ಜ.1ರಂದು ಭಕ್ತರಿಗೆ 2 ಲಕ್ಷ ಲಡ್ಡು ಪ್ರಸಾದ ವಿತರಣೆ
ಮೈಸೂರು

ಜ.1ರಂದು ಭಕ್ತರಿಗೆ 2 ಲಕ್ಷ ಲಡ್ಡು ಪ್ರಸಾದ ವಿತರಣೆ

December 28, 2019

ಮೈಸೂರು, ಡಿ. 27(ಆರ್‍ಕೆ)- ಹೊಸ ವರ್ಷಾಚರಣೆ ಅಂಗವಾಗಿ ಮೈಸೂರಿನ 1ನೇ ಹಂತದಲ್ಲಿರುವ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಹೊಸ ವರ್ಷ 2020ರ ಜನವರಿ 1ರಂದು ಭಕ್ತಾದಿಗಳಿಗೆ 2 ಲಕ್ಷ ಲಡ್ಡು ಪ್ರಸಾದ ವಿತರಿಸಲಾಗುವುದು.

ದೇವಸ್ಥಾನದಲ್ಲಿ ಪ್ರೊ.ಭಾಷ್ಯಂ ಸ್ವಾಮೀಜಿ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಅಂದು ಮುಂಜಾನೆ 4ರಿಂದ ಮಧ್ಯರಾತ್ರಿ 12 ಗಂಟೆವರೆಗೆ 2 ಕೆಜಿ ತೂಕದ 10,000 ಹಾಗೂ 200 ಗ್ರಾಂ ತೂಕದ 2 ಲಕ್ಷ ಲಡ್ಡು ಪ್ರಸಾದವನ್ನು ಭಕ್ತರಿಗೆ ವಿತರಿಸ ಲಾಗುವುದು. ಡಿ.20ರಿಂದ 31ರವರೆಗೆ 50 ಮಂದಿ ಬಾಣಸಿಗರು ಲಡ್ಡುಗಳನ್ನು ತಯಾ ರಿಸುವರು. 50 ಕ್ವಿಂಟಾಲ್ ಕಡ್ಲೆಹಿಟ್ಟು, 100 ಕ್ವಿಂಟಾಲ್ ಸಕ್ಕರೆ, 4000 ಲೀಟರ್ ಖಾದ್ಯ ತೈಲ, 200 ಕೆಜಿ ಗೋಡಂಬಿ, 200 ಕೆಜಿ ಒಣದ್ರಾಕ್ಷಿ, 100 ಕೆಜಿ ಬಾದಾಮಿ, 200 ಕೆಜಿ ಡೈಮಂಡ್ ಸಕ್ಕರೆ, ಬೂರಾ ಸಕ್ಕರೆ, 10 ಕೆಜಿ ಪಿಸ್ತಾ, 20 ಕೆಜಿ ಏಲಕ್ಕಿ, 20 ಕೆಜಿ ಜಾಕಾಯಿ, 5 ಕೆಜಿ ಲವಂಗ ಬಳಸಿ ಲಡ್ಡು ಪ್ರಸಾದ ತಯಾರಿಸಲಾಗುತ್ತಿದೆ.

ಅಂದು ಶ್ರೀ ಯೋಗಾನರಸಿಂಹಸ್ವಾಮಿ ದೇವರಿಗೆ ವಿಶೇಷ ಅಲಂಕಾರ, ವಿಶೇಷ ತೋಮಾಲೆ, ಸ್ವರ್ಣಪುಷ್ಪಗಳಿಂದ ಸಹಸ್ರನಾಮಾರ್ಚನೆ, ದೇವಾಲಯದ ಉತ್ಸವ ಮೂರ್ತಿಗೆ ಏಕಾದಶ ಪ್ರಾಕಾರೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ ಎಂದೂ ತಿಳಿಸಿದರು. ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದ ಆಡ ಳಿತಾಧಿಕಾರಿ ಎನ್.ಶ್ರೀನಿವಾಸ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »