ಆಟೋ ಪ್ರಯಾಣ ದರವನ್ನು ಪರಿಷ್ಕರಣೆಗೆ ಆಗ್ರಹ
ಕೊಡಗು

ಆಟೋ ಪ್ರಯಾಣ ದರವನ್ನು ಪರಿಷ್ಕರಣೆಗೆ ಆಗ್ರಹ

June 8, 2018

ವಿರಾಜಪೇಟೆ: ಪೆಟ್ರೋಲ್, ಡೀಸೆಲ್ ದರ ದಿನದಿಂದ ದಿನಕ್ಕೆ ಏರುತ್ತಿರುವ ಹಿನ್ನಲೆಯಲ್ಲಿ ಈಗಿನ ಆಟೋ ದರವನ್ನು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ತಕ್ಷಣದಿಂದ ಪರಿಷ್ಕರಣೆ ಮಾಡುವಂತೆ ವಿರಾಜಪೇಟೆ ನಗರ ಆಟೋ ಚಾಲಕರ ಸಂಘದ ಅಧ್ಯಕ್ಷ ಎಂ.ಎಂ. ಶಶಿಧರನ್ ಆಗ್ರಹಿಸಿದ್ದಾರೆ.

ನಗರ ಆಟೋ ಚಾಲಕರ ಸಂಘದಿಂದ ಕರೆ ದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತ ನಾಡಿದ ಅವರು, ನಾಲ್ಕು ವರ್ಷಗಳ ಹಿಂದೆ ಸಾರಿಗೆ ಪ್ರಾಧಿಕಾರ ಆಟೋ ದರವನ್ನು ಪರಿಷ್ಕರಿ ಸಿತ್ತು. ಈಗ ತೈಲ ಬೆಲೆ ಏರಿಕೆಯೊಂದಿಗೆ ಷೋ ರೂಂ ಆಟೋ ದರ, ಇದರ ಬಿಡಿಭಾಗಗಳ ದರ, ಇನ್ಸೂರೆನ್ಸ್, ನೋಂದಣ ವೆಚ್ಚ ಸೇರಿ ದಂತೆ ಎಲ್ಲಾ ದರಗಳು ಏರಿಕೆಯಾಗಿದ್ದು, ಚಾಲ ಕರಿಗೆ ಈಗಿನ ದರದಲ್ಲಿ ಆಟೋ ಓಡಿಸಲು ಸಾಧ್ಯವಾಗುತ್ತಿಲ್ಲ. ಅದರಿಂದ ಆಟೋ ಸಂಘ ಟನೆಯ ಮನವಿಗೆ ಸ್ಪಂದಿಸಿ ಮುಂದಿನ 15 ದಿನಗಳೊಳಗೆ ದರವನ್ನು ಪರಿಷ್ಕರಿಸದಿದ್ದರೆ ಜಿಲ್ಲೆಯದ್ಯಾಂತ ಪ್ರತಿಭಟನೆ ಹಮ್ಮಿಕೊಳ್ಳ ಲಾಗುವುದು ಎಂದರು. ಗೋಷ್ಠಿಯಲ್ಲಿ ಉಪಾಧ್ಯಕ್ಷ ಎ.ಆರ್.ಚಂದ್ರರಾವ್, ಖಜಾಂಚಿ ಎಂ.ಎಸ್. ಸತೀಶ್, ಕಾರ್ಯದರ್ಶಿ ರಜಿನಾ, ಸಂಘಟನಾ ಕಾರ್ಯದರ್ಶಿ ವಿವೇಕ್, ಪೊನ್ನಪ್ಪ ರೈ, ಎಂ.ಎಸ್. ಮಂಜುನಾಥ್, ರಫೀಕ್ ಹಾಜರಿದ್ದರು.

Translate »