ಮೈಸೂರು ಮೃಗಾಲಯಕ್ಕೆ ಹರಿದು ಬಂದ ನೆರವು
ಮೈಸೂರು

ಮೈಸೂರು ಮೃಗಾಲಯಕ್ಕೆ ಹರಿದು ಬಂದ ನೆರವು

June 13, 2020

ಮೈಸೂರು, ಜೂ.12- ಕೋವಿಡ್-19 ಹಿನ್ನೆಲೆಯ ಲಾಕ್‍ಡೌನ್ ಅವಧಿ ಯಲ್ಲಿ ಮೃಗಾಲಯ ನಿರ್ವಹಣೆಗೆ ಕಷ್ಟ ವಾದ ನಿಟ್ಟಿನಲ್ಲಿ ಹಲವಾರು ಗಣ್ಯರು, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆ ಗಳು ಮೃಗಾಲಯದ ಪ್ರಾಣಿಗಳನ್ನು ದತ್ತು ಸ್ವೀಕರಿಸುವ ಮೂಲಕ ಮೃಗಾಲಯದ ಕಲ್ಯಾಣಕ್ಕೆ ಸಹಕರಿಸುತ್ತಿದ್ದಾರೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕÀ ಅಜಿತ್ ಕುಲಕರ್ಣಿ ತಿಳಿಸಿದ್ದಾರೆ.

ಮೈಸೂರು ಮೃಗಾಲಯದ “ಪ್ರಾಣಿ ಗಳ ದತ್ತು ಸ್ವೀಕಾರ ಯೋಜನೆ” ಅಡಿ ಯಲ್ಲಿ ಹಲವಾರು ಪ್ರಾಣಿಪ್ರಿಯರು ಒಂದು ವರ್ಷದ ಅವಧಿಗೆ ಪ್ರಾಣಿಗಳನ್ನು ದತ್ತು ಪಡೆದುಕೊಂಡಿರುತ್ತಾರೆ.

ಮೈಸೂರಿನ ದಿ ಮೈಸೂರು ಕೋ-ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿ, 50 ಸಾವಿರ ರೂ. ಪಾವತಿಸಿ ಇಂಡಿ ಯನ್ ಗ್ರೇ ವೋಲ್ಫ್, ಗ್ರೀನ್ ಅನಕೊಂಡ, ಎಮು, ಹಿಮಾಲಯನ್ ಗೋರಾಲ್ ಮತ್ತು ಸ್ಮೂತ್ ಕೊಟೆಡ್ ಆಟರ್, ಮೈಸೂರಿನ ಎಂ.ಸೌಜನ್ಯ ಎಂಬುವವರು 20 ಸಾವಿರ ಪಾವತಿಸಿ ಇಂಡಿಯನ್ ಗ್ರೇ ವೋಲ್ಫ್ ಪ್ರಾಣಿಯನ್ನು, ಬೆಂಗಳೂರಿನ ಲಕ್ಷ್ಮೀಶ್ ಗೌಡ 10 ಸಾವಿರ ರೂ. ಪಾವತಿಸಿ ಕಾಮನ್ ಆಸ್ಟ್ರಿಚ್, ಬೆಂಗಳೂರಿನಲ್ಲಿ ರುವ ನರಸೀಪುರ ದೊಡ್ಡಮನೆ ಸುಜನ ಚಾರಿಟೆಬಲ್ ಟ್ರಸ್ಟ್‍ನಿಂದ 10 ಸಾವಿರ ರೂ. ಪಾವತಿಸಿ ಹಿಮಾಲಯನ್ ಬಬೂನ್ ಪ್ರಾಣಿ, ಬಿಡದಿಯ ಸಂತರಾಮ್ ನಿಂಬಾಲ್ಕರ್ ಎರಡು ಸಾವಿರ ರೂ. ಪಾವತಿಸಿ ನಾಗರಹಾವು, ಮೈಸೂರಿನ ಎ.ಎಂ.ಐ.ಜಿ.ಓ.ಎಸ್ (ಕೃತಿಕ್) ಹಾಗೂ ಸುನೀಲ್ ಮಲ್ಲೇಶ್ ಎಂಬುವರು ತಲಾ 2 ಸಾವಿರ ರೂ. ಪಾವತಿಸಿ ನಕ್ಷತ್ರ ಆಮೆ, ಮೈಸೂರಿನ ಸ್ವಾತಿ ಕಶ್ಯಪ್ ಎಂಬು ವರು 1 ಸಾವಿರ ರೂ. ಪಾವತಿಸಿ ಲವ್ ಬರ್ಡ್ ಅನ್ನು ದತ್ತು ಪಡೆದುಕೊಂಡಿರುತ್ತಾರೆಂದು ಉಪಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಚಾಮರಾಜೇಂದ್ರ ಮೃಗಾ ಲಯದ ಕಾರ್ಯನಿರ್ವಾಹಕ ನಿರ್ದೇ ಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುತ್ತೂರು ಶ್ರೀಗಳಿಂದ 5 ಲಕ್ಷ ರೂ. ದೇಣಿಗೆ

ಕೋವಿಡ್-19 ಹಿನ್ನೆಲೆಯಲ್ಲಿ ಮೃಗಾ ಲಯದ ಪ್ರಾಣಿಗಳ ಆಹಾರ ಮತ್ತು ಮೃಗಾ ಲಯ ನಿರ್ವಹಣೆಗಾಗಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು 5 ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡಿದ್ದಾರೆಂದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಚಾಮರಾಜೇಂದ್ರ ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »