ಅರಣ್ಯ ರಕ್ಷಕರ ತರಬೇತಿ ಶಿಬಿರದ ಸಮಾರೋಪ: ಅರಣ್ಯ ಪ್ರದೇಶಕ್ಕೆ ಬೆಂಕಿ ತಗುಲದಂತೆ ಎಚ್ಚರಿಕೆ ವಹಿಸಿ
ಕೊಡಗು

ಅರಣ್ಯ ರಕ್ಷಕರ ತರಬೇತಿ ಶಿಬಿರದ ಸಮಾರೋಪ: ಅರಣ್ಯ ಪ್ರದೇಶಕ್ಕೆ ಬೆಂಕಿ ತಗುಲದಂತೆ ಎಚ್ಚರಿಕೆ ವಹಿಸಿ

July 2, 2018

ಕುಶಾಲನಗರ: ದೇಶದ ಸಂಪತ್ತಾಗಿರುವ ಅರಣ್ಯ ಪ್ರದೇಶಕ್ಕೆ ಯಾವುದೇ ಕಾರಣಕ್ಕೂ ಬೆಂಕಿ ತಗು ಲದಂತೆ ಅರಣ್ಯ ರಕ್ಷಕರು ಎಚ್ಚರಿಕೆ ವಹಿಸ ಬೇಕಾಗಿದೆ ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಮಂಜು ನಾಥ್ ಹೇಳಿದರು.
ಇಲ್ಲಿನ ಗಂಧದಕೋಟಿಯಲ್ಲಿರುವ ಅರಣ್ಯ ತರಬೇತಿ ಕೇಂದ್ರದಲ್ಲಿ ಶುಕ್ರವಾರ ಏರ್ಪಡಿಸಿದ್ದ 2017-18ನೇ ಸಾಲಿನ 88ನೇ ತಂಡದ ಅರಣ್ಯ ರಕ್ಷಕರ ಬುನಾದಿ ತರ ಬೇತಿ ಶಿಬಿರದ ಸಾಮರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರ ಉಜ್ವಲ ಯೋಜನೆಯಡಿ ಎಲ್ಲ ರಿಗೂ ಉಚಿತ ಗ್ಯಾಸ್ ಸಿಲೆಂಡರ್ ವಿತರಿ ಸಲಾಗಿದೆ. ಆದ್ದರಿಂದ ಮನೆಗೆ ಉರುವಲಿ ಗಾಗಿ ಮರಗಳನ್ನು ಕಡಿಯುವುದು ತುಂಬ ಕಡಿಮೆಯಾಗಿದೆ. ಆದರೆ ಪ್ರತಿ ವರ್ಷ ಅರಣ್ಯಕ್ಕೆ ಬೆಂಕಿ ಬಿದ್ದು, ಅಪಾರ ಪ್ರಮಾಣ ದಲ್ಲಿ ಅರಣ್ಯ ನಾಶವಾಗುತ್ತಿದೆ. ಇದನ್ನು ಸಂಪೂರ್ಣ ನಿಯಂತ್ರಿಸಲು ಹೆಚ್ಚಿನ ಒತ್ತು ನೀಡಬೇಕು ಎಂದರು.

ಸಾರ್ವಜನಿಕರು ಹಾಗೂ ಅರಣ್ಯ ದಂಚಿನ ಜನರೊಂದಿಗೆ ಸೌಹಾರ್ದ ಸಂಬಂ ಧವನ್ನು ಇಟ್ಟುಕೊಳ್ಳುವ ಮೂಲಕ ಪ್ರಾಮಾ ಣ ಕತೆಯಿಂದ ಸೇವೆಯೊಂದಿಗೆ ದೇಶದ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಹುಣಸೂರು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರೂ ಆದ ಅರಣ್ಯ ಸಂರಕ್ಷಣಾ ಧಿಕಾರಿ ಆರ್. ರವಿಶಂಕರ್ ಮಾತನಾಡಿ, ಖಾಸಗಿ ಕ್ಷೇತ್ರದಲ್ಲಿಯೂ ಕೆಲಸ ತೆಗೆದು ಕೊಳ್ಳುವುದು ಕಷ್ಟವಾಗಿರುವ ಇಂದಿನ ದಿನ ಗಳಲ್ಲಿ ಸರ್ಕಾರಿ ಕೆಲಸ ಸಿಕ್ಕಿರುವುದು ನಿಮ್ಮ ಅದೃಷ್ಟ. ಪ್ರಾಮಾಣ ಕತೆ ಹಾಗೂ ಕರ್ತವ್ಯ ನಿಷ್ಠೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದರು.

