ಡ್ರೋಣ್ ಕ್ಯಾಮರಾ ಕಾರ್ಯ ನಿರ್ವಹಣೆ: ಜಿಲ್ಲಾಧಿಕಾರಿಗಳಿಂದ ವೈಮಾನಿಕ ಸಮೀಕ್ಷೆ
ಕೊಡಗು

ಡ್ರೋಣ್ ಕ್ಯಾಮರಾ ಕಾರ್ಯ ನಿರ್ವಹಣೆ: ಜಿಲ್ಲಾಧಿಕಾರಿಗಳಿಂದ ವೈಮಾನಿಕ ಸಮೀಕ್ಷೆ

August 24, 2018

ಮಡಿಕೇರಿ: ಮಹಾಮಳೆ ಮತ್ತು ಭೂ ಕುಸಿತದಿಂದ ಹಾನಿಗೊಳಗಾಗಿರುವ ವಿವಿಧ ಪ್ರದೇಶಗಳಲ್ಲಿ ಜಿಲ್ಲಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ವೈಮಾನಿಕ ಸಮೀಕ್ಷೆ ನಡೆಸಿದರು.

ಹಾರಂಗಿ, ಮಕ್ಕಂದೂರು, ಜೋಡು ಪಾಲ, ಮುಕ್ಕೋಡ್ಲು, ಕಾಲೂರು ಹಾಗೂ ಮಡಿಕೇರಿ ಭಾಗದಲ್ಲಿ ಸಮೀಕ್ಷೆ ನಡೆಸಿದ ಜಿಲ್ಲಾಡಳಿತ, ಪ್ರಕೃತಿ ವಿಕೋಪದ ತೀವ್ರತೆಯ ಬಗ್ಗೆ ಮಾಹಿತಿ ಪಡೆದರು. ಶುಕ್ರವಾರ ದಿಂದ ಬೆಳೆ ಹಾನಿ ಸಮೀಕ್ಷೆಯನ್ನು ನೂತನ ತಂತ್ರಜ್ಞಾನದ ಮೂಲಕ ನಡೆಸಿ ನಂತರ ಪರಿಹಾರವನ್ನು ವಿತರಣೆ ಮಾಡಲಾಗುವು ದೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಡಿಕೇರಿ-ಮಂಗಳೂರು ರಸ್ತೆ ಗುಡ್ಡ ಕುಸಿತದಿಂದ ಸಂಪರ್ಕವನ್ನು ಕಳೆದು ಕೊಂಡಿದ್ದು, ಸುಳ್ಯಕ್ಕೆ ಭಾಗಮಂಡಲ-ಕರಿಕೆ ಮೂಲಕ ಹಾದು ಹೋಗಲು ಮಡಿಕೇರಿ ಯಿಂದ ಸುಳ್ಯದವರೆಗೆ ಮಿನಿ ಬಸ್‍ಗಳ ಸಂಚಾರವನ್ನು ಆರಂಭಿಸಲಾಗಿದೆ.

ಈ ನಡುವೆ ಸೇನಾ ಪಡೆಗೆ ಸೇರಿದ ಡ್ರೋಣ್ ಸೇರಿದಂತೆ ಇತರೆ 8 ಡ್ರೋಣ್ ಗಳ ಸಹಾಯದಿಂದ ಪ್ರಕೃತಿ ವಿಕೋಪದಿಂದ ಆಗಿರುವ ಹಾನಿ, ನಾಶಗೊಂಡ ಮನೆಗಳು, ಕೃಷಿ ಭೂಮಿ ಹಾಗೂ ಮೃತದೇಹಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಕೆಲವು ಮೃತದೇಹಗಳು ಗೋಚರಿಸಿದ ಬಗ್ಗೆಯೂ ಮಾಹಿತಿ ಲಭಿಸಿದೆಯಾದರು, ಸ್ಥಳಕ್ಕೆ ತೆರಳಿ ಮೃತದೇಹವನ್ನು ಹೊರತೆಗೆಯಲು ಅಗತ್ಯ ಮಾರ್ಗದ ವ್ಯವಸ್ಥೆಯನ್ನು ಮಾಡಿ ಕೊಂಡ ಬಳಿಕವಷ್ಟೆ ನಿಖರವಾಗಿ ಸಾವನ್ನಪ್ಪಿ ದವರ ಬಗ್ಗೆ ಮಾಹಿತಿ ಲಭ್ಯವಾಗಲಿದೆ.

Translate »