದ್ದು, ಇದನ್ನು ಪೂರೈಸಲಾಗದೆ ಸರ್ಕಾರ ಅನಧಿಕೃತ ಲೋಡ್ ಶೆಡ್ಡಿಂಗ್ ಮೊರೆ ಹೋಗಿದೆ. ಕಳೆದ ವರ್ಷ ಇದೇ ಸಮಯ ದಲ್ಲಿ 177 ಮಿಲಿಯನ್ ಯೂನಿಟ್ ಇದ್ದ ವಿದ್ಯುತ್ ಬೇಡಿಕೆ ಇಂದು 228 ಮಿಲಿಯನ್ ಯೂನಿಟ್ಗೆ ಮುಟ್ಟಿದೆ. ಬೇಡಿಕೆ ಸಂದರ್ಭದಲ್ಲೇ ಬಳ್ಳಾರಿ, ಯರಮರಸ್ ಹಾಗೂ ರಾಯಚೂರು ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಕೇಂದ್ರದ ನಾಲ್ಕು ಘಟಕಗಳು ಸ್ಥಗಿತಗೊಂಡಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ಕರೆದು,…
ಖರ್ಗೆ ಸಿಎಂ ಆಗಬೇಕಿತ್ತು ಎಂದ ಕುಮಾರಸ್ವಾಮಿಗೆ ಸಿದ್ದರಾಮಯ್ಯ ಟಾಂಗ್; ಹೆಚ್.ಡಿ.ರೇವಣ್ಣಗೂ ಸಿಎಂ ಆಗುವ ಅರ್ಹತೆ ಇದೆ
May 17, 2019ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವ ನಾಥ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಣ ವಾಕ್ ಸಮರ ನಿಲ್ಲುತ್ತಿದ್ದಂತೆಯೇ, ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸಿಎಲ್ಪಿ ನಾಯಕ ಸಿದ್ದರಾಮಯ್ಯ ನಡುವೆ ಟ್ವೀಟ್ ಸಂಘರ್ಷ ಆರಂಭವಾಗಿದೆ. ಮುಖ್ಯಮಂತ್ರಿ ಹುದ್ದೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಗಬೇಕಿತ್ತು ಎಂಬ ಕುಮಾರ ಸ್ವಾಮಿ ಹೇಳಿಕೆ ಪರೋಕ್ಷವಾಗಿ ತಮಗೇ ನೀಡಿದ ಟಾಂಗ್ ಎಂದು ಭಾವಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ, ಲೋಕೋಪಯೋಗಿ `ಸಚಿವ ಹೆಚ್.ಡಿ.ರೇವಣ್ಣಅವರೂ ಮುಖ್ಯಮಂತ್ರಿ ಆಗುವ ಅರ್ಹತೆ ಹೊಂದಿದ್ದಾರೆ’…
ನಾನು ಸಿದ್ದರಾಮಯ್ಯ ಅಭಿಮಾನಿ
May 17, 2019ಹಾಸನ: ನನ್ನ ಮೇಲಿನ ಅಭಿಮಾನದಿಂದ ಸಿದ್ದರಾಮಯ್ಯ ಅವರು ರೇವಣ್ಣಗೂ ಮುಖ್ಯಮಂತ್ರಿ ಯಾಗುವ ಅರ್ಹತೆ ಇದೆ ಎಂದು ಹೇಳಿರಬಹುದು, ಹಿಂದಿನಿಂದಲೂ ಅವರು ನನ್ನ ಹಿತೈಷಿ, ನಾನು ಅವರ ಅಭಿಮಾನಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ ಹೇಳಿದರು. ‘ರೇವಣ್ಣ ಅವರಿಗೂ ಸಿ.ಎಂ ಆಗುವ ಅರ್ಹತೆ ಇದೆ’ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಟ್ವೀಟ್ ಮಾಡಿರುವ ಕುರಿತು ಹೊಳೆನರಸೀಪುರ ದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,ಕುಮಾರಸ್ವಾಮಿ ಸಿಎಂ ಆಗಿರುವಾಗ ನಾನು ಸಿಎಂ ಆಗುವ ಪ್ರಶ್ನೆ ಎಲ್ಲಿಂದ ಬಂತು….