ಜೆಡಿಎಸ್‍ನ ಪ್ರಭಾವಿ ಶಾಸಕರ ಬಿಜೆಪಿಗೆ ಸೆಳೆಯಲು ಸಿಎಂ ಯಡಿಯೂರಪ್ಪ ತಂತ್ರ
ಮೈಸೂರು

ಜೆಡಿಎಸ್‍ನ ಪ್ರಭಾವಿ ಶಾಸಕರ ಬಿಜೆಪಿಗೆ ಸೆಳೆಯಲು ಸಿಎಂ ಯಡಿಯೂರಪ್ಪ ತಂತ್ರ

September 10, 2019

ಬೆಂಗಳೂರು, ಸೆ.9(ಕೆಎಂಶಿ)- ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ನೇತೃತ್ವದ ಜೆಡಿಎಸ್ ಪಕ್ಷವನ್ನು ಮುಗಿಸಲು ಆ ಪಕ್ಷದ ಪ್ರಭಾವಿ ಹಾಗೂ ವರ್ಚಸ್ವಿ ನಾಯಕರನ್ನು ಸೆಳೆಯಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಂತ್ರ ರೂಪಿಸಿದ್ದಾರೆ.

ಸರ್ಕಾರವನ್ನು ಭದ್ರಪಡಿಸಿಕೊಳ್ಳಲು ಯಡಿಯೂರಪ್ಪ ಅವರು ಎರಡನೇ ಹಂತದ ಆಪರೇಷನ್ ಕಮಲ ಕಾರ್ಯಾಚರಣೆ ಆರಂಭಿಸಿದ್ದರೆ, ಅದೇ ಕಾಲಕ್ಕೆ ತಮ್ಮ ಪುತ್ರನ ಹಿತ ಕಾಯಲು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಮೇಲಿನ ಹಿಡಿತ ಪಡೆಯಲು ಮುಂದಾಗಿದ್ದಾರೆ.

ಈಗಾಗಲೇ ಜೆಡಿಎಸ್ ಹಾಗೂ ಕಾಂಗ್ರೆಸ್‍ನ ಕೆಲ ಪ್ರಭಾವಿ ಮತ್ತು ವರ್ಚಸ್ಸುಳ್ಳ ನಾಯಕ ರನ್ನು ಸಂಪರ್ಕಿಸಿದ್ದು, ಇದಕ್ಕೆ ಉಪ ಮುಖ್ಯ ಮಂತ್ರಿ ಡಾ. ಅಶ್ವತ್ಥ್‍ನಾರಾಯಣ ಮತ್ತು ಪುತ್ರ ವಿಜಯೇಂದ್ರ ಈ ಶಾಸಕರ ಜತೆ ಸಮಾಲೋಚನೆ ನಡೆಸಿದ್ದಾರೆ. ಮೊದಲ ಹಂತವಾಗಿ ಮೈಸೂರು ಮತ್ತು ತುಮಕೂರು ಜಿಲ್ಲೆಯ ಶಾಸಕರು ಮತ್ತು ಪ್ರಭಾವಿ ಮುಖಂಡ ರನ್ನು ಸೆಳೆಯಲು ವೇದಿಕೆ ಸಿದ್ಧವಾಗಿದೆ. ಮಾಜಿ ಸಚಿವ ಜಿ.ಟಿ.ದೇವೇಗೌಡ, ವಾಸು ಸೇರಿದಂತೆ ಏಳು ಶಾಸಕರ ಜತೆ ಸಂಪರ್ಕ ಸಾಧಿಸಿದ್ದಾರೆ. ಈಗಾಗಲೇ ಇವರು ಪ್ರತ್ಯೇಕ ವಾಗಿ ಸಭೆ ನಡೆಸಿ ತಮ್ಮ ಮುಂದಿನ ನಿರ್ಣಯ ತೆಗೆದುಕೊಳ್ಳಲು ಸಮಯ ಕಾಯುತ್ತಿದ್ದಾರೆ. ಇದರ ಬೆನ್ನಲ್ಲೇ ಜಿ.ಟಿ.ದೇವೇಗೌಡರನ್ನು ಯಡಿಯೂರಪ್ಪನವರೇ ಖುದ್ದಾಗಿ ಕರೆಸಿಕೊಂಡು ಮಾತನಾಡಿದ್ದಾರೆ.

ಈ ಬೆಳವಣಿಗೆಯ ನಂತರವೇ ದೇವೇ ಗೌಡರು ಪಕ್ಷದ ಚಟುವಟಿಕೆಯಿಂದ ದೂರ ವುಳಿದು ಮೌನಕ್ಕೆ ಶರಣಾಗಿದ್ದಾರೆ.ಅಷ್ಟೇ ಅಲ್ಲ, ಪಕ್ಷದ ಕೆಲ ನಾಯಕರ ವಿರುದ್ಧವೇ ಹೇಳಿಕೆಗಳನ್ನು ನೀಡಿ ಬಿಜೆಪಿ ಮುಖಂಡರ ಜತೆ ಕಾಣಿಸಿಕೊಳ್ಳುತ್ತಿದ್ದಾರೆ. ಜಿ.ಟಿ.ದೇವೇ ಗೌಡ ಮತ್ತು ಎಸ್.ಆರ್.ಶ್ರೀನಿವಾಸ್ (ವಾಸು) ಅವರನ್ನು ಸೆಳೆದುಕೊಂಡರೆ ಎರಡು ಜಿಲ್ಲೆ ಗಳಲ್ಲಿ ಜೆಡಿಎಸ್ ಪ್ರಭಾವವನ್ನು ಕುಗ್ಗಿಸ ಬಹುದು ಮತ್ತು ಆ ಪಕ್ಷದ ಸಂಖ್ಯಾಬಲ ವನ್ನು ಕುಂದಿಸಬಹುದು ಎಂಬ ಭಾವನೆ ಇವರಲ್ಲಿದೆ. ವಾಸು ತಮ್ಮ ಬೆಂಬಲಿಗರೊಟ್ಟಿಗೆ ಸಿಂಗಪೂರಕ್ಕೆ ತೆರಳಿ ಅಲ್ಲಿಯೇ ಬಿಜೆಪಿ ಮುಖಂಡರನ್ನು ಕರೆಸಿಕೊಂಡು ಸಮಾ ಲೋಚನೆ ಮಾಡಿದ್ದಾರೆ. ಎರಡನೇ ಹಂತದ ಆಪರೇಷನ್ ಕಮಲದಲ್ಲಿ ಬಿಜೆಪಿ ಸೇರುವ ವರಿಗೆ ಸಚಿವ ಸ್ಥಾನವಿಲ್ಲ. ನಿಗಮ ಮಂಡಳಿ ಗಳ ಅಧ್ಯಕ್ಷ ಸ್ಥಾನ ಮತ್ತು ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುವುದು, ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಹಣ ನೀಡು ವುದು ಸೇರಿದಂತೆ ಯಡಿಯೂರಪ್ಪ ಅವರು ಹಲವು ಭರವಸೆಗಳನ್ನು ನೀಡಿದ್ದಾರೆ. ಜಿ.ಟಿ. ದೇವೇಗೌಡರ ವಿಷಯದಲ್ಲಂತೂ ಯಡಿ ಯೂರಪ್ಪ ಅವರು ಅವರೆಲ್ಲ ಬೇಡಿಕೆ ಗಳನ್ನು ಈಡೇರಿಸಲು ಸಿದ್ಧರಿದ್ದಾರೆ. ಮುಖ್ಯ ವಾಗಿ ಮುಂದಿನ ವಿಧಾನಸಭಾ ಕ್ಷೇತ್ರದಲ್ಲಿ ವರುಣಾ ಕ್ಷೇತ್ರದಲ್ಲಿ ತಮ್ಮ ಪುತ್ರ ವಿಜಯೇಂದ್ರ ಅವರನ್ನು ಕಣಕ್ಕಿಳಿಸಲು ಅವರಿಗೆ ಜಿ.ಟಿ.ದೇವೇಗೌಡರ ಸಹಕಾರ ಬೇಕಾಗಿದೆ.

ಇದೇ ಕಾಲಕ್ಕೆ ಪಕ್ಕದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಯಿಂದಲೇ ಗೌಡರ ಪುತ್ರನಿಗೆ ಟಿಕೆಟ್ ನೀಡಿ ಎರಡು ಕ್ಷೇತ್ರಗಳಲ್ಲಿ ಒಕ್ಕಲಿಗ-ಲಿಂಗಾಯತ ಕಾಂಬಿನೇಷನ್‍ನಲ್ಲಿ ಹೋಗಲು ಬಯಸಿದ್ದಾರೆ. ಇದರಿಂದ ಪುತ್ರ ವಿಧಾನಸಭೆ ಪ್ರವೇಶಿಸಲು ಸಹಕಾರಿ ಯಾಗುತ್ತದೆ ಎಂಬ ಲೆಕ್ಕಾಚಾರ ಯಡಿಯೂರಪ್ಪ ಅವರದು.ಇಂದು ಬೆಳಿಗ್ಗೆಯೂ ತಮ್ಮ ನಿವಾಸಕ್ಕೆ ಗೌಡರನ್ನು ಕರೆಸಿಕೊಂಡು ಸುದೀರ್ಘ ಚರ್ಚೆ ಮಾಡಿದ್ದಾರೆ.

Translate »