ವಿರಾಜಪೇಟೆಯಲ್ಲಿ ಇಂದಿನಿಂದ `ಹೊನಲು ಬೆಳಕು ಮುಕ್ತ ಕಬಡ್ಡಿ ಪಂದ್ಯಾವಳಿ’
ಕೊಡಗು

ವಿರಾಜಪೇಟೆಯಲ್ಲಿ ಇಂದಿನಿಂದ `ಹೊನಲು ಬೆಳಕು ಮುಕ್ತ ಕಬಡ್ಡಿ ಪಂದ್ಯಾವಳಿ’

March 31, 2019

ಗೋಣಿಕೊಪ್ಪಲು: ವಿರಾಜಪೇಟೆ ತಾಲ್ಲೂಕು ಛಾಯಾಗ್ರಾಹಕ ಸಂಘದ 12ನೇ ವಾರ್ಷಿಕೋತ್ಸವದ ಅಂಗವಾಗಿ ಮಾ.31ರಂದು ಗೋಣಿಕೊಪ್ಪಲಿನ ಬೈಪಾಸ್ ರಸ್ತೆ ಸಮೀಪದ ಮೈದಾನದಲ್ಲಿ ಹೊನಲು ಬೆಳಕು ಮುಕ್ತ ಕಬ್ಬಡಿ ಪಂದ್ಯಾವಳಿ ನಡೆಯಲಿದ್ದು, 30ಕ್ಕೂ ಹೆಚ್ಚಿನ ತಂಡಗಳು ಭಾಗವಹಿಸಲಿವೆ. ಕೆಪಿಎ ನಿರ್ದೇಶಕ ಹೆಚ್.ಎಸ್.ಸಲೀಂ ಪಂದ್ಯಾವಳಿ ಉದ್ಘಾಟಿಸಲಿದ್ದಾರೆ. ಕಬ್ಬಡಿ ಮಾಜಿ ಚಾಂಪಿಯನ್ ತೀತ್ರಮಾಡ ಅರಸು, ಹಿರಿಯ ಆಟಗಾರ ಬಿ.ಸಿ.ಕೃಷ್ಣ, ಬಿ.ಎನ್.ಶ್ರೀಧರ್, ಫೆಡರೇಶನ್ ಕಾರ್ಯದರ್ಶಿ ಹೆಚ್.ಎಸ್.ಉತ್ತಪ್ಪ, ಸಮಾಜ ಸೇವಕ ಪಿ.ಎ.ಉಂಬಯಿ ಅವರನ್ನು ಸನ್ಮಾನಿಸಲಾಗುವುದು ಎಂದು ಸಂಘದ ಅಧ್ಯಕ್ಷ ಆರ್.ಮೈಕೆಲ್ ತಿಳಿಸಿದ್ದಾರೆ.

Translate »