ಅರಣ್ಯ ತರಬೇತಿ ಕೇಂದ್ರದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಶಿವಪ್ಪ ಪ್ರಾಸ್ತಾ ವಿಕವಾಗಿ ಮಾತನಾಡಿ, ರಾಜ್ಯದ ವಿವಿಧ ವಿಭಾಗದಿಂದ 54 ಅರಣ್ಯ ರಕ್ಷಕರು ತರ ಬೇತಿಗೆ ಹಾಜರಾಗಿದ್ದು, 9 ತಿಂಗಳ ಅವಧಿ ಯಲ್ಲಿ ಪಾಠಪ್ರವಚನಗಳೊಂದಿಗೆ ದೈಹಿಕ ಮತ್ತು ಮನೋಬಲ ಹೆಚ್ಚಿಸುವ ಶಾರೀರಿಕ ತರಬೇತಿ ನೀಡಲಾಗಿದೆ. 13 ಜಿಲ್ಲೆಗಳಿಗೆ ಭೇಟಿ ನೀಡಿ ಅರಣ್ಯ ಇಲಾಖೆವತಿಯಿಂದ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಾಗಿದೆ ಎಂದರು.

ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ಚಿಣ್ಣಪ್ಪ ಅವರು ವಿವಿಧ ಸ್ಪರ್ಧೆ ಗಳಲ್ಲಿ ವಿಜೇತ ಶಿಬಿರಾರ್ಥಿಗಳಿಗೆ ಬಹು ಮಾನ ವಿತರಿಸಿದರು. ಜಿಲ್ಲಾ ಅರಣ್ಯ ಸಂಚಾರಿ ದಳದ ಸಹಾಯಕ ಅರಣ್ಯ ಸಂರಕ್ಷಣಾ ಧಿಕಾರಿ ಟಿ.ಕೆ.ಜೀವನ್ ಕುಮಾರ್ ಶಿಬಿರಾ ರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.

ಈ ಸಂದರ್ಭ ಮಡಿಕೇರಿ ವಿಭಾಗದ ಎಸಿಎಫ್ ಕೆ.ಎ.ನೆಹರು, ದಯಾನಂದ, ವಿರಾಜಪೇಟೆ ವಿಭಾಗದ ಎಸಿಎಫ್ ರೋಷಿಣ , ಆನೆಕಾಡು ವಿಭಾಗದ ಮೇದಪ್ಪ, ತರ ಬೇತಿ ಕೇಂದ್ರದ ವಲಯಾರಣ್ಯಾಧಿಕಾರಿ ಗಳಾದ ರಾಘುವೇಂದ್ರ ಜಿ.ನಾಯಕ್, ವಿನೂತ ಉಪಸ್ಥಿತರಿದ್ದರು. ಶಿಬಿರಾರ್ಥಿ ಬಸವ ರಾಜ್ ಕುಲಕರ್ಣಿ ನಿರೂಪಿಸಿದರು. ನಿಂಗ ರಾಜ್ ದಾಸ್ ಸಂಗಡಿಗರು ಪ್ರಾರ್ಥಿಸಿದರು.
ಆಕರ್ಷಕ ಪಥಸಂಚಲನ: ಕಾರ್ಯ ಕ್ರಮದ ಮೊದಲಿಗೆ ಅರಣ್ಯ ತರಬೇತಿ ಕೇಂದ್ರದ ಮುಂಭಾಗ ಏರ್ಪಡಿಸಿದ್ದ ಪಥ ಸಂಚಲನದಲ್ಲಿ ಹುಣಸೂರು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಸಂರಕ್ಷಣಾಧಿಕಾರಿ ಆರ್.ರವಿಶಂಕರ್ ಗೌರವ ವಂದನೆ ಸ್ವೀಕರಿಸಿದರು. ಅರಣ್ಯ ರಕ್ಷಕರು ಆಕರ್ಷಕ ಪಥ ಸಂಚಲನ ನಡೆಸಿಕೊಡುವ ಮೂಲಕ ಎಲ್ಲರ ಗಮನ ಸೆಳೆದರು.

Translate »