ಸುಲಭವಾಗಿ ಉದ್ಯಮ ನಡೆಸಲು ಭಾರತಕ್ಕೆ ಬನ್ನಿ
ಮೈಸೂರು

ಸುಲಭವಾಗಿ ಉದ್ಯಮ ನಡೆಸಲು ಭಾರತಕ್ಕೆ ಬನ್ನಿ

November 4, 2019

ಬ್ಯಾಂಕಾಕ್,ನ.೩-ಭಾರತದಲ್ಲಿ ಸುಲಭವಾಗಿ ಉದ್ಯಮ ನಡೆಸಲು ಇದು ಸೂಕ್ತ ಸಮಯ. ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಿ ಹೂಡಿಕೆದಾರರಿಗೆ ಕರೆ ನೀಡಿದರು.

ಆದಿತ್ಯ ಬಿರ್ಲಾ ಗ್ರೂಪ್‌ನ ಸುವರ್ಣ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ರಿಯಾತ್ಮಕ ವಾಗಿ ಉದ್ಯಮ ಆರಂಭಿಸಲು ಭಾರತಕ್ಕೆ ಬನ್ನಿ. ಉತ್ತಮ ಪ್ರವಾಸಿ ಸ್ಥಳಗಳು ಹಾಗೂ ಉತ್ತಮ ಆತಿಥ್ಯ ಭಾರತದಲ್ಲಿ ಸಿಗುತ್ತದೆ. ಭಾರತವು ನಿಮ್ಮನ್ನು ಮುಕ್ತ ಬಾಹುಗಳಿಂದ ಅಪ್ಪಿಕೊಳ್ಳಲು ಕಾಯುತ್ತಿದೆ ಎಂದು ಮೋದಿ ವಿದೇಶಿ ಹೂಡಿಕೆದಾರರನ್ನು ಆಹ್ವಾನಿಸಿದರು.

ಭಾರತ ಸರ್ಕಾರದ ಉಪಕ್ರಮಗಳಾದ ಸ್ವಚ್ಛ ಭಾರತ್ ಮಿಷನ್, ಸ್ಮಾರ್ಟ್ ಸಿಟಿ ಮುಂತಾದವು ಉತ್ತಮ ಪಾಲು ದಾರಿಕೆಗೆ ಅವಕಾಶಗಳನ್ನು ನೀಡಿವೆ. ತೆರಿಗೆ ಕ್ಷೇತ್ರದಲ್ಲಿ ಭಾರತ ಸರ್ಕಾರ ಅಭೂತಪೂರ್ವ ಕೆಲಸ ಮಾಡಿದೆ. ಜನ ಸ್ನೇಹಿ ತೆರಿಗೆ ವಿಧಾನ ಹೊಂದಿರುವ ಉತ್ತಮ ದೇಶ ಗಳಲ್ಲಿ ಭಾರತವೂ ಒಂದು. ಇಂದಿನ ಭಾರತದಲ್ಲಿ ಕಠಿಣ ಪರಿಶ್ರಮದ ತೆರಿಗೆ ಪಾವತಿದಾರರ ಹಿತಾಸಕ್ತಿಗಳನ್ನು ಕಾಪಾಡುತ್ತೇವೆ. ಭಾರತದಲ್ಲಿ ಪರಿವರ್ತಕ ಬದಲಾವಣೆ ಗಳಾಗುತ್ತಿವೆ. ದೇಶದಲ್ಲಿ ಅಧಿಕಾರಿಶಾಹಿ ರೀತಿಯಲ್ಲಿ ಕೆಲಸ ಮಾಡುವುದು ನಿಂತಿದೆ. ಭಾರತವು ಹೂಡಿಕೆ ಯಲ್ಲಿ ವಿಶ್ವದ ಅತ್ಯಂತ ಆಕರ್ಷಕ ಆರ್ಥಿಕತೆಯ ದೇಶ ವಾಗಿದೆ ಎಂದು ಅವರು ಹೇಳಿದರು.

ನಾವು ಶ್ರೀಮಂತ-ಬಡವರೆನ್ನದೆ, ಪ್ರಮುಖ ಗಣ್ಯ ವ್ಯಕ್ತಿಗಳೆಂದು ತಾರತಮ್ಯ ತೋರದೇ ಎಲ್ಲರಿಗೂ ಸಮಾನ ವಾಗಿ ತೆರಿಗೆ ಮೌಲ್ಯಮಾಪನ ಮಾಡುವುದರಿಂದ ಕಿರು ಕುಳ ಅಥವಾ ತಾರತಮ್ಯದ ಪ್ರಶ್ನೆಯೇ ಉದ್ಭವವಾಗುವು ದಿಲ್ಲ. ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಆಗಲು ಭಾರತ ಈಗ ಮತ್ತೊಂದು ಕನಸಿನ ಬೆನ್ನತ್ತಿ ಹೋಗಿದೆ. ೨೦೧೪ರಲ್ಲಿ ನನ್ನ ಸರ್ಕಾರ ಅಧಿಕಾರಕ್ಕೆ ಬಂದಾಗ ಭಾರ ತದ ಜಿಡಿಪಿ ಸುಮಾರು ಎರಡು ಟ್ರಿಲಿಯನ್ ಡಾಲರ್ ಆಗಿತ್ತು. ಆದರೆ ಕೇವಲ ಐದು ವರ್ಷಗಳಲ್ಲಿ ಅದನ್ನು ಮೂರು ಟ್ರಿಲಿಯನ್ ಡಾಲರ್‌ಗಳಿಗೆ ಹೆಚ್ಚಿಸಿದ್ದೇವೆ. ವಿಶ್ವ ಬ್ಯಾಂಕ್‌ನ ಸುಲಭ ಉದ್ಯಮ ವ್ಯವಹಾರದಲ್ಲಿ ಭಾರತ ೭೯ ಸ್ಥಾನಗಳಷ್ಟು ಮೇಲಕ್ಕೇರಿದೆ. ಕಷ್ಟಪಟ್ಟು ದುಡಿಯುವ ತೆರಿಗೆದಾರರ ಕೊಡುಗೆಯನ್ನು ಪಾಲಿಸಲಾಗುತ್ತದೆ. ಮತ್ತು ತೆರಿಗೆ ವಿಧಿಸುವಲ್ಲಿ ಸರ್ಕಾರ ಮಹತ್ವದ ಕೆಲಸ ಮಾಡಿದೆ. ನೇರ ನಗದು ವರ್ಗಾವಣೆ ವ್ಯವಸ್ಥೆ ಮೂಲಕ ಮಧ್ಯವರ್ತಿ ಸಂಸ್ಕೃತಿಯನ್ನು ಸರ್ಕಾರ ಕೊನೆಗಾಣಿಸಿದೆ ಎಂದು ಪ್ರಧಾನಿ ಮೋದಿ ಅವರು ಹೇಳಿದರು.

Translate »