ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಉದ್ಯಾನವನ ಸ್ವಚ್ಛತೆ
ಮೈಸೂರು

ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಉದ್ಯಾನವನ ಸ್ವಚ್ಛತೆ

August 5, 2019

ಮೈಸೂರು,ಆ.4(ಎಂಕೆ)-ಮೈಸೂರಿನ ಗನ್‍ಹೌಸ್ ವೃತ್ತದ ಸಮೀಪದಲ್ಲಿರುವ ಕುವೆಂಪು ಉದ್ಯಾನವನವನ್ನು ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಸ್ವಚ್ಛಗೊಳಿಸಲಾಯಿತು.

ನಮ್ಮ ಮೈಸೂರು ಫೌಂಡೇಷನ್ ಹಾಗು ಕುವೆಂಪುನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‍ಎಸ್‍ಎಸ್ ಘಟಕದ ವತಿಯಿಂದ ಆಯೋಜಿಸಿದ್ದ ಸ್ವಚ್ಛತಾ ಆಂದೋಲನದಲ್ಲಿ ಉದ್ಯಾನವನ ಹಾಗೂ ಸುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿ, ವಿವಿಧ ಬಗೆಯ ಗಿಡಗಳನ್ನು ನೆಡಲಾಯಿತು.

ನಗರಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ನಮ್ಮ ಮೈಸೂರು ಫೌಂಡೇಶನ್‍ನ ದಶರಥ್, ಮಲ್ಲೇಶ್, ಕಲ್ಯಾಣ್, ಪ್ರೊ.ರಂಗರಾಜು, ರಮೇಶ್, ಶ್ರೀರಾಜ್, ಅನುರಾಧ, ನಿಹಾರಿಕ, ರಾಮದಾಸ್ ರೆಡ್ಡಿ ಮತ್ತಿತರರು ಭಾಗವಹಿಸಿದ್ದರು.

ನಂತರ ಶಾಸಕ ಎಸ್.ಎ.ರಾಮದಾಸ್ ಅವರು ವಾರ್ಡ್ ನಂ-9 ಮತ್ತು 53ರ ಸಿದ್ದಾರ್ಥ ಬಡಾವಣೆ ಮತ್ತು ಆಲನಹಳ್ಳಿ ಪ್ರದೇಶದ ಆಶ್ರಯ ಬಡಾವಣೆಗೆ ಅಧಿಕಾರಿಗಳೊಂದಿಗೆ ತೆರಳಿ ಸಾರ್ವಜನಿಕರ ಸಮಸ್ಯೆ ಆಲಿಸಿದರು. ಈ ವೇಳೆ ನಗರಪಾಲಿಕೆ ಸದಸ್ಯೆ ರೂಪ ಜಗದೀಶ್, ಮುಖಂಡರಾದ ವಿನಯ್, ಮಹೇಶ್ ಅರಸ್, ಸುನೀಲ್, ಮಹದೇವಸ್ವಾಮಿ, ಅರ್ಜುನ್, ವಲಯ ಅಭಿವೃದ್ಧಿ ಅಧಿಕಾರಿ ಹರೀಶ್, ಇಂಜಿನಿಯರ್‍ಗಳಾದ ದೀಪಕ್, ಮಹದೇವಸ್ವಾಮಿ, ಚೇತನ್, ರವಿಶಂಕರ್ ಮತ್ತಿತರರು ಉಪಸ್ಥಿತರಿದ್ದರು.

Translate